ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು | 10th Kannada London Nagara Notes

ಲಂಡನ್ ನಗರ ಪಾಠದ ಪ್ರಶ್ನೋತ್ತರಗಳು | London Nagara Notes Free For 10th Students

ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು, Kannada Lesson 3 London Nagara Questions and Answers, Summary, Notes Pdf, Siri Kannada Text Book Class 10 Solutions

london nagara notes please

London Nagara Notes 10th 3rd Lesson

ಲಂಡನ್ ನಗರ ಪಾಠಕ್ಕೆ ಸಂಬಂದಿಸಿದ ಕವಿ ಪರಿಚಯ ಸೇರಿದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಂಪೂರ್ಣ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ವಿದ್ಯಾರ್ಥಿಗಳಿಗಾಗಿ ಸಂಪೂರ್ಣ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬಹುದು.

london nagara notes karnataka

ಕವಿ ಪರಿಚಯ

ಡಾ . ವಿನಾಯಕ ಕೃಷ್ಣ ಗೋಕಾಕ್

ಕಾವ್ಯನಾಮ : ವಿನಾಯಕ ಕೃತಿಗಳು

ಕಾಲ: ಕ್ರಿ.ಶ. 1909 : ಹಾವೇರಿ ಜಿಲ್ಲೆಯ ಸವಣೂರು

ಕೃತಿಗಳು :-ಸಮುದ್ರ ಗೀತೆಗಳು , ಪಯಣ , ಇಲ್ನೋಡು , ಉಗಮ , ಸಮರಸವೇ ಜೀವನ , ಭಾರತ ಸಿಂಧುರಶ್ಮಿ ದ್ವಾವಾ ಪೃಥಿವೀ

ಪ್ರಶಸ್ತಿ:- ಜ್ಞಾನಪೀಠ ಪ್ರಶಸ್ತಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ . ಪದವಿ ಭಾರತಸರ್ಕಾರದ ಪದ್ಮಶ್ರೀ ಪ್ರಶಸ್ತಿ .

ಇನ್ನಷ್ಟು ವಿಶೇಷ ಮಾಹಿತಿ : ಪುಣೆಯ ಫರ್ಗೂಸನ್ ಕಾಲೇಜು , ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ . ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ , ಕನ್ನಡ ಸಾಹಿತ್ಯದ ಪ್ರಮುಖ ಸಾಹಿತಿಗಳೆನಿಸಿದ್ದಾರೆ .
ಆಕರಗ್ರಂಥ: ‘ ಸಮುದ್ರದಾಚೆಯಿಂದ ‘ ಪ್ರವಾಸಕಥನ ‘

ಲಂಡನ್ ನಗರ ಪಾಠದ ಪ್ರಶ್ನೋತ್ತರಗಳು | London Nagara Notes Free For 10th Students
ಲಂಡನ್ ನಗರ ಪಾಠದ ಪ್ರಶ್ನೋತ್ತರಗಳು | London Nagara Notes Free For 10th Students

london nagara notes pdf

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

london nagara notes kannada

ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಮಾಡಿರುವ ವ್ಯವಸ್ಥೆಯೇನು ?

ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಭೂಗರ್ಭದಲ್ಲಿ ಗಾಡಿಯ ನಡೆಸುವ ವ್ಯವಸ್ಥೆ ಮಾಡಿದ್ದಾರೆ .

ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರೇನು ?

ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರು ಟ್ರಾಫಿಲ್ಟಾರ್ ಸೈರ್

‘ ವೆಸ್ಟ್ ಮಿನ್‌ಸ್ಟರ್ ‘ ಅಚೆ ‘ ಯಾರ ಸ್ಮಾರಕವಾಗಿದೆ ?

ವೆಸ್ಟ್ ಮಿನ್‌ಸ್ಟರ್‌ ಅಭ್ ‘ ಸತ್ತವರ ಸ್ಮಾರಕವಾಗಿದೆ .

ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು ?

” ಚೇರಿಂಗ್ ಕ್ರಾಸ್ ‘ ಎಂಬ ಓಣಿಯಲ್ಲಿ ಆಂಗ್ಲರ ಸಾಮ್ರಾಜ್ಯ ವೈಭವವು ಕ ಬರುವುದು .

london nagara notes details

ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

10th kannada london nagara notes

ವೂಲವರ್ಥ ಅಂಗಡಿಯಲ್ಲಿ ಸಿಗುವ ವಸ್ತುಗಳಾವುವು ?

ವೊಲವರ್ಥ ‘ ಎಂಬ ಅಂಗಡಿಯಲ್ಲಿ ಒಂದು ಪೆನ್ನಿಯಿಂದ ಆರು ಪೆನ್ನಿಯ ಎಲ್ಲಾ ತರಹದ ಸಾಮಾನುಗಳನ್ನು ಖರೀದಿಸಬಹುದು . ಇದೊಂದು ಕೋಶವಾಗಿದೆ . ಇಲ್ಲಿ ಬೂಟು , ಕಾಲುಚೀಲ , ಚಣ್ಣ , ಸಾಬೂನು , ಔಷಧ , ಪ ಅಡಿಗೆಯ ಪಾತ್ರೆ , ಇಲೆಕ್ಟಿಲ್ ‘ ದೀಪದ ಸಾಮಾನು , ಫೋಟೋ , ಅಡ ಹೂವು , ಯುದ್ಧ ಸಾಮಗ್ರಿಯಂತಹ ವಸ್ತುಗಳು ದೊರೆಯುತ್ತವೆ .

ಲಂಡನ್ನಿನ ಹೆಣ್ಣು ಮಕ್ಕಳು ಯಾವ ಯಾವ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ ?

ಲಂಡನ್ ನಗರದಲ್ಲಿ ಸಾಮಾನ್ಯವಾಗಿ ಅಂಗಡಿಗಳಲ್ಲಿ ಸ್ತ್ರೀಯರೇ ಕೆಲಸ ಮಾಡ ಉಪಾಹಾರ ಗೃಹಗಳಲ್ಲಿ ಸ್ತ್ರೀಯರು ಕೆಲಸ ಮಾಡುತ್ತಾರೆ . ದೊಡ್ಡ ಅಂಗಡಿ ಟೈಪಿಸ್ಟ್ ಕಾರಕೂನರಾಗಿ ಹೆಣ್ಣುಮಕ್ಕಳು ಕಾರ್ಯ ನಿರ್ವಹಿಸುತ್ತಾರೆ . ಸಿ ಗೃಹಗಳಿಂದ ಕಾಲೇಜುಗಳಲ್ಲೂ ಸಹ ಹೆಣ್ಣುಮಕ್ಕಳು ಕಾರ್ಯ ನಿರ್ವಹಿಸ

ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ ?

ಲಂಡನ್ನಲ್ಲಿ ಹೆಣ್ಣು ಮಕ್ಕಳು ಧರಿಸುವ ಟೊಪ್ಪಿಗೆಯು ಹಲವು ವಿಶೇಷತೆ ಕೂಡಿರುತ್ತದೆ . ಒಂದು ಟೊಪ್ಪಿಗೆಯಂತೆ ಇನ್ನೊಂದು ಇರುವುದಿಲ್ಲ . ಮುಚ್ಚವಾದರು ಕನಿಷ್ಠ ಪಕ್ಷಕ್ಕೆ ಬೇರೆಯಾಗಿರುತ್ತದೆ . ಕೋಟ್ಯಾವಧಿ ಟೊಪ್ಪಿಗೆ ಪರೀಕ್ಷಿಸಿದರು . ಅವುಗಳಲ್ಲಿ ವೈವಿಧ್ಯತೆಗಳನ್ನು ಕಾಣಬಹುದಾಗಿದೆ .

london nagara notes 10th standard

ಪೊಯೆಟ್ ಕಾರ್ನ‌್ರನಲ್ಲಿ ಯಾವ ಯಾವ ಕವಿಗಳ ಸಮಾಧಿಗಳಿವೆ ?

ಪೊಯೆಟ್ ಕಾರ್ನ‌್ರನಲ್ಲಿ ಹಲವಾರು ಪ್ರಸಿದ್ಧ ಕವಿಗಳ ಸಮಾಧಿಗಳಿವೆ . ಅವ ಕಿಪ್ಲಿಂಗ್ , ಹಾರ್ಡಿ , ಮ್ಯಾಕಾಲೆ , ಜಾನ್ಸನ್ , ಗೋಲ್ಡ್‌ಸ್ಮಿತ್ , ಡ್ರಾಯ್ಡನ್ ಅವರ
ಸಮಾಧಿಗಳಿವೆ . ಹಾಗೆಯೇ ಬೆನ್‌ಜಾನ್ಸನ್ ಎಂಬ ನಾಟಕಕಾರನ ಸಮಾಧಿಯಿದೆ ಕವಿ ವರ್ಡ್ಸ್‌ವರ್ತನ ಸಮಾಧಿಯೂ ಒಂದು ಮೂಲೆಯಲ್ಲಿತ್ತು .

ಸಾಮ್ರಾಟರ ರಾಜ್ಯಾಭಿಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲು ಪಾಟಿ ವಿಶೇಷತೆಯೇನು ?

ಲಂಡನ್‌ನಲ್ಲಿ ಸಾಮ್ರಾಟರ ರಾಜ್ಯಭೀಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲುಪಾಟಿಯನ್ನು ಹಾಕುತ್ತಾರೆ . ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮಾಟರು ಇದರ ಮೇಲೆ ಕೂಡಬೇಕು . ಈ ಶಿಲೆಯನ್ನು ಒಳಗೊಂಡ ಸಿಂಹಾಸನವು ವೆಸ್ ಮಿನ್‌ಸ್ಟರ್ ಮಂದಿರದ ಒಂದು ಭಾಗದಲ್ಲಿದೆ . ಅದನ್ನು ಸ್ಟೋನ್ ಆಪ್ ಸ್ಕೋನ್ ‘ ಎಂದು ಕರೆಯುತ್ತಾರೆ .

london nagara notes kseeb

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,

london nagara notes pdf kannada

ಲಂಡನ್ ನಗರದ ವೀಕ್ಷಣೆಯಲ್ಲಿ ಲೇಖಕರು ಗುರುತಿಸಿರುವ ವಿಶೇಷತೆಗಳೇನು ?

ಡಾ . ವಿನಾಯಕ ಕೃಷ್ಣ ಗೋಕಾಕ್ ಅವರು ಲಂಡನ್ ನಗರ ವೀಕ್ಷಣೆಯಲ್ಲಿ ಹಲವಾರು ವಿಶೇಷತೆಗಳನ್ನು ಗುರುತಿಸಿದ್ದಾರೆ . ರಸ್ತೆಗಳಲ್ಲಿನ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಭೂಗರ್ಭದಲ್ಲಿ ಗಾಡಿಗಳನ್ನು ನಡೆಸಲಾಗುತ್ತದೆ . ಪೇಟೆಯಲ್ಲಿ ವೂಲವರ್ಥ ಎಂಬ ಅಂಗಡಿಗಳಲ್ಲಿ ಎಲ್ಲ ರೀತಿಯ ವಸ್ತುಗಳು ದೊರೆಯುತ್ತವೆ . ದುಬಾರಿ ಸಿಂಪಿಗಳು , ಭಾರತದ ಲಲಿತ ಕಲೆಗಳು ಇರುವ ಇಂಡಿಯಾ ಆಫೀಸುಗಳು , ಟ್ರಾಫಿಲ್ಲಾರ್‌ ಸ್ಟೇರ್‌ನಲ್ಲಿನ ನೆಲ್ಸನ್ ಪ್ರತಿಮೆ , ವೆಲ್ಲಿಗನನ ಶಿಲಾ ಪತ್ರಿಮೆಗಳನ್ನು ನೋಡುತ್ತಾರೆ . ಹೆಣ್ಣು ಮಕ್ಕಳ ಟೊಪ್ಪಿಗೆಗಳ ವೈವಿಧ್ಯತೆಯನ್ನು ಗಮನಿಸುತ್ತಾರೆ . ಲಂಡನ್‌ನಲ್ಲಿ ಗಂಡಸರಿಗಿಂತ ಹೆಚ್ಚಾಗಿ ಹೆಂಗಸರು ಕಚೇರಿ , ಅಂಗಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ . ವೆಸ್ಟ್ ಮಿನ್‌ಸ್ಟರ್‌ ಪ್ರಾರ್ಥನಾ ಮಂದಿರ ಅಲ್ಲಿನ ಪೊಯೆಟ್ಸ್ ಕಾರ್ನರ್ , ವಿಜ್ಞಾನಿಗಳ ಸಮಾಧಿ , ಅರಮನೆ , ಸ್ಟೋನ್ ಅಫ್ ಸ್ಕೋನ್ ‘ ಕಲ್ಲುಪಾಟಿಯ ವೈಶಿಷ್ಟತೆ ಮುಂತಾದ ವಿಶೇಷತೆಗಳನ್ನು ಗುರುತಿಸಿದ್ದಾರೆ .

ವೆಸ್ಟ್ ಮಿನ್‌ಸ್ಟರ್ ಅಜಿ ‘ ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ ವಿವರಿಸಿ ,

ಲಂಡನ್ ನಗರದಲ್ಲಿ ‘ ವೆಸ್ಟ್‌ಮಿನ್‌ಸ್ಟರ್‌ ಅಬೆ ‘ ಎಂಬ ಪ್ರಾರ್ಥನಾ ಮಂದಿರವಿದೆ . ಅದು ಕನಿಷ್ಠ ಒಂದು ಸಾವಿರ ವರ್ಷದಷ್ಟು ಪುರಾತನವಾಗಿದೆ . ಅದರ ಕೆಲವೊಂದು ಭಾಗಗಳ ದುರಸ್ತಿಯನ್ನು ಬಿಟ್ಟರೆ ಇಂದಿಗೂ ಅಚ್ಚಳಿಯದೆ ಉಳಿದಿದೆ . ಇಲ್ಲಿ ಸಂತರು , ಸಾರ್ವಭೌಮರು , ಕವಿ ಮಂಗವರ ಸಮಾಧಿಗಳಿವೆ . ಆದ್ದರಿಂದ ಇದನ್ನು ಸತ್ತವರ ಸ್ಮಾರಕ ಎನ್ನುತ್ತಾರೆ . ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು . ಇಲ್ಲಿ ಪಾದ್ರಿಗಳೇ ಸರ್ಕಾರಿ ವೈದಿಕರಂತೆ ಪ್ರಾರ್ಥನೆ ಸಲ್ಲಿಸುತ್ತಾರೆ . ಇಲ್ಲಿ ರಾಜಕಾರಣ ಚತುರರ ಶಿಲಾ ಮೂರ್ತಿಗಳಿವೆ . ಮೊಯೆಟ್ಸ್ ಕಾರ್ನ‌್ರನಲ್ಲಿ ಕವಿಗಳ ಸಮಾಧಿಗಳಿವೆ . ಹಾಗೆಯೇ ವಿಜ್ಞಾನಿಗಳ ಶಿಲಾಮೂರ್ತಿಗಳಿವೆ . ರಾಜಮಹಾರಾಜರ ಗೋರಿಗಳಿವೆ . ಸ್ಟೋನ್ ಆಪ್ ಸ್ಟೋನ್ ಎಂಬ ಕಲ್ಲು ಪಾಟಿಯಿದೆ . ‘ ವೆಸ್ಟ್‌ಮಿನ್‌ಸ್ಟರ್ ಅಬೆ’ಯು ಪ್ರವಾಸಿಗರಿಗೆ ಲಂಡನ್ನಿನ ಗತ ವೈಭವವನ್ನು ನೆನಪಿಸುತ್ತದೆ .

london nagara lesson noteslondon nagara noteslondon nagara lesson notes

ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

“ ನಿಮ್ಮ ದೇಶದ ಗೌರವವನ್ನು ಕಾಯಿರಿ! ಇದು ದೊಡ್ಡದಾದ ರಾಷ್ಟ್ರ ‘

ಈ ವಾಕ್ಯವನ್ನು ವಿ.ಕೃ. ಗೋಕಾಕ್ ಅವರು ರಚಿಸಿರುವ ‘ ಸಮುದ್ರದಾಚೆಯಿಂದ ಎಂಬ ಪ್ರವಾಸ ಕಥನದಿಂದ ಆಯ್ದ ಲಂಡನ್ ನಗರ ಗದ್ಯಭಾಗದಿಂದ ಆರಿಸಲಾಗಿದೆ ಏ.ಕೃ. ಗೋಕಾಕ್ ಅವರು ಲಂಡನ್ ನಗರದಲ್ಲಿ ಟ್ರಾಫಲ್ಟಾರ್‌ ಸ್ಟೇರ್‌ನಲ್ಲಿ ನೆಲ್ಸನ್‌ಮೂರ್ತಿ , ಮತ್ತೊಂದೆಡೆಯಿದ್ದ ವೆಲಿಂಗ್ಟನ್‌ನ ಪ್ರತಿಮೆಗಳನ್ನು ನೋಡುವ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ಪುರುಷರು ನಿಂತು ಕೈಯೆತ್ತಿ ಈ ರೀತಿ ಹೇಳಿದಂತೆ ಭಾಸವಾಗುತ್ತದೆ . ಮಹಾಮರುಷ ಪ್ರತಿಮೆಗಳನ್ನು ಕಂಡಾಗ ಅವರ ಅಂತರಾಳದ ನುಡಿಗಳು ಮಾರ್ದನಿಸುವ ಸ್ವಾರಸ್ಯವನ್ನು ಇಲ್ಲಿ ಕಾಣಬಹುದಾಗಿದೆ .

“ ಹೊತ್ತು ! ಹೊತ್ತು ! ಹೊತ್ತೇ ಹಣ ?

ಈ ವಾಕ್ಯವನ್ನು ವಿ.ಕೃ. ಗೋಕಾಕ್ ಅವರು ರಚಿಸಿರುವ ‘ ಸಮುದ್ರದಾಚೆಯಿಂದ ‘ ಎಂಬ ಪ್ರವಾಸ ಕಥನದಿಂದ ಆಯ್ದ ಲಂಡನ್ ನಗರ ಗದ್ಯಭಾಗದಿಂದ ಆರಿಸಲಾಗಿದೆ . ಲಂಡನ್ ನಗರದ ಜನ ಬೀದಿಯಲ್ಲಿ ಅವಸರದಿಂದ ಓಡಾಡುತ್ತಾರೆ . ಅವರಿಗೆ ಸಮಯವೇ ಹಣ ಆ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ . ಸಮಯ ಯಾರನ್ನೂ ಕಾಯವುದಿಲ್ಲ ಸಮಯ ಹಣಕ್ಕೆ ಸಮ ಎಂಬ ಸ್ವಾರಸ್ಯವನ್ನು ಈ ಮಾತಿನಲ್ಲಿ ಕಾಣಬಹುದಾಗಿದೆ .

“ ಯಾರನ್ನು ತುಳಿದರೇನು ! ಎಲ್ಲಿ ಹೆಜ್ಜೆ ಹಾಕಿದರೇನು ? ಎಲ್ಲವೂ ಅಷ್ಟೆ ಮಣ್ಣು ಮಣ್ಣು .

ಈ ವಾಕ್ಯವನ್ನು ವಿ.ಕೃ. ಗೋಕಾಕ್ ಅವರ ರಚಿಸಿರುವ ‘ ಸಮುದ್ರದಾಚೆಯಿಂದ ಎಂಬ ಪ್ರವಾಸ ಕಥನದಿಂದ ಆಯ್ದ ಲಂಡನ್ ನಗರ ಗದ್ಯಭಾಗದಿಂದ ಆರಿಸಲಾಗಿದೆ . ವಿ.ಕೃ. ಗೋಕಾಕ್‌ ಅವರು ಪೊಯಟ್ಸ್ ಕಾರ್ನ‌್ರನಲ್ಲಿ ಕವಿಗಳ ಸಮಾಧಿಯನ್ನು ನೋಡುತ್ತಿರುವ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ . ಮನುಷ್ಯನು ಗತಕಾಲವನ್ನು ಮರೆತು ಗೌರವಿಸಬೇಕಾದ ಸ್ಥಳವನ್ನೇ ಅರಿವಿಲ್ಲದಂತೆ ತುಳಿಯುತ್ತಾ ನಡೆಯುತ್ತಾನೆ . ಅದು ಸರಿಯಲ್ಲ ಗೌರವಿಸಬೇಕಾದುದು ನಮ್ಮ ಕರ್ತವ್ಯ ಎಂಬ ಸ್ವಾರಸ್ಯವನ್ನು ಈ ಮಾತಿನಲ್ಲಿ ಕಾಣಬಹುದಾಗಿದೆ

‘ ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ ” .

ಈ ವಾಕ್ಯವನ್ನು ವಿ.ಕೃ. ಗೋಕಾಕ್ ಅವರ ರಚಿಸಿರುವ ‘ ಸಮುದ್ರದಾಚೆಯಿಂದ ಎಂಬ ಪ್ರವಾಸ ಕಥನದಿಂದ ಆಯ್ದ ಲಂಡನ್ ನಗರ ಗದ್ಯಭಾಗದಿಂದ ಆರಿಸಲಾಗಿದೆ . ಏಕ್ಯ , ಗೋಕಾಕ್ ಅವರ ಪ್ರವಾಸದ ವರ್ಣನೆಯನ್ನು ಮಾತುಗಳನ್ನು ಸ್ಮರಿಸುವ ಸಂದರ್ಭಗಳಲ್ಲಿ ಈ ಮಾತುಗಳನ್ನು ಹೇಳಲಾಗಿದೆ . ದೇಶ ಸುತ್ತ ಬೇಕು ಕೋಶ ಓದಬೇಕು , ಪ್ರವಾಸವು ನೇರ ಅನುಭವವನ್ನು ನೀಡಿ ಶಿಕ್ಷಣಕ್ಕೆ ಸಹಕಾರಿಯಾಗಿದೆ ಎಂಬ ಸ್ವಾರಸ್ಯವನ್ನು ಈ ಮಾತಿನಲ್ಲಿ ಕಾಣಬಹುದಾಗಿದೆ .

ಲಂಡನ್ ನಗರ ಪಾಠದ ಪ್ರಶ್ನೋತ್ತರಗಳು | London Nagara Notes Free For 10th Students
ಲಂಡನ್ ನಗರ ಪಾಠದ ಪ್ರಶ್ನೋತ್ತರಗಳು | London Nagara Notes Free For 10th Students

ಇಲ್ಲಿ ಬಿಟ್ಟಿರುವ ಪದಗಳನ್ನು ಸರಿಯಾದ ಪದಗಳಿಂದ ತುಂಬಿರಿ .

  1. ಲಂಡನ್ : ಪಟ್ಟಣವೆಂದರೆ ಒಂದು ಜಗತ್ತು .
  2. ಪೂಲವರ್ಥ ಎಂಬುದು_ಅಂಗಡಿ
  3. ಮನೆ ಹಿಡಿದು ಇರುವ_ಬುದ್ದಿ ಮನೆಯ ಮಟ್ಟದ್ದೇ
  4. ಅಭೆಯಲ್ಲಿರುವ ಸಿಂಹಾಸನಕ್ಕೆ _ಎಂದು ಹೆಸರು
  5. ವೆಸ್ಟ್‌ಮಿನ್‌ಸ್ಟರ್ ಆದೆ ಎಂಬುದು

ಉತ್ತರಗಳು :
I ಸ್ವತಂತ್ರ

  1. ಸೇಷ್ಟನರಿ
  2. ತರುಣನ
  3. ಸ್ಟೋನ್ ಆಫ್ ಸ್ಕೋನ್
    5 , ಪ್ರಾರ್ಥನಾ ಮಂದಿರ ( ಮಹಾಪುರುಷರ ಸ್ಮಾರಕ )

London Nagara Notes MCQ Questions and Answers

ಪದಗಳನ್ನು ಬಿಡಿಸಿ ಸಂಧಿಯನ್ನು ಹೆಸರಿಸಿರಿ

ಒಮ್ಮೊಮ್ಮೆ =ಒಮ್ಮೆ+ಒಮ್ಮೆ
ಜಾಗವನ್ನು =ಜಾಗ+ಜಾಗ
ಆತ್ಯಾದರ = ಅತಿ +ಆದರ
ವಾಚನಾಲಯ= ವಾಚನ+ಆಲಯ
ಸಂಗ್ರಹಾಲಯ =ಸಂಗ್ರಹ + ಆಲಯ
ಓಣಿಯಲ್ಲಿ=ಓಣಿ + ಅಲ್ಲಿ

ಉತ್ತರ :-

ಲೋಪಸಂಧಿ
ಆಗಮಸಂಧಿ
ಯಣ್ ಸಂಧಿ
ಸವರ್ಣದೀರ್ಘಸಂಧಿ
ಸವರ್ಣದೀರ್ಘ ಸಂಧಿ
ಆಗಮಸಂಧಿ

ಈ ಪದಗಳ ಅರ್ಥ ಬರೆದು ಅವುಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಪ್ರಯೋಗಿಸಿ ,

ದಂಗು ಬಡಿ ಆಶ್ಚರ್ಯಪಡು

ವಾಕ್ಯ :- ಸರ್ಕಸ್ಸಿನಲ್ಲಿ ನಡೆಯುತ್ತಿದ್ದ ಚಮತ್ಕಾರವನ್ನು ಕಂಡು ಸಭಿಕರು ದಂಗು ಬಡಿದವರಂತಾಗಿದ್ದರು .

ಮನಗಾಣು – ತಿಳಿದುಕೊಳ್ಳುವುದು , ಖಚಿತಪಡಿಸಿಕೊಳ್ಳುವುದು ,

ವಾಕ್ಯ:- ನಿರಂತರವಾದ ಅಧ್ಯಯನದಿಂದ ಜ್ಞಾನವನ್ನು ಸಂಪಾದಿಸಬಹುದು , ಬೇಕಾದರೆ ನಿಮ್ಮ ಶಿಕ್ಷಕರನ್ನು ಕೇಳಿ ಮನಗಾಣಬಹುದು .

ಅಚ್ಚರಿ – ಅಳಿಸಲಾರದಂತೆ

ವಾಕ್ಯ :- ಮಹಾತ್ಮ ಗಾಂಧೀಜಿಯವರ ಹೆಸರು ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ .

ದುರಸ್ತಿ – ಸರಿಪಡಿಸುವಿಕೆ , ರಿಪೇರಿ

ವಾಕ್ಯ:- ಶಿಥಿಲಾವಸ್ಥೆಯಲ್ಲಿರುವ ನಮ್ಮ ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಬೇಕಾಗಿದೆ .

ಘನತರ – ಶ್ರೇಷ್ಠವಾದ , ಮಹತ್ವವಾದ

ವಾಕ್ಯ :- ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಭಾರತದ ಘನತರವಾದ ಪ್ರಧಾನಮಂತ್ರಿ ಎಂದು ಗುರುತಿಸಲಾಗಿದೆ .

ನಿಟ್ಟಿಸಿ ನೋಡು – ಎವೆಯಿಕ್ಕದೆ ನೋಡು , ರೆಪ್ಪೆಯಾಡಿಸದೆ ನೋಡು

ವಾಕ್ಯ :- ಮಕ್ಕಳು ಯಕ್ಷಣಿಗಾರನ ಇಂದ್ರಜಾಲವನ್ನು ದಿಟ್ಟಿಸಿ ನೋಡುತ್ತಿದ್ದರು .

ಮೂಲೆಗೊತ್ತು – ಪ್ರಯೋಜನಕ್ಕೆ ಬಾರದಂತೆ ಮಾಡು , ಕಡೆಗಣಿಸು

ವಾಕ್ಯ :- ಒಂದು ಕಾಲದಲ್ಲಿ ವೈಭವವಾದ ಜೀವನ ನಡೆಸಿರುವ ನಮ್ಮ ಗುರು ಹಿರಿಯರನ್ನು ನಾವು ಮೂಲೆಗುಂಪು ಮಾಡುವುದು ಸರಿಯಲ್ಲ .

ದಿಕ್ಕು ತಪ್ಪು – ಕಂಗೆಡು

ವಾಕ್ಯ :- ಅಪರಿಚಿತ ಸ್ಥಳದಲ್ಲಿ ಯಾರಿಗಾದರೂ ಸಹ ದಿಕ್ಕು ತಪ್ಪುವ ಅನುಭವವಾಗುತ್ತದೆ .

london nagara notes please

ಭಾಷಾ ಚಟುವಟಿಕೆ

ಕೊಟ್ಟಿರುವ ಸೂಚನೆಯಂತೆ ಉತ್ತರಿಸಿ .

ವೆಸ್ಟ್ ಮಿನ್‌ಸ್ಟರ್ ಅಬೆ ನೋಡಿಕೊಂಡು ಬಂದವು . ( ಭವಿಷ್ಯತ್ ಕಾಲಕ್ಕೆ ಪರಿವರ್ತಿಸಿ )

ವೆಸ್ಟ್ ಮಿನ್‌ಸ್ಟರ್‌ ಅಣೆ ನೋಡಿಕೊಂಡು ಬರುವವು .

ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುವರು . ( ವರ್ತಮಾನ ಕಾಲಕ್ಕೆ ಪರಿವರ್ತಿಸಿ )

ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುತ್ತಾರೆ .

ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ . ( ಭೂತ ಕಾಲಕ್ಕೆ ಪರಿವರ್ತಿಸಿ )

ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆತಿವೆ .

london nagara notes mahithi

ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ ,

ಲಂಡನ್ ನಗರ ಪಾಠದ ಪ್ರಶ್ನೋತ್ತರಗಳು | London Nagara Notes Free For 10th Students
ಲಂಡನ್ ನಗರ ಪಾಠದ ಪ್ರಶ್ನೋತ್ತರಗಳು | London Nagara Notes Free For 10th Students
ಕೈ ಕೆಸರಾದರೆ ಬಾಯಿ ಮೊಸರು

ಗಾದೆಗಳು ವೇದಗಳಿಗೆ ಸಮಾನ ಜನಪದರ ಜೀವನದ ಅನುಭವದ ನುಡಿಮುತ್ತುಗಳು . ಗಾದೆಗಳು ಆಕಾರದಲ್ಲಿ ವಾಮನವಾದರೂ ಅರ್ಥದಲ್ಲಿ ತ್ರಿವಿಕ್ರಮನಾಗಿವೆ . ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಅರ್ಥಪೂರ್ಣವಾಗಿದೆ . ಪ್ರಸ್ತುತ ಗಾದೆಯು ‘ ಕೈ ಕೆಸರಾದರೆ ಬಾಯಿ ಮೊಸರು ‘ ಎಂಬುದು ಕನ್ನಡದ ಜನಪ್ರಿಯ ಗಾದೆಗಳಲ್ಲಿ ಒಂದೆನಿಸಿದೆ .

ಕೈ ಕೆಸರಾಗುವುದು ಎಂದರೆ ಕಷ್ಟ ಪಟ್ಟು ದುಡಿಯುವುದು ಎಂದು ಅರ್ಥ . ಬಾಯಿ ಮೊಸರು ಎಂದರೆ ದುಡಿಮೆಯ ಪ್ರತಿಫಲ ಎಂಬುದಾಗಿದೆ . ಶ್ರಮ ಪಡದಿದ್ದರೆ , ಸುಖವಾಗಿ ಇರಲು ಸಾಧ್ಯವಿಲ್ಲ . ಕಷ್ಟಪಟ್ಟರೆ ಫಲವುಂಟು ಎಂಬುದು ಇದರ ಅರ್ಥವಾಗಿದೆ .

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ

ಗಾದೆಯ ಮಾತು ಚಿಕ್ಕ ಚಿಕ್ಕ ವಾಖ್ಯೆಗಳಲ್ಲಿದ್ದರೂ ವಿಶಾಲವಾದ ಅರ್ಥವನ್ನು ಕೊಡುತ್ತದೆ . ಗಾದೆಗಳನ್ನು ಬಳಸದ ಭಾಷೆಯಿಲ್ಲ . ದೇಶ ಇಲ್ಲ . ” ಹಸಿಯ ಗೋಡೆಯ ಮೇಲೆ , ಹರಳನಿಟ್ಟಂತೆ ” ಇದೆ ಇದರ ಪ್ರಭಾವ , ಗಾದೆ , ವಾಕ್ಯಗಳು ಬಹು
ಪ್ರಚಲಿತವಾಗಿರಲು ಕಾರಣವೇ ಅದರ ನೇರ ಬಿಚ್ಚು ನುಡಿ , ಇಂತಹ ಗಾದೆಗಳಲ್ಲಿ ಒಂದು ಮೇಲಿನ ಈ ಗಾದೆ ಮಾತು , “ ಕುಂಬಾರನಿಗೆ ವರ್ಷದೊಣ್ಣೆಗೆ ನಿಮಿಷ ವರ್ಷಗಟ್ಟಲೆ ಕಷ್ಟಪಟ್ಟು ಬೆಳೆಸಿದ ಮರಗಳನ್ನು ಕೆಲವು ಗಂಟೆಗಳಲ್ಲಿ ಉರುಳಿಸಬಹುದು .

ಕಷ್ಟಪಟ್ಟು ದುಡಿದ ಹಣವನ್ನು ಕ್ಷಣ ಮಾತ್ರದಲ್ಲಿ ಪೋಲು ಮಾಡಬಹುದು . ಸತ್ಯಮಾರ್ಗದಲ್ಲಿ ನಡೆದು ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದು ಕ್ಷಣಮಾತ್ರದಲ್ಲಿ ದುಷ್ಕರ ಸಹವಾಸದಿಂದ ಹಾಳಾಗಬಹುದು . ಉತ್ತಮ ಕೆಲಸಗಳಿಗೆ ಬೇಕಾಗುವ ಶ್ರಮ ಸಮಯ ದೀರ್ಘವಾಗಿದ್ದು ಅದನ್ನು ಹಾಳುಗೆಡವಲು ಕೆಲವೇ ಕ್ಷಣ ಸಾಕು ಕುಂಬಾರ ಹಗಲೂ ರಾತ್ರಿ ಕಷ್ಟಪಟ್ಟು ಮಾಡಿದ ಮಡಕೆ ಒಂದು ದೊಣ್ಣೆ ಪೆಟ್ಟಿನಿಂದ ಒಡೆದು ಹೋಗುವುದು . ಆದ್ದರಿಂದಲೇ “ ಕಟ್ಟುವುದು ಕಠಿಣ : ಕೆಡವುಹುದು ಸುಲಭ ” ಎಂಬ ಮಾತೂ ಮೇಲಿನ ಗಾದೆಯ ಅರ್ಥವನ್ನೇ ಹೇಲುತ್ತದೆ .

ಮಾಡಿದ್ದುಣೋ ಮಹಾರಾಯ

ಗಾದೆಗಳು ವೇದಗಳಿಗೆ ಸಮಾನ ಇವು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ . ‘ ಮಾಡಿದ್ದುಣೋ ಮಹಾರಾಯ ‘ ಎಂಬುದು ಕನ್ನಡದ ಜನಪ್ರಿಯ ಗಾದೆಗಳಲ್ಲಿ ಒಂದಾಗಿದೆ . ಮಾಡಿದ್ದು ಉಣ್ಣುವುದು ಎಂದರೆ ಕೇವಲ ನಾವು ತಯಾರಿಸಿದ ಅಡುಗೆ ಸೇವಿಸುವುದು ಎಂಬ ಅರ್ಥ ಮಾತ್ರವಲ್ಲ , ನಾವು ಮಾಡಿದ ಕಾರ್ಯಕ್ಕೆ ತಕ್ಕ ಪ್ರತಿಫಲ ಪಡೆಯುತ್ತೇವೆ ಎಂದು ಅರ್ಥ .

ಒಳ್ಳೆಯ ಕಾರ್ಯ ಮಾಡಿದರೆ ಒಳ್ಳೆಯ ಪ್ರತಿಫಲ ದೊರೆಯುತ್ತದೆ . ಕೆಟ್ಟ ಕಾರ್ಯ ಮಾಡಿದರೆ ಕೆಟ್ಟ ಪ್ರತಿಫಲ ದೊರೆಯುತ್ತದೆ . ದಾನ , ಧರ್ಮ , ಮುಂತಾದ ಕಾರ್ಯಗಳಿಂದ ಗೌರ್ ಅದರಗಳು ದೊರೆಯುತ್ತವೆ . ಕಳ್ಳತನ , ಮೋಸ ಮಾಡುವುದರಿಂದ ಶಿಕ್ಷೆ ಅನುಭವಿಸಬೇಕಾಗುತ್ತದೆ . ಬಿತ್ತಿದ್ದನ್ನೇ ಬೆಳೆಯುತ್ತೇವೆ ಎಂಬುದು ಇದೇ ಅರ್ಥವನ್ನು ನೀಡುತ್ತದೆ .

london nagara notes quiz

ವಿಷಯಗಳಿಗೆ ಪ್ರಬಂಧ ಬರೆಯಿರಿ ,

ಸ್ವಚ್ಛ ಭಾರತ ಅಭಿಯಾನ

ಎಲ್ಲಿ ಸ್ವಚ್ಛತೆ ಇರುವುದೋ ಅಲ್ಲಿ ದೇವರೂ ಸಹ ವಾಸಿಸುತ್ತಾನೆ ಎಂಬ ಪ್ರಸಿದ್ಧವಾದ ಮಾತೊಂದಿದೆ . ನಮ್ಮ ಆರೋಗ್ಯದ ದೃಷ್ಟಿಯಿಂದಲೂ ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರಬೇಕು . ಪ್ರತಿಯೊಬ್ಬರೂ ಹಾಗೆ ಯೋಚಿಸಿದರೆ , ಕಾರ್ಯ ಪ್ರವೃತ್ತವಾದರೆ ಇಡೀ ಭಾರತ ಸ್ವಚ್ಛವಾಗಿರುತ್ತದೆ . ಈ ಕಾರ್ಯ ನಮ್ಮ ನಮ್ಮ ಮನೆಗಳಿಂದಲೇ ಪ್ರಾರಂಭಿಸಬೇಕು .

ಭಾರತದ ಪ್ರಧಾನ ಮಂತ್ರಿಗಳಾಗಿರುವ ನರೇಂದ್ರ ಮೋದಿಯವರು ಮಹಾತ್ಮಾ ಗಾಂಧೀಜಿಯವರ ಜನ್ಮದಿನದಿಂದು ‘ ಸ್ವಚ್ಛಭಾರತ ‘ ಅಭಿಯಾನಕ್ಕೆ ಚಾಲನೆ ನೀಡಿದರು . ನಗರ ಹಳ್ಳಿಗಳೆನ್ನದೆ , ಎಲ್ಲೆಡೆಯೂ ಇದಕ್ಕೆ ಉತ್ತಮ ಪ್ರತಿಕ್ರಿಯೆಯು ಪ್ರಕಟವಾಗಿದೆ . ತ್ಯಾಜ್ಯವಸ್ತುಗಳ ಸಮರ್ಪಕ ವಿಲೇವಾರಿ ಆದರೆ ಸ್ವಚ್ಛ ಪರಿಸರ ಕಾಣಬಹುದಾಗಿದೆ . ಪ್ರತಿನಿತ್ಯ ಸ್ವಲ್ಪ ಸಮಯವನ್ನು ಸ್ವಚ್ಛತೆಗೆ ಮೀಸಲಿಡುವುದರಿಂದ ಸುಂದರವಾದ ಪರಿಸರವನ್ನು ನಾವು ಕಾಣಬಹುದಾಗಿದೆ . ಹಿರಿಯರು , ಕಿರಿಯರೆನ್ನದ ಪ್ರತಿಯೊಬ್ಬರು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಸ್ವಚ್ಛಭಾರತ ಅಭಿಯಾನ ಯಶಸ್ವಿಯಾಗುತ್ತದೆ .

ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ

ಭಾರತ ಪುರಾತನವಾದ ದೇಶವಾಗಿದೆ . ಶತಶತಮಾನಗಳ ಇತಿಹಾಸವನ್ನು ಹೊಂದಿದೆ . ಹಲವಾರು ರಾಜ ಮಹಾರಾಜರುಗಳು , ದೇವಾಲಯಗಳು , ಅರಮನೆಗಳನ್ನು ಕಟ್ಟಿಸಿದ್ದಾರೆ . ಅವೆಲ್ಲವುಗಳು ಕ್ರಮೇಣ ಶಿಥಿಲಾವಸ್ಥೆಗೆ ಬರುತ್ತವೆ . ಹಂಪೆ , ಸೋಮನಾಥಪುರ , ಬೇಲೂರು , ಹಳೇಬೀಡು , ಶ್ರವಣಬೆಳಗೂಳ , ಜಯಪುರ , ದೆಹಲಿ ಮುಂತಾದ ಕಡೆ ಕೋಟೆ ಕೊತ್ತಲಗಳು , ಶಿಲ್ಪಕಲೆ , ವಾಸ್ತುಶಿಲ್ಪಗಳು ಕಣ್ಮನ ಸೆಳೆಯುತ್ತವೆ . ಹಿಂದಿನವರ ಕೌಶಲ್ಯವನ್ನು ಮೆಚ್ಚುತ್ತೇವೆ .

ಆದರೆ ಅವು ಮುಂದಿನ ಪೀಳಿಗೆಗಳವರೆಗೆ ಇರಬೇಕು . ಮುಂದೆ ಬರುವ ಜನಾಂಗ ಅವುಗಳನ್ನು ನೋಡಬೇಕು ಅದಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿವೆ . ಸಾರ್ವಜನಿಕರಾದ ನಾವೂ ಸಹ ಅವುಗಳನ್ನು ಧ್ವಂಸಮಾಡದೆ ಅವುಗಳ ಅಂದವನ್ನು ಕೆಡಿಸದೆ ಜೋಪಾನವಾಗಿ ಸಂರಕ್ಷಿಸುವ ಸಂಕಲ್ಪ ಮಾಡಬೇಕಾಗಿದೆ .

ರಾಷ್ಟ್ರೀಯ ಭಾವೈಕ್ಯತೆ

ವಿವಿಧತೆಯಲ್ಲಿ ಏಕತೆಯಿಂದ ಇರುವುದಕ್ಕೆ ಭಾವೈಕ್ಯತೆ ಎನ್ನುವರು , ಭಾರತ ಹಲವು ಮತ ಧರ್ಮಗಳನ್ನು ಹೊಂದಿದ ದೇಶ , ಹಲವು ಜನಾಂಗದ ಜನರು ಪ್ರಾಚೀನ ಕಾಲದಿಂದ ಇಲ್ಲಿ ನೆಲೆಸಿದ್ದಾರೆ . ವೇಷ , ಭೂಷಣ , ಭಾಷೆ ಬೇರೆ ಬೇರೆಯಾದರೂ ಎಲ್ಲರೂ ಭಾರತೀಯರು , ಭಾರತ ಮಾತೆಯ ಮಕ್ಕಳು ಎಂಬ ಭಾವನೆ ಬೇರೂರಿದೆ . ಭಾರತ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹೊಂದಿದೆ . ಇಲ್ಲಿ ಯಾರೂ ಮೇಲಲ್ಲ , ಯಾರೂ ಕೀಳಲ್ಲ .

ಭಾರತ ಸಂವಿಧಾನದಲ್ಲಿ ಮತೀಯ ಭೇದ ಭಾವಕ್ಕೆ ಅವಕಾಶವಿಲ್ಲ . ಬಡವ , ಶ್ರೀಮಂತ , ಎಲ್ಲರೂ ಸಮಾನರಾಗಿ ಬಾಳಬೇಕು . ಎಲ್ಲ ಜಾತಿಯ ಜನರು ಸಮಾನತೆಯನ್ನು ಕಾಪಾಡಿಕೊಳ್ಳಬೇಕು . ರಾಜಕೀಯದಿಂದ ಒಂದುಗೂಡಿ ಬಾಳುವ ಜನತೆಯಲ್ಲಿ ಭೇದ , ದ್ವೇಷವನ್ನು , ಒಡಕನ್ನು ಉಂಟು ಮಾಡುವ ಪ್ರಸಂಗಗಳು ನಡೆಯುತ್ತಿವೆ . ಇವು ಶಾಶ್ವತವಲ್ಲ .

ಓಟಿಗಾಗಿ ರಾಜಕಾರಣಿಗಳು , ಸಮಾಜದಲ್ಲಿ ಒಡಕು ಉಂಟುಮಾಡುವ ಕಾರ್ಯಕ್ಕೆ ಜನರನ್ನು ಪ್ರೇರೇಪಿಸುವರು . ಅಧಿಕಾರಕ್ಕಾಗಿ ಸಮಾಜದ ಆರೋಗ್ಯವನ್ನು ಹಾಳು ಮಾಡುವರು . ಆದರೆ ಸಾಮಾನ್ಯ ಜನತೆ ಇದಕ್ಕೆ ಬೆಲೆ ಕೊಡದೆ ಎಲ್ಲರೂ ಒಂದು ಎಂಬ ಭಾವನೆಯಿಂದ ಬಾಳಿದರೆ , ಒಗ್ಗಟ್ಟಿನಿಂದ ಕಾರ್ಯ ಮಾಡಿದರೆ , ಜೀವನವೂ ಸುಖಮಯವಾಗುತ್ತದೆ ಹಾಗೂ ನಾಡು , ದೇಶ ಪ್ರಗತಿ ಹೊಂದುತ್ತದೆ . ಪ್ರಗತಿಪರ ಬೆಳವಣಿಗೆಗೆ ಭಾವೈಕ್ಯತೆ ಅಗತ್ಯವಾಗಿದೆ .

ಲಂಡನ್ ನಗರ ಪಾಠದ ಪ್ರಶ್ನೋತ್ತರಗಳು | London Nagara Notes Free For 10th Students
ಲಂಡನ್ ನಗರ ಪಾಠದ ಪ್ರಶ್ನೋತ್ತರಗಳು | London Nagara Notes Free For 10th Students

london nagara notes sslc

ಪದಗಳ ಅರ್ಥ :

10th kannada 3rd lesson notes

  • ಅಂಜು-ಹೆದರು ಭಯಪಡು
  • ಪೆನ್ನಿ- ಇಂಗ್ಲೆಂಡಿನ ನಾಣ್ಯ
  • ಕೂಟ -ಅನೇಕ ರಸ್ತೆಗಳು ಸೇರುವ ಜಾಗ
  • ಟೈಪಿಸ್ಟ್ -ಬೆರಳಚ್ಚುಗಾರ
  • ಕಾರಕೂನ-ಗುಮಾಸ್ತ
  • ಪಾಟಿ- ಹಲಗೆ
  • ಪೋಕ್ತ-ಅಲಂಕಾರ , ಚೆನ್ನಾಗಿ ಉಡುಪು ಧರಿಸುವುದು
  • ಮರ್ತ್ಯತ್ವವೇ – ಮನುಷ್ಯ ಸ್ವಭಾವವೇ
  • ವಕೀಲಿ ಪ್ರಭಾವ , ವರ್ಚಸ್ಸು
  • ವಸಾಹತು-ಅನ್ಯದೇಶಿಯರ ಅಧಿಕಾರಕ್ಕೊಳಪಟ್ಟ ಪ್ರದೇಶ
  • ವಿಲಾಯಿತಿ-ವಿದೇಶ
  • ಶೀಲಿಂಗ್ -ಇಂಗ್ಲೆಂಡಿನ ಒಂದು ಬೆಳ್ಳಿಯ ನಾಣ್ಯ
  • ಸ್ಟೇಷನರಿ-ಲೇಖನ ಸಾಮಗ್ರಿಗಳು ,
  • ಕಟ್ಟೆ -ಕೆತ್ತು
  • ಕಬ್ಬಿಗ -ಕವಿ
  • ಚಣ್ಣ -ಚಡ್ಡಿ
  • ಟ್ರಾಮ್ -ವಿದ್ಯುತ್ತಿನಿಂದ ಓಡಾಡುವ ಸ್ಥಳೀಯ ರೈಲುಗಾಡಿ
  • ಪುಚ್ಚ್ಬ್-ಗರಿ
  • ಫೂಟ್-ಅಡಿ
  • ಮೋರೆ-ಮುಖ

london nagara notes 10th standard

ಇದಕ್ಕೆ ಸಂಬಂದಿಸಿದ ಇತರೆ ವಿಷಯಗಳು

ಶಬರಿ ಪಾಠದ ಕವಿ ಪರಿಚಯ

ಶಬರಿ ಪಾಠದ ಪ್ರಶ್ನೆ ಮತ್ತು ಉತ್ತರ

Leave a Reply

Your email address will not be published. Required fields are marked *