10th kannada edege bidda akshara notes , 10th kannada edege bidda akshara question answer , edege bidda akshara kannada lesson , ಎದೆಗೆ ಬಿದ್ದ ಅಕ್ಷರ notes
Edege Bidda Akshara Kannada 10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್
ಈ ಲೇಖನದಲ್ಲಿ 10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದು ಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.
ಲೇಖಕರ ಪರಿಚಯ
ಲೇಖಕರು : ದೇವನೂರ ಮಹಾದೇವ
ಕಾಲ :ಕ್ರಿ.ಶ .1949
ಸ್ಥಳ : ಮೈಸೂರು ಜಿಲ್ಲೆ , ನಂಜನಗೂಡು ತಾಲ್ಲೂಕು , ದೇವನೂರು .
ಕೃತಿಗಳು: ದ್ಯಾವನೂರು , ಒಡಲಾಳ , ಗಾಂಧಿ ಮತ್ತು ಮಾವೋ , ನಂಬಿಕೆಯನೆಂಟ , ನೋಡು ಮತ್ತು ಕೂಡು , ಎದೆಗೆ ಬಿದ್ದ ಅಕ್ಷರ , ಕುಸುಮ ಬಾಲೆ .
ವಿಶೇಷ:* ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ .
- ಬಂಡಾಯ ಮತ್ತು ದಲಿತ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರು .
- ಆಡುಮಾತಿನ ಧ್ವನಿಶಕ್ತಿಯನ್ನು ಎತ್ತರಿಸಿದ ಶಬ್ದ ಶಿಲ್ಪಿ .
ಪ್ರಶಸ್ತಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( ಕುಸುಮಬಾಲೆ ಕಾದಂಬರಿಗೆ )
ಆಕರಗ್ರಂಥ: ‘ ಎದೆಗೆ ಬಿದ್ದ ಅಕ್ಷರ ‘ ( ವೈಚಾರಿಕ ಬಿಡಿ ಲೇಖನಗಳ ಸಂಕಲನ ) .
Edege Bidda Akshara 10th Class Kannada Notes Free
ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .
ಇಂದಲ್ಲ – ನಾಳೆ ಫಲ ಕೊಡುವ ಅಂಶಗಳಾವುವು ?
ಭೂಮಿಗೆ ಬಿದ್ದ ಬೀಜ ಹಾಗೂ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲಕೊಡುವ ಅಂಶಗಳಾಗಿವೆ .
ಮನೆ ಮಂಚಮ್ಮ ಯಾರು ?
ಮನೆ ಮಂಚಮ್ಮ ಊರಿನ ಗ್ರಾಮದೇವತೆ .
ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು ?
ಕವಿ ಸಿದ್ಧಲಿಂಗಯ್ಯ ಅವರು ಮನೆ ಮಂಚಮ್ಮ ಎಂಬ ಗ್ರಾಮದೇವತೆಯ ಕತೆ ಹೇಳಿದ್ದಾರೆ .
ಎದೆಗೆ ಬಿದ್ದ ಅಕ್ಷರ ಪಾಠದ ಪ್ರಶ್ನೋತ್ತರಗಳು
ಶಿವಾನುಭವ ಶಬ್ದಕೋಶ ‘ ಪುಸ್ತಕ ಬರೆದವರು ಯಾರು ?
ಹಳಕಟ್ಟಿಯವರು ‘ ಶಿವಾನುಭವ ಶಬ್ದಕೋಶ ‘ ಎಂಬ ಪುಸ್ತಕವನ್ನು ಬರೆದಿದ್ದಾರೆ .
ವಚನಕಾರರಿಗೆ ಯಾವುದು ದೇವರಾಗಿತ್ತು ?
ವಚನಕಾರರಿಗೆ ಅವರ ಪ್ರಜ್ಞೆಯೇ ದೇವರಾಗಿತ್ತು .
ಅಶೋಕ ಪೈ ಅವರ ವೃತ್ತಿ ಯಾವುದು ?
ಶಿವಮೊಗ್ಗದ ಡಾ . ಅಶೋಕ ಪೈ ಅವರು ಒಬ್ಬ ಮನೋವೈದ್ಯರು .
Edege Bidda Akshara 10th Class Kannada Notes Free
ದೇವನೂರರ ‘ ನನ್ನ ದೇವರು ‘ ಯಾರೆಂಬುದನ್ನು ಸ್ಪಷ್ಟಿಕರಿಸಿ .
ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ದೇವನೂರರು ನನ್ನ ದೇವರು ಎಂದಿದ್ದಾರೆ .
ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
ಅಶೋಕ ಪೈ ಹೇಳಿದ ಸಂಶೋಧನಾ ಸತ್ಯವೇನು ?
ಶಿವಮೊಗ್ಗದ ಡಾ . ಅಶೋಕ ಪೈ ( ಮನೋವೈದ್ಯರು ) ಅವರು ಮೈಸೂರಿಗೆ ಬಂದಿದ್ದರು . ಅವರು ಮನಸ್ಸಿನ ಬಗ್ಗೆ ನಡೆದಿರುವ ಒಂದು ಸಂಶೋಧನಾ ಸತ್ಯವನ್ನು ಹೇಳಿದರು . ಏನೆಂದರೆ – ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ . ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಏನೋ ಮಾತುಕತೆಯಾಡುತ್ತ ತಮ್ಮಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೋಣ .
ಆಗ ಟೆಲಿವಿಷನ್ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದಂತೆ . ಅದೇ ಟೆಲಿವಿಷನ್ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದ ತಮ್ಮಷ್ಟಕ್ಕೆ ತಾವೇ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಮಾಡಿ ಸ್ವಲ್ಪ ಮಟ್ಟಿಗೆ ಸಂತೋಷದ ಭಾವನೆ ಉಂಟಾಗುವುದಂತೆ .
ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು ? ವಿವರಿಸಿ .
ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳುವಳಿಕೆ , ಜ್ಞಾನಮಾತ್ರ ಅಲ್ಲ ಅದು ಕ್ರಿಯೆಯ ಅನುಭವದಿಂದ ಒಡ ಮಾಡುವುದು . ಅದು ಕೇಳಿ ತಿಳಿದಿದ್ದಲ್ಲ , ಕ್ರಿಯೆಯಲ್ಲಿ ಮೂಡಿದ ತಿಳುವಳಿಕೆ . ಅದು ತರ್ಕವಲ್ಲ ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು .
edege bidda akshara in kannada
ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
ಕವಿ ಸಿದ್ಧಲಿಂಗಯ್ಯ ಹೇಳಿದ ಕತೆಯನ್ನು ಬರೆಯಿರಿ
ಕವಿ ಸಿದ್ಧಲಿಂಗಯ್ಯ ಒಮ್ಮೆ ನನಗೆ ಹೇಳಿದ ಕತೆಯಲ್ಲಿ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿಂದ ನನ್ನ ದೇವರು ಒಡಮೂಡುತ್ತದೆ- ಒಂದಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ . ಹೀಗೆ ಕಟ್ಕಾ ಚಾವಣಿ ಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು “ ನಿ ನನ್ ಮಕ್ಕಳಾ ” ಎಂದು ಅಬ್ಬರ ಮಾಡುತ್ತಾಳೆ .
ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಲಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ . ‘ ಏನಯ್ಯಾ ಏನ್ ಮಾಡ್ತಾ ಇದ್ದೀರಿ ? ‘ “ ನಿನಗೊಂದು ಗುಡಿಮನೆ ಕಡ್ತಾ ಇದ್ದೀವಿ ತಾಯಿ “ ಓಹೋ , ನನಗೇ ಗುಡಿಮನೆ ಕಡ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ ? ‘ ‘ ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ . ‘ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ ‘ -ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ !
ಸಂದರ್ಭದೊಂದಿಗೆ ಸ್ವಾರಸ್ಯ ಬರೆಯಿರಿ .
10ನೇ ತರಗತಿ ಕನ್ನಡ ಎದೆಗೆ ಬಿದ್ದಅಕ್ಷರ ನೋಟ್ಸ್
“ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ . ”
ಈ ವಾಕ್ಯವನ್ನು ದೇವನೂರ ಮಹಾದೇವ ವಿರಚಿತ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದ ಒಂದು ಭಾಗವಾಗಿರುವ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ . ಈ ಮಾತನ್ನು ದೇವತೆ ಮಂಚಮ್ಮ ಹೇಳುತ್ತಾಳೆ .
ದೇವತೆ ಮಂಚಮ್ಮ ‘ ಏನಯ್ಯಾ ಏನ್ ಮಾಡ್ತಾ ಇದ್ದೀರಿ ? ‘ ಎನ್ನುತ್ತಾಳೆ . “ ನಿನಗೊಂದು ಗುಡಿಮನೆ ಕಡ್ತಾ ಇದ್ದೀವಿ ‘ ತಾಯಿ ‘ “ ಓಹೋ , ನನಗೇ ಗುಡಿಮನೆ ಕಡ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ ? ‘ ‘ ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ . ‘ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ ‘ ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ !
“ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ . ”
ಈ ವಾಕ್ಯವನ್ನು ದೇವನೂರ ಮಹಾದೇವ ವಿರಚಿತ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದ ಒಂದು ಭಾಗವಾಗಿರುವ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ .ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಹೇಳಿದ್ದಾರೆ . ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂದು ಹೇಳುತ್ತದೆ .
ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕ ೦ ಪನ ಉಂಟು ಮಾಡುತ್ತಿರುತ್ತದೇನೊ . ಈ ಅನುಕಂಪನ ಇಡೀ ಜೀವಸಂಕುಲವನ್ನೇ ಒಂದು ಎಂದು ಹೇಳುತ್ತದೆ .
“ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು ”
ಈ ವಾಕ್ಯವನ್ನು ದೇವನೂರ ಮಹಾದೇವ ವಿರಚಿತ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದ ಒಂದು ಭಾಗವಾಗಿರುವ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ . ಈ ಮಾತನ್ನು ಲೇಖಕರು ಹೇಳಿದ್ದಾರೆ . ವಚನಕಾರರ ದೃಷ್ಟಿಯಲ್ಲಿ ಅರಿವು ಎಂಬ ವಿಷಯವನ್ನು ವಿವರಿಸುವ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ .
edege bidda akshara kannada lesson
“ ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ . ”
ಈ ವಾಕ್ಯವನ್ನು ದೇವನೂರ ಮಹಾದೇವ ವಿರಚಿತ ‘ ಎದೆಗೆ ಬಿದ್ದ ಅಕ್ಷರ ‘ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದ ಒಂದು ಭಾಗವಾಗಿರುವ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ . ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಹೇಳಿದ್ದಾರೆ . ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ . ಈ ಎಳೆ ಹಿಡಿದು ಜಾಗತೀಕರಣವನ್ನೂ ರೂಪಿಸಬೇಕಾಗಿದೆ . ಆಗ ಮಾತ್ರವೇ ಅದು ಜಾಗತೀಕರಣ .
ಭಾಷಾ ಚಟುವಟಿಕೆ
ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ
ಕಕ್ಕಾಬಿಕ್ಕಿ
ಪೋಲೀಸರನ್ನು ಕಂಡ ಕಳ್ಳರು ಕಕ್ಕಾಬಿಕ್ಕಿಯಾದರು .
ಆರಂಭಿಸು
ಉತ್ತಮ ಕೆಲಸಗಳನ್ನು ಆದಷ್ಟು ಬೇಗನೆ ಆರಂಭಿಸಬೇಕು .
ಪ್ರಯತ್ನಿಸು
ಶ್ರದ್ಧೆಯಿಂದ ಪ್ರಯತ್ನಿಸಿದರೆ ಎಲ್ಲವೂ ಸಿದ್ಧಿಸುತ್ತದೆ .
ಘಾಸಿಗೊಳಿಸು
ನಮ್ಮ ನಡೆ ನುಡಿಯಿಂದ ಯಾರ ಮನಸನ ಘಾಸಿಗೊಳಿಸಬಾರದು .
ಕೊಟ್ಟಿರುವ ಪದಗಳ ವಿರುದ್ಧಾರ್ಥಕ ಪದ ಬರೆಯಿರಿ
- ಒಳಿತು ×ಕೆಡುಕು
- ಪುಣ್ಯ ×ಪಾಪ
- ಧರ್ಮ ×ಅಧರ್ಮ
- ಸಮಷ್ಟಿ×ವ್ಯಷ್ಟಿ
- ಬೆಳಕು×ಕತ್ತಲೆ
ಕೊಟ್ಟಿರುವ ವಿಷಯವನ್ನು ಕುರಿತು ಪ್ರಬಂಧ ರಚಿಸಿರಿ .
ಗ್ರಾಮ ಸ್ವರಾಜ್ಯ
ಭಾರತ ಹಳ್ಳಿಗಳ ದೇಶ ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕನಸನ್ನು ಕಂಡಿದ್ದರು . 1929 ರಲ್ಲಿ ಗಾಂಧೀಜಿಯವರು ರಾಮರಾಜ್ಯದ ಕಲ್ಪನೆಯನ್ನು ಬಳಸಿದರು . ಗ್ರಾಮಸ್ವರಾಜ್ಯ ಅಥವಾ ರಾಮರಾಜ್ಯದಲ್ಲಿ ನಾಯಿಗೂ ನ್ಯಾಯ ದೊರೆಯುತ್ತಿತ್ತಂತೆ . ಗ್ರಾಮ ಸ್ವರಾಜ್ಯದಲ್ಲಿ ಪ್ರತಿಯೊಂದು ಹಳ್ಳಿಯೂ ಸ್ವಾವಲಂಬಿಯಾಗಬೇಕು .
ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೆಚ್ಚಿನ ಅಧಿಕಾರ ನೀಡಬೇಕು . ಅಧಿಕಾರ ವಿಕೇಂದ್ರಿಕರಣ ಆಗಬೇಕು . ಆದರೆ ಗ್ರಾಮ ಪಂಚಾಯಿತಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ . ಉತ್ತರ ಕರ್ನಾಟಕದಲ್ಲಿ ಇಂದಿಗೂ ಕೆಲವು ಹಳ್ಳಿಯ ಮನೆಗಳಲ್ಲಿ ಶೌಚಾಲಯಗಳಲ್ಲಿ ಪಂಚಾಯತ್ ರಾಜ್ ಆಡಳಿತ ವ್ಯವಸ್ಥೆಯ ಮೂಲಕ ಹಳ್ಳಿಗಳಿಗೆ ಹೆಚ್ಚಿನ ಅನುದಾನ ಹಾಗೂ ಸ್ವಾತಂತ್ರ್ಯ ನೀಡಬೇಕೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ . ಗ್ರಾಮ ಸ್ವರಾಜ್ಯವೇ ಜನತಂತ್ರ – ಗಣರಾಜ್ಯವನ್ನು ರಕ್ಷಿಸುವ ಏಕೈಕ ದಾರಿಯಾಗಿದೆ .
ತ್ಯಾಜ್ಯವನ್ನು ನಿರ್ವಹಣೆ
ಸೌರಮಂಡಲದಲ್ಲಿ ಜೀವಿಗಳಿರುವ ಏಕೈಕ ಗ್ರಹ ಎಂದರೆ ಅದು ಭೂಮಿ . 21 ನೇ ಶತಮಾನದಲ್ಲಿ ಈ ಭೂಮಂಡಲವನ್ನು ಕಾಡುತ್ತಿರುವ ಸಮಸ್ಯೆ ಒಂದು ಅದು ತ್ಯಾಜ್ಯ ವಸ್ತು ನಿರ್ವಹಣೆ ಜನರು ಬಳಸಿ ಬಿಸಾಡುವ ಜೈವಿಕ , ಅಜೈವಿಕ , ರಾಸಾಯನಿಕ ವಸ್ತುಗಳು ತ್ಯಾಜ್ಯವಸ್ತುಗಳೆನಿಸುತ್ತವೆ . ಉದಾಹರಣೆಗೆ ಪ್ಲಾಸ್ಟಿಕ್ ಡಬ್ಬ , ಬಾಟಲಿಗಳು , ಪ್ಲಾಸ್ಟಿಕ್ ಬ್ಯಾಗ್ , ಪೇಪರ್ ಸಾಮಾಗ್ರಿ , ಆಹಾರದ ಪೊಟ್ಟಣಗಳು , ತರಕಾರಿ ಸಿಪ್ಪೆ , ಅಡುಗೆ ಮನೆಯ ಕಸ , ಹಳೆಯ ಟಿವಿ , ಟೇಪ್ರೆಕಾರ್ಡರ್ , ಕಂಪ್ಯೂಟರ್ , ಕೈಗಾರಿಕೆಗಳಿಂದ ಬರುವ ತ್ಯಾಜ್ಯಗಳು , ತ್ಯಾಜ್ಯವಸ್ತುಗಳಾಗಿವೆ . ನಗರಗಳಲ್ಲಿ ಈ ಸಮಸ್ಯೆ ಬೃಹದಾಕಾರವಾಗಿ ಕಾಡುತ್ತಿದೆ .
ಪಾಲಿಕೆಗಳು ಇದಕ್ಕೆ ಹಲವು ಯೋಜನೆಗಳನ್ನು ಹಾಕಿಕೊಂಡಿವೆ . ಹಸಿಕಸ ಮತ್ತು ಒಣಕಸ ಎಂದು ಬೇರ್ಪಡಿಸಿ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುತ್ತಿದೆ . ಇದಕ್ಕೆ ಸಾರ್ವಜನಿಕರೂ ಸಹಕರಿಸಬೇಕಾಗುತ್ತದೆ . ಕೆಲವು ವಸ್ತುಗಳನ್ನು ಮರು ಬಳಕೆ ಮಾಡಲಾಗುತ್ತದೆ . ಗಾಜು , ಪ್ಲಾಸ್ಟಿಕ್ , ಪೇಪರ್ , ಲೋಹ , ಇತ್ಯಾದಿಗಳನ್ನು ಬೇರ್ಪಡಿಸಿ ಮರು ಬಳಕೆ ಮಾಡುತ್ತಾರೆ .
ಕೊಳೆಯುವ ವಸ್ತುಗಳನ್ನು ಗೊಬ್ಬರವಾಗಿ ಪರಿವರ್ತಿಸುತ್ತಾರೆ ಕೆಲವನ್ನು ಸುಟ್ಟು ಬೂದಿ ಮಾಡಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಾರೆ . ಇಂದು ತ್ಯಾಜ್ಯದಿಂದ ವಿದ್ಯುತ್ತನ್ನು ಉತ್ಪಾದನೆ ಮಾಡಬಹುದು . ಎಂದು ಸಂಶೋಧನೆ ಮಾಡಲಾಗಿದೆ . ಸ್ವೀಡನ್ , ನಾರ್ವೆ , ಡೆನ್ಮಾರ್ಕ್ , ಫ್ರಾನ್ಸ್ಗಳಲ್ಲಿ ಈ ಪ್ರಯೋಗ ನಡೆಯುತ್ತಿದೆ . ಒಟ್ಟಿನಲ್ಲಿ ಸಾರ್ವಜನಿಕರೂ ಸಹ ಜಾಗೃತವಾಗಿದ್ದು ತ್ಯಾಜ್ಯವನ್ನು ವಿಲೇವಾರಿ ಹಾಗೂ ನಿರ್ವಹಣೆಯಲ್ಲಿ ಸಹಕರಿಸುವುದು ಅತ್ಯವಶ್ಯಕವಾಗಿದೆ .
edege bidda akshara kannada notes pdf
ಲಲಿತ ಕಲೆಗಳು
ಲಲಿತ ಕಲೆಗಳನ್ನು ಜನಪದ ಕಲೆಗಳು ಮತ್ತು ಅಷ್ಟಕಲೆಗಳೆಂದು ವರ್ಗೀಕರಿಸಬಹುದು . ಒಟ್ಟು ಲಲಿತ ಕಲೆಗಳನ್ನು ಪಂಚಕಲೆಗಳೆಂದು ಕರೆಯುತ್ತೇವೆ . ಸಂಗೀತ , ನೃತ್ಯ , ಶಿಲ್ಪಚಿತ್ರ , ಮತ್ತು ಸಾಹಿತ್ಯ ಕಲೆಗಳೆಂದು ಅವುಗಳನ್ನು ವರ್ಗೀಕರಿಸಲಾಗಿದೆ . ಸ್ವಯಂ ಪ್ರತಿಭೆ ಹಾಗೂ ಸತತ ಅಭ್ಯಾಸಗಳಿಂದ ಇವು ಅರಳಲು ಸಾಧ್ಯವಿದೆ .
ಈ ಕಲೆಗಳು ಪರಂಪರೆಯಿಂದ ನಮ್ಮ ದೇಶದಲ್ಲಿ ಬೆಳೆದು ಬಂದಿದೆ . ಭಾರತವು ಬಹು ಸಂಸ್ಕೃತಿಯ ಬಹು ಭಾಷೆಯ ನೆಲೆಯಾಗಿದೆ . ಪ್ರತಿಯೊಂದು ಹಳ್ಳಿಯೂ ಸಂಸ್ಕೃತಿಯ ತವರೂರಾಗಿತ್ತು . ಆದರೆ ಇಂದಿನ ಜಾಗತೀಕರಣ , ಆಧುನೀಕರಣದಿಂದ ಅವುಗಳು ಮೂಲೆ ಗುಂಪಾಗುತ್ತಿವೆ . ಕೆಲವು ಲಲಿತ ಕಲೆಗಳು ಆಗಲೇ ವಿನಾಶದ ಅಂಚಿನಲ್ಲಿವೆ . ಅವುಗಳ ಬಗ್ಗೆ ಅಭಿಮಾನ ಹೊಂದಿ ಅವುಗಳನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ .
ಹೆಚ್ಚುವರಿ ಪ್ರಶೋತ್ತರಗಳು
ದೇವನೂರ ಮಹಾದೇವ ಅವರು ಮೈಸೂರು ಜಿಲ್ಲೆಯ…. ತಾಲೂಕಿನ ದೇವನೂರಿನವರು .
ನಂಜನಗೂಡು
ಕುಸುಮಬಾಲೆ ಕಾದಂಬರಿಗೆ……ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ .
ಕೇಂದ್ರ
ಪರಾಶರನ ಮಗನಾದ ಕೃಷ್ಣಪಾಯನರ ಮತ್ತೊಂದು ಹೆಸರು …….
ವ್ಯಾಸ
ಶುದ್ಧೋದನನ ಮಗನ ಹೆಸರು……
ಸಿದ್ಧಾರ್ಥ
ಹ್ಯಾಬ್ಲೆಟ್ , ಮ್ಯಾಕ್ಬೆತ್ , ಜೂಲಿಯಸ್ ಸೀಸರ್ , ಒಥೆಲೊ ಮುಂತಾದ ದುರಂತ ನಾಟಕಗಳ ಕರ್ತೃ……..
ಷೇಕ್ಸ್ಪಿಯರ್
ಟಾಲ್ಸ್ಟಾಯ್ ಕಳೆದ ಶತಮಾನದ……… ದೇಶದ ಮಹಾನ್ ಮೇಧಾವಿ
ರಷ್ಯಾ
edege bidda akshara kannada
ಸಾಪೇಕ್ಷ ಸಿದ್ಧಾಂತ ‘ ಎನ್ನುವ ತತ್ತ್ವವನ್ನು ಜಗತ್ತಿನ ಮುಂದಿಟ್ಟ ಪ್ರಸಿದ್ಧ ವಿಜ್ಞಾನಿ……..
ಐನ್ಸ್ಟೈನ್
ಭಾರತದಂಥ ರಾಷ್ಟ್ರದಲ್ಲಿ ಜಾತೀಯತೆ , ಗ್ರಾಮೀಣ ಜೀವನ , ಬಡತನ , ಮೌಡ್ಯದಿಂದಾಗಿ…….. ಭಾವನೆ ಪ್ರಾಚೀನಕಾಲದಿಂದಲೂ ಬೆಳೆದು ಬಂದಿದೆ .
ಮೇಲು – ಕೀಳು
ಕವಿ ಸಿದ್ಧಲಿಂಗಯ್ಯ ಒಮ್ಮೆ ದೇವನೂರ ಮಹಾದೇವ ಅವರಿಗೆ …….ಎಂಬ ಗ್ರಾಮದೇವತೆಯ ಕತೆ ಹೇಳಿದರು .
ಮನೆಮಂಚಮ್ಮ
“ ಓಹೋ , ನನಗೇ ಗುಡಿಮನೆ ಕಡ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ……ಉಂಟಾ ನನ್ನ ಮಕ್ಕಳಾ ? ‘
ಮನೆ
ಬುದ್ಧನಂತೂ ಎಲ್ಲ …….ವನ್ನೂ ಮೀರಿದವನು .
ಸಹಸ್ರಮಾನ
ಒಂದು ದೇಹ ಮನಸ್ಸು ಅದೆಷ್ಟು ಮಾಧ್ಯಮವಾಗಬಹುದೋ ಆದಷ್ಟೂ ಒಂದೇ ದೇಹದಲ್ಲಿ ಸಂಭವಿಸಿದ ಒಂದು ಉದಾಹರಣೆ…..
ಪರಮಹಂಸ
Edege bidda akshara writer
‘ ಮಲೆಗಳಲ್ಲಿ ಮದುಮಗಳು ‘ ಕಾದಂಬರಿಯ ಕರ್ತೃ……..
ಕುವೆಂಪು
ಶಿವಮೊಗ್ಗದ ಮನೋವೈದ್ಯರಾದ …….ಅವರು ಮೈಸೂರಿಗೆ ಬಂದಿದ್ದರು . ವನ್ನು ‘
ಡಾ . ಅಶೋಕ ಪೈ
ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ……ವನ್ನು ಎಚ್ಚರಗೊಳಿಸಬೇಕಾಗಿದೆ .
ಕಾರುಣ್ಯ
Edege Bidda Akshara 10th notes
‘ ವಚನಧರ್ಮ’ದ ಬಗೆಗೆ ದೇವನೂರರ ಅಭಿಪ್ರಾಯ ಏನು ?
ಹನ್ನೆರಡನೆಯ ಶತಮಾನದ ವಚನ ಆಂದೋಲನದ ಆ ಇಪ್ಪತ್ತೈದು ವರ್ಷಗಳು . ಹುಡುಕಿದರೂ ಜಗತ್ತಿನಲ್ಲೇ ಕರ್ನಾಟಕದ ಈ ಮಾದರಿ ಬಹುಶಃ ಎಲ್ಲೂ ಸಿಗುವುದಿಲ್ಲವೇನೋ ! ಈ ವಚನಧರ್ಮವನ್ನು ಜಾತಿಯ ಬಚ್ಚಲಿನಿಂದ ಮೇಲೆತ್ತಿ ರಕ್ಷಿಸಿದರೆ ಜಗತ್ತಿಗೇ ಇದು ಬೆಳಕಾಗಬಹುದೇನೋ , ಇದು ಜಾತಿಯಾದರೆ ಕೆಟ್ಟ ಜಾತಿ ; ಧರ್ಮವಾದರೆ ಮಹೋನ್ನತ ಧರ್ಮ ,
ಪರಮಹಂಸರ ವ್ಯಕ್ತಿತ್ವದ ವೈಶಿಷ್ಟ್ಯ ಎಂಥದ್ದು ?
ಪರಮಹಂಸರು , ಒಂದು ದೇಹ , ಮನಸ್ಸು ಅದೆಷ್ಟು ಮಾಧ್ಯಮವಾಗಬಹುದೋ ಅದಷ್ಟೂ ಒಂದೇ ದೇಹದಲ್ಲಿ ಸಂಭವಿಸಿದ ಉದಾಹರಣೆ ಹೊಂದಿದ್ದಾರೆ . ಪರಮಹಂಸರು ಯಾವುದನ್ನೂ ಕೊಲ್ಲದೆ , ಒಳಿತುಗಳನ್ನೆ ಕೂಡಿಸುತ್ತ ಕೂಡಿಸುತ್ತಾ ಹೋದರು . ಇದು ಪರಮಹಂಸರ ವ್ಯಕ್ತಿತ್ವದ ವೈಶಿಷ್ಟ್ಯ .
ಇಂದಲ್ಲ – ನಾಳೆ ಫಲ ಕೊಡುವ ಅಂಶಗಳಾವುವು ?
ಬುದ್ಧನ ಕಾರುಣ್ಯ ದ್ವೇಷ ಅಸೂಯೆಗಳಿಂದ ಕೋಭೆಗೊಂಡು ನರಳುತ್ತಿರುವ ಜಗತ್ತು ಅದು ಘಾಸಿಗೊಳಿಸುವುದು – ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನೆ . ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ .
ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ . ಈ ಎಳೆ ಹಿಡಿದು ಜಾಗತೀಕರಣನ್ನೂ ರೂಪಿಸಬೇಕಾಗಿದೆ . ಆಗ ಮಾತ್ರವೇ ಅದು ಜಾಗತೀಕರಣ ಎಂಬುದು ದೇವನೂರ ಮಹಾದೇವ ಅವರ ಅಭಿಪ್ರಾಯವಾಗಿದೆ . ಇವು ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿವೆ .
ಪದಗಳ ಅರ್ಥ
- ಅಂದಾಜಿಸು – ಊಹೆ ಮಾಡು
- ಒಡಮೂಡು – ಹುಟ್ಟು
- ಗುಡಿಮನೆ – ಚಿಕ್ಕ ದೇವಸ್ಥಾನ
- ಕೋಭೆ – ತಳಮಳ
- ಆರ್ತತೆ – ಬಯಕೆ
- ಆವಾಹಿಸು -ಮೈಮೇಲೆ ಬರುವಂತೆ ಮಾಡಿಕೊ
- ಚಿಂತಕ – ಹೊಸ ರೀತಿಯ ವಿಚಾರಗಳನ್ನು ಪ್ರತಿಪಾದಿಸುವವನು .
FAQ
ಎದೆಗೆ ಬಿದ್ದ ಅಕ್ಷರ ಪಾಠದ ಲೇಖಕರು ಯಾರು?
ದೇವನೂರ ಮಹಾದೇವ
ದೇವನೂರ ಮಹಾದೇವ ಅವರು ಮೈಸೂರು ಜಿಲ್ಲೆಯ…. ತಾಲೂಕಿನ ದೇವನೂರಿನವರು?
ನಂಜನಗೂಡು
Edege Bidda Akshara Summary in Kannada
SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು
- ಭಾಗ್ಯಶಿಲ್ಪಿಗಳು ಪಾಠದ ಪ್ರಶ್ನೋತ್ತರಗಳು
- ಶಬರಿ ಪಾಠದ ಕವಿ ಪರಿಚಯ
- ಶಬರಿ ಪಾಠದ ಪ್ರಶ್ನೆ ಮತ್ತು ಉತ್ತರ
- ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು