belagu java kannada notes ,ಬೆಳಗು ಜಾವ ಕನ್ನಡ ನೋಟ್ಸ್ Belagu Java Questions and Answers Pdf, Notes, Summary, 2nd PUC Kannada Textbook Answers, Karnataka State Board , belagu jaava padyada notes , ಬೆಳಗು ಜಾವ notes
Belagu Java Kannada Notes 2nd PUC Kannada Textbook Answers
ಈ ಲೇಖನದಲ್ಲಿ ಬೆಳಗು ಜಾವ ಪದ್ಯದ ಪ್ರಶ್ನೋತ್ತರಗಳನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಇದು ಸಹಕಾರಿಯಾಗುತ್ತದೆ.
![2nd ಪಿ.ಯು.ಸಿ ಬೆಳಗು ಜಾವ ಕನ್ನಡ ನೋಟ್ಸ್ | Belagu Java Kannada Notes Free For Students](https://kaipidi.com/wp-content/uploads/2022/10/da-raa-bendre-2.jpg)
ಒಂದು ಅಂಕದ ಪ್ರಶ್ನೆಗಳು :
ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವನು ಯಾರು?
ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವರು ಬೆಳಕು – ಬೇಟೆಗಾರ ( ಮಾರ ) .
ಬೇಟೆಗಾರ ಯಾರು ?
ಬೆಳಕು ಬೇಟೆಗಾರ ,
ಹುಸಿನಿದ್ದೆ ಸಾಕು ಎಂದು ಕವಿ ಯಾರಿಗೆ ಹೇಳುತ್ತಾರೆ ?
ಹುಸಿನಿದ್ದೆ ಸಾಕು ಎಂದು ಕವಿ ಮಕ್ಕಳಿಗೆ ಹೇಳುತ್ತಾರೆ .
belagu jaava padyada notes
ಯಾವುದಕ್ಕೆ ಸೆಳೆವಿದೆಯೆಂದು ಕವಿ ಹೇಳುತ್ತಾರೆ ?
ಜೀವನದ ನದಿಗೆ ಸೆಳೆವಿದೆಯೆಂದು ಕವಿ ಹೇಳುತ್ತಾರೆ .
ಕವಿಯ ಪ್ರಕಾರ ಯಾವುದು ಮತ್ತೆ ಚಿಗುರುತ್ತದೆ ?
ಕವಿಯ ಪ್ರಕಾರ ಮರವು ಮತ್ತೆ ಚಿಗುರುತ್ತದೆ .
ಯಾವುದು ಚಿಂತನದಿ ಮುಳುಗಿರಲಿ ಎಂದು ಕವಿ ಆಶಿಸುತ್ತಾರೆ ?
ಮುಪ್ಪು ಚಿಂತನದಿ ಮುಳುಗಿರಲಿ ಎಂದು ಕವಿ ಆಶಿಸುತ್ತಾರೆ .
![2nd ಪಿ.ಯು.ಸಿ ಬೆಳಗು ಜಾವ ಕನ್ನಡ ನೋಟ್ಸ್ | Belagu Java Kannada Notes Free For Students](https://kaipidi.com/wp-content/uploads/2022/10/images-10-1.jpg)
belagu jaava padyada notes
ಎರಡು ಅಂಕಗಳ ಪ್ರಶ್ನೆಗಳು :
ಬೆಳಕು – ಬೇಟೆಗಾರ ಹೇಗೆ ಬರುತ್ತಾನೆ ?
ಏಳು ಚಿನ್ನ , ಬೆಳಗಾಯ್ತು ಅಣ್ಣ ಎಂದು ಕವಿ ಬೇಂದ್ರೆಯವರು ಮಲಗಿರುವ ಮನಸ್ಸುಗಳನ್ನು ಎಬ್ಬಿಸುತ್ತಿದ್ದಾರೆ . ಮೂಡಲ ದಿಕ್ಕಿನಲ್ಲಿ ಸೂರ್ಯ ಉದಯಿಸುತ್ತಿದ್ದಾನೆ . ನಕ್ಷತ್ರಗಳು ಜಾರಿ , ಕತ್ತಲೆ ಸೋರಿ ಹೋಗುತ್ತಿದೆ . ಆಗ ಮಾರನು ತನ್ನ ಜೇನ್ನೊಣದ ಹೆದೆಗೆ ಹೂಬಾಣವನ್ನು ಹೂಡುತ್ತಾನೆ . ಆಗ ಬೆಳಕಿನ ಬೇಟೆಗಾರ , ಆಗಮಿಸುತ್ತಾನೆ .
ಕವಿ ಬೇಂದ್ರೆ ಮಕ್ಕಳಿಗೆ ಬಾಳಿನ ಬಗ್ಗೆ ಕೊಡುವ ಸಂದೇಶವೇನು ?
ಕವಿ ಬೇಂದ್ರೆ ಬೆಳಗಿನ ವಿಶೇಷತೆಯನ್ನು ತಿಳಿಸುತ್ತಾ , ಮಕ್ಕಳಲ್ಲಿ ಬೇಗ ನಿಮ್ಮ ಹುಸಿ ನಿದ್ದೆ ಬಿಟ್ಟು ಏನಾದರೂ ಸಾಧಿಸಲು ಏಳಿ ಎದ್ದೇಳಿ ಎನ್ನುತ್ತಿದ್ದಾರೆ . ಬಾಳಿನಲ್ಲಿ ಯೌವನವು ತುಂಬಿರುವವರೆಗೆ ಅದನ್ನು ಸಂಪೂರ್ಣವಾಗಿ ಸಾರ್ಥಕಪಡಿಸಿ ಕೊಳ್ಳಬೇಕು , ಸೋಮಾರಿತನದ ಭಾಗವಾಗಿರುವ ಹುಸಿ ನಿದ್ದೆಯನ್ನು ಬಿಡಬೇಕು ಎಂದು ಬಾಳಿನ ಬಗ್ಗೆ ಸಂದೇಶವನ್ನು ನೀಡುತ್ತಿದ್ದಾರೆ .
ಹುಸಿನಿದ್ದೆ ಸಾಕು , ಎದ್ದೇಳಿ ಎಂದು ಕವಿ ಮಕ್ಕಳಿಗೆ ಹೇಳಲು ಕಾರಣವೇನು ?
ಕವಿಯ ಪ್ರಕಾರ ಹುಸಿನಿದ್ದೆಯು ಸೋಮಾರಿ ಮನಸ್ಸಿನ ಲಕ್ಷಣವಾಗಿದೆ . ಅಲ್ಲದೆ ಹುಸಿನಿದ್ದೆಯಲ್ಲಿ ತೊಡಗಿದರೆ ಜೀವನದ ಮುಂದಿನ ಮಧುರ ಕ್ಷಣಗಳಿಂದ ದೂರವಾಗಬೇಕಾಗುತ್ತದೆ . ಹಾಗಾಗಿ ಬಾಳಿನಲ್ಲಿ ಹೆಚ್ಚು ಹೆಚ್ಚು ಉತ್ಸಾಹದಿಂದ ಕಾರ್ಯಪ್ರವೃತ್ತರಾಗಿ , ತುಂಬಿದ ಜೀವನ ನಡೆಸಲು ಬೇಗ ಎಚ್ಚರಗೊಳ್ಳಿ ಎಂದು ಕವಿ ಮಕ್ಕಳಿಗೆ ಹೇಳುತ್ತಿದ್ದಾರೆ .
ಕವಿಯ ಪ್ರಕಾರ ಮುಪ್ಪು ಮತ್ತು ಹರೆಯದ ನಡುವಿನ ವ್ಯತ್ಯಾಸವೇನು ?
ಕವಿಯ ಪ್ರಕಾರ ಹರೆಯ ( ಯೌವನ ಜೀವನದ ಬೆಳಗುಜಾವ ಹರೆಯದ ಕಾಲದಲ್ಲಿ ಸಮಯವನ್ನು ವ್ಯರ್ಥವಾಗಿ ಕಳೆಯದೆ , ಕಾರ್ಯಶೀಲರಾಗಿ ಜೀವನವನ್ನು ಸವಿಯಾಗಿಸಿಕೊಳ್ಳಬೇಕು . ಮುಪ್ಪು ಜೀವನದ ಸಂಧ್ಯಾಕಾಲ ಜೊತೆಗೆ ನಾನಾ ರೀತಿಯ ಚಿಂತೆಗಳು ಮನಸ್ಸಿನಲ್ಲಿ ಮೂಡಿ ಮನಸ್ಸು ಘಾಸಿಗೊಳ್ಳುವ ಕಾಲ ಎಂದು ಕವಿ ಹರೆಯ ಮತ್ತು ಮುಪ್ಪಿನ ವ್ಯತ್ಯಾಸವನ್ನು ಹೇಳುತ್ತಾರೆ .
ಬಾನು ಮತ್ತು ಮರದ ನಿತ್ಯನೂತನತೆಯ ಬಗ್ಗೆ ಕವಿ ಏನು ಹೇಳಿದ್ದಾರೆ ?
ಕವಿಯ ಪ್ರಕಾರ ಬಾನು ಮತ್ತು ಮರ ಎರಡೂ ಕೂಡ ಪ್ರಕೃತಿಯ ಭಾಗವಾಗಿದ್ದು ನಿತ್ಯನೂತನವಾಗಿದೆ . ಬಾನಿನಲ್ಲಿ
ಪ್ರತಿನಿತ್ಯ ಕತ್ತಲೆ ಸರಿದು ಬೆಳಕು ಮೂಡುತ್ತಿರುತ್ತದೆ . ಮರವೂ ಕೂಡ ಎಲ್ಲಾ ಕಾಲದಲ್ಲೂ ಚಿಗುರುತ್ತಿರುತ್ತದೆ . ಈ ಎರಡೂ ಕ್ರಿಯೆಗಳು ನಿರಂತರ ಮತ್ತು ನಿತ್ಯ ನೂತನ .
![2nd ಪಿ.ಯು.ಸಿ ಬೆಳಗು ಜಾವ ಕನ್ನಡ ನೋಟ್ಸ್ | Belagu Java Kannada Notes Free For Students](https://kaipidi.com/wp-content/uploads/2022/10/maxresdefault-1-2-1024x576.jpg)
ನಾಲ್ಕು ಅಂಕಗಳ ಪ್ರಶ್ನೆಗಳು :
ಮಾನವನ ಜೀವನದ ಸಾರ್ಥಕತೆ ಎಲ್ಲಿದೆಯೆಂದು ಕವಿ ಬೇಂದ್ರೆ ಹೇಳಿದ್ದಾರೆ ?
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪ್ರತಿಯೊಂದು ಬೆಳಗು ಹೊಸ ನಿರೀಕ್ಷೆಯನ್ನು ಮೂಡಿಸಿರುತ್ತದೆ . ಪ್ರತಿ ಬೆಳಗೂ , ನಿಂತುಕೊಂಡ ನಿನ್ನೆಯ ಕೆಲಸಗಳಿಗೆ ಚಾಲನೆಯನ್ನು ಕೊಟ್ಟು ಮುಂದುವರಿಸುತ್ತದೆ . ಹಾಗಾಗಿ ಪ್ರತಿಯೊಬ್ಬ ಮನುಷ್ಯನು ಪ್ರತಿ ಬೆಳಗಿನಲ್ಲಿಯೂ ತಾನು ಕಳೆದುಕೊಂಡದ್ದನ್ನು ಮತ್ತೆ ಪಡೆಯಲು ಮುಂದಾಗಬೇಕೆ ವಿನಃ ದಿನದ ಆರಂಭದಲ್ಲಿಯೇ ಹುಸಿ ನಿದ್ದೆಯನ್ನು ಮಾಡಿಕೊಂಡು ಜೀವನ ಮಧುರಕ್ಷಣಗಳನ್ನು ಹಾಳುಮಾಡಿ ಕೊಳ್ಳಬಾರದೆಂಬುದಾಗಿ ಕವಿ ಆಶಿಸುತ್ತಾರೆ .
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಬಾಲ್ಯ , ಯೌವನ , ಮುಪ್ಪು ಹಂತಹಂತವಾಗಿ ಬರುವ ಮುಖ್ಯ ಘಟ್ಟಗಳು . ಇವುಗಳನ್ನು ಅರ್ಥಪೂರ್ಣವಾಗಿ ಕಳೆಯಬೇಕು ಎಂದಿದ್ದಾರೆ . ಯೌವನವೆಂದರೆ ಬರಿ ಮೋಜಿನ ಸಮಯವಲ್ಲ , ಅದು ಬೆವರು ಸುರಿಸಿ ದುಡಿಯುವ ಸಮಯ .
ಇಂತಹ ಹೊತ್ತಿನಲ್ಲಿ ನಿದ್ದೆ ಮಾಡುತ್ತ ಕನಸು ಕಾಣುತ್ತಾ ವ್ಯರ್ಥ ಕಾಲಹರಣವನ್ನು ಮಾಡುವುದು ಸರಿಯಲ್ಲ . ಬೆಳಗಿನ ಜಾವದ ಪ್ರಕೃತಿಯ ಸೌಂದರ್ಯವನ್ನು ಸರಿಯಾಗಿ ಸವಿದು ಯೌವನವನ್ನು ಸವಿಯಾಗಿಸಿಕೊಳ್ಳಬೇಕು . ಮುಪ್ಪು ವ್ಯಾಪಿಸಿ ಚಿಂತೆ ಮೂಡುವ ಮೊದಲು ದುಡಿದು ದಣದು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದಿದ್ದಾರೆ .
ಜೀವನದ ಉದ್ದೇಶ ಮತ್ತು ಆದರ್ಶಗಳನ್ನು ಹೇಗೆ ಸಫಲಗೊಳಿಸಿ ಕೊಳ್ಳಬೇಕು ಎಂದು ಬೇಂದ್ರೆ ಕರೆ ಕೊಡುತ್ತಾರೆ ?
ಜೀವನಕ್ಕೆ ಒಂದು ಗುರಿ , ಒಂದು ಗುರು ಬಹಳ ಮುಖ್ಯ . ಗುರಿ ಮುಂದಿದ್ದು ಗುರು ಹಿಂದಿದ್ದರೆ ಉದ್ದೇಶಗಳು ಬಹಳ ಬೇಗ ಈಡೇರುತ್ತದೆ . ಉದ್ದೇಶಗಳು ಸರಿಯಾಗಿದ್ದಾಗ , ಪ್ರತಿ ಬೆಳಗು ಹುಸಿ ನಿದ್ದೆಗೆ ಸೀಮಿತವಾಗಿರದೆ ಅದು ಜೀವನಕ್ಕೆ ಬೆಳಕಾಗುತ್ತದೆ . ಪ್ರತಿ ಬೆಳಗನ್ನು ಸಾರ್ಥಕಪಡಿಸಿಕೊಳ್ಳುವ ಉದ್ದೇಶ ಪ್ರತಿ ಮಾನವಜೀವಿಯದ್ದಾಗಬೇಕು . ಅದರ ಈಡೇರಿಕೆಗಾಗಿ ಅವಿರತ ಪರಿಶ್ರಮ ಮುಖ್ಯ ಕೋಳಿ ಕೂಗಿ ಬೆಳಕು ಆವರಿಸಿದಾಗಲೂ ಎದ್ದು ನಮ್ಮ ಕೆಲಸಕ್ಕೆ ತಯಾರಿ ನಡೆಸದೆ ಇದ್ದರೆ ಮುಪ್ಪು ಶರವೇಗದಲ್ಲಿ ವ್ಯಾಪಿಸಿಕೊಳ್ಳುತ್ತದೆ .
ಬೆಳಕು ಜ್ಞಾನದ ಸಂಕೇತ , ಜ್ಞಾನದ ಆಕರವಾಗಿರುವ ಈ ಬೆಳಕಿನಲ್ಲಿ ಪ್ರತಿಕ್ಷಣದಲ್ಲೂ ಏನಾದರೊಂದು ತಿಳಿಯುವ ತವಕ ನಮಗಿರಬೇಕು : ಬಡದ ಮುತ್ತು ಮತ್ತು ಕಳೆದ ಹೊತ್ತು ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ . ಹಾಗಾಗಿ ಜೀವನದಲ್ಲಿ ನಮಗೆ ಪ್ರಾಪ್ತವಾದ ಯೌವನವನ್ನು
ವಿನಾಕಾರಣ ವ್ಯರ್ಥವಾಗಿ ಹಾಳುಮಾಡದೆ ತುಂಬು ಜೀವನದ ಸಾರ್ಥಕ ಬಾಳು ಬಾಳುವುದು ನಮ್ಮ ಆದರ್ಶವಾಗಬೇಕು . ಅದನ್ನು ಸಫಲಗೊಳಿಸಲು ಅವಿರತ ಹೋರಾಟದಲ್ಲಿ ತೊಡಗಬೇಕು ಆಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂಬುದು ಕವಿಯ ಆಶಯ .
“ ಬೆಳಗು ಜಾವ ‘ ಕವನದ ಮೂಲಕ ಕವಿ ಬೇಂದ್ರೆ ಹೇಳಿರುವ ವಿಚಾರಗಳಾವುವು ?
ಕವಿಯು ಆರಂಭದ ಸಾಲುಗಳಲ್ಲಿಯೇ ಬೆಳಕಿನ ಆಗಮನವನ್ನು ಸೊಗಸಾಗಿ ವಿವರಿಸುತ್ತಾ ಯುವ ಮನಸ್ಸುಗಳನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ.ಪೂರ್ವ ದಿಕ್ಕು ಕಣ್ಣುತೆರೆದಿದೆ , ಕತ್ತಲು ದೂರವಾಗುತ್ತಿದೆ . ಬೆಳಕು ಬೇಟೆಗಾರ ಬಂದು ಜೇನ್ನೊಣದ ಹೆದೆಗೆ ಹೂಬಾಣವನ್ನು ಬಿಟ್ಟಿರುವನು , ಏಳಿ ಎದ್ದೇಳಿ ಎಂದು ಕರೆಕೊಡುತ್ತಿದ್ದಾರೆ . ಮುಂಜಾವಿನ ಈ ಸೊಬಗಿಗೆ ಈ ಜಗವು ಸೋತಿದೆ . ಮಕ್ಕಳೇ ಬೇಗ ಎದ್ದು ಪೂರ್ಣವಾದ ಬಾಳನ್ನು ಸಾರ್ಥಕ ಮಾಡಿಕೊಳ್ಳಿ , ನಿದ್ದೆಯಿಂದ ಎಚ್ಚರಗೊಳ್ಳಿ ಎಂದಿದ್ದಾರೆ .
ಜೀವನದ ಅಂಗಡಿಯ ಕದವ ತೆರೆಯುವ ಕ್ಷಣ ಬಂದಾಯಿತು . ಯೌವನದ ರಸಕ್ಷಣಗಳನ್ನು ಪೂರ್ಣವಾಗಿ ಬಳಸಿಕೊಳ್ಳಿ ಕಾರ ಪ್ರವೃತ್ತರಾಗಿ ಯಾವ ಕ್ಷಣದಲ್ಲೂ ಮರಣ ಬಂದೀತು . ಮತ್ತೆ ಜೀವನದ ಕಳೆದ ಕ್ಷಣಗಳು ಸಿಗಲಾರವು . ಜೀವನದ ಚೈತ್ರಕಾಲ ಯೌವನ , ಮುಪ್ಪು ಆವರಿಸಿದಾಗ , ಅದರ ಜೊತೆ ಚಿಂತೆಯೂ ಆವರಿಸಿ ಏನೂ ಮಾಡಲಾಗದು . ಹರೆಯವಿದ್ದಾಗಲೇ ಸಾಧನೆ ಮಾಡಿರೆಂದು ಕರೆ ನೀಡುತ್ತಿದ್ದಾರೆ .
ಬಾಳಿನ ಅಶಾಶ್ವತೆ ಮತ್ತು ಪ್ರಕೃತಿಯ ನಿತ್ಯನೂತನತೆಯ ಗುಣವನ್ನು ‘ ಬೆಳಗು ಜಾವ ‘ ಕವನದಲ್ಲಿ ಕವಿ ಹೇಗೆ ವಿವರಿಸಿದ್ದಾರೆ ?
ಕವಿ ಬೆಳಕು ಹರಿದಿರುವುದರ ಬಗ್ಗೆ ಎಚ್ಚರಿಕೆ ಮೂಡಿಸುತ್ತಾ , ಕೋಳಿ ಯಾವಾಗಲೋ ಕೂಗಿ ಆಯಿತು ಎದ್ದೇಳಿ ಇನ್ನೂ ಯಾಕೆ ತಡ ಮಾಡುತ್ತಿದ್ದೀರಿ ? ಪಾನೀಯ ಕುಡಿಯುವುದಕ್ಕೆ ಏಳಿ ಎಂದಿದ್ದಾರೆ . ಅಂಗಡಿಯ ಬಾಗಿಲನ್ನು ತಡಮಾಡದೇ ಈ ಕ್ಷಣ ತೆರೆಯಲು ಹೇಳಿ ಎಂದಿದ್ದಾರೆ . ಜೀವನವೆಂಬ ನದಿಗೆ ನೂರಾರು ಸೆಳವುಗಳಿವೆ . ಯಾವ ಕ್ಷಣದಲ್ಲೂ ಮರಣವು ಬರಬಹುದು . ಮಡಿದವರು ಮತ್ತೆ ತಿರುಗಿ ಬಂದಾರೆ ? ಖಂಡಿತ ಇಲ್ಲ . ಆದುದರಿಂದ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಜೀವನದ ಆನಂದಮಯ ಕ್ಷಣಗಳನ್ನು ಮನಸಾರೆ ಅನುಭವಿಸಿ .
ಆಲಸ್ಯವನ್ನು ದೂರಮಾಡಿ , ಆನಂದವನ್ನು ಹೊಂದಿ ಎನ್ನುತ್ತಿದ್ದಾರೆ . ಬಾನು ಕಾಂತಿಯನ್ನು ಹೊಂದಬಹುದು ..
ಮರವು ಚಿಗುರಬಹುದು , ಸುಗ್ಗಿಯ ಕಾಲವೂ ಬರಬಹುದು . ಆದರೆ ಜೀವನದ ( ಯೌವನ ) ದ ಸುಗ್ಗಿಯ ಕಾಲ ಮತ್ತೆ ಬರಲು ಸಾಧ್ಯವೇ ? ಖಂಡಿತಾ ಇಲ್ಲ . ಯೋಗ್ಯವಾದ ಯೋಚನೆಗಳಲ್ಲಿ ಚಿಂತನೆಗಳಲ್ಲಿ ಇಂದೇ ತೊಡಗಿ ಬಾಳನ್ನು ಸಾರ್ಥಕಪಡಿಸಿಕೊಳ್ಳಿ ಎಂದು ಕವಿ ಕಿವಿಮಾತನ್ನು ಹೇಳುವ ಮೂಲಕ ವಾಸ್ತವತೆಯ ಅರಿವು ಮೂಡಿಸುತ್ತಿದ್ದಾರೆ .
ಸಾಂದರ್ಭಿಕ ವಿವರಣೆ ಬಯಸುವ ವಾಕ್ಯಗಳು :
ಬಲೆಬೀಸಿ ಬಂದ , ಅಗೋ ಬೆಳಕು – ಬೇಟೆಗಾರ .
ಆಯ್ಕೆ : ಈ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ ಬೆಳಗು ಜಾವ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಕವಿ ಇಲ್ಲಿ ಬೆಳಕು ಬೇಟೆಗಾರನ ಆಗಮನದ ಬಗ್ಗೆ ತಿಳಿಸುತ್ತಿದ್ದಾರೆ .
ಸಾರಸ್ಯ : ಕವಿ ಬೇಂದ್ರೆಯವರು ದಿನ ನಿತ್ಯ ಬೆಳಗು ಹೇಗೆ ಕಾಣ ಸಿಕೊಳ್ಳುತ್ತದೆ ಎನ್ನುವುದನ್ನು ಇಲ್ಲಿ ವಿವರಿಸುತ್ತಿದ್ದಾರೆ . ದಿನ ನಿತ್ಯ ಕತ್ತಲೆಯು ನಿಧಾನಗತಿಯಲ್ಲಿ ಮಾಯವಾಗಿ ಬೆಳಕು ಪ್ರವೇಶಿಸುತ್ತದೆ . ಆದರೆ ಇದನ್ನು ಕಾಣುವ ಹುಮ್ಮಸ್ಸು ಬೇಕು . ಮಾರನು ತನ್ನ ಜೇನ್ನೊಣದ ಬಿಲ್ಲಿನ ಹೆದೆಗೆ ಹೂಬಾಣವನ್ನು ಹೂಡಿ ಪ್ರಯೋಗಿಸುತ್ತಿದ್ದಾನೆ . ಆಗ ಕಾಣ ಸಿಕೊಂಡ ಬೆಳಕಿನ ಬೇಟೆಗಾರ ಎಲ್ಲಾ ಕಡೆಯು ಬೆಳಕನ್ನು ಪಸರಿಸಿದನು ಎನ್ನುವಾಗ ಈ ಮೇಲಿನ ಸಾಲು ಧ್ವನಿಸುತ್ತದೆ .
ತುಂಬಿರುವ ತನಕ ತುಂತುಂಬಿ ಕುಡಿಯಬೇಕು .
ಆಯ್ಕೆ : ಈ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ ಬೆಳಗು ಜಾವ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಕವಿಯು ನಮಗೆ ದೊರಕಿರುವ ಯೌವನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬ ಕಿವಿಮಾತನ್ನು ಈ ವಾಕ್ಯದಲ್ಲಿ ಹೇಳುತ್ತಿದ್ದಾರೆ .
ಸಾರಸ್ಯ : ಜೀವನದಲ್ಲಿ ಯೌವನ ಬರುವುದು ಒಂದೇ ಬಾರಿ . ಅದನ್ನು ಹುಸಿನಿದ್ದೆ ಮಾಡುತ್ತಾ ವ್ಯರ್ಥವಾಗಿ ಕಳೆಯಬಾರದು . ತುಂಬಿಯ ಹಾಗಿನ ಬಾಳು ನಮ್ಮದಾಗಬೇಕು . ಯಾವ ರೀತಿಯಲ್ಲಿ ದುಂಬಿಯು ಹೂವಿನ ಮಕರಂದವನ್ನು ಸಂಪೂರ್ಣ ವಾಗಿ ಹೀರಿ ತನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತದೋ , ಹಾಗೆ ನಾವು ನಮಗೆ ಸಿಕ್ಕಿರುವ ಯೌವನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎನ್ನುವುದನ್ನು ಕವಿ ಈ ಮೇಲಿನಂತೆ ಹೇಳುತ್ತಾರೆ .
ಮರಣ ಬಂದೀತು ಕ್ಷಣವು ಉರುಳಿ
ಆಯ್ಕೆ : ಈ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ ಬೆಳಗು ಜಾವ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಇಲ್ಲಿ ಕವಿಯು ವ್ಯರ್ಥ ಕಾಲಹರಣದಿಂದ ಭವಿಷ್ಯದಲ್ಲಿ ಬರಬಹುದಾದ ಮರಣದ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ .
ಸಾರಸ್ಯ : ಬೇಂದ್ರೆಯವರುಬೆಳಕು ಕಾಣಿಸಿಕೊಂಡರೂ ಇನ್ನೂ ಮಲಗಿರುವ ಯುವಕರಿಗೆ ಎದ್ದೇಳುವಂತೆ ಕರೆ ನೀಡಿದ್ದಾರೆ .ಅದಾಗಲೇ ಕೋಳಿ ಕೂಗಿದೆ , ಎದ್ದೇಳಿ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಪಾನಕ ಕುಡಿಯಿರಿ , ಅಂಗಡಿಯ ಕದವನ್ನು ತೆರೆಯಲು ಹೇಳಿ ತಡಮಾಡಬೇಡಿ ಎನ್ನುತ್ತಿದ್ದಾರೆ . ಯಾಕೆಂದರೆ ಜೀವನ ಎನ್ನುವ ನದಿಗೆ ರಭಸವಿದೆ . ಯಾವಾಗ ಬೇಕಾದರೂ ಪ್ರವಾಹದ ರೂಪದಲ್ಲಿ ಮರಣ ಕಾಣಸಿಕೊಳ್ಳಬಹುದು ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾರೆ .
ಬರಲುಂಟೆ ಸುಗ್ಗಿ ಮತ್ತೆ ?
ಆಯ್ಕೆ : ಈ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ ಬೆಳಗು ಜಾವ ‘ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಕವಿಯು ಯೌವನ ಮತ್ತು ಮುಪ್ಪಿನ ಕುರಿತು ಹೇಳುವ ಸಂದರ್ಭ ಇದಾಗಿದೆ .
ಸಾರಸ್ಯ : ಮುಪ್ಪು , ಮರಣಗಳು ಒಮ್ಮೆ ಆವರಿಸಿದವು ಎಂದರೆ ಮನುಷ್ಯ ಮತ್ತೆ ಯೌವನವನ್ನು ಕನಸಿನಲ್ಲೂ ನಿರೀಕ್ಷಿಸಲು ಸಾಧ್ಯವಿಲ್ಲ . ಪ್ರಕೃತಿಯ ಬದಲಾವಣೆ ಪುನರಾವರ್ತನೆಯಾಗು ತಿರುತ್ತದೆ . ಬಾನು ತನ್ನ ಬೆಳಕನ್ನು ಪ್ರತಿ ನಿತ್ಯವೂ ಪ್ರಕಾಶಿಸುತ್ತದೆ . ಮರ ಪ್ರತಿನಿತ್ಯವೂ ಚಿಗುರುತ್ತಿರುತ್ತದೆ . ಸುಗ್ಗಿಯ ಕಾಲ ಮತ್ತೆ ಬರಬಹುದು ಅಥವಾ ಬರದೇ ಇರಬಹುದು ಆದರೆ ಜೀವನದ ಸುಗ್ಗಿ ಕಾಲ ಮಾತ್ರ ಒಮ್ಮೆಯೇ ಬರುವುದು . ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಕಳಕಳಿ ಇಲ್ಲಿದೆ .
ಮುಳುಗಿರಲಿ ಮುಪ್ಪು ಚಿಂತನದಿ .
ಆಯ್ಕೆ : ಈ ವಾಕ್ಯವನ್ನು ದ.ರಾ.ಬೇಂದ್ರೆಯವರು ಬರೆದ ಬೆಳಗು ಜಾವ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಇಲ್ಲಿ ಕವಿ ಯುವ ಮನಸ್ಸುಗಳಿಗೆ ಕಿವಿ ಮಾತು ಹೇಳುತ್ತಿರುವುದನ್ನು ಕಾಣಬಹುದು .
ಸಾರಸ್ಯ : ಆಕಾಶ ಮತ್ತೆ ಮತ್ತೆ ಪ್ರಕಾಶಿಸುತ್ತಾ ಇರುತ್ತದೆ . ಮರ ಮತ್ತೆ ಮತ್ತೆ ಚಿಗುರುತ್ತಾ ಇರುತ್ತದೆ . ಸುಗ್ಗಿಯ ಕಾಲವೂ ಮತ್ತೆ ಬರಬಹುದು ಅಥವಾ ಬರದೇ ಇರಬಹುದು . ಆದರೆ ಯೌವನದ ಕಾಲ ಕಳೆದು ಹೋದರೆ ಮತ್ತೆ ಖಂಡಿತಾ ಬರುವುದಿಲ್ಲ . ಆದ್ದರಿಂದ ಮುಪ್ಪು ಬರುವುದೆಂಬ ಚಿಂತೆಯಿರಲಿ ಯೌವನವು ಮತ್ತೆ ಸಿಗುವುದಿಲ್ಲವೆಂಬ ಎಚ್ಚರವಿರಲಿ ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾರೆ .
FAQ
ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವನು ಯಾರು?
ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವರು ಬೆಳಕು – ಬೇಟೆಗಾರ ( ಮಾರ ) .
ಯಾವುದಕ್ಕೆ ಸೆಳೆವಿದೆಯೆಂದು ಕವಿ ಹೇಳುತ್ತಾರೆ ?
ಜೀವನದ ನದಿಗೆ ಸೆಳೆವಿದೆಯೆಂದು ಕವಿ ಹೇಳುತ್ತಾರೆ .
ಇತರೆ ವಿಷಯಗಳನ್ನು ನೋಡಿ
- ಹಬ್ಬಲಿ ಅವರ ರಸಬಳ್ಳಿ
- ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್
- ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು
- ಬಸವಣ್ಣನವರ ವಚನಗಳು ನೋಟ್ಸ್
- ಉರಿಲಿಂಗಪೆದ್ದಿಯ ವಚನಗಳು ಕನ್ನಡ ನೋಟ್ಸ್