Habbali Avara Rasaballi Questions and Answers Pdf, Notes, 2nd puc kannada notes habbali avara rasabali , Summary, 2nd PUC Kannada Textbook Answers, ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್
Habbali Avara Rasaballi Kannada Notes
ಈ ಲೇಖನದಲ್ಲಿ ಹಬ್ಬಲಿ ಅವರ ರಸಬಳ್ಳಿ ಪದ್ಯದ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬಹುದು.
2nd puc kannada notes habbali avara rasabali
![](https://kaipidi.com/wp-content/uploads/2022/10/hqdefault-3.jpg)
ಒಂದು ವಾಕ್ಯದಲ್ಲಿ ಉತ್ತರಿಸಿ :
ಉತ್ತಮರ ಗೆಳೆತನ ಹೇಗೆ ಇರಬೇಕು ?
ಉತ್ತಮರ ಗೆಳೆತನ ಬಂಗಾರದ ಪುತ್ಥಳಿಯಂತೆ ಇರಬೇಕು .
ಮಂದಿ ಮಕ್ಕಳೊಂದಿಗೆ ಹೇಗಿರಬೇಕು ?
ಮಂದಿ ಮಕ್ಕಳೊಂದಿಗೆ ಛಂದದಿಂದ ಹೊಂದಿಕೊಂಡಿರಬೇಕು .
ಎಂತಹ ನೆಲೆಯವರು ಇರಬೇಕು ?
ಬುದ್ಧಿವಂತರಾದ ನೆರೆಯವರು ಇರಬೇಕು .
Habbali Avara Rasaballi Questions and Answers
ಸುಟ್ಟು ಸುಣ್ಣವಾದುದು ಯಾವುದು ?
ಕಷ್ಟವನ್ನು ಅನುಭವಿಸಿದ ದೇಹವು ಸುಟ್ಟು ಸುಣ್ಣವಾಗಿದೆ .
ಬ್ಯಾಸಗಿ ದಿವಸಕ್ಕೆ ಯಾವ ಮರ ತಂಪು ?
ಬ್ಯಾಸಗಿ ದಿವಸಕ್ಕೆ ಬೇವಿನ ಮರ ತಂಪು .
ತಾಯಿಯನ್ನು ಯಾವುದಕ್ಕೆ ಹೋಲಿಸಲಾಗಿದೆ ?
ತಾಯಿಯನ್ನು ಜ್ಯೋತಿಗೆ ಹೋಲಿಸಲಾಗಿದೆ .
ಹೆಣ್ಣು ಮಕ್ಕಳ ದುಃಖವನ್ನು ಬಲ್ಲವರು ಯಾರು ?
ಹೆಣ್ಣು ಮಕ್ಕಳ ದುಃಖವನ್ನು ಬಲ್ಲವರು ಹೆತ್ತ ತಾಯಿ .
ತಾಯಿಯನ್ನು ಯಾವಾಗ ನೆನೆಯಬೇಕು ?
ಊರೆಲ್ಲ ಉಂಡು ಮಲಗುವಾಗ ಬೆಳ್ಳಿಚಿಕ್ಕಿ ಮೂಡುವಾಗ ತಾಯಿಯನ್ನು ನೆನೆಯಬೇಕು .
ಗರತಿಯು ಹಾಲುಂಡ ತವರಿಗೆ ಏನೆಂದು ಹರಸುತ್ತಾಳೆ ?
ತವರಿನ ರಸಬಳ್ಳಿ ಹೊಳೆದಂಡೆಯ ಕರಕಿಯ ಕುಡಿಯ ಹಾಗೆ ಹಬ್ಬಲಿ ಎಂದು ಗರತಿಯು ಹಾಲುಂಡ ತವರನ್ನು ಹರಸುತ್ತಾಳೆ .
Habbali Avara Rasaballi Kannada Notes Question Answer Pdf
![ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್ | Habbali Avara Rasaballi Kannada Notes Free No1 Information](https://kaipidi.com/wp-content/uploads/2022/10/download-2.jpg)
ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ :
ಬಡತನ ಹೇಗೆ ಬಯಲಾಯಿತು ?
ಬಡತನ ಬಂದಾಗ ಮಕ್ಕಳನ್ನು ಹೊಡೆಯಬಾರದು . ಮಕ್ಕಳಲ್ಲಿ ಬಡತನವನ್ನು ಮರೆಸುವ ಶಕ್ತಿ ಇದೆ . ‘ ಬಡತನವನ್ನು ಮರೆಸುತ್ತಾರೆ . ಮಕ್ಕಳು ಆಡುತ್ತಾ ಬಂದು ತೊಡೆಯ ಮೇಲೆ ಬಡತನವೆಲ್ಲ ಬಯಲಾಗುತ್ತದೆ . ಕುಳಿತುಕೊಂಡರೆ ( ಕಡಿಮೆಯಾಗುತ್ತದೆ )
ಇದ್ದಷ್ಟು ಬುದ್ದಿಯನ್ನು ಹೇಗೆ ಕಳೆದುಕೊಳ್ಳುತ್ತಾರೆ ?
ನೆರೆಮನೆಯವರು ಬುದ್ಧಿವಂತರಾಗಿರಬೇಕು . ಒಳ್ಳೆಯವರಾಗಿರಬೇಕು . ಇದ್ದರೆ ಈ ರೀತಿಯ ಮನೆಯವರು ಇರಬೇಕು . ಅಜ್ಞಾನಿಗಳು ಕುಲಗೇಡಿಗಳು ನೆರೆಮನೆಯವರಿದ್ದರೆ ಅವರ ಸಹವಾಸದಿಂದ ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಕಳೆದುಕೊಳ್ಳಬೇಕಾಗುತ್ತದೆ . ಬುದ್ಧಿಹೀನರಾಗಿ ಬದುಕಬೇಕಾಗುತ್ತದೆ . ಹೀಗೆ ಇದ್ದಷ್ಟು ಬುದ್ದಿಯನ್ನು ಕಳೆದುಕೊಳ್ಳುತ್ತಾರೆ .
ಹಿತ್ತಾಳೆಗಿಂತ ಬಲುಹೀನ ಯಾವುದು ?
ಉತ್ತಮರ ಗೆಳೆತನ ಪುತ್ಥಳಿ ಬಂಗಾರದಂತೆ , ಒಳ್ಳೆಯವರ ಗೆಳೆತನ ಅಮೂಲ್ಯವಾದುದು . ಹೀನರ ಗೆಳೆತನ ಮಾಡಿದರೆ ಹಿತ್ತಾಳೆಗಿಂತಲೂ ಬಲುಹೀನವಾಗಿರುತ್ತದೆ . ಕೆಟ್ಟವರ ಗೆಳೆತನಕ್ಕೆ ಯಾವ ಬೆಲೆಯೂ ಇರುವುದಿಲ್ಲ . ಆದ್ದರಿಂದ ಒಳ್ಳೆಯವರ ಸಹವಾಸ ಮಾಡಿ ಬಂಗಾರದಂತೆ ಇರಬೇಕು .
Habbali Avara Rasaballi Kannada Notes In Karnataka
ಹಡೆದವ್ವನನ್ನು ಯಾವಾಗ ನೆನೆಯಬೇಕು ?
ಹಡೆದವ್ವನನ್ನು ಯಾವ ವೇಳೆಯಲ್ಲಾದರೂ , ಯಾವ ಹೊತ್ತಿನಲ್ಲಾದರೂ ನೆನೆಯಬಹುದು . ಎಷ್ಟು ಹೊತ್ತಿನಲ್ಲಾದರೂ ನೆನೆಯಬಹುದು . ಊರೆಲ್ಲ ಉಂಡು ಮಲಗಿದಾಗ ರಾತ್ರಿಯಲ್ಲಿ ಬೆಳ್ಳಿಚಿಕ್ಕಿ ಮೂಡಿದಾಗ ತಾಯಿಯನ್ನು ನೆನೆಯಬೇಕು .
ಹಡೆದ ತಂದೆ – ತಾಯಿಯರ ಮಹತ್ವ ತಿಳಿಸಿರಿ .
ಉಂಗುರ ಕಳೆದು ಹೋದರೆ ಮಾಡಿಸಬಹುದು . ಸೊಂಟಕ್ಕೆ ಹಾಕುವ ದಾರ ಮುರಿದರೆ ಮಾಡಿಸಬಹುದು . ಹೆಂಡತಿ ಸತ್ತು ಹೋದರೆ ಮತ್ತೊಂದು ಹೆಂಡತಿಯನ್ನು ತರಲು ಸಾಧ್ಯವಿದೆ . ಆದರೆ ನಮ್ಮನ್ನು ಹಡೆದಂಥ , ಸಾಕಿ ಸಲಹಿದಂಥ ತಂದೆ ತಾಯಿ ಎಲ್ಲಿಯೂ ಸಿಗಲು ಸಾಧ್ಯವಿಲ್ಲ . ಇದೇ ಹಡೆದ ತಂದೆ – ತಾಯಿಯರ ಮಹತ್ವ .
Habbali Avara Rasaballi Kannada Notes KSEEB
![ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್ | Habbali Avara Rasaballi Kannada Notes Free No1 Information](https://kaipidi.com/wp-content/uploads/2022/10/mqdefault.jpg)
ಐದಾರು ವಾಕ್ಯಗಳಲ್ಲಿ ಉತ್ತರಿಸಿ :
ಬಂಗಾರ ನಿನಗೆ ಸ್ಥಿರವಲ್ಲ ‘ ಎಂಬ ಮಾತಿನ ಸ್ವಾರಸ್ಯವನ್ನು ವಿವರಿಸಿರಿ .
ಬಡತನ ಸಿರಿತನ ಯಾವುದೂ ಶಾಶ್ವತವಲ್ಲ ಎಂದು ಜನಪದರು ತಿಳಿಸಿದ್ದಾರೆ . ಮನುಷ್ಯ ಬಂಗಾರವನ್ನು ಮೈ ಮೇಲೆ ಹೇರಿಕೊಂಡು ಬಡವರನ್ನು , ಅವರ ಅಸಹಾಯಕತೆಯನ್ನು ಅಣಕಿಸಿ ಬೀಗುತ್ತಾನೆ . ಆದ್ದರಿಂದಲೆ ಜನಪದರು ‘ ಬಂಗಾರ ನಿನಗೆ ಸ್ಥಿರವಲ್ಲ ‘ ಎಂದಿದ್ದಾರೆ . ಸಿರಿತನ ಬಂಗಾರ ಇವೆಲ್ಲವೂ ದೊರೆತಷ್ಟೇ ವೇಗವಾಗಿ ನಮ್ಮಿಂದ ದೂರವಾಗುತ್ತದೆ . ಬಡತನ ಬರಲೂಬಹುದು . ಬಂಗಾರದ ಬಳೆಯುಟ್ಟು ಬಡವರನ್ನು ಬೈಯಬಾರದು . ಶ್ರೀಮಂತಿಕೆಯ ಮದ ಇರಬಾರದು .
ಶ್ರೀಮಂತಿಕೆಯು ಶಾಶ್ವತವಲ್ಲ ಎಂದಿದ್ದಾರೆ . ಮಧ್ಯಾಹ್ನದ ಬಿಸಿಲು ಹೊರಳಲು ತಡವಾಗುವುದಿಲ್ಲ . ಮಧ್ಯಾಹ್ನದ ಹೊರಳಿದ ಹಾಗೆಯೇ ಶ್ರೀಮಂತಿಕೆಯೂ ಕೂಡ ಹೊರಟು ಹೋಗಬಹುದು . ಶ್ರೀಮಂತಿಕೆಯ ಅಹಂ ಇರಬಾರದು ಎಂದಿದ್ದಾರೆ . ಸಿರಿತನ ಬಂದಾಗ ಬೀಗದೆ ಜಂಭದಿಂದ ವರ್ತಿಸದೆ , ಎಲ್ಲರೊಂದಿಗೆ ಪ್ರೀತಿ – ಸಾಮರಸ್ಯದಿಂದ ಬಾಳುವುದು ಮುಖ್ಯ ಎಂಬುದನ್ನು ‘ ಬಂಗಾರ ನಿನಗೆ ಸ್ಥಿರವಲ್ಲ ‘ ಎಂಬ ಮಾತಿನ ಮೂಲಕ ಹೇಳಿದ್ದಾರೆ .
ಜನಪದರು ಹೇಳುವಂತೆ ನಮ್ಮ ನೆರೆಹೊರೆ ಹೇಗಿರಬೇಕು ? ವಿವರಿಸಿರಿ .
ಜನಪದ ಗೀತ ಪ್ರಕಾರ ತುಂಬಾ ಜನಪ್ರಿಯವಾದುದು . ತ್ರಿಪದಿಯಲ್ಲಿ ನೆರೆಹೊರೆಯ ಸಂಬಂಧದ ಕುರಿತಾಗಿ ಹೇಳಲಾಗಿದೆ . ಮಾನವ ಸಮಾಜ ಜೀವಿ , ಸಮಾಜ ಜೀವಿಯಾದ ಮಾನವ ನೆರೆಹೊರೆಯವ ರೊಂದಿಗೆ ಸೇರಿ ಬದುಕಬೇಕಾಗುತ್ತದೆ . ನೆರೆ ಹೊರೆಯವರಿಂದ ಸಹಾಯ ತೆಗೆದುಕೊಂಡು ಒಬ್ಬರನ್ನೊಬ್ಬರು ಪ್ರೀತಿ ವಿಶ್ವಾಸದಿಂದ ಅನ್ನೋನ್ಯತೆಯಿಂದ ಬದುಕಿದರೆ ಬಾಳು ಹಿತಕರವಾಗಿರುತ್ತದೆ . ನೆರೆಮನೆಯವರು ಬುದ್ಧಿವಂತರಾಗಿರಬೇಕು . ಒಳ್ಳೆಯವರಾಗಿರ ಬೇಕು . ಇದ್ದರೆ ಈ ರೀತಿಯ ಮನೆಯವರು ಇರಬೇಕು . ಅಜ್ಞಾನಿಗಳು ಕುಲಗೇಡಿಗಳು ನೆರೆಮನೆಯವರಿದ್ದರೆ ಅವರ ಸಹವಾಸದಿಂದ ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಕಳೆದುಕೊಳ್ಳಬೇಕಾಗುತ್ತದೆ . ಬುದ್ಧಿಹೀನರಾಗಿ ಬದುಕಬೇಕಾಗುತ್ತದೆ . ಆದ್ದರಿಂದ ನಾವು ವಾಸಿಸುವ ಪರಿಸರದಲ್ಲಿ ಬುದ್ಧಿವಂತರ ನೆರೆಯಿರುವುದು ಮುಖ್ಯವೆಂದು ಜನಪದರು ಹೇಳಿದ್ದಾರೆ .
ಹೆಣ್ಣುಮಕ್ಕಳ ದುಃಖವನ್ನು ಬಲ್ಲವರು ಯಾರು ? ಹೇಗೆ ?
ಜನಪದ ಸಾಹಿತ್ಯದಲ್ಲಿ ತ್ರಿಪದಿಯು ಪದ್ಯ ಪ್ರಕಾರಕ್ಕೆ ಸಂಬಂಧಿಸಿ ದುದಾಗಿದೆ . ಜನಪದ ಗೀತ ಪ್ರಕಾರ ತು೦ಬಾ ಜನಪ್ರಿಯವಾದುದು . ತ್ರಿಪದಿಗಳಲ್ಲಿ ತವರು ಮನೆಯ ತಣ್ಣನೆಯ ನೆನಪಿದೆ . ಇದರೊಳಗೆ ತಾಯಿಯ ರೂಪ – ಸ್ವರೂಪ , ತೋರಿದ ಪ್ರೀತಿಯಿದೆ . ಹೆಣ್ಣುಮಕ್ಕಳ ದುಃಖ ಅರ್ಥವಾಗುವುದು ಹೆತ್ತ
ತಾಯಿಗೆ . ಏಕೆಂದರೆ ಆಕೆಯೂ ಒಬ್ಬ ಹೆಣ್ಣು . ತನ್ನ ಮಗಳು ಅನುಭವಿಸುವ ಕಷ್ಟ ನೋವುಗಳನ್ನು ಸ್ವಾನುಭವದಿಂದ ಅರಿಯಬಲ್ಲಳು . ಮತ್ತು ಸಹಾನುಭೂತಿಯಿಂದ ಕಾಣುವ ಕಣ್ಣು ಅವಳದಾಗಿದೆ . ಹೆಣ್ಣಿನ ಬಗ್ಗೆ ಮನೆಯ ಬೇರೆ ಯಾರಿಗೂ ಅರ್ಥವಾಗದೇ ಇರುವುದು ತಾಯಿಗೆ ಅರ್ಥವಾಗುತ್ತದೆ . ಹಡೆದ ತಾಯಿ ಮಾತ್ರ ಮಗಳ ನೋವನ್ನು ತಿಳಿದುಕೊಳ್ಳಬಲ್ಲಳು . ಹುತ್ತದ ಮೇಲಿರುವ ಸರ್ಪದ ಬೇಗೆ ಅರ್ಥವಾಗುವುದು ಅದನ್ನು ಹೊತ್ತಿರುವ ಶಿವನಿಗೆ ಮಾತ್ರ . ಅದರಂತೆಯೇ ಹೆಣ್ಣನ್ನು ಹೆತ್ತ ತಾಯಿಗೆ ಮಾತ್ರ ಹೆಣ್ಣುಮಕ್ಕಳ ದುಃಖದ ಅರಿವಾಗುತ್ತದೆ . ಹೆಣ್ಣುಮಕ್ಕಳ ದುಃಖವನ್ನು , ಅಂತರಂಗವನ್ನು ಗ್ರಹಿಸುವ ಶಕ್ತಿ ತಾಯಿಗೆ ಮಾತ್ರ ಇರುತ್ತದೆ .
Habbali Avara Rasaballi Kannada Notes 2nd Puc Notes
ಗರತಿ ತವರಿಗೆ ಏನೆಂದು ಹರಸುತ್ತಾಳೆ ?
ಜನಪದಗೀತ ಪ್ರಕಾರ ತುಂಬಾ ಜನಪ್ರಿಯವಾದುದು . ತ್ರಿಪದಿಗಳಲ್ಲಿ ತವರು ಮನೆಯ ತಣ್ಣನೆಯ ನೆನಪಿದೆ . ಇದರೊಳಗೆ ತಾಯಿಯ ರೂಪ – ಸ್ವರೂಪ , ತೋರಿದ ಪ್ರೀತಿಯಿದೆ . ಜನಪದ ಲೋಕದ ಸುತ್ತೆಲ್ಲ ಇಂತಹ ಸಂಸ್ಕೃತಿ ಬಿತ್ತರಿಸುವ ಹಾಡು ಪಾಡಿನೊಂದಿಗೆ ತಾಯಿ ಮತ್ತು ತವರಿನ ಬಗೆಗಿನ ಪ್ರೀತಿ ಇಲಿ ಅಭಿವ್ಯಕ್ತಗೊಂಡಿದೆ . ಗರತಿಗೆ ತವರು ಮನೆಯೆಂದರೆ ಅತ್ಯಂತ ಪ್ರೀತಿ . ಆಕೆ ಗಂಡನ ಮನೆಯಲ್ಲಿದ್ದರೂ ಯಾವಾಗಲೂ ತವರು ಮನೆಯನ್ನು ಹರಸುತ್ತಾಳೆ .
ಒಳ್ಳೆಯದನ್ನು ಬಯಸುತ್ತಾಳೆ . ಹಾಲುಂಡ ತವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾಳೆ . ಹಾಲು ಉಂಡು ಬೆಳೆದು ದೊಡ್ಡವಳಾದ ಗರತಿಯು ಹಾಲುಂಡ ತವರನ್ನು ಎಷ್ಟು ಹೊಗಳಿದರೂ ಸಾಲದು . ಹಾಲು ಕುಡಿದು ಬೆಳೆದ ತವರಿಗೆ ಏನೆಂದು ಹಾಡಲಿ ಎಂದು ಹೆಣ್ಣುಮಗಳು ತನ್ನನ್ನು ಪ್ರಶ್ನಿಸಿ ಕೊಳ್ಳುತ್ತಾಳೆ . ತನ್ನ ತವರಿನ ಮನೆಯ ವಂಶ ಇನ್ನಷ್ಟು ಬೆಳೆಯಬೇಕು . ಅದು ಹೇಗೆ ಹಬ್ಬಬೇಕು ಎಂದರೆ ಹೊಳೆಯ ದಂಡೆಯಲ್ಲಿರುವ ಕರಕೀಯ ಕುಡಿಯ ಹಾಗೆ ಹಬ್ಬಬೇಕು . ತನ್ನ ತವರಿನ ರಸಬಳ್ಳಿ ಎಲ್ಲಾ ಕಡೆ ಹಬ್ಬಬೇಕು ಎಂದು ಮನದುಂಬಿ ಗರತಿ ಹಾರೈಸುತ್ತಾಳೆ .
ಸಾಂದರ್ಭಿಕ ವಿವರಣೆ ಬಯಸುವ ವಾಕ್ಯಗಳು :
ಬಂಗಾರ ನಿನಗೆ ಸ್ಥಿರವಲ್ಲ .
ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಶ್ರೀಮಂತಿಕೆ ಅಂದರೆ ಬಂಗಾರ ಶಾಶ್ವತವಾದ ವಸ್ತುವಲ್ಲ ಎನ್ನುವ ಸಂದರ್ಭವಿದು .
ವಿವರಣೆ : ಪ್ರಸ್ತುತ ಪದ್ಯದಲ್ಲಿ ಜನಪದರು ಶ್ರೀಮಂತಿಕೆಯು ಶಾಶ್ವತವಲ್ಲ ಎಂದಿದ್ದಾರೆ . ಬಂಗಾರದ ಬಳೆಯುಟ್ಟು ಬಡವರನ್ನು ಬೈಯಬಾರದು . ಬಂಗಾರ ಸ್ಥಿರವಲ್ಲ.ಮಧ್ಯಾಹ್ನದ ಬಿಸಿಲು ಹೊರಳಲು ತಡವಾಗುವುದಿಲ್ಲ . ಹಾಗೆಯೇ ಶ್ರೀಮಂತಿಕೆಯೂ ಕೂಡ ಹೊರಟುಹೋಗಬಹದು . ಶ್ರೀಮಂತಿಕೆಯ ಅಹಂ ಇರಬಾರದು ಎನ್ನುವಾಗ ಈ ಸಾಲು ಬಂದಿದೆ .
ಹಿತ್ತಾಳೆಗಿಂತ ಬಲುಹೀನ
ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಹೀನರ ಗೆಳೆತನ ಮಾಡಿದಾಗ ಉಂಟಾಗುವ ಸ್ಥಿತಿಯನ್ನು ಕುರಿತಾಗಿ ಹೇಳುವಾಗ ಈ ಸಾಲು ಬಂದಿದೆ .
ವಿವರಣೆ : ನಾವು ಉತ್ತಮರ ಸ್ನೇಹವನ್ನು ಮಾಡಬೇಕು . ಉತ್ತಮರ ಸ್ನೇಹದಿಂದ ನಮ್ಮ ವ್ಯಕ್ತಿತ್ವ ಪುಟಕ್ಕಿಟ್ಟ ಚಿನ್ನದಂತಾಗುತ್ತದೆ . ಉತ್ತಮರ ಗೆಳೆತನ ಪುತ್ಥಳಿ ಬಂಗಾರದಂತೆ . ಕೆಟ್ಟವರ ಗೆಳೆತನಕ್ಕೆ
ಯಾವ ಬೆಲೆಯೂ ಇರುವುದಿಲ್ಲ . ಬಂಗಾರ ಉತ್ತಮ . ಬಂಗಾರಕ್ಕೆ ಹೋಲಿಸಿದರೆ ಹಿತ್ತಾಳೆ ಹೀನ ಎಂಬ ಭಾವನೆ ಇದೆ . ಒಂದು ವೇಳೆ ನಾವು ಹೀನರ ಗೆಳೆತನ ಮಾಡಿದರೆ ಹಿತ್ತಾಳೆಗಿಂತಲೂ ಬಲುಹೀನವಾಗಿರುತ್ತದೆ . ಎನ್ನುವ ಸಂದರ್ಭವಿದು .
ನೀ ತಂಪ ನನ್ನ ತವರೀಗೆ
ಆಯ್ಕೆ : ಈ ಸಾಲನ್ನು ಹಬ್ಬಲಿ , ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ . ಸಂದರ್ಭ : ಹೆತ್ತ ತಾಯಿ ತವರಿನಲ್ಲಿದ್ದಾಗ ಗರತಿಗೆ ಹಿತವಾದ ತಂಪಿನ ಅನುಭವವಾಗುತ್ತದೆ ಎನ್ನುವಾಗಈ ಸಾಲು ಬಂದಿದೆ .
ವಿವರಣೆ : ಗರತಿಗೆ ತವರು ಮನೆಯೇ ಅತ್ಯಂತ ತಂಪಾಗಿರುತ್ತದೆ . ಬೇಸಿಗೆಯಲ್ಲಿ ಬಳಲಿ ಬಂದವರಿಗೆ ಬೇವಿನ ಮರವು ತಂಪನ್ನು ನೀಡುತ್ತದೆ . ಭೀಮಾನದಿಯು ತಂಪನ್ನು ನೀಡುತ್ತದೆ . ಇಲ್ಲಿ ಗರತಿಗೆ ತಾಯಿಯೇ ತಂಪಾಗಿದ್ದಾಳೆ . ತವರಿನಲ್ಲಿ ತಾಯಿಯಿದ್ದರೆ ತವರುಮನೆ ತಂಪಾಗಿರುವುದು ಎಂಬುದು ಇಲ್ಲಿನ ಆಶಯವಾಗಿದೆ .
Habbali Avara Rasaballi Kannada Notes Summary
ಜ್ಯೋತಿ ನಿನ್ನಾರ ಹೋಲಾರ
ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ತನ್ನ ತಾಯಿಗೆ ಸರಿಸಮವಾಗಿ ಯಾರನ್ನು ಹೋಲಿಸಲು ಆಗುವುದಿಲ್ಲ . ಆಕೆಯೇ ಶ್ರೇಷ್ಠ ಎನ್ನುವ ಸಂದರ್ಭವಿದು .
ವಿವರಣೆ : ತನ್ನ ಬದುಕಿನಲ್ಲಿ ಎಷ್ಟು ಜನ ಬಂದು ಹೋದರೂ ಸಹ ಹೆತ್ತ ತಾಯಿಗೆ ಸರಿಸಮಾನರಾದವರು ಯಾರು ಸಿಗಲಾರರು.ಸಾವಿರ ಕೊಳ್ಳಿ ಒಲೆಯಲ್ಲಿ ಉರಿಯುತ್ತಿದ್ದರೂ ಜ್ಯೋತಿಯಷ್ಟು ಪ್ರಕಾಶಮಾನವಾದ ಬೆಳಕನ್ನು ನೀಡುವುದಿಲ್ಲ . ಸಾವಿರಾರು ಮಂದಿ ಇದ್ದರೂ ಅವರೊಳಗೆ ಹೆತ್ತತಾಯಿಯೇ ಜ್ಯೋತಿಯಂತೆ , ಅವಳನ್ನು ಯಾರಿಗೂ ಹೋಲಿಸಲು ಆಗುವುದಿಲ್ಲ ಎಂದು ತಾಯಿಯ ಮಹತ್ವವನ್ನು ಹೇಳಲಾಗಿದೆ .
ಭಾಳ ಮರುಗ್ಯಾಳ ಮನದಾಗ
ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಮಕ್ಕಳು ತಾಯಿಯನ್ನು ಬೈದರೆ ತಾಯಿಯ ಅಂತಃಕರಣ ನೊಂದುಕೊಳ್ಳುತ್ತದೆ ಎಂದು ಹೆಣ್ಣೂಬ್ಬಳು ತನ್ನ ತಮ್ಮನಿಗೆ ಬುದ್ಧಿ ಹೇಳುವ ಸಂದರ್ಭವಿದು .
ವಿವರಣೆ : ತಾಯಿಯನ್ನು ನಿಂದಿಸುವ ತನ್ನ ತಮ್ಮನಿಗೆ ಹೆದ್ದೂಬ್ಬಳು ಬುದ್ಧಿ ಹೇಳುತ್ತಾಳೆ . ತಿಳಿಗೇಡಿ ನನ್ನ ತಮ್ಮ ಹೆತ್ತ ತಾಯಿಯನ್ನು ನಿಂದಿಸಬೇಡ.ಅವಳು ಬಹಳ ದಿನದವಳು . ಹಿರಿಯವಳು . ಹಡೆದವ್ವನನ್ನು ಬೈದರೆ ಮನಸ್ಸಿನಲ್ಲಿ ಬಹಳ ನೊಂದುಕೊಳ್ಳುತ್ತಾಳೆ . ಮನದೊಳಗೆ ನೋವು ಪಡುತ್ತಾಳೆ . ಹಾಗಾಗಿ ನೀನು ಅವಳನ್ನು ಬೈಬೇಡ ಎಂದು ಹೇಳುವ ಸಂದರ್ಭದಲ್ಲಿ ಈ ಸಾಲು ಬರುತ್ತದೆ .
ತಾಯಿ ಇಲ್ಲದ ತವರೀಗೆ ಹೋಗದಿರು ನನಮನವೆ
ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಜನಪದ ಗೀತೆಯಿಂದ ಆರಿಸಿಕೊಳ್ಳಲಾಗಿದೆ .
‘ ಸಂದರ್ಭ : ತಾಯಿ ಇಲ್ಲದ ತವರಿಗೆ ಹೋಗಬಾರದು ಎಂದು ಹೆದ್ದೂಬ್ಬಳು ತನ್ನ ಮನಸ್ಸಿಗೆ ಹೇಳುವ ಸಂದರ್ಭವಿದು .
ವಿವರಣೆ : ತಾಯಿ ತವರು ಎರಡೂ ಹೆಣ್ಣು ಮಕ್ಕಳಿಗೆ ಇಷ್ಟ . ತಾಯಿ ಇದ್ದಾಗ ತವರಿಗೆ ಒಂದು ಅರ್ಥ , ತಾಯಿ ಇಲ್ಲದ ತವರಿಗೆ ಹೆಣ್ಣು ಹೋಗಬಾರದು . ಹೋದರೆ ಅಲ್ಲಿ ಅವಳಿಗೆ ಸರಿಯಾದ ಸ್ಥಾನಮಾನ ಸಿಗುವುದಿಲ್ಲ . ಹೇಗೆ ನೀರು ಇಲ್ಲದ ಕೆರೆಗೆ ಕರು ನೀರು ಕುಡಿಯಲು ಬಂದು ದುಃಖಪಡುತ್ತದೆಯೋ ಹಾಗೆ ಆಗುತ್ತದೆ . ಗರತಿಗೆ ತಾಯಿ ಇಲ್ಲದ ತವರು ಮನೆಯು ದುಃಖವನ್ನು ಉಂಟು ಮಾಡುತ್ತದೆ . ಹಾಗಾಗಿ ಹೆಣ್ಣೂಬ್ಬಳು ತನ್ನ ಮನಸ್ಸಿಗೆ ಹೀಗೆ ಹೇಳುತ್ತಾಳೆ .
ಹಬ್ಬಲಿ ಅವರ ರಸಬಳ್ಳಿ
ಆಯ್ಕೆ : ಈ ಸಾಲನ್ನು ಹಬ್ಬಲಿ ಅವರ ರಸಬಳ್ಳಿ ಎಂಬ ಆರಿಸಿಕೊಳ್ಳಲಾಗಿದೆ . ಜನಪದ ಗೀತೆಯಿಂದ
ಸಂದರ್ಭ : ಹೆಣ್ಣು ತನ್ನ ತವರಿಗೆ ಶುಭವನ್ನು ಹಾರೈಸುವ ಸಂದರ್ಭವಿದು .
ವಿವರಣೆ : ಇದು ಪದ್ಯದ ಶೀರ್ಷಿಕೆಯೂ ಕೂಡ ಹೌದು . ಹಾಲು ಕುಡಿದು ಬೆಳೆದ ತವರಿಗೆ ಏನೆಂದು ಹಾಡಲಿ ಎಂದು ಹೆಣ್ಣುಮಗಳು ತನ್ನನ್ನು ಪ್ರಶ್ನಿಸಿಕೊಳ್ಳುತ್ತಾಳೆ . ತನ್ನ ತವರಿನ ಮನೆಯ ವಂಶ ಇನ್ನಷ್ಟು ಬೆಳೆಯಬೇಕು . ಅದು ಹೇಗೆ ಹಬ್ಬಬೇಕು ಎಂದರೆ ಹೊಳೆಯ ದಂಡೆಯಲ್ಲಿರುವ ಕರಕೀಯ ಕುಡಿಯ ಹಾಗೆ ಹಬ್ಬಬೇಕು . ತನ್ನ ತವರಿನ ರಸಬಳ್ಳಿ ಎಲ್ಲಾ ಕಡೆ ಹಬ್ಬಬೇಕು ಎಂದು ಮನದುಂಬಿ ಹಾರೈಸುವ ಸಂದರ್ಭದಲ್ಲಿ ಈ ಸಾಲು ಬರುತ್ತದೆ .
FAQ
ಮಂದಿ ಮಕ್ಕಳೊಂದಿಗೆ ಹೇಗಿರಬೇಕು ?
ಮಂದಿ ಮಕ್ಕಳೊಂದಿಗೆ ಛಂದದಿಂದ ಹೊಂದಿಕೊಂಡಿರಬೇಕು .
ಸುಟ್ಟು ಸುಣ್ಣವಾದುದು ಯಾವುದು ?
ಬುದ್ಧಿವಂತರಾದ ನೆರೆಯವರು ಇರಬೇಕು .
ಇತರೆ ವಿಷಯಗಳನ್ನು ನೋಡಿ
- ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್
- ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು
- ಬಸವಣ್ಣನವರ ವಚನಗಳು ನೋಟ್ಸ್
- ಉರಿಲಿಂಗಪೆದ್ದಿಯ ವಚನಗಳು ಕನ್ನಡ ನೋಟ್ಸ್