Kadadida Salilam Tilivandade Kannada Question Answer | ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್‌

ಕದಡಿದ ಸಲಿಲಂ ತಿಳಿವಂದದೆ ಪ್ರಶ್ನೋತ್ತರಗಳು | Kadadida Salilam Tilivandade Notes In Kannada 2 PUC Free Guide

Kadadida Salilam Tilivandade Notes , ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು 2nd puc kannada 1st chapter Kadadida Salilam Tilivandade poem question answer Notes pdf in kannada

Kadadida Salilam Tilivandade Notes In Kannada

ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳನ್ನು ಈ ಕೆಳಗೆ ನೀಡಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು .

ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು 2nd puc kannada notes

ಒಂದು ಅಂಕದ ಪ್ರಶ್ನೆಗಳು :

ಕದಡಿದ ಸಲಿಲಂ ತಿಳಿವಂದದೆ ಪ್ರಶ್ನೋತ್ತರಗಳು | Kadadida Salilam Tilivandade Notes In Kannada 2 PUC Free Guide
ಕದಡಿದ ಸಲಿಲಂ ತಿಳಿವಂದದೆ ಪ್ರಶ್ನೋತ್ತರಗಳು | Kadadida Salilam Tilivandade Notes In Kannada 2 PUC Free Guide
ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು ?

ಬಹುರೂಪಿಣೀ ವಿದ್ಯೆ – ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ .

ಯಾರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು ?

ರಾಮ – ಲಕ್ಷ್ಮಣರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು

ಮಯತನೂಜೆ ಎಂದರೆ ಯಾರು ?

ಮಯತನೂಜೆ ಎಂದರೆ ಮಂಡೋದರಿ ,

Kadadida Salilam Tilivandade Kannada Question Answer

ಸೀತೆಯನ್ನು ರಾವಣ ಎಲ್ಲಿರಿಸಿದ್ದನು ? `

ಸೀತೆಯನ್ನು ರಾವಣ ಪ್ರಮದವನದಲ್ಲಿ ಇರಿಸಿದ್ದನು .

ರಾವಣನ ಆಗಮನವನ್ನು ಸೀತೆಗೆ ತೋರಿದವರು ಯಾರು ?

ರಾವಣನ ಆಗಮನವನ್ನು ಸೀತೆಗೆ ತೋರಿದವರು ಆಕೆಯ ಪಕ್ಕದಲ್ಲಿದ್ದ ರಾಕ್ಷಸ ಸ್ತ್ರೀಯರು .

ಸೀತೆ ಯಾವುದನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು ?

ಸೀತೆಯು ರಾವಣನ ಅಪ್ರತಿಮವಾದ ರೂಪವನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು .

ಸೀತೆ ರಾವಣನನ್ನು ಏನೆಂದು ಬೇಡಿಕೊಂಡಳು ?

“ ಕರುಣ , ಸುವುದಿದ್ದರೆ ದಶವದನನೇ , ಶ್ರೀರಾಮನ ಆಯುಃಪ್ರಾಣ ತೀರುವ ತನಕ ಇಲ್ಲಿಗೆ ಬರಬೇಡ ” ಎಂದು . ಸೀತೆ ರಾವಣನನ್ನು ಬೇಡಿಕೊಂಡಳು .

ರಾವಣನಿಗೆ ಯಾರ ಬಗ್ಗೆ ವೈರಾಗ್ಯ ಮೂಡಿತು ?

ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿತು .

ವಿಭೀಷಣ ಯಾರು ?

ವಿಭೀಷಣ ರಾವಣನ ತಮ್ಮ .

ಸೌಮಿತ್ರಿ ಎಂದರೆ ಯಾರು ?

ಸೌಮಿತ್ರಿ ಎಂದರೆ ಲಕ್ಷ್ಮಣ

Kadadida Salilam Tilivandade Notes

ಕದಡಿದ ಸಲಿಲಂ ತಿಳಿವಂದದೆ ಪ್ರಶ್ನೋತ್ತರಗಳು | Kadadida Salilam Tilivandade Notes In Kannada 2 PUC Free Guide
ಕದಡಿದ ಸಲಿಲಂ ತಿಳಿವಂದದೆ ಪ್ರಶ್ನೋತ್ತರಗಳು | Kadadida Salilam Tilivandade Notes In Kannada 2 PUC Free Guide

ಎರಡು ಅಂಕಗಳ ಪ್ರಶ್ನೆಗಳು :

kadadida salilam tilivandade Notes kannada

ಬಹುರೂಪಿಣೀ ವಿದ್ಯೆಯು ರಾವಣನಿಗೆ ಏನೆಂದು ಆಶ್ವಾಸನೆಯಿತ್ತಿತು ?

ಬಹುರೂಪಿಣೀ ವಿದ್ಯೆಯು ರಾವಣನ ಎದುರು ಪ್ರತ್ಯಕ್ಷವಾಗಿ ‘ ಚಕ್ರಧಾರಿಯಾದ ಲಕ್ಷಣವನ್ನು ಮತ್ತು ಚರಮ ದೇಹಧಾರಿ ಯಾದ ರಾಮನನ್ನು ಬಿಟ್ಟು ಮಿಕ್ಕವರನ್ನೆಲ್ಲ ನಾಶಗೊಳಿಸುತ್ತೇನೆ ‘ ಎಂದು ಆಶ್ವಾಸನೆಯಿತ್ತಿತು .

ರಾವಣ ತನ್ನ ಅಂತಃಪುರದ ಸ್ತ್ರೀಯರನ್ನು ಹೇಗೆ ಸಂತೈಸಿದನು ?

ಮಂಡೋದರಿಯನ್ನು ಮತ್ತು ಸಮಸ್ತ ಅಂತಃಪುರದ ಸ್ತ್ರೀಯರನ್ನು ನೋಡಿದ ರಾವಣನು ಅವರನ್ನುದ್ದೇಶಿಸಿ . “ ನಿಮಗಿಷ್ಟು ಅಪಮಾನ ವನ್ನುಂಟುಮಾಡಿದ ಅಂಗದಾದಿ ಗಳನ್ನು ಹುಟ್ಟು ಗಂಟಿಕ್ಕುವ ಮಾತ್ರದಿಂದಲೆ ಬಂಧಿಸಿ , ಸೆರೆಹಿಡಿದು ನಿಮ್ಮ ಮುಂದೆ ತಂದು ದಂಡಿಸುವುದರ ಮೂಲಕ ನಿಮಗಾದ ಅಪಮಾನವನ್ನು ಕಳೆಯುತ್ತೇನೆ ” -ಎಂದು ಸಂತೈಸಿದನು .

ಸೀತೆಯ ತಲ್ಲಣಕ್ಕೆ ಕಾರಣವೇನು ?

ರಾವಣನ ಅಪ್ರತಿಮವಾದ ರೂಪವು ಸೀತಾದೇವಿಗೆ ಹುಲ್ಲುಕಡ್ಡಿ ಗಿಂತಲೂ ಅಲ್ಲವಾಗಿ ತೋರಿತ್ತು . ರಾವಣನು ಸೀತಾದೇವಿಯ ಬಳಿಗೆ ಬರುವಾಗ ಆಕೆಯು ಕಳವಳಕ್ಕೆ ಒಳಗಾಗುತ್ತಾಳೆ . “ ರಾಮಲಕ್ಷ ಣರನ್ನು ಸಂಬಂಧಿಸಿದಂತೆ ತಾನು ಇನ್ನೇನು ಕೆಟ್ಟವಾರ್ತೆಯನ್ನು ಕೇಳುವೆನೋ ” ಎಂದು ರಾವಣನನ್ನು ಕಂಡೊಡನೆ ಭೀತಿಗೊಂಡು ನಡುಗತೊಡಗಿದಳು .

Kadadida Salilam Tilivandade Notes questions and answers

ರಾವಣನು ಸೊಕ್ಕಿನಿಂದ ಸೀತೆಯನ್ನುದೇಶಿಸಿ ಆಡಿದ ಮಾತುಗಳಾವುವು ?

ರಾವಣನು ಸೊಕ್ಕಿನಿಂದ ಸೀತೆಯನ್ನುದ್ದೇಶಿಸಿ “ ಬಹುರೂಪಿಣೀ ವಿದ್ಯೆಯನ್ನು ನಾನು ಸಾಧಿಸಿದ್ದೇನೆ . ಇನ್ನು ನನಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ . ನೀನು ರಾಮನ ಯೋಚನೆಯನ್ನು ಬಿಟ್ಟು , ನನ್ನನ್ನು ಹೊಂದಿ ಸಾಮ್ರಾಜ್ಯ ಸುಖವನ್ನು ಅನುಭವಿಸು ” .

ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿದ ಸಂದರ್ಭವನ್ನು

ಸೀತೆಯು ಮೂರ್ಛಿತೆಯಾಗಲು ರಾವಣನಿಗೆ ಆಕೆಯ ಮೇಲೆ ಅನುಕಂಪ ಹುಟ್ಟಿತು . ಕರುಣೆದೋರುತ್ತಾನೆ . ಅಲ್ಲದೆ ತನ್ನ ಕರ್ಮಾಧೀನತೆಯಿಂದ ಹುಟ್ಟಿದಂತಹ ಕೆಟ್ಟ ಪಾಪದ ಘೋರ ಪರಿಣಾಮವನ್ನು ತಾನೇ ಹಳಿದುಕೊಳ್ಳುತ್ತಾನೆ . ಕದಡಿ ಹೋದ ಕೊಳದ ನೀರು ತನ್ನಷ್ಟಕ್ಕೆ ತಿಳಿಗೊಳ್ಳುವಂತೆ , ರಾವಣನಿಗೆ ತನ್ನೊಳಗೆ ಬದಲಾವಣೆಯಾಗಿ ಸೀತೆಯ ಬಗ್ಗೆ ವೈರಾಗ್ಯ ಮೂಡಿತು .

ರಾವಣನು ತನ್ನ ಆಪ್ತರನ್ನು ಕುರಿತು ಏನೆಂದು ಹೇಳಿದನು ?

ರಾವಣನು ತನ್ನ ಆಪ್ತರನ್ನು ಕುರಿತು ‘ ಸದ್ಗುಣಗಳನ್ನು ಆಚರಣೆಯಲ್ಲಿ ಉಳಿಸಿಕೊಳ್ಳಲೆಂದೇ ಈಕೆ ನನ್ನ ಬಗೆಗೆ ಆಸಕ್ತಿಯನ್ನು ತೋರಲಿಲ್ಲ . ನಾನು ಹೊಂದಿದ್ದ ದಿವ್ಯವಾದ ವಸ್ತ್ರ , ಆಭರಣ , ಅಂಗ ಸುಖದ ಆಮಿಷಗಳನ್ನು ಒಪ್ಪದೆ ಗಂಧರ್ವ ರಾಜ್ಯಲಕ್ಷ್ಮಿಯನ್ನು ಹುಲ್ಲುಕಡ್ಡಿ ಗಿಂತಲೂ ಕಡೆಯಾಗಿ ಕಂಡ ಈಕೆಯನ್ನು , ಪರಾಕ್ರಮಿಯಾದ ನಾನು ಅಪೇಕ್ಷಿಸಬಹುದೇ ? ಹೀಗೆ ಕೆಟ್ಟ ಪಾಪ ಸಂಚಯನ ಮಾಡಿಕೊಳ್ಳಬಹುದೇ ? ‘ ಎಂದನು .

ಈಗಲೇ ಸೀತೆಯನ್ನು ರಾಮನಿಗೊಪ್ಪಿಸಲು ರಾವಣ ಬಯಸಲಿಲ್ಲವೇಕೆ ?

ಗಲೇ ಸೀತೆಯನ್ನು ಕೊಂಡೊಯ್ದು ರಾಘವನಿಗೊಪ್ಪಿಸಿದೆ ಯ ದಾದರೆ , ನನ್ನ ಪರಾಕ್ರಮ , ಹೆಚ್ಚಿನದ್ದಾದ ಸಾಮರ್ಥ್ಯ , ವೀರತ್ವ , ಗಳಿಸಿದ ಹೆಸರು – ಬಿರುದುಗಳೆಲ್ಲವೂ ವ್ಯರ್ಥವಾಗಿ ಹೋಗುತ್ತವೆ , ಮುಂದೆಂದೂ ಸರಿಪಡಿಸದಂತೆ ಕೆಟ್ಟು ಹೋಗುತ್ತವೆ . ಎಂದು ಸೀತೆಯನ್ನು ರಾಮನಿಗೊಸದೇ ಇರಲು ನಿರ್ಧರಿಸುತ್ತಾನೆ .

ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ ?

ರಾವಣನು ಅಂತಿಮವಾಗಿ ತನ್ನ ಬಾಹುಬಲವನ್ನು ಎರಡು ಸೇನೆಗಳೂ ಹೊಗಳುವಂತೆ ಯುದ್ಧ ಮಾಡಿ , ಯುದ್ಧಾಂತ್ಯದಲ್ಲಿ ರಾಮ ಲಕ್ಷ್ಮಣರನ್ನು ರಥವಿಹೀನರನ್ನಾಗಿ ( ರಥ ತ್ಯಜಿಸುವಂತೆ ) ಮಾಡಿ , ಸೆರೆಹಿಡಿದು ಆ ಬಳಿಕ ಸೀತೆಯನ್ನು ಕೊಡುತ್ತೇನೆ ಎನ್ನುವ ನಿರ್ಧಾರಕ್ಕೆ ಬರುತ್ತಾನೆ .

ನಾಲ್ಕು ಅಂಕಗಳ ಪ್ರಶ್ನೆಗಳು ( ಐದಾರು ವಾಕ್ಯಗಳಲ್ಲಿ ಉತ್ತರಿಸಿ ) .

Kadadida Salilam Tilivandade Notes top questions and answers

ರಾವಣನು ಬಹುರೂಪಿಣೀ ವಿದ್ಯೆಯನ್ನು ಒಲಿಸಿಕೊಂಡ ಸಂದರ್ಭವನ್ನು ವಿವರವಾಗಿ ಬರೆಯಿರಿ .

ರಾವಣನು ಧ್ರುವಮಂಡಲದಂತೆ ನಿಶ್ಚಲವಾಗಿ ನಿಂತುಕೊಂಡು ಮನೋನಿಗ್ರಹವನ್ನು ಮಾಡಿ ದಿವ್ಯ

ಮಂತ್ರೋಚ್ಚರಣೆಯಿಂದ ಬಹುರೂಪಿಣಣೀ ವಿದ್ಯೆಯ ಸಾಧನೆಯನ್ನು ಮಾಡುತ್ತಾನೆ . ಆಗ ವಿದ್ಯಾಧಿದೇವತೆಯು

ಮುಂಗಾರ ಸಿಡಿಲಿನ ಆರ್ಭಟವನ್ನೂ ಮೀರುವಂತೆ , ಯಮನ ನಾಲಗೆಯ ಕಂಪಿಸಿತೆಂಬಂತೆ ತನ್ನ ಕರಗಳನ್ನು

ಹರಡಿಕೊಂಡು , “ ಹೇಳು … ಹೇಳು ” ಎಂದು ನುಡಿದು ರಾವಣನ ಎದುರು ಪ್ರತ್ಯಕ್ಷವಾದಳು .

ಹಾಗೆ ಪ್ರತ್ಯಕ್ಷಳಾದ ವಿದ್ಯಾದೇವತೆಯು ರಾವಣನಲ್ಲಿ ಹೀಗೆ ಹೇಳುತ್ತಾಳೆ ; “ ಚಕ್ರಧಾರಿಯಾದ ಲಕ್ಷ್ಮಣನನ್ನು ಮತ್ತು ಕೊನೆಯ

ಜನ್ಮದಲ್ಲಿರುವ ರಾಮ ಇವರಿಬ್ಬರನ್ನುಳಿದು ಮಿಕ್ಕವರನ್ನೆಲ್ಲ ನಾಶಗೊಳಿಸುತ್ತೇನೆ ” ಎಂದು . ಆಗ ರಾವಣನು ,

“ ಮಿಕ್ಕವರ ಸಾವಿನಿಂದ ನನಗೇನು ಪ್ರಯೋಜನ ? ” ಎನ್ನುತ್ತ ಆ ವಿದ್ಯಾಧಿದೇವತೆಗೆ ನಮಸ್ಕರಿಸಿ , ಶಾಂತಿ

ಜಿನಭವನವನ್ನು ಮೂರು ಬಾರಿ ಪ್ರದಕ್ಷಿಣೆ ಮಾಡಿ ಅಲ್ಲಿಂದ ಹೊರ ಬರುತ್ತಾನೆ . ರಾವಣನಿಗೆ ರಾಮ ಲಕ್ಷ್ಮಣರನ್ನು

ಸೋಲಿಸುವುದು ಕಷ್ಟವೆಂದು ತಿಳಿದಿದ್ದರೂ ಅವರನ್ನು ಕೆಣಕಲು ಮುಂದಾಗುವುದು ಅವನಲ್ಲಿನ ವಿವೇಕ ನಾಶವಾಗಿರುವುದನ್ನು ಸಂಕೇತಿಸುತ್ತದೆ .

ಪ್ರಮದವನದಲ್ಲಿ ರಾವಣ – ಸೀತೆಯರ ನಡುವೆ ನಡೆದ ಸಂಭಾಷಣೆಯನ್ನು ವಿವರಿಸಿ .

ರಾವಣನು ಬಹುರೂಪಿಣೀ ವಿದ್ಯೆಯನ್ನು ಒಲಿಸಿಕೊಂಡ ನಂತರ ಪ್ರಮದವನದಲ್ಲಿರುವ ಸೀತೆಯ ಬಳಿಗೆ ಬರುತ್ತಾನೆ .

ಬಂದವನು ಸೀತೆಯನ್ನು ಕಂಡು ಹೀಗೆ ಹೇಳುತ್ತಾನೆ . ಬಹುರೂಪಿಣೀ ವಿದ್ಯೆಯನ್ನು ನಾನು ಸಾಧಿಸಿದ್ದೇನೆ . ಇನ್ನು ನನಗೆ

ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ , ನೀನು ರಾಮನ ಯೋಚನೆಯನ್ನು ಬಿಟ್ಟು ನನ್ನನ್ನು ಹೊಂದಿ

ಸಾಮ್ರಾಜ್ಯಸುಖವನ್ನನುಭವಿಸು ಎನ್ನುತ್ತಾನೆ . ರಾವಣನ ಈ ಮಾತುಗಳನ್ನು ಕೇಳಿ ಆಕೆ ಅತೀವವಾಗಿ ದುಃಖಿಸುತ್ತಾಳೆ .

ನಂತರ ಸೀತೆಯು ರಾವಣನನ್ನು ಉದ್ದೇಶಿಸಿ ಹೀಗೆ ಹೇಳುತ್ತಾಳೆ … ಕರುಣ ಸುವುದಿದ್ದರೆ ಎಲೇ ದಶವದನನೇ ,

ಶ್ರೀರಾಮನ ಆಯುಷ್ಯ ತೀರುವ ತನಕ , ಇಲ್ಲಿಗೆ ಬರಬೇಡ ‘ ಎಂದು . ಆಕೆಗೆ ಗೊತ್ತು ರಾವಣನಿಂದ ರಾಮನನ್ನು

ಏನು ಮಾಡಲು ಸಾಧ್ಯವಿಲ್ಲ ಎಂದು . ಅಲ್ಲದೆ ರಾವಣನು ತನ್ನ ಕಾರಣಕ್ಕಾಗಿ ಬಂದಿರುವುದು ಆಕೆಗೆ ಎಳ್ಳಷ್ಟು ಇಷ್ಟವಿರಲಿಲ್ಲ .

ಹಾಗೇ ಹೇಳಿದವಳೇ ಮೂರ್ಛಗೊಂಡು ಭೂಮಿಯ ಮೇಲೆ ಬೀಳುತ್ತಾಳೆ . ಆಕೆಯ ಸ್ಥಿತಿಯನ್ನು ಕಂಡ ರಾವಣನಿಗೆ ಅನುಕಂಪ

ಹುಟ್ಟುತ್ತದೆ . ಆಕೆಯ ಬಗೆಗಿನ ವ್ಯಾಮೋಹ ದೂರವಾಗಿ , ವೈರಾಗ್ಯವನ್ನು ತಾಳುತ್ತಾನೆ .

ರಾವಣನ ಮನ : ಪರಿವರ್ತನೆಯ ಸಂದರ್ಭವನ್ನು ಕವಿ ಹೇಗೆ ಚಿತ್ರಿಸಿದ್ದಾನೆ ? ವಿವರಿಸಿ ,

ರಾವಣನ ರೂಪವು ಸೀತಾ ದೇವಿಗೆ ತೃಣ ಸಮಾನವೆನಿಸಿತ್ತು . ಆಕೆ ತನ್ನನ್ನು ಕಾಣಲು ಪ್ರಮದವನಕ್ಕೆ ಬರುತ್ತಿರುವ

ರಾವಣನು ಇನ್ನೇನು ಕೆಟ್ಟ ಸುದ್ದಿಯನ್ನು ತಂದಿರುವನೋ ಎಂದು ತಲ್ಲಣಗೊಳ್ಳುತ್ತಾಳೆ . ಅಲ್ಲಿಗೆ ಬಂದ ರಾವಣನು

ಸೀತೆಯಲ್ಲಿ ನನಗೆ ಬಹರೂಪಿಓ ವಿದ್ಯೆ ಸಿದ್ಧಿಸಿದೆ . ಇನ್ನು ನನಗೆ ಅಸಾಧ್ಯವಾದುದು ಯಾವುದೂ ಇಲ್ಲ , ನೀನು ನನ್ನನ್ನು

ಒಪ್ಪಿಕೊಂಡು ಸುಖದಿಂದಿರು ಎಂದಾಗ , ಸೀತೆಯು ರಾವಣನಲ್ಲಿ ರಾಮನ ಆಯುಷ್ಯ ಮುಗಿಯುವವರೆಗೆ ಇಲ್ಲಿಗೆ ಬರಬೇಡ

ಎನ್ನುವುದಾಗಿ ಹೇಳಿ ಮೂರ್ಛ ಹೋಗುತ್ತಾಳೆ . ಜಾನಕಿಯು ಮೂರ್ಛಿತಳಾಗಲು ರಾವಣನಲ್ಲಿ ಅನುಕಂಪ ಹುಟ್ಟುತ್ತದೆ .

ಆತ ಅಕೆಯ ಬಗೆಗೆ ಕರುಣೆಯನ್ನು ತೋರುತ್ತಾನೆ . ಅಲ್ಲದೆ ತನ್ನನ್ನು ತಾನೇ ಬೈದುಕೊಳ್ಳುತ್ತಾನೆ . ಕರ್ಮಾಧೀನನಾಗಿ ತಾನು

ಮಾಡಿದ ಹೀನಕರ್ಮದ ಪರಿಣಾಮ ಎಷ್ಟು ಘೋರವಾದುದು ಎಂದು ಅರಿತು ಪರಿತಪಿಸುತ್ತಾನೆ . ಕದಡಿ ಹೋದ ಕೊಳದ

ನೀರು ತನ್ನಷ್ಟಕ್ಕೇ ತಿಳಿಗೊಳ್ಳುವಂತೆ ರಾವಣನೂ ತನ್ನಿಂದ ತಾನ ಬದಲಾಗುತ್ತಾನೆ . ಉದಾತ್ತನಾದವನಲ್ಲಿ ದುರಾಸೆಯು

ಹೇಗೆ ಸ್ಥಿರವಾಗಿ ನಿಲ್ಲಲಾರದೋ ಹಾಗೆ ರಾವಣನಿಗೆ ಸೀತೆಯಲ್ಲಿ ವೈರಾಗ್ಯ ಹುಟ್ಟಿತು . ತನಗೆ ಅಂಟಿಕೊಂಡ ಸಂಜೆ ಬಣ್ಣವನ್ನು

ರವಿಯು ಕಳೆದುಕೊಂಡು ಹೇಗೆ ಮರುದಿನ ಮತ್ತೆ ಕಾಂತಿಯುಕ್ತವಾಗಿ ಕಾಣುತ್ತಾನೆಯೋ , ಹಾಗೆ ರಾವಣನೂ ಕೂಡ ತಾನು ಹೊಂದಿದ್ದ ಕೆಟ್ಟದ್ದನ್ನು ಕಳೆದು ಪರಿಶುದ್ಧನಾಗುತ್ತಾನೆ .

Kadadida Salilam Tilivandade Notes kseeb

ರಾವಣನಲ್ಲಿ ಕಂಡುಬರುವ ಪಶ್ಚಾತ್ತಾಪವನ್ನು ಕವಿ ಹೇಗೆ ನಿರೂಪಿಸಿದ್ದಾನೆ ?

ರಾವಣನಿಗೆ ತಾನು ಕೈಗೊಂಡ ಕಾರ್ಯ ತಪ್ಪು ಎಂದು ಅರಿವಿಗೆ ಬಂದಾಗ ಆತ ತುಂಬಾ ಪಶ್ಚಾತ್ತಾಪ ಪಟ್ಟುಕೊಳ್ಳುತ್ತಾನೆ .

ಪ್ರಾಣ ಪ್ರಿಯರಾದ ರಾಮ ಸೀತೆಯರನ್ನು ದೂರಮಾಡಲು ಯಾವ ಪೂರ್ವಯೋಜಿತ ಕಾರಣಗಳಿರಲಿಲ್ಲ . ನನ್ನ ಕರ್ಮವಶದಿಂದ

ನಾನು ಅವರಿಬ್ಬರನ್ನು ಪರಸ್ಪರ ದೂರ ಮಾಡಿದೆನು , ಮನ್ಮಥನ ಬಾಣಕ್ಕೆ ತುತ್ತಾಗಿ ಅವಿವೇಕತನದಿಂದ , ಕುಲದ ಹಿರಿಮೆಯನ್ನು

ನಾನೇ ನಾಶ ಮಾಡುವಂತೆ ಈ ಹೀನ ಕಾರ್ಯವನ್ನು ಮಾಡಿದೆನು . ಸೀತೆಯನ್ನು ರಾಮನಿಂದ ಅಗಲುವಂತೆ ಮಾಡಿ ನಾನು ಈ

ಮಾನಿನಿಗೆ ಇಷ್ಟು ದುಃಖವನ್ನು ಕೊಟ್ಟೆನು . ಕಾಮ ವ್ಯಾಮೋಹಕ್ಕೆ ಒಳಗಾದದ್ದರಿಂದಾಗಿಯೇ ಕೆಟ್ಟ ಯಶಸ್ಸು ಎಂಬ ಭೇರಿಯ ,

ನಾದ ಎಲ್ಲೆಡೆ ಹರಡುವಂತಾಯಿತು . ನನಗೆ ವಿಭೀಷಣನು ಆದರದಿಂದಲೇ ಹಿತನುಡಿಗಳನ್ನು ಹೇಳಿದನು . ಆತನನ್ನು

ವಿನಯವಂತನಲ್ಲದ ನಾನು , ದುರ್ವ್ಯಸನಿಯಾದ
ನಾನು , ಬೆದರಿಸಿ ಹೆದರಿಸಿ ವಿನಯವಂತನಾದ ನನ್ನ ತಮ್ಮನನ್ನು ಹೊಡೆದೋಡಿಸಿ ಲಂಕೆಯಿಂದ ಹೊರಕ್ಕೆ ಕಳುಹಿಸಿದೆ .

ವ್ಯಸನಗಳ ಹಿಡಿತಕ್ಕೆ ಸಿಲುಕಿದ ಯಾವನೂ ಅನುರಾಗದ ಸೆಳೆವಿನಿಂದ ಯಾವುದು ಹಿತ ಯಾವುದು ಅಹಿತ ಎಂಬ

ಚಿಂತನೆಯನ್ನು ಏಕೆ ಮಾಡುತ್ತಾನೆ ಎಂದು ತನ್ನಿಂದ ಆದ ತಪ್ಪಿಗೆ ಪರಿತಪಿಸುತ್ತಾನೆ . ವ್ಯಸನಕ್ಕೆ ಬಲಿಬಿದ್ದ

ಮನುಷ್ಯನು ತನ್ನ ಹಿಂದಿನ ಎಲ್ಲಾ ವಿಚಾರಗಳನ್ನು ಮರೆತು , ವಿಷಯ ಸುಖವೆಂಬ ಮದ್ಯದ

ಅಮಲಿಗೊಳಗಾಗಿ ವಿವೇಚನೆಯನ್ನು ಕಳಕೊಳ್ಳುತ್ತಾನೆ ಎಂದು ವಿಧವಿಧವಾಗಿ ಪಶ್ಚಾತ್ತಾಪ ಪಡುತ್ತಾನೆ .

ಕದಡಿದ ಸಲಿಲಂ ತಿಳಿವಂದದೆ ಕಾವ್ಯಭಾಗದಲ್ಲಿ ಕಂಡುಬರುವ ಉ ರಾವಣನ ವ್ಯಕ್ತಿತ್ವವನ್ನು ವಿಮರ್ಶಿಸಿ ನಿಮ್ಮ ಮಾತುಗಳಲ್ಲಿ ಉತ್ತರಿಸಿ .

ಕದಡಿದ ಸಲಿಲಂ ತಿಳಿವಂದದೆ ಎನ್ನುವ ಕಾವ್ಯಭಾಗದಲ್ಲಿ ರಾವಣನು ಉದಾತ್ತ ನಾಯಕನಾಗಿಯೇ ಕಂಡು ಬರುತ್ತಾನೆ .

ನಳಕೂಬರನ ಪತ್ನಿ ಉಪರಂಭೆಯು ಈತನನ್ನು ಬಯಸಿ ಬಂದಾಗ ಆಕೆಗೆ ಸದುಪದೇಶ ನೀಡಿ ಮರಳಿ ಕಳುಹಿಸುವ

ರಾವಣ , ಖರದೂಷಣರ ನೆರವಿಗೆಂದು ಬಂದವನು ಸೀತೆಯ ರೂಪಕ್ಕೆ ಮಾರುಹೋಗುತ್ತಾನೆ . ಇದು ಕವಿಯ ಪ್ರಕಾರ

ರಾವಣನ ವಿಧಿಲಿಖಿತ . ಬಹುರೂಪಿಣೀ ವಿದ್ಯೆಯನ್ನು ಒಲಿಸಿಕೊಂಡು ರಾಮ – ಲಕ್ಷ್ಮಣರನ್ನು ಸೋಲಿಸಲು ಮುಂದಾಗುವ

ರಾವಣನಿಗೆ , ಆ ವಿದ್ಯಾದೇವತೆಯಿಂದ ಅವರನ್ನು ಸೋಲಿಸುವುದು ಅಸಾಧ್ಯ ಎಂದು ತಿಳಿದಾಗ ಹೆದರದೆ ಶಾಂತಿಜಿನಭವನಕ್ಕೆ ಮಹಾಪೂಜೆಯನ್ನು ಸಲ್ಲಿಸಿ , ಸೀತೆಯನ್ನು ಕಾಣಲು ಪ್ರಮದವನಕ್ಕೆ ಹೋಗುತ್ತಾನೆ . ಸೀತೆಯನ್ನು ಕಂಡ ಆತ , ಅಕೆಯಲ್ಲಿ

ತನ್ನ ಪರಾಕ್ರಮದ ಬಗ್ಗೆ ಹೇಳಿಕೊಳ್ಳುತ್ತಾನೆ . ಆತನನ್ನು ನಿರಾಕರಿಸಿ ರಾಮನ ಪ್ರಾಣ ಹೋಗುವ ವರೆಗೆ ನನ್ನನ್ನು ನೋಡಲು

ಮರಳಿ ಬರಬೇಡ ಎನ್ನುತ್ತಾ ಮೂರ್ಛ ಹೋಗುತ್ತಾಳೆ . ಆದರೆ ಸೀತೆ ಮಾತ್ರ ರಾವಣ ಒಬ್ಬ ಶ್ರೇಷ್ಠ ನಾಯಕ ಎಂದು ತಿಳಿಯುವುದು ಇಲ್ಲಿಯೇ.ಸೀತೆ ಮೂರ್ಛ ಹೋದ ಮರು ಕ್ಷಣದಲ್ಲಿ ರಾವಣನಿಗೆ ತಾನು ಮಾಡುತ್ತಿರುವುದು ತಪ್ಪೆನಿಸುತ್ತದೆ . ಆಕೆಯ

ಬಗ್ಗೆ ಅನುಕಂಪ ಹುಟ್ಟುತ್ತದೆ , ಕರುಣೆದೋರುತ್ತಾನೆ . ಅಲ್ಲದೆ ತನ್ನನ್ನು ತಾನೇ ಬೈದುಕೊಳ್ಳುತ್ತಾನೆ . ಕರ್ಮಾಧೀನನಾಗಿ

ತಾನು ಮಾಡಿದ ಹೀನಕರ್ಮದ ಪರಿಣಾಮ ಎಷ್ಟು ಘೋರವಾದುದು ಎಂದು ಅರಿತುಪರಿತಪಿಸುತ್ತಾನೆ . ಕದಡಿ

ಹೋದ ಕೊಳದನೀರು ತನ್ನಷ್ಟಕ್ಕೇ ತಿಳಿಗೊಳ್ಳುವಂತೆ ; ರಾವಣನಿಗೆ ತನ್ನೊಳಗೆ ಬದಲಾವಣೆಯಗುತ್ತದೆ .

ಉದಾತ್ತನಾದವನಲ್ಲಿ ದುರಾಸೆಯು ಹೇಗೆ ಸ್ಥಿರವಾಗಿ ನಿಲ್ಲಲಾರದೋಹಾಗೆ ರಾವಣನಿಗೆ ಸೀತೆಯಲ್ಲಿ ವೈರಾಗ್ಯ ಹುಟ್ಟುತ್ತದೆ ,

ಕೊನೆಯಲ್ಲಿ ರಾವಣ , ರಾಮ – ಲಕ್ಷಣದಲ್ಲಿ ಯುದ್ಧ ಮಾಡಿ ಅವರನ್ನು ರಥವಿಹೀನರನ್ನಾಗಿಸಿ ಮರಳಿ ಒಪಿಸುವ

ಆಲೋಚನೆ ಮಾಡುತ್ತಾನೆ . ಇದು ರಾವಣನ ನಿಜ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ .

ಕದಡಿದ ಸಲಿಲಂ ತಿಳಿವಂದದೆ ಪ್ರಶ್ನೋತ್ತರಗಳು | Kadadida Salilam Tilivandade Notes In Kannada 2 PUC Free Guide
ಕದಡಿದ ಸಲಿಲಂ ತಿಳಿವಂದದೆ ಪ್ರಶ್ನೋತ್ತರಗಳು | Kadadida Salilam Tilivandade Notes In Kannada 2 PUC Free Guide

ಸಾಂದರ್ಭಿಕ ವಿವರಣೆ ಬಯಸುವ ವಾಕ್ಯಗಳು :

Kadadida Salilam Tilivandade Notes karnataka

ಉಳಿದವರಳಿವೆನಗೇವುದೆಂ ?

ಆಯ್ಕೆ : ಈ ಮೇಲಿನ ವಾಕ್ಯವನ್ನು ಅಭಿನವ ಪಂಪ’ನೆಂದು ಖ್ಯಾತನಾಗಿರುವ , ‘ ನಾಗಚಂದ್ರ ‘

ಕವಿಯು ರಚಿಸಿರುವ ‘ ರಾಮಚಂದ್ರಚರಿತ ಪುರಾಣ’ದಿಂದ ಆಯ್ದ , ‘ ಕದಡಿದ ಸಲಿಲಂ ತಿಳಿವಂದದೆ

‘ ಎಂಬ ಕಾವ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ರಾವಣನು ಬಹುರೂಪಿಣೀ ವಿದ್ಯೆಯ ಬಳಿ ಪ್ರಶ್ನಿಸುವ ಸಂದರ್ಭ ಇಲ್ಲಿದೆ .
ವಿವರಣೆ : ರಾವಣನ ಎದುರು ಪ್ರತ್ಯಕ್ಷಳಾದ ವಿದ್ಯಾದೇವತೆಯು ರಾವಣನಲ್ಲಿ ಹೀಗೆ ಹೇಳುತ್ತಾಳೆ

“ ಚಕ್ರಧಾರಿಯಾದ ಲಕ್ಷ್ಮಣನನ್ನು ಮತ್ತು ಚರಮದೇಹಧಾರಿಯಾದ ರಾಮ ಇವರಿಬ್ಬರನ್ನುಳಿದು

ಮಿಕ್ಕವರನ್ನೆಲ್ಲ ನಾಶಗೊಳಿಸುತ್ತೇನೆ ” ಎಂದು . ಆಗ ರಾವಣನು , “ ಮಿಕ್ಕವರಸಾವಿನಿಂದ ನನಗೇನು

ಪ್ರಯೋಜನ ? ” ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾನೆ .

ಸಮಧಿಕರಾರ್ ಜಗತ್ತಯದೊಳಿನ್ನೆನಗೆ ?

ಆಯ್ಕೆ : ಈ ಮೇಲಿನ ವಾಕ್ಯವನ್ನು ‘ ಅಭಿನವ ಪಂಪ’ನೆಂದು ಖ್ಯಾತನಾಗಿರುವ , ‘ ನಾಗಚಂದ್ರ ‘

ಕವಿಯು ರಚಿಸಿರುವ ‘ ರಾಮಚಂದ್ರ ಚರಿತ ಪುರಾಣ’ದಿಂದ ಆಯ್ದ , ‘ ಕದಡಿದ ಸಲಿಲಂ ತಿಳಿವಂದದೆ ‘

ಎಂಬ ಕಾವ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ರಾವಣ ತನ್ನ ಶಕ್ತಿಯ ಕುರಿತಂತೆ ತಾನೇ ಹೇಳಿಕೊಳ್ಳುವ ಸಂದರ್ಭ ಇದಾಗಿದೆ .
ವಿವರಣೆ : ರಾವಣನು ಮಂಡೋದರಿಯ ಸಮೀಪ ಬಂದು “ ನಿಮಗಿಷ್ಟು ಅಪಮಾನವನ್ನುಂಟುಮಾಡಿದ

ಅಂಗದಾದಿಗಳನ್ನು ಹುಬ್ಬು ಗಂಟಿಕ್ಕುವ ಮಾತ್ರದಿಂದಲೆ ಬಂಧಿಸಿ , ಸೆರೆಹಿಡಿದು ನಿಮ್ಮ ಮುಂದೆ ತಂದು

ದಂಡಿಸುವುದರ ಮೂಲಕ ನಿಮಗಾದ
ನಾಗಚಂದ್ರ ಅಪಮಾನವನ್ನು ಕಳೆಯುತ್ತೇನೆ ” ಎಂದು ಅವರನ್ನು ಸಮಾಧಾನಪಡಿಸಿ , ಶಾಂತಿಜಿನಭವನದಲ್ಲಿ

ಮಹಾಪೂಜೆಯನ್ನು ಮಾಡಿಸಿದನು . ನಿಯಮದಂತೆ ದಿವ್ಯವಾದ ಪ್ರಸಾದ ಭೋಜನವನ್ನುಂಡು , ಆ ಬಳಿಕ

ಬಹುರೂಪಿಣ ವಿದ್ಯೆಯ ಪ್ರಭಾವವನ್ನು ಪರೀಕ್ಷಿಸಿ ನೋಡಿ , ಸಮಾಧಾನಗೊಂಡು ಸಂತೋಷವನ್ನು ಹೊಂದಿದ

ರಾವಣನು ತನ್ನ ಬಾಹುಗಳನ್ನು ತಾನೇ ಅಭಿಮಾನದಿಂದ ನೋಡಿಕೊಳ್ಳುತ್ತ , ಇನ್ನು ಮುಂದೆ ( ಸ್ವರ್ಗ , ಮರ್ತ್ಯ ,

ಪಾತಾಳಗಳೆಂಬ ) ಮೂರು ಲೋಕಗಳಲ್ಲೂ ನನ್ನನ್ನು ಜಯಿಸಬಲ್ಲವರಾರು ? ಯುದ್ಧದಲ್ಲಿ ಎದುರಿಸುವ ವರಾರು ?

ಎಂದುಕೊಳ್ಳುವಾಗ ಈ ಮಾತು ಬಂದಿದೆ .

ಏನಂ ಕೇಳಪೆನೋ..ಪೊಲ್ಲವಾರ್ತೆಯನಿನ್ .

ಆಯ್ಕೆ : ಈ ಮೇಲಿನ ವಾಕ್ಯವನ್ನು ‘ ಅಭಿನವ ಪಂಪ’ನೆಂದು ಖ್ಯಾತನಾಗಿರುವ , ‘ ನಾಗಚಂದ್ರ ‘ ಕವಿಯು ರಚಿಸಿರುವ ‘ ರಾಮಚಂದ್ರಚರಿತ ಪುರಾಣ’ದಿಂದ ಆಯ್ದ , ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ತನ್ನನ್ನು ಕಾಣಲು ಬಂದ ರಾವಣನನ್ನು ಗಮನಿಸಿ , ಸೀತೆಯು ತನ್ನಲ್ಲಿ ತಾನು ಹೇಳಿಕೊಳ್ಳುವ , ಸಂದರ್ಭ ಇದಾಗಿದೆ .
ವಿವರಣೆ : ರಾವಣನು ತನ್ನ ಬಾಹುಗಳನ್ನು ತಾನೇ ಅಭಿಮಾನದಿಂದ ನೋಡಿಕೊಳ್ಳುತ್ತ , ಇನ್ನು ಮೂರು ಲೋಕಗಳಲ್ಲೂ ನನ್ನನ್ನು ಜಯಿಸಬಲ್ಲವರಾರು , ಯುದ್ಧದಲ್ಲಿ ಎದುರಿಸುವವರಾರು ಎಂದು ಗರ್ವ ಪಡುತ್ತಾನೆ .

ಆ ನಂತರ ಸೀತಾದೇವಿಯ ವದನಾರವಿಂದವನ್ನು ನೋಡುವ ಕಾತರತೆ ಯುಳ್ಳವನಾಗಿ ಸೀತೆಯನ್ನು ಇರಿಸಿರುವ ಸ್ಥಳವಾದ ಪ್ರಮದವನಕ್ಕೆ ಬರುತ್ತಾನೆ ಆದರೆ ರಾವಣನ ರೂಪವು ಸೀತಾದೇವಿಗೆ ಹುಲ್ಲುಕಡ್ಡಿಗಿಂತಲೂ ಅಲ್ಪವಾಗಿ ತೋರಿತು .

ರಾವಣನು ಸೀತಾದೇವಿಯ ಬಳಿಗೆ ಧಾವಿಸಿ ಬರುವಾಗ ಆಕೆಯಲ್ಲಿ “ ರಾಮಲಕ್ಷ್ಮಣರನ್ನು ಕುರಿತಂತೆ ತಾನು ಇನ್ನೇನು ಕೆಟ್ಟವಾರ್ತೆಯನ್ನು ಕೇಳುವೆನೋ ಎನ್ನುವಾಗ ಈ ಮೇಲಿನಂತೆ ಅಂದುಕೊಳ್ಳುತ್ತಾಳೆ .

Kadadida Salilam Tilivandade Notes puc

ಅಸಾಧ್ಯಮಪ್ಪ ಮರುವಕ್ಕವಿಲ್ಲ .

ಆಯ್ಕೆ : ಈ ಮೇಲಿನ ವಾಕ್ಯವನ್ನು ‘ ಅಭಿನವ ಪಂಪ’ನೆಂದು ಖ್ಯಾತನಾಗಿರುವ , ‘ ನಾಗಚಂದ್ರ ‘ ಕವಿಯು ರಚಿಸಿರುವ ‘ ರಾಮಚಂದ್ರ ಚರಿತ ಪುರಾಣ’ದಿಂದ ಆಯ್ದ , ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ .

ಸಂದರ್ಭ : ಬಹುರೂಪಿಣೀ ವಿದ್ಯೆಯನ್ನು ಗಳಿಸಿದ ನಂತರ ರಾವಣನು ಸೀತೆಯ ಬಳಿ ಈ ಮಾತನ್ನು ಹೇಳುತ್ತಾನೆ .
ವಿವರಣೆ : ರಾವಣನು ಸೀತಾದೇವಿಯು ಇರುವ ಸ್ಥಳಕ್ಕೆ ಬರುವಾಗ , ಆಕೆ ತೀರಾ ಕಳವಳಕ್ಕೆ ಒಳಗಾಗುತ್ತಾಳೆ . ರಾಮ ಲಕ್ಷ್ಮಣರನ್ನು ಕುರಿತಂತೆ ತಾನು ಇನ್ನೇನು ಕೆಟ್ಟವಾರ್ತೆಯನ್ನು ಕೇಳುವೆನೋ ಎಂದು ರಾವಣನನ್ನು ಕಂಡೊಡನೆ ಭೀತಿಗೊಂಡು ನಡುಗತೊಡಗುತ್ತಾಳೆ .

ಹಾಗೆ ನಡುಗುತ್ತಿದ್ದ ಸೀತೆಯ ಸಮೀಪಕ್ಕೆ ಬಂದ ರಾವಣನು ಬಹುರೂಪಿಣೀ ವಿದ್ಯೆಯನ್ನು ನಾನು ಸಾಧಿಸಿದ್ದೇನೆ . ಇನ್ನು ನನಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ , ನೀನು ರಾಮನ ಯೋಚನೆಯನ್ನು ಬಿಟ್ಟು ನನ್ನನ್ನು ಹೊಂದಿ ಸಾಮ್ರಾಜ್ಯ ಸುಖವನ್ನನುಭವಿಸು ಎನ್ನುವಾಗ ಈ ಮೇಲಿನ ಮಾತು ಬಂದಿದೆ .

ರಘುತನೂಜನಾಯುಃಪ್ರಾಣಂಬರೆಗಂ ಬಾರದಿರು .

ಆಯ್ಕೆ : ಈ ಮೇಲಿನ ವಾಕ್ಯವನ್ನು ‘ ಅಭಿನವ ಪಂಪ’ನೆಂದು ಖ್ಯಾತನಾಗಿರುವ , ‘ ನಾಗಚಂದ್ರ ‘ ಕವಿಯು ರಚಿಸಿರುವ ‘ ರಾಮಚಂದ್ರಚರಿತ ಪುರಾಣ’ದಿಂದ ಆಯ್ದ , ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಈ ಮಾತನ್ನು ಸೀತೆಯು ರಾವಣನಲ್ಲಿ ಹೇಳುತ್ತಾಳೆ .
ವಿವರಣೆ : ಸೀತೆಯ ಸಮೀಪಕ್ಕೆ ಬಂದ ರಾವಣನು ಬಹುರೂಪಿಣೀ ವಿದ್ಯೆಯನ್ನು ನಾನು ಸಾಧಿಸಿದ್ದೇನೆ . ಇನ್ನು ನನಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ . ನೀನು ರಾಮನ ಯೋಚನೆಯನ್ನು ಬಿಟ್ಟು , ನನ್ನನ್ನು ಹೊಂದಿ ಸಾಮ್ರಾಜ್ಯ ಸುಖವನ್ನನುಭವಿಸು ಎನ್ನುತ್ತಾನೆ .

ಆಗ ಸೀತೆ ಆತನ ಮಾತಿಗೆ ಪ್ರತಿಕ್ರಿಯಿಸುತ್ತಾ , ಕರುಣಿಸುವುದಿದ್ದರೆ ದಶವದನನೇ , ಶ್ರೀರಾಮನ ಆಯುಷ್ಯ ತೀರುವ ತನಕ , ಇಲ್ಲಿಗೆ ಬರಬೇಡ ” ಎಂದು ಈ ಮೇಲಿನಂತೆ ಹೇಳುತ್ತಾಳೆ .

ಕದಡಿದ ಸಲಿಲಂ ತಿಳಿವಂದದೆ .

ಆಯ್ಕೆ : ಈ ಮೇಲಿನ ವಾಕ್ಯವನ್ನು ‘ ಅಭಿನವ ಪಂಪ’ನೆಂದು ಖ್ಯಾತನಾಗಿರುವ , ‘ ನಾಗಚಂದ್ರ ‘ ಕವಿಯು ರಚಿಸಿರುವ ‘ ರಾಮಚಂದ್ರಚರಿತ ಪುರಾಣ’ದಿಂದ ಆಯ್ದ , ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ .

ಸಂದರ್ಭ : ರಾವಣನಿಗೆ ಸೀತೆಯ ಬಗ್ಗೆ ಹೊಂದಿರುವ ಕೆಟ್ಟಭಾವನೆ ಮರೆಯಾಗಿ ,
ಮನಃಪರಿವರ್ತನೆಯಾಗುವ ಸಂದರ್ಭ ಇದಾಗಿವೆ .
ವಿವರಣೆ : ರಾವಣನು ತಾನು ಬಹುರೂಪಿಣ ವಿದ್ಯೆಯನ್ನು ನಾನು ಸಾಧಿಸಿದ್ದೇನೆ . ಇನ್ನು ನನಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ , ನೀನು ರಾಮನ ಯೋಚನೆಯನ್ನು ಬಿಟ್ಟು ನನ್ನನ್ನು ಹೊಂದಿ ಸಾಮ್ರಾಜ್ಯ ಸುಖವನ್ನನುಭವಿಸು ” . ಎಂದನು . ಆಗ ಸೀತಾದೇವಿ ಅತೀವವಾಗಿ ದುಃಖ ಪಡುತ್ತಾಳೆ , ರಾವಣನ ಮಾತಿಗೆ ಪ್ರತಿಸ್ಪಂದಿಸುತ್ತಾ ಸೀತೆ ಹೀಗೆ ಹೇಳುತ್ತಾಳೆ .

ಕರುಣಿಸುವುದಿದ್ದರೆ ದಶವದನನೇ ಶ್ರೀರಾಮನ ಆಯುಷ್ಯ ತೀರುವ ತನಕ ಇಲ್ಲಿಗೆ ಬರಬೇಡ ಎಂದು . ಹಾಗೆ ಹೇಳಿದವಳೇ ಮೂರ್ಛ ಕಳಕೊಂಡು ಭೂಮಿಯ ಮೇಲೆ ಬೀಳುತ್ತಾಳೆ . ಆಗ ರಾವಣನಿಗೆ ಆಕೆಯ ಬಗೆಗೆ ಅನುಕಂಪ ಹುಟ್ಟುತ್ತದೆ . ಆತ ಕರುಣೆದೋರುತ್ತಾನೆ .

ಕದಡಿ ಹೋದ ಕೊಳದ ನೀರು ತನ್ನಷ್ಟಕ್ಕೇ ತಿಳಿಗೊಳ್ಳುವಂತೆ ; ರಾವಣನಿಗೆ ತನ್ನೊಳಗೆ ಬದಲಾವಣೆ ಯಾಯಿತು ಎನ್ನುವಾಗ , ಈ ಮೇಲಿನ ಮಾತು ಬಂದಿದೆ .

Kadadida Salilam Tilivandade Notes important

ಉದಾತ್ತದೊಳ್ ಪುಟ್ಟದಲ್ಲೆ ನೀಲಿರಾಗಂ

ಆಯ್ಕೆ : ಈ ಮೇಲಿನ ವಾಕ್ಯವನ್ನು ‘ ಅಭಿನವ ಪಂಪ’ನೆಂದು ಖ್ಯಾತನಾಗಿರುವ , ‘ ನಾಗಚಂದ್ರ ‘ ಕವಿಯು ರಚಿಸಿರುವ ‘ ರಾಮಚಂದ್ರ ಚರಿತ ಪುರಾಣ’ದಿಂದ ಆಯ್ದ , ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಉದಾತ್ತವಾದ ರಾವಣನ ಮನಃ ಪರಿವರ್ತನೆಯ ಕುರಿತಂತೆ ತಿಳಿಸುವ ಸಂದರ್ಭ ಇದಾಗಿದೆ .

ವಿವರಣೆ : ಜಾನಕಿಯು ಮೂರ್ಛಿತಳಾಗಲು ರಾವಣನಿಗೆ ಆಕೆಯ ಬಗ್ಗೆ ಅನುಕಂಪ ಹುಟ್ಟುತ್ತದೆ . ಆತ ಕರುಣೆದೋರುತ್ತಾನೆ . ಅಲ್ಲದೆ ತನ್ನನ್ನು ತಾನೇ ಬೈದುಕೊಳ್ಳುತ್ತಾನೆ . ಕರ್ಮಾಧೀನನಾಗಿ ತಾನು ಮಾಡಿದ ಹೀನಕರ್ಮದ ಪರಿಣಾಮ ಎಷ್ಟು ಘೋರವಾದುದು ಎಂದು ಅರಿತು ಪರಿತಪಿಸುತ್ತಾನೆ . ಸೀತೆ ಮೂರ್ಛಿತಳಾಗುವವರೆಗೂ ರಾವಣನ ಮನಸ್ಸು ಕಲುಷಿತ ಗೊಂಡಿತ್ತು .

ತನ್ನ ತಪ್ಪಿನ ಅರಿವಿನ ನಂತರ ತಿಳಿಯಾಗ ತೊಡಗಿತು . ಉದಾತ್ತನಾದವನಲ್ಲಿ ದುರಾಸೆಯು ಹೇಗೆ ಸ್ಥಿರವಾಗಿ ನಿಲ್ಲಲಾರದೋ ಹಾಗೆ ರಾವಣನಿಗೆ ಸೀತೆಯಲ್ಲಿ ವೈರಾಗ್ಯ ಹುಟ್ಟಿತು ಎನ್ನುವಾಗ ಈ ಮೇಲಿನ ಮಾತು ಬಂದಿದೆ .

ಪೇಕ್ಷಿಸುವನೇ ಗುಣಹಾನಿಯನೆನ್ನ ಪಾಪದಿಂ

ಆಯ್ಕೆ : ಈ ಮೇಲಿನ ವಾಕ್ಯವನ್ನು ‘ ಅಭಿನವ ಪಂಪ’ನೆಂದು ಖ್ಯಾತನಾಗಿರುವ , ‘ ನಾಗಚಂದ್ರ ‘ ಕವಿಯು ರಚಿಸಿರುವ ‘ ರಾಮಚಂದ್ರಚರಿತ ಪುರಾಣ’ದಿಂದ ಆಯ್ದ , ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ರಾವಣ ತನ್ನ ತಪ್ಪಿನ ಮನವರಿಕೆಯನ್ನು ಮಾಡಿಕೊಳ್ಳುವ ಸಂದರ್ಭ ಇದಾಗಿದೆ .
ವಿವರಣೆ : ಮನಸ್ಸಿನಲ್ಲಿ ಮೂಡಿದ ಕಾರುಣ್ಯ ರಸದಿಂದ ಸೀತೆಯಲ್ಲಾದ ಅನುರಕತೆಯನ್ನು ತಿಕ್ಕಿ ತೊಳೆಯುವಂತೆ ರಾವಣನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾನೆ . ತನ್ನ
ನಾನು ಆಪ್ತವಲಯದ ಜನರನ್ನುದ್ದೇಶಿಸಿ ಆತ ಸೀತೆ ಸದ್ಗುಣ , ಆ ಸದ್ಗುಣತ್ವವನ್ನು ಆಚರಿಸುವ ಸಲುವಾಗಿಯೇ ಹೊಂದಿರುವ ದಿವ್ಯವಾದ ವಸ್ತ್ರ , ಆಭರಣ , ಅಂಗ ಸುಖದ ಆಮಿಷಗಳನ್ನು ಒಪ್ಪದೆ ಗಂಧರ್ವ ರಾಜ್ಯಲಕ್ಷ್ಮಿಯನ್ನು ಹುಲ್ಲುಕಡ್ಡಿಗೆ ಸಮನಾಗಿ ಭಾವಿಸಿದಳು . ಅದೂ ಅಲ್ಲದೆ ನಾನು ಪೌರುಷ ಪ್ರಣಯಿ , ನನ್ನ ಪಾಪದಿಂದ ಹೀಗೆ ಗುಣಹಾನಿಯನ್ನು ಬಯಸುತ್ತೇನೆಯೇ ಎಂದು ಹೇಳುವಾಗ ಈ ಮಾತು ಬಂದಿದೆ .

ಕಂದರ್ಪ ವಿಮೋಹದಿಂದಗಲ್ಲಿದೆ .

ಆಯ್ಕೆ : ಈ ಮೇಲಿನ ವಾಕ್ಯವನ್ನು ‘ ಅಭಿನವ ಪಂಪ’ನೆಂದು ಖ್ಯಾತನಾಗಿರುವ , ‘ ನಾಗಚಂದ್ರ ‘ ಕವಿಯು ರಚಿಸಿರುವ ‘ ರಾಮಚಂದ್ರಚರಿತ ಪುರಾಣ’ದಿಂದ ಆಯ್ದ , ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ರಾವಣನು ತಾನು ಗೈದ ಕಾರ್ಯಕ್ಕೆ ಪಶ್ಚಾತ್ತಾಪ ಪಟ್ಟುಕೊಳ್ಳುವ ಸಂದರ್ಭ ಇದಾಗಿದೆ .
ವಿವರಣೆ : ರಾವಣನೇ ಹೇಳುವಂತೆ ಸೀತೆ ಸದ್ಗುಣ .

ಆ ಸದ್ಗುಣತ್ವವನ್ನು ಆಚರಿಸುವ ಸಲುವಾಗಿಯೇ ನಾನು ಹೊಂದಿದ್ದ ದಿವ್ಯವಾದ ವಸ್ತ್ರ , ಆಭರಣ , ಅಂಗ ಸುಖದ ಆಮಿಷಗಳನ್ನು ಒಪ್ಪದೆ ಗಂಧರ್ವ ರಾಜ್ಯಲಕ್ಷ್ಮಿಯನ್ನು ಹುಲ್ಲುಕಡ್ಡಿಗೆ ಸಮನಾಗಿ ಭಾವಿಸಿದಳು ಈ ಸತಿಯು , ಅದೂ ಅಲ್ಲದೆ ನಾನು ಪೌರುಷ ಪ್ರಣಯಿ , ನನ್ನ ಪಾಪದಿಂದ ಹೀಗೆ ಗುಣಹಾನಿಯನ್ನು ಬಯಸುತ್ತೇನೆಯೇ ಎನ್ನುತ್ತಾನೆ .

ಪ್ರಾಣ ಪ್ರಿಯರಾದ ರಾಮ ಸೀತೆಯರನ್ನು ದೂರಮಾಡಲು ಯಾವ ಪೂರ್ವ ಯೋಜಿತ ಕಾರಣಗಳಿರಲಿಲ್ಲ .

ನನ್ನ ಕರ್ಮವಶದಿಂದ ದೂರ ಮಾಡಿದೆನು . ಮನ್ಮಥನ ಬಾಣಕ್ಕೆ ತುತ್ತಾಗಿ ಅವಿವೇಕತನದಿಂದ , ಕುಲದ ಹಿರಿಮೆಯನ್ನು ನಾನೇ ನಾಶ ಮಾಡುವಂತೆ ಈ ಹೀನ ಕಾರ್ಯವನ್ನು ಮಾಡಿದೆನು ಎನ್ನುವಾಗ ಈ ಮೇಲಿನ ಮಾತು ಬಂದಿದೆ .

ರಣಾಗ್ರದೊಳ್ ಪಿಡಿದು ತಂದಾಂ ಕೊಟ್ಟಪಂ .

ಯ್ಕೆ : ಈ ಮೇಲಿನ ವಾಕ್ಯವನ್ನು ‘ ಅಭಿನವ ಪಂಪ’ನೆಂದು ಖ್ಯಾತನಾಗಿರುವ , ‘ ನಾಗಚಂದ್ರ ‘ ಕವಿಯು ರಚಿಸಿರುವ ‘ ರಾಮಚಂದ್ರಚರಿತ ಪುರಾಣ’ದಿಂದ ಆಯ್ದ , ‘ ಕದಡಿದ ಸಲಿಲಂ ತಿಳಿವಂದದೆ ‘ ಎಂಬ ಕಾವ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ರಾವಣ ಹೇಳುವ ಮಾತು ಇದಾಗಿದೆ .

ವಿವರಣೆ : ರಾವಣನು ಕೊನೆಯಲ್ಲಿ ಸೀತೆಯ ಮೇಲೆ ವಿರಕ್ತಿಯನ್ನು ಹೊಂದಿದ್ದರೂ , ಆಕೆಯನ್ನು ಸುಮ್ಮನೆ ರಾಮನಿಗೆ ಒಪ್ಪಿಸಲು ಅತನ ಮನಸ ಒಪ್ಪದಾಯಿತು ಸುಮ್ಮನೇ ರಾಘವನಿಗೊಪ್ಪಿಸಿ ದೆಯೆಂದಾದರೆ .. ನನ್ನ ಪರಾಕ್ರಮ , ಹೆಚ್ಚಿನದ್ದಾದ ಸಾಮರ್ಥ್ಯ , ವೀರತ್ವ , ಗಳಿಸಿದ ಹೆಸರು – ಬಿರುದುಗಳು ವ್ಯರ್ಥವಾಗಿ ಹೋಗುತ್ತವೆ .

ಮುಂದೆಂದೂ ಸರಿಪಡಿಸದಂತೆ ಕೆಟ್ಟು ಹೋಗುತ್ತವೆ . ಆದ ಕಾರಣ ತನ್ನ ಬಾಹುಬಲವನ್ನು ಎರಡು ಸೇನೆಗಳೂ ಹೊಗಳುವಂತೆ ಯುದ್ಧ ಮಾಡಿ , ಯುದ್ಧಾಂತ್ಯದಲ್ಲಿ ರಾಮ ಲಕ್ಷ್ಮಣರನ್ನು ರಥವಿಹೀನರನ್ನಾಗಿ ಮಾಡಿ , ಸೆರೆಹಿಡಿದು
ಆ ಬಳಿಕ ಸೀತೆಯನ್ನು ಮರಳಿ ಒಪ್ಪಿಸುತ್ತೇನೆ , ಎನ್ನುವಾಗ ಈ ಮೇಲಿನ ಮಾತು ಬಂದಿದೆ .

Kadadida Salilam Tilivandade Notes pdf

ಎಫ್ ಏ ಕ್ಯೂ

ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು ?

ಬಹುರೂಪಿಣೀ ವಿದ್ಯೆ – ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ .

ಯಾರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು ?

ರಾಮ – ಲಕ್ಷ್ಮಣರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು

Kadadida Salilam Tilivandade Notes 2nd puc

SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *