10th class kannada halagali bedaru notes, ಹಲಗಲಿ ಬೇಡರು ನೋಟ್ಸ್, Kannada Poem 3 Halagali Bedaru Questions and Answers, Summary, Notes Pdf, Siri Kannada Text Book Class 10 Solutions, halagali bedaru kavi parichay
Halagali Bedaru Notes
ಈ ಲೇಖನದಲ್ಲಿ 10ನೇ ತರಗತಿ ಹಲಗಲಿ ಬೇಡರು ಪಾಠದ ಪ್ರಶ್ನೋತ್ತರಗಳನ್ನು ನೀಡಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದು ವಿದ್ಯಾರ್ಥಿಗಳಿಗಾಗಿ ಇದು ಸಂಪೂರ್ಣವಾಗಿ ಉಚಿತವಾಗಿದೆ.
ಲೇಖಕರ ಪರಿಚಯ halagali bedaru notes kavi parichaya
![ಹಲಗಲಿ ಬೇಡರು Question Answer | Halagali Bedaru Notes 10th Question Answer Free For Students](https://kaipidi.com/wp-content/uploads/2022/09/Halagaliya-Bedaru-min-1024x683.jpg)
ಕವಿ ಪರಿಚಯ :- ಹಲಗಲಿ ಬೇಡರು ಪದ್ಯವು ಒಂದು ‘ ಲಾವಣಿ’ಯಾಗಿದೆ .
ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಲಾವಣಿಯನ್ನು ವೀರಗೀತೆ ಎನ್ನುತ್ತಾರೆ . ಪ್ರಕಾರ , ವೀರತನ , ಸಾಹಸವನ್ನು ವರ್ಣಿಸುವುದರಿಂದ
ಆಕರಗ್ರಂಥ : ಡಾ || ಬಿ.ಎಸ್ . ಗದ್ದಗೀಮಠ ಅವರ ಕನ್ನಡ ಜನಪದ ಗೀತೆಗಳು .
ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .
ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು ?
ಕತ್ತಿ ಹಿಡಿದು ಹೋರಾಡುವ ಹಲಗಲಿ ಬಂಟರು ಇನ್ನು ಮುಂದೆ ಶಸ್ತ್ರವನ್ನು ಹಿಡಿಯಬಾರದು ಎಂದು ಇಂಗ್ಲೆಂಡಿನಿಂದ ಕುಂಪಣಿ ಸರಕಾರ ಆದೇಶ ಹೊರಡಿಸಿತು .
ಹಲಗಲಿಯ ನಾಲ್ವರು ಪ್ರಮುಖರು ಯಾರು ?
ಪೂಜೇರಿ ಹನುಮಾ , ಬ್ಯಾಡರ ಬಾಲ , ಜಡಗ ಮತ್ತು ರಾಮ ಹಲಗಲಿಯ ನಾಲ್ವರು ಪ್ರಮುಖರು .
ಹಲಗಲಿ ಗುರುತು ಉಳಿಯದಂತಾದುದು ಏಕೆ ?
ಬ್ರಿಟಿಷರು ಸಿಕ್ಕದ್ದು ತಗೊಂಡು ಊರಿಗೆ ಕೊಳ್ಳಿ ಇಟ್ಟರು . ಬೂದಿ ಮಾಡಿದರು . ಹಲಗಲಿ ಸುಟ್ಟು ಗುರ್ತು ಉಳಿಯಲಾರದಷ್ಟು ಹಾಳಾಗಿ ಹೋಯಿತು .
halagali bedaru notes pdf in kannada
ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ ?
ಕಾರಸಾಹೇಬ ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿಯನ್ನು ಮುತ್ತಿ ದಂಗೆ ಎದ್ದವರನ್ನು ಬಗ್ಗುಬಡಿದನು . ಕುಂಪಣಿ ಸರ್ಕಾರದ ದೌರ್ಜನ್ಯವನ್ನು ವಿರೋಧಿಸಿದ ಕಥಾನಕವೇ ಈ ಲಾವಣಿ
ಹಲಗಲಿ ಗ್ರಾಮ ಎಲ್ಲಿದೆ ?
ಹಲಗಲಿಯ ಬೇಡರ ಊರು , ಮುಧೋಳ ಸಂಸ್ಥಾನದಲ್ಲಿದ್ದು , ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ . ಅಂದು ಕಲಾದಗಿಯು ಜಿಲ್ಲೆಯ ಸ್ಥಾನ ಹೊಂದಿತ್ತು . ಇಲ್ಲಿಂದ ಉತ್ತರಕ್ಕೆ ಐದಾರು ಕಿಲೋಮೀಟರ್ ದೂರದಲ್ಲಿ ಹಲಗಲಿ ಇದೆ
ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ
halagali bedaru notes kseeb
ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು ?
ಕತ್ತಿ ಹಿಡಿದು ಹೋರಾಡುವ ಹಲಗಲಿ ಬಂಟರು ಇನ್ನು ಮುಂದೆ ಶಸ್ತ್ರವನ್ನು ಹಿಡಿಯಬಾರದು ಎಂದು ಇಂಗ್ಲೆಂಡಿನಿಂದ ಆದೇಶ ಬಂದಿತು . ವಿದೇಶದಿಂದ ಕುಂಪಣಿ ಸರಕಾರ ಹುಕುಮ ಕಳಿಸಿತು . ಎಲ್ಲ ಜನರಿಂದ ಆಯುಧಗಳನ್ನು ಕಸಿದುಕೊಳ್ಳಿರಿ ಎಂದು ಆದೇಶ ಹೊರಡಿಸಿತು .
ಹಲಗರಹಳ್ಳಿ , ಮುಧೋಳ ಸುತ್ತಮುತ್ತಲ ಜನರಾದ ಪೂಜೇರಿ ಹನುಮಾ , ಬ್ಯಾಡರ ಬಾಲ , ಜಡಗರಾಮ ಕೈಯಲ್ಲಿರುವ ಹತಾರಗಳನ್ನು ಕೊಡಬಾರದು ಎಂದು ನಾಲ್ಕೂ ಮಂದಿ ನಿರ್ಧರಿಸಿದರು . ಹತಾರ ಹೋದರೆ , ಜೀವವೇ ಹೋದಂತೆ , ಸತ್ತು ಹೋಗುವುದು ನಿಶ್ಚಿತ . ಹೋದ ಜೀವ ಮತ್ತೆ ಬಾರದು , ಬ್ಯಾಡರೆಲ್ಲ ಸೇರಿ ಒಳಗಿಂದೊಳಗೆ ಹೀಗೆ ವಚನ ಕೊಟ್ಟರು . ಆದುದರಿಂದ ಹಲಗಲಿಯ ಬೇಡರು ದಂಗೆ ಎದ್ದರು .
ಹಲಗಲಿಗೆ ದಂಡು ಬರಲು ಕಾರಣವೇನು ?
ಸಿಪಾಯಿಯು ಕಾರಕೂನನ ಕಪಾಳಕ್ಕೆ ಬಡಿದ ಸುದ್ದಿ , ಮುಂತಾದ ದುಃಖದ ಸುದ್ದಿ ಆಗಿಂದಾಗ್ಗೆ ಸಾಹೇಬನಿಗೆ ಹೋಯಿತು . ಆದೇಶ ಕೊಟ್ಟ ಸಾಹೇಬನೇ ಸಿಟ್ಟಿನಲ್ಲಿ ಮುಂಗೈ ಕಡಿದುಕೊಂಡ , ಇದನ್ನು ಕೇಳಿ ಹಲಗಲಿಗೆ ಕುದುರೆಯನ್ನೇರಿ ಕುಂಪಣಿ ಸರ್ಕಾರದ ಮಂದಿ ಬಂದರು .
ದಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು ?
ದಂಡು ಹಲಗಲಿಯ ಮೇಲೆ ದಾಳಿ ನಡೆಸಿ ರಕ್ತದ ಕೋಡಿ ಹರಿಸಿತು . ಕೊಡಲಿ , ಕೋರೆ , ಕೊಡಲಿ , ಕಬ್ಬಿಣ , ಮೊಸರು , ಬೆಣ್ಣಿ , ಹಾಲು , ಉಪ್ಪು , ಎಣ್ಣೆ , ಅರಿಸಿಣ , ಜೀರಗಿ , ಅಕ್ಕಿ , ಸಕ್ಕರೆ , ಬೆಲ್ಲಾ , ಗಂಗಳ , ಚೆರಗಿ , ಮಂಗಳ , ಸೂತ್ರ , ಬೀಸುವಕಲ್ಲು , ಎಲ್ಲಾ ಹಾಳಾಗಿ ಹೋದವು . ಬ್ರಿಟಿಷರು ಸಿಕ್ಕದ್ದು ತಗೊಂಡು ಊರಿಗೆ ಕೊಳ್ಳಿ ಇಟ್ಟರು . ಬೂದಿ ಮಾಡಿದರು . ಹಲಗಲಿ ಸುಟ್ಟು ಗುರ್ತು ಉಳಿಯಲಾರದಷ್ಟು ಹಾಳಾಗಿ ಹೋಯಿತು .
halagali bedaru notes kannada
ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯದಲ್ಲಿ ಉತ್ತರಿಸಿ .
ಹಲಗಲಿ ದಂಗೆಗೆ ಕಾರಣವೇನು ? ಸರಕಾರ ಅದನ್ನು ಹೇಗೆ ನಿಯಂತ್ರಿಸಿತು ?
ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಆಡಳಿತ ಸೂತ್ರ ಹಿಡಿದರು . 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತೀಯರ ಮೇಲೆ ನಿಶ್ಯಸ್ತ್ರೀಕರಣದ ಹುಕುಮನ್ನು ಹೊರಡಿಸಿದರು . ಈ ಶಾಸನದ ಪ್ರಕಾರ ಸರ್ಕಾರದ ಅನುಮತಿಯಿಲ್ಲದೆ . ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಹುಕುಮನ್ನು ವಿರೋಧಿಸಿ ಅಲ್ಲಲ್ಲಿ ದಂಗೆಗಳಾದವು .
ಹಲಗಲಿಯ ರಾಮ , ಬಾಲ , ಹನುಮ ಜಡಗ ಮೊದಲಾದ ವೀರರು ತಮ್ಮಲ್ಲಿರುವ ಆಯುಧಗಳನ್ನು ಕೊಡಲೊಪ್ಪದ ದಂಗೆ ಎಬ್ಬಿಸಿ ಹೆಬಲಕ್ ಎಂಬ ಅಧಿಕಾರಿಯನ್ನು ಕೊಲೆಗೈದರು . ಇದರಿಂದ ಕ್ರೋಧಗೊಂಡ ಕಾರಸಾಹೇಬ ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿಯನ್ನು ಮುತ್ತಿಗೆ ಹಾಕಿ ದಂಗೆ ಎದ್ದವರನ್ನು ಬಗ್ಗು ಬಡಿದನು . ಎಂಬುದಾಗಿತ್ತು .
ಹಲಗಲಿ ದಂಗೆಯ ಪರಿಣಾಮವೇನು ?
ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ನಿಶಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದರು . ಸ್ವಾತಂತ್ರ್ಯ ಪ್ರಿಯರಾಗಿದ್ದ ಹಲಗಲಿಯ ಬೇಡರು ಕಾಯಿದೆಯನ್ನು ವಿರೋಧಿಸಿ ಹುತಾತ್ಮರಾದರು . ಏನೂ ಉಳಿಯದ ಹಾಗೆ ಬೆನ್ನತ್ತಿ ಸಿಕ್ಕ ಸಿಕ್ಕವರನ್ನು ಕಡಿದರು . ನಡುವೆ ಕರುಣ ಇಲ್ಲದಂತೆ ಹಾಕ್ಕೊಂಡು ಹೊಡೆದರು . ಗಂಡು ಹಾರಿಸಿದರು .
‘ ಹೆಬಲಕ ‘ ಸಾಹೇಬ ಬಂದು ಬುದ್ಧಿಮಾತನ್ನು ಹೇಳುತ್ತಾನೆ . ಆ ಮಾತಿಗೆ ನಂಬಿಕೆ ಸಾಲದೆ ‘ ಹನುಮ ‘ ಜಡಗರು ಇವರು ವಿಶ್ವಾಸಘಾತುಕರು ಎಂದು ಹೇಳುತ್ತಾರೆ . ನೀವು ಮೋಸ ಮಾಡಿ ನಮ್ಮ ದೇಶವನ್ನು ಮುಂದೆ ಗೆಲ್ಲುತ್ತಾರೆ . ಕಾರ ಸಾಹೇಬನು ಊರನ್ನು ದೇಶವನ್ನು ಲೂಟಿ ಮಾಡುತ್ತಾನೆಂದು ಗುಂಡು ಹೊಡೆದು ಕೊಂದರು .
ಆಗ ಸಿಟ್ಟಿನಿಂದ ಗುಂಡಿನ ಮಳೆ ಸುರಿಸಿದರು . ಮುನ್ನೂರ ಮಂದಿ ಮುತ್ತಿಗೆ ಹಾಕಿದರು . ಭೀಮನು , ಬಾಲನು , ರಾಮನು , ಹತ್ತಿಪ್ಪತ್ತು ಹಾಗೂ ಕುದುರೆಗಳನ್ನು ಕೊಂದರು . ರಕ್ತದ ಕೋಡಿ ಹರಿಯಿತು . ಕೊಡಲಿ ಕೋರೆ , ಕೊಡಲಿ , ಕಬ್ಬಿಣ , ಮೊಸರು , ಬೆಣ್ಣೆ , ಹಾಲು , ಉಪ್ಪು , ಎಣ್ಣೆ , ಅರಿಸಿಣ , ಜೀರಗಿ , ಅಕ್ಕಿ , ಸಕ್ಕರೆ , ಬೆಲ್ಲಾ , ಗಂಗಳ , ಚೆರಗಿ , ಮಂಗಳ , ಸೂತ್ರ , ಬೀಸುವಕಲ್ಲು , ಮಂದಿ
ಎಲ್ಲಾ ಹಾಳಾಗಿ ಹೋದವು . ಬ್ರಿಟಿಷರು ಸಿಕ್ಕದ್ದು ತಗೊಂಡು ಊರಿಗೆ ಕೊಳ್ಳಿ ಇಟ್ಟರು . ಬೂದಿ ಮಾಡಿದರು . ಹಲಗಲಿ ಸುಟ್ಟು ಗುರ್ತು ಉಳಿಯಲಾರದಷ್ಟು ಹಾಳಾಗಿ ಹೋಯಿತು .
![ಹಲಗಲಿ ಬೇಡರು Question Answer | Halagali Bedaru Notes 10th Question Answer Free For Students](https://kaipidi.com/wp-content/uploads/2022/09/maxresdefault-2-1024x576.jpg)
ಸಂದರ್ಭಾನುಸಾರ ಸ್ವಾರಸ್ಯವನ್ನು ಬರೆಯಿರಿ . halagali bedaru notes sandarbha
“ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ” .
ಈ ವಾಕ್ಯವನ್ನು ಹಲಗಲಿ ಬೇಡರು ಎಂಬ ಲಾವಣಿಯಿಂದ ಆರಿಸಲಾಗಿದೆ . ಈ ಮಾತು ಕುಂಪಣಿ ಸರಕಾರ ಹೊರಡಿಸಿದ ಆದೇಶವಾಗಿದೆ . ಕತ್ತಿ ಹಿಡಿದು ಹೋರಾಡುವ ಹಲಗಲಿ ಬಂಟರು ಇನ್ನು ಮುಂದೆ ಶಸ್ತ್ರವನ್ನು ಹಿಡಿಯಬಾರದು ಎಂದು ಇಂಗ್ಲೆಂಡಿನಿಂದ ಆದೇಶ ಬಂದಿತು . ವಿದೇಶದಿಂದ ಕುಂಪಣಿ ಸರಕಾರ ಆದೇಶ ಕಳಿಸಿತು .
“ ಜೀವ ಸತ್ತು ಹೋಗುವದು ಗೊತ್ತ ”
ಈ ಮಾತನ್ನು ಹಲಗಲಿ ಬಂಟರು ಹೇಳಿದ್ದರೆ , ಕತ್ತಿ ಹಿಡಿದು ಹೋರಾಡುವ ಹಲಗಲಿ ಬಂಟರು ಇನ್ನು ಮುಂದೆ ಶಸ್ತ್ರವನ್ನು ಹಿಡಿಯಬಾರದು ಎಂದು ಇಂಗ್ಲೆಂಡಿಂದ ಆದೇಶ ಬಂದಿತು . ವಿದೇಶದಿಂದ ಕುಂಪಣಿ : ಸರಕಾರ ಹುಕುಮ ಕಳಿಸಿತು . ಎಲ್ಲ ಜನರಿಂದ ಆಯುಧಗಳನ್ನು ಕಸಿದುಕೊಳ್ಳಿರಿ ಎಂದು ಆದೇಶ ಹೊರಡಿಸಿತು .
ಹಲಗರಹಳ್ಳಿ , ಮುಧೋಳ ಸುತ್ತಮುತ್ತಲ ಜನರಾದ ಪೂಜೇರಿ ಹನುಮಾ , ಬ್ಯಾಡರ ಬಾಲ , ಜಡಗರಾಮ ಕೈಯಲ್ಲಿರುವ ಹತಾರಗಳನ್ನು ಕೊಡಬಾರದು ಎಂದು ನಾಲ್ಕೂ ಮಂದಿ ನಿರ್ಧರಿಸಿದರು . ಹತಾರ ಹೋದರೆ ಜೀವವೂ ಹೋದಂತೆ , ಸತ್ತುಹೋಗುವುದು ನಿಶ್ಚಿತ , ಹೋದ ಜೀವ ಮತ್ತೆ ಬಾರದು .
“ ಹೊಡೆದರೂ ಗುಂಡ ಕರುಣ ಇಲ್ಲದ್ದಂಗ ”
ಈ ವಾಕ್ಯವನ್ನು ಹಲಗಲಿ ಬೇಡರು ಎಂಬ ಲಾವಣಿಯಿಂದ ಅರಿಸಲಾಗಿದೆ . ಈ ಮಾತನ್ನು ಹಲಗಲಿ ಬಂಟರು ಹೇಳಿದ್ದಾರೆ . ಹೀಗೆ ದಂಡು ಕೂಡಲೆ ತಯಾರಾಗಿ ಹಲಗಲಿಗೆ ಬಂದಿತು . ಏನು ಉಳಿಯದ ಹಾಗೆ ಬೆನ್ನತ್ತಿ ಸಿಕ್ಕ ಸಿಕ್ಕವರನ್ನು ಕಡಿದರು . ನಡುವೆ ಕರುಣ ಇಲ್ಲದಂತೆ ಹಾಕ್ಕೊಂಡು ಹೊಡೆದರು . ಗಂಡು ಹಾರಿಸಿದರು .
“ ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು
ಈ ವಾಕ್ಯವನ್ನು ಹಲಗಲಿ ಬೇಡರು ಎಂಬ ಲಾವಣಿಯಿಂದ ಆರಿಸಲಾಗಿದೆ . ಈ ಮಾತನ್ನು ಲಾವಣಿಕಾರರು ಹೇಳಿದ್ದಾರೆ ದಂಗೆಯಲ್ಲಿ ರಕ್ತದ ಕೋಡಿ ಹರಿಯಿತು . ಕೊಡಲಿ , ಕೋರೆ , ಕೊಡಲಿ , ಕಬ್ಬಿಣ , ಮೊಸರು , ಬೆಣ್ಣೆ , ಹಾಲು , ಉಪ್ಪು , ಎಣ್ಣೆ , ಅರಿಸಿಣ , ಜೀರಗಿ , ಅಕ್ಕಿ , ಸಕ್ಕರೆ , ಬೆಲ್ಲಾ , ಗಂಗಳ , ಚರಗಿ , ಮಂಗಳಸೂತ್ರ , ಬೀಸುವಕಲ್ಲು , ಎಲ್ಲಾ ಹಾಳಾಗಿ ಹೋದವು . ಬ್ರಿಟಿಷರು ಸಿಕ್ಕದ್ದು ತಗೊಂಡು ಊರಿಗೆ ಕೊಳ್ಳಿ ಇಟ್ಟರು . ಬೂದಿ ಮಾಡಿದರು . ಹಲಗಲಿ ಸುಟ್ಟು ಗುರ್ತು ಉಳಿಯಲಾರದಷ್ಟು ಹಾಳಾಗಿ ಹೋಯಿತು .
ಕೊಟ್ಟಿರುವ ಪದಗಳಲ್ಲಿ ಸೂಕ್ತವಾದುದನ್ನು ಬಿಟ್ಟ ಸ್ಥಳದಲ್ಲಿ ಬರೆಯಿರಿ .
ಹಲಗಲಿ ಬಂಟರ ಕದನ ವೀರರಸ ಪ್ರಧಾನವಾದ ……
[ ಕತೆ , ಗಾದೆ , ಒಗಟು , ಲಾವಣಿ ]
ಲಾವಣಿ
ಹಲಗಲಿಯು ಈಗ ಈ ಜಿಲ್ಲೆಗೆ ಸೇರಿದೆ……
[ ಬಾಗಲಕೋಟೆ , ಕಲಾದಗಿ , ಮುಧೋಳ , ಹೆಬಲಕ ]
ಕಲಾದಗಿ
ಕುಂಪಣಿ ಸರ್ಕಾರ ಜಾರಿಗೆ ತಂದ ಶಾಸನ…… [ ಯುದ್ಧಶಾಸನ , ನಿಶ್ಯಸ್ತ್ರೀಕರಣ , ಕಬಲಶಾಸನ.ಕುರ್ತ ಕೋಟಿ ಶಾಸನ]
ನಿಶಸ್ವೀಕರಣ
ಲಾವಣಿಕಾರ ಅಂಕಿತಗೊಳಿಸಿರುವ ದೈವ…..
[ ಕಲ್ಮೇಶ , ಹನುಮ , ರಾಮ , ಲಕ್ಷ್ಮೀಶ ]
ಕಲ್ಮೇಶ
‘ ವಿಲಾತಿ ‘ ಪದದ ಸರಿಯಾದ ಪದ……..
[ ಆಯುಧ , ವಿಹಾರ , ವಿಲಂತಿ , ವಿಲಾಯಿತಿ ]
ವಿಲಾಯಿತಿ
ಭಾಷಾ ಚಟುವಟಿಕೆ
ಕೊಟ್ಟಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ .
ಮುಂಗೈ – ಕೈಯ + ಮುಂದು = ಅಂಶಿ ಸಮಾಸ
ನಡುರಾತ್ರಿ – ರಾತ್ರಿಯ + ನಡು = ಅಂಶಿ ಸಮಾಸ ಹನುಮಭೀಮರಾಮ – ಹನುಮನೂ + ಭೀಮನೂ + ರಾಮನೂ = ದ್ವಂಧ್ವಸಮಾ
ಮೋಸಮಾಡು ಮೋಸವನ್ನು + ಮಾಡು = ಕ್ರಿಯಾಸಮಾಸ
ಕೊಟ್ಟಿರುವ ಗ್ರಾಮ್ಯ ಪದಗಳಿಗೆ ಗ್ರಂಥಸ್ಥ ರೂಪ ಬರೆಯಿರಿ ,
ಹೀಂಗ – ಹೀಗೆ
ಮ್ಯಾಗ – ಮೇಲೆ
ಕಳುವಾರೆ – ಕದ್ದಿದ್ದಾರೆ
ಇಲ್ಲದ್ದಂಗ ಇಲ್ಲದ ಹಾಗೆ
ಇಸವಾಸ -ವಿಶ್ವಾಸ
ಸಕ್ಕಾರಿ – ಸರಕಾರಿ .
![ಹಲಗಲಿ ಬೇಡರು Question Answer | Halagali Bedaru Notes 10th Question Answer Free For Students](https://kaipidi.com/wp-content/uploads/2022/09/maxresdefault-1-1-1024x576.jpg)
ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ
“ ಒಳಗಿನ ಮಂದಿ ಗುಂಡು ಹೊಡಿಸಿದರೋ ಮುಂಗಾರಿ ಸಿಡಿಲ ಸಿಡಿದ್ದಾಂಗ
- ಉಪಮೇಯ : ಒಳಗಿನ ಮಂದಿ ಗುಂಡು ಹೊಡಿಸಿದರೂ
- ಉಪಮಾನ : ಮುಂಗಾರಿ ಸಿಡಿಲ ಸಿಡಿಸುವುದು
- ಸಮನಧರ್ಮ: ಸ್ಪಷ್ಟವಾಗಿಲ್ಲ
- ಅಲಂಕಾರ: ಉಪಮಾಲಂಕರ
ಸಮನ್ವಯ : ಒಳಗಿನ ಮಂದಿ ಗುಂಡು ಹೊಡಿಸಿದರೊ ಎಂಬ ಉಪಮೇಯವನ್ನು ಮುಂಗಾರಿ , ಸಿಡಿಲ ಸಿಡಿಸುವುದು ಎಂಬ ಹೋಲಿಸಿರುವುದರಿಂದ ಇದು ಉಪಮಾಲಂಕಾರ .
ಸಿಡಿಲ ಸಿಡಿದ್ದಾಂಗ ಗುಂಡು ಸುರಿದಾವ
- ಉಪಮೇಯ : ಗುಂಡು ಸುರಿದಾವ ಉಪಮಾನ : ಸಿಡಿಲಂತೆ ಸಿಡಿಯುವುದು
- ಉಪಮಾವಾಚಕ : ಹಂಗ
- ಸಮನಧರ್ಮ : ಸ್ಪಷ್ಟವಾಗಿಲ್ಲ
- ಅಲಂಕಾರ : ಉಪಮಾಲಂಕಾರ
ಸಮನ್ವಯ : ಗುಂಡು ಸುರಿದಾವ ಎಂಬ ಉಪಮೇಯವನ್ನು ಸಿಡಿಲಂತೆ ಸಿಡಿಯುವುದು ಎಂಬ ಉಪಮಾನದೊಂದಿಗೆ ಹೋಲಿಸಿರುವುದರಿಂದ ಇದು ಉಪಮಾಲಂಕಾರ ,
ಸ್ವಂತ ವಾಕ್ಯದಲ್ಲಿ ಬಳಸಿ .
ಒಳಗಿಂದೊಳಗೆ
ಬ್ರಿಟಿಷರು ಭಾರತೀಯರನ್ನು ಸೋಲಿಸಲು ಒಳಗಿಂದೊಳಗೇ ಕುತಂತ್ರ ಮಾಡುತ್ತಿದ್ದರು .
ಸುದ್ದಿ
ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂಬ ಸುದ್ದಿಯು ಎಲ್ಲ ಕನ್ನಡಿಗರಿಗೆ ಆನಂದ ತಂದಿತು .
ಮಂದಿ
ಜಾತ್ರೆಯನ್ನು ನೋಡಲು ಎಲ್ಲ ಕಡೆಯ ಮಂದಿ ಬಂದಿರುತ್ತಾರೆ .
halagali bedaru notes 10 class kannada
ಕಸರತ್ತು
ಬ್ರಿಟಿಷರು ಎಷ್ಟೇ ಕಸರತ್ತು ಮಾಡಿದರೂ ಭಾರತೀಯರ ದೇಶಭಕ್ತಿಯನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ .
ದೇಶ್ಯ – ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ
ದೇಶ್ಯ ಪದಗಳು
ಹೊತ್ತು , ಬಂಟರು , ಹುಕುಮ , ಮುಂಗೈ , ಮುಂಗಾರು ,
ಅನ್ಯದೇಶ್ಯ ಪದಗಳು
ಹತಾರ , ಮಸಲತ್ತ , ಸಾಹೇಬ , ಕಾರಕೂನ , ಸಿಪಾಯಿ , ಕಬುಲ
halagali bedaru notes kseeb solutions
ಹೆಚ್ಚುವರಿ ಪ್ರಶೋತ್ತರಗಳು
ಬಿಟ್ಟ ಸ್ಥಳ ತುಂಬಿರಿ .
ಕಾಗದ ಬರೆದು ಕಳುವ್ಯಾರೆ ಬೇಗ , ದಂಡು ಬರಲೆಂತ ಹೀಂಗ ……. ಬಂದಿತೊ ತಯಾರಾಗಿ ಜಲದ ಮಾಡಿ ಹಲಗಲಿಗಿ .
ದಂಡ
ಜಡಗ ಹೇಳುತಾನೂ ಹೊಡೆಯಿರಿ ಇವರ ದೂರ ಘಾತಕರಾ ಇಸವಾಸಘಾತಕ ಮಾಡಿದರಿವರ , ……… ನಮಗ ಪಿತೂರಾ
ನಂಬಿಗಿಲ್ಲ
ಕೊಡಲಿ , ಕೋರೆ ಕುಡ ಕಬ್ಬಿಣ ಮೊಸರು ಬೆಣ್ಣಿ ಹಾಲಾ ಉಪ್ಪು ಎಣ್ಣೆ ….. ಜೀರಗಿ ಅಕ್ಕಿಸಕ್ಕಾರಿ ಬೆಲ್ಲಾ .
ಅರಿಸಿಣ
ಕ್ರೋಧಗೊಂಡ ಕಾರಸಾಹೇಬ ಹಲಗಲಿಯನ್ನು ಮುತ್ತಿ ದಂಗೆ ಎದ್ದವರನ್ನು ಬಗ್ಗು ಬಡಿದನು . ಯಿಂದ ದಂಡು ಕಳುಹಿಸಿ
ಕಲಾದಗಿ
ವೀರತನ , ಸಾಹಸವನ್ನು ವರ್ಣಿಸುವುದರಿಂದ ಲಾವಣಿ ಎಂದರೆ… ಎಂದು ಕರೆಯುವುದು ವಾಡಿಕೆ .
ವೀರಗೀತೆ
ಕತ್ತಿ ಹಿಡಿದು ಹೋರಾಡುವ ಹಲಗಲಿ ಬಂಟರು ಇನ್ನು ಮುಂದೆ ಶಸ್ತ್ರವನ್ನು ಹಿಡಿಯಬಾರದು ಎಂದು ………ನಿಂದ ಆದೇಶ ಬಂಡಿತು .
ಇಂಗ್ಲೆಂಡ್
halagali bedaru notes kannada lesson
1857 ರ ಪ್ರಥಮ . . .ಸಂಗ್ರಾಮದ ನಂತರ ಭಾರತೀಯರ ಮೇಲೆ ನಿಶ್ಯಸ್ತ್ರೀಕರಣದ ಹುಕುಮನ್ನು ಹೊರಡಿಸಿದರು
ಸ್ವಾತಂತ್ರ್ಯ
ಗದ್ಯದ ಹೊಳಹನ್ನು , …… ಸತ್ವವನ್ನು ಹೊಂದಿರುವ ಲಾವಣಿಗಳು ಧ್ವನಿ ರಮ್ಯತೆಯನ್ನು ಅರ್ಥಸೌಂದರ್ಯವನ್ನು ಹೊಂದಿವೆ .
ಭಾವಗೀತದ
….. ಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಆಡಳಿತ ಸೂತ್ರ ಹಿಡಿದರು
ವ್ಯಾಪಾರ
ಲಾವಣಿಗಳು……. ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ
ಜನಪದ
ಒಳಗಿಂದೊಳಗ ವಚನ ಕೊಟ್ಟರೆ ಬ್ಯಾಡರೆಲ್ಲ ಕಲ್ಲ . ಕಾರಕೂನನ ……ಬಡಿದರ ಸಿಪಾಯಿ ನೆಲಕಬಿತ್ತ .
ಕಪಾಳಕ
ಸಿಟ್ಟೆಲಿ ಮುಂಗೈ ಕಟ್ಟನೆ ಕಡಕೊಂಡ , ಹುಕುಮ ಕೊಟ್ಟ ಸಾಹೇಬಾಗ……… ಮಂದಿ ಕೂಡಿ ಮುಟ್ಟಿತೊ ಹಲಗಲಿ ತಳದ ಮ್ಯಾಗ
ಕುದರಿ
halagali bedaru notes in karnataka kannada
ಏಕ ಘಟನೆಯನ್ನಾಧರಿಸಿದ್ದು ಕಥನಾತ್ಮಕವಾಗಿರುವ ಲಾವಣಿಗಳು … …ರೂಪದಲ್ಲಿ ಕಟ್ಟಿದ ಕತೆ
ಹಾಡಿನ
ಹಲಗಲಿಯು ಬೇಡರ ಊರು , ಮುಧೋಳ ಸಂಸ್ಥಾನದಲ್ಲಿದ್ದು , ಇಂದಿನ……. ಜಿಲ್ಲೆಗೆ ಸೇರಿದ
ಬಾಗಲಕೋಟೆ
…….ಕೈ ಜನಪದ ಸಾಹಿತ್ಯವೇ ಮೂಲ ಪ್ರೇರಣೆ
ಶಿಷ್ಟಸಾಹಿತ್ಯ
FAQ
ಕವಿ ಪರಿಚಯ :- ಹಲಗಲಿ ಬೇಡರು ಪದ್ಯವು ಒಂದು ……ಯಾಗಿದೆ .
ಲಾವಣಿ
ಹಲಗಲಿ ಗ್ರಾಮ ಎಲ್ಲಿದೆ ?
ಹಲಗಲಿಯ ಬೇಡರ ಊರು , ಮುಧೋಳ ಸಂಸ್ಥಾನದಲ್ಲಿದ್ದು , ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ . ಅಂದು ಕಲಾದಗಿಯು ಜಿಲ್ಲೆಯ ಸ್ಥಾನ ಹೊಂದಿತ್ತು . ಇಲ್ಲಿಂದ ಉತ್ತರಕ್ಕೆ ಐದಾರು ಕಿಲೋಮೀಟರ್ ದೂರದಲ್ಲಿ ಹಲಗಲಿ ಇದೆ
halagali bedaru notes in important questions
SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು
- ಹಕ್ಕಿ ಹಾರುತಿದೆ ನೋಡಿದಿರಾ
- ಸಂಕಲ್ಪ ಗೀತೆ ನೋಟ್ಸ್
- ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು
- ಎದೆಗೆ ಬಿದ್ದ ಅಕ್ಷರ ಪಾಠದ ಪ್ರಶ್ನೋತ್ತರಗಳು
- ಭಾಗ್ಯಶಿಲ್ಪಿಗಳು ಪಾಠದ ಪ್ರಶ್ನೋತ್ತರಗಳು
- ಶಬರಿ ಪಾಠದ ಕವಿ ಪರಿಚಯ
- ಶಬರಿ ಪಾಠದ ಪ್ರಶ್ನೆ ಮತ್ತು ಉತ್ತರ
- ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು