Sankalpa Geethe Question Answer , 10ನೇ ತರಗತಿ ಸಂಕಲ್ಪ ಗೀತೆ ಕನ್ನಡ ನೋಟ್ಸ್, Sankalpa Geete Questions and Answers, Summary, Notes. ಸಂಕಲ್ಪ ಗೀತೆ Notes KSEEB, ಸಂಕಲ್ಪಗೀತೆ ಪದ್ಯದ ಪ್ರಶ್ನೋತ್ತರಗಳು
Sankalpa Geethe Question Answer Notes 10th Standard
ಈ ಲೇಖನದಲ್ಲಿ 10ನೇ ತರಗತಿ ಸಂಕಲ್ಪ ಗೀತೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದು ಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.
ಕವಿ ಪರಿಚಯ
![ಸಂಕಲ್ಪಗೀತೆ ಪದ್ಯದ ಪ್ರಶ್ನೋತ್ತರಗಳು । Sankalpa Geethe Question Answer 10th Class Free](https://kaipidi.com/wp-content/uploads/2022/09/download-6.jpg)
ಕವಿ ಪರಿಚಯ : ಡಾ || ಜಿ . ಎಸ್ . ಶಿವರುದ್ರಪ್ಪ
- ಪೂರ್ಣಹೆಸರು : ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ : ಕೃತಿಗಳು
- ಕಾಲ:1926- 2013
- ಸ್ಥಳ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
- ಕೃತಿಗಳು: ಸಾಮಗಾನ , ಚೆಲುವು – ಒಲವು , ದೇವಶಿಲ್ಪಿ , ದೀಪದ ಹೆಜ್ಜೆ , ಅನಾವರಣ , ವಿಮರ್ಶೆಯ ಪೂರ್ವಪಶ್ಚಿಮ , ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು , ಸೌಂದರ್ಯ ಸಮೀಕ್ಷೆ , ಕಾವ್ಯಾರ್ಥ ಚಿಂತನ , ಎದೆ ತುಂಬಿ ಹಾಡಿದೆನು .
ವಿಶೇಷ :
ಮೈಸೂರು , ಉಸ್ಮಾನಿಯಾ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ .
- ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದಾರೆ .
- ಆಧುನಿಕ ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು .
ಪ್ರಶಸ್ತಿ , ಗೌರವ
- ‘ ಕಾವ್ಯಾರ್ಥ ಚಿಂತನ ‘ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .
- ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ‘ ನಾಡೋಜ ‘ ಪುರಸ್ಕಾರ
- ಬೆಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳಿಂದ ಗೌರವ ಡಿ.ಲಿಟ್ ಪದವಿ .
- ಕರ್ನಾಟಕ ಸರ್ಕಾರದಿಂದ ‘ ರಾಷ್ಟ್ರಕವಿ ‘ ಅಭಿದಾನ
- 1992 ರಲ್ಲಿ ದಾವಣಗೆರೆಯಲ್ಲಿ ನಡೆದ 61 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು .
ಆಕರ ಗ್ರಂಥ
ಎದೆ ತುಂಬಿ ಹಾಡಿದೆನು ‘ ( ಕವನ ಸಂಕಲನ )
ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .
Sankalpa Geethe Question Answer
ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು ?
ಸಂಸಾರ ಎಂಬ ಸಾಗರದಲ್ಲಿ ಅತಂತ್ರವಾಗಿರುವ ನಮ್ಮ ಜೀವನವನ್ನು ಎಚ್ಚರಿಕೆಯಿಂದ ಮುನ್ನಡೆಸಬೇಕು .
ನದೀಜಲಗಳು ಏನಾಗಿವೆ ?
ನದೀ ನೀರು ಕಲುಷಿತಗೊಂಡಿದೆ .
ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು ?
ಕಲುಷಿತಗೊಂಡ ನದೀ ನೀರಿಗೆ ಮುಂಗಾರಿನ ಮಳೆಯಾಗಬೇಕು .
![ಸಂಕಲ್ಪಗೀತೆ ಪದ್ಯದ ಪ್ರಶ್ನೋತ್ತರಗಳು । Sankalpa Geethe Question Answer 10th Class Free](https://kaipidi.com/wp-content/uploads/2022/09/images-5.jpg)
Sankalpa Geethe Question Answer pdf
ಕಾಡುಮೇಡುಗಳ ಸ್ಥಿತಿ ಹೇಗಿದೆ ?
ಮರಗಿಡಗಳನ್ನು ಕಡಿದು ಕಾಡುಮೇಡುಗಳನ್ನು ಬರಡಾಗಿಸಲಾಗುತ್ತಿದೆ .
ಯಾವ ಎಚ್ಚರದೊಳು ಬದುಕಬೇಕಿದೆ ?
ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದಲ್ಲಿ ಬದುಕಬೇಕಾಗಿದೆ .
ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ .
ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ ?
ನಮ್ಮ ಸುತ್ತ ಮುತ್ತಲೂ ಕವಿದಿರುವ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುವುದಕ್ಕಾಗಿ , ಅಂಧಕಾರವನ್ನು ಹೋಗಲಾಡಿಸುವುದಕ್ಕಾಗಿ ಪ್ರೀತಿಯ ಹಣತೆಯನ್ನು ಜ್ಞಾನದ
ಜ್ಯೋತಿಯನ್ನು ಹಟ್ಟೋಣ , ಬಿರುಗಾಳಿಯಿಂದಾಗಿ ಹೊಯ್ದಾಡುತ್ತಿರುವ , ಹಡಗನ್ನು ಎಚ್ಚರದಿಂದ ಮುನ್ನಡೆಸೋಣ , ಸಂಸಾರ ಎಂಬ ಸಾಗರದಲ್ಲಿ ಅತಂತ್ರವಾಗಿರುವ ನಮ್ಮ ಜೀವನವನ್ನು ಎಚ್ಚರಿಕೆಯಿಂದ ನಡೆಸೋಣ . ಹೆಜ್ಜೆ ಹೆಜ್ಜೆಗೂ ಅನೇಕ ಸಮಸ್ಯೆಗಳು ನಮಗೆ ಸವಾಲಾಗಿ ನಿಲ್ಲುತ್ತವೆ . ಎದೆಗುಂದದೆ ಮುನ್ನಡೆಸಬೇಕಿದೆ .
ಕಾಡುಗಳಿಗೆ ಹೇಗೆ ಮುಟ್ಟಬೇಕಿದೆ ?
ಪರಿಸರವು ನಿರಂತರವಾಗಿ ಮಲಿನಗೊಳ್ಳುತ್ತಿದೆ . ಸಮಾಜವೂ ಭ್ರಷ್ಟವಾಗುತ್ತಿದೆ . ನದೀ ನೀರು ಕಲುಷಿತಗೊಂಡು ಜಲಚರ ಜೀವಿಗಳಿಗೆ ಮಾರಕವಾಗುತ್ತಿದೆ , ಅಂಥ ಮಲಿನವಾದ ನದಿಯನ್ನು ಶುದ್ದೀಕರಿಸುವುದಕ್ಕಾಗಿ ನಾವು ಮುಂಗಾರಿನ ಮಳೆಯಾಗೋಣ . ಮರಗಿಡಗಳನ್ನು ಕಡಿದು ಕಾಡುಮೇಡುಗಳನ್ನು ಬರಡಾಗಿಸಲಾಗುತ್ತಿದೆ . ಅಲ್ಲಿ ನಾವು ವಸಂತ ಕಾಲದಲ್ಲಿರುವಂತೆ ಸಮೃದ್ಧವಾದ ಪರಿಸರವನ್ನು ನಿರ್ಮಾಣ ಮಾಡಬೇಕಾಗಿದೆ .
ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ ?
ಕಟ್ಟುವುದು ಕಠಿಣ ಕೆಡಹುವುದು ಸುಲಭ . ಸಮಾಜದಲ್ಲಿ ಅನೇಕರು ಅಧಃ ಪತನಕ್ಕೆ ಹೋಗುತ್ತಿದ್ದಾರೆ . ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ . ಮಾನಸಿಕವಾಗಿ ಕುಗ್ಗುತ್ತಿದ್ದಾರೆ . ಭಯಭೀತರಾಗಿದ್ದಾರೆ . ಅಂಥವರ ಬಾಳಿನಲ್ಲಿ ಭರವಸೆಗಳನ್ನು ಮೂಡಿಸೋಣ , ಆತ್ಮವಿಶ್ವಾಸವನ್ನು ಹೆಚ್ಚಿಸೋಣ , ಧೈರ್ಯವನ್ನು ತುಂಬೋಣ .
ಸಮಾಜದ ನವನಿರ್ಮಾಣಕ್ಕೆ ಪಣ ತೊಡೋಣ . ಮನುಷ್ಯರಲ್ಲಿ ವೈಮನಸ್ಸೆಂಬ ಅಡ್ಡಗೋಡೆ ಇದೆ , ಅನುಮಾನವೆಂಬ ಕಂದಕವಿದೆ , ಪರಸ್ಪರರನ್ನು ದ್ವೇಷಿಸುವ ದುರ್ಗಣ ಬೆಳೆಯುತ್ತಿದೆ . ಜಾತಿ , ಮತ , ಧರ್ಮಗಳ ಭೇದ ಭಾವ ಉಂಟಾಗಿದೆ . ಇಂಥ ಮನುಷ್ಯರ ನಡುವೆ ಸ್ನೇಹ , ಪ್ರೀತಿ , ನಂಬಿಕೆ , ವಿಶ್ವಾಸ , ಆತ್ಮಸ್ಥೆರ್ಯ , ಧೈರ್ಯ ಮುಂತಾದವುಗಳ ಸೇತುವೆಯನ್ನು ನಿರ್ಮಿಸಬೇಕಾಗಿದೆ
Sankalpa Geethe Question Answer 10th kannada
ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು ?
ಪ್ರತಿಯೊಂದು ಮತವೂ ಅಂದರೆ ಅಭಿಪ್ರಾಯವು ಬೇರೆಯದೇ ಆದ ಮಾರ್ಗ , ದಾರಿ ಎಂಬುದನ್ನು ಅರಿಯಬೇಕಾಗಿದೆ , ಉಡುಗೆ , ತೊಡುಗೆ ಆಚಾರ – ವಿಚಾರ , ಆಹಾರ – ವಿಹಾರ , ಜಾತಿಮತ , ವೇಶ , ಭಾಷೆ ಬೇರೆಯಾದರೂ ಭಾವನೆ ಒಂದೇ ಎಂಬ ವಿಚಾರವನ್ನು ಬಿತ್ತಿ ಬದುಕಬೇಕಾಗಿದೆ .
ಅನುಮಾನ , ಭಯ , ಸಂಶಯ ಮುಂತಾದವುಗಳಿಂದ ಮಂಕಾಗಿರುವ , ಧೈರ್ಯಗುಂದಿರುವ ಕಣ್ಣಿನಲ್ಲಿ ನವ ಉತ್ಸಾಹವನ್ನು ಹೊಸ ಆದರ್ಶಗಳನ್ನು , ನೂತನ ಯೋಜನೆಗಳನ್ನು ಬಿತ್ತೋಣ . ಆ ಮೂಲಕ ಸದೃಢವಾದ ಸಮೃದ್ಧವಾದ ಸಮಾಜವನ್ನು ಕಟ್ಟಬೇಕಾಗಿದೆ . ಹೀಗೆ ನಾಳಿನ ಕನಸನ್ನು ಬಿತ್ತಬೇಕಾಗಿದೆ .
ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯ ?
ರಾಷ್ಟ್ರಕವಿಗಳಾಗಿದ್ದ ಡಾ | ಜಿ.ಎಸ್ . ಶಿವರುದ್ರಪ್ಪನವರು ಸಂಕಲ್ಪದ ಮಹತ್ವವನ್ನು ತಿಳಿಸಿದ್ದಾರೆ . ನಾವು ಜೀವನದಲ್ಲಿ ಯಾವಾಗಲೂ ಧನಾತ್ಮಕ ಭಾವನೆಯನ್ನು ರೂಢಿಸಿಕೊಳ್ಳಬೇಕು . ದೃಢ ಸಂಕಲ್ಪವನ್ನು ಹೊಂದಿರಬೇಕು .
ಯಾವುದೇ ರೀತಿಯ ಸವಾಲುಗಳು ನಮ್ಮ ಜೀವನದಲ್ಲಿ ಎದುರಾದರೂ ಆತ್ಮವಿಶ್ವಾಸದ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾಗಬೇಕು . ಆಗ ನಮಗೆ ಯಶಸ್ಸು ಲಭಿಸುತ್ತದೆ . ಭೇದಭಾವಗಳನ್ನು ಹೋಗಲಾಡಿಸಿ ಏಕತೆಯಿಂದ ಪ್ರಯತ್ನ ಶೀಲರಾಗಬೇಕು . ಆಗ ನಮ್ಮ ಬಲ , ಶಕ್ತಿ , ವೃದ್ಧಿಸುತ್ತದೆ . ವರ್ಧಿಸುತ್ತದೆ . ಈ ಸಮಾಜವು ಭಯ ಮತ್ತು ಅನುಮಾನಗಳಿಂದ ಆವರಿಸಲ್ಪಟ್ಟಿದೆ .
ಇಂಥ ಸಮಾಜವನ್ನು ದೃಢನಿಷ್ಠೆಯಿಂದ ಸದೃಢಗೊಳಿಸಬೇಕಾಗಿದೆ . ಸ್ವಾಸ್ಥ್ಯದ ನೆಲೆಯಾಗಿಸುವ ಹಣತೆಯನ್ನು ಹಚ್ಚಿ ಅಜ್ಞಾನವೆಂಬ ಕತ್ತಲೆಯನ್ನು ದೂರವಾಗಿಸೋಣ ಎಂದು ಡಾ || ಜಿ.ಎಸ್ . ಶಿವರುದ್ರಪ್ಪರವರು ತಿಳಿಸಿದ್ದಾರೆ .
ಸಂಕಲ್ಪ ಮತ್ತು ಅನುಷ್ಠಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ .
ನಮ್ಮ ಸುತ್ತ ಮುತ್ತಲೂ ಕವಿದಿರುವ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುವುದಕ್ಕಾಗಿ , ಅಂಧಕಾರವನ್ನು ಹೋಗಲಾಡಿಸುವುದಕ್ಕಾಗಿ ಪ್ರೀತಿಯ ಹಣತೆಯನ್ನು ಜ್ಞಾನದ ಜ್ಯೋತಿಯನ್ನು ಹಚ್ಚಣ , ಬಿರುಗಾಳಿಯಿಂದಾಗಿ ಹೊಯ್ದಾಡುತ್ತಿರುವ , ಹಡಗನ್ನು ಎಚ್ಚರದಿಂದ ಮುನ್ನಡೆಸೋಣ . ಪರಿಸರವು ನಿರಂತರವಾಗಿ ಮಲಿನಗೊಳ್ಳುತ್ತಿದೆ .
ಸಮಾಜವೂ ಭ್ರಷ್ಟವಾಗುತ್ತಿದೆ . ನದೀ ನೀರು ಕಲುಷಿತಗೊಂಡು ಜಲಚರ ಜೀವಿಗಳಿಗೆ ಮಾರಕವಾಗುತ್ತಿದೆ . ಅಂಥ ಮಲಿನವಾದ ನದಿಯನ್ನು ಶುದ್ದೀಕರಿಸುವುದಕ್ಕಾಗಿ ನಾವು ಮುಂಗಾರಿನ ಮಳೆಯಾಗೋಣ . ಕಟ್ಟುವುದು ಕಠಿಣ ಕೆಡಹುವುದು ಸುಲಭ , ಸಮಾಜದಲ್ಲಿ ಅನೇಕರು ಅಧಃಪತನಕ್ಕೆ ಹೋಗುತ್ತಿದ್ದಾರೆ . ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ . ಮಾನಸಿಕವಾಗಿ ಕುಗ್ಗುತ್ತಿದ್ದಾರೆ .
ಭಯಭೀತರಾಗಿದ್ದಾರೆ . ಅಂಥವರ ಬಾಳಿನಲ್ಲಿ ಭರವಸೆಗಳನ್ನು ಮೂಡಿಸೋಣ , ಪ್ರತಿಯೊಂದು ಮತವೂ ಅಂದರೆ ಅಭಿಪ್ರಾಯವು ಬೇರೆಯದೇ ಆದ ಮಾರ್ಗ , ದಾರಿ ಎಂಬುದನ್ನು ಅರಿಯಬೇಕಾಗಿದೆ , ಉಡುಗೆ , ತೊಡುಗೆ ಆಚಾರ – ವಿಚಾರ , ಆಹಾರ – ವಿಹಾರ , ಜಾತಿ – ಮತ , ವೇಶ – ಭಾಷೆ ಬೇರೆಯಾದರೂ ಭಾವನೆ ಒಂದೇ ಎಂಬ ವಿಚಾರವನ್ನು ಬಿತ್ತಿ ಬದುಕಬೇಕಾಗಿದೆ . ಹೀಗೆ ಕವಿ ಶಿವರುದ್ರಪ್ಪನವರು ಸಂಕಲ್ಪ ಮತ್ತು ಅನುಷ್ಠಾನದ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ .
Sankalpa Geethe Question Answer summary
ಸಂದರ್ಭಾನುಸಾರ ಸ್ವಾರಸ್ಯವನ್ನು ಬರೆಯಿರಿ .
“ ಪ್ರೀತಿಯ ಹಣತೆಯ ಹಟ್ಟೋಣ . ”
ಈ ವಾಕ್ಯವನ್ನು ಕವಿ ಡಾ || ಜಿ.ಎಸ್ . ಶಿವರುದ್ರಪ್ಪನವರು ರಚಿಸಿರುವ ಸಂಕಲ್ಪಗೀತೆ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಆಕರಗ್ರಂಥ : ಜಿ.ಎಸ್ . ಶಿವರುದ್ರಪ್ಪ ವಿರಚಿತ ‘ ಎದೆ ತುಂಬಿ ಹಾಡಿದೆನು ‘ ಕವನ ಸಂಕಲನ . ಈ ಮಾತನ್ನು ಕವಿ ಹೇಳಿದ್ದಾರೆ . ನಮ್ಮ ಸುತ್ತ ಮುತ್ತಲೂ ಕವಿದಿರುವ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುವುದಕ್ಕಾಗಿ , ಅಂಧಕಾರವನ್ನು ಹೋಗಲಾಡಿಸುವುದಕ್ಕಾಗಿ ಪ್ರೀತಿಯ ಹಣತೆಯನ್ನು ಜ್ಞಾನದ ಜ್ಯೋತಿಯನ್ನು ಹಟ್ಟೋಣ ಎಂದಿದ್ದಾರೆ .
“ ಮುಂಗಾರಿನ ಮಳೆಯಾಗೋಣ . ”
ಈ ವಾಕ್ಯವನ್ನು ಕವಿ ಡಾ || ಜಿ.ಎಸ್ . ಶಿವರುದ್ರಪ್ಪನವರು ರಚಿಸಿರುವ ಸಂಕಲ್ಪಗೀತೆ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಆಕರಗ್ರಂಥ : ಡಾ || ಜಿ.ಎಸ್ . ಶಿವರುದ್ರಪ್ಪ ವಿರಚಿತ ‘ ಎದೆ ತುಂಬಿ ಹಾಡಿದೆನು ‘ ಕವನ ಸಂಕಲನ . ಈ ಮಾತನ್ನು ಕವಿ ಹೇಳಿದ್ದಾರೆ . ಪರಿಸರವು ನಿರಂತರವಾಗಿ ಮಲಿನಗೊಳ್ಳುತ್ತಿದೆ . ಸಮಾಜವೂ ಭ್ರಷ್ಟವಾಗುತ್ತಿದೆ .
ನದಿನೀರು ಕಲುಷಿತಗೊಂಡು ಜಲಚರ ಜೀವಿಗಳಿಗೆ ಮಾರಕವಾಗುತ್ತಿದೆ . ಅಂಥ ಮಲಿನವಾದ ನದಿಯನ್ನು ಶುದ್ದೀಕರಿಸುವುದಕ್ಕಾಗಿ ನಾವು ಮುಂಗಾರಿನ ಮಳೆಯಾಗೋಣ ಎಂದಿದ್ದಾರೆ .
“ ಹೊಸ ಭರವಸೆಗಳ ಕಟ್ಟೋಣ . ”
ಈ ಕ್ಯವನ್ನು ಕವಿ ಡಾ || ಜಿ.ಎಸ್ . ಶಿವರುದ್ರಪ್ಪನವರು ರಚಿಸಿರುವ ಸಂಕಲ್ಪಗೀತೆ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಆಕರಗ್ರಂಥ : ಜಿ.ಎಸ್ . ಶಿವರುದ್ರಪ್ಪ ವಿರಚಿತ ‘ ಎದೆ ತುಂಬಿ ಹಾಡಿದೆನು ‘ ಕವನ ಸಂಕಲನ . ಈ ಮಾತನ್ನು ಕವಿ ಹೇಳಿದ್ದಾರೆ . ಸಮಾಜದಲ್ಲಿ ಅನೇಕರು ಅಧಃಪತನಕ್ಕೆ ಹೋಗುತ್ತಿದ್ದಾರೆ .
ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ . ಮಾನಸಿಕವಾಗಿ ಕುಗ್ಗುತ್ತಿದ್ದಾರೆ . ಭಯಭೀತರಾಗಿದ್ದಾರೆ . ಅಂಥವರ ಬಾಳಿನಲ್ಲಿ ಭರವಸೆಗಳನ್ನು ಮೂಡಿಸೋಣ , ಆತ್ಮ ವಿಶ್ವಾಸವನ್ನು ಹೆಚ್ಚಿಸೋಣ , ಧೈರ್ಯವನ್ನು ತುಂಬೋಣ . ಸಮಾಜದ ನವನಿರ್ಮಾಣಕ್ಕೆ ಪಣ ತೊಡೋಣ . “ ಹೊಸ ಭರವಸೆಗಳ ಕಟ್ಟೋಣ . ” ಎಂದಿದ್ದಾರೆ .
Sankalpa Geethe Question Answer important notes
“ ಹೊಸ ಎಚ್ಚರದೊಳು ಬದುಕೋಣ . ”
ಈ ವಾಕ್ಯವನ್ನು ಕವಿ ಡಾ | ಜಿ.ಎಸ್ . ಶಿವರುದ್ರಪ್ಪನವರು ರಚಿಸಿರುವ ಸಂಕಲ್ಪಗೀತೆ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಆಕರಗ್ರಂಥ : ಡಾ || ಜಿ.ಎಸ್ . ಶಿವರುದ್ರಪ್ಪ ವಿರಚಿತ ‘ ಎದೆ ತುಂಬಿ ಹಾಡಿದೆನು ‘ ಕವನ ಸಂಕಲನ .
ಈ ಮಾತನ್ನು ಕವಿ ಹೇಳಿದ್ದಾರೆ . ಪ್ರತಿಯೊಂದು ಮತವೂ ಅಂದರೆ ಅಭಿಪ್ರಾಯವು ಬೇರೆಯದೇ ಆದ ಮಾರ್ಗ , ದಾರಿ ಎಂಬುದನ್ನು ಅರಿಯಬೇಕಾಗಿದೆ , ಉಡುಗೆ , ತೊಡುಗೆ ಆಚಾರ – ವಿಚಾರ , ಆಹಾರ – ವಿಹಾರ , ಜಾತಿಮತ , ವೇಶ , ಭಾಷೆ ಬೇರೆಯಾದರೂ ಭಾವನೆ ಒಂದೇ ಎಂಬ ವಿಚಾರವನ್ನು ಬಿತ್ತಿ ಬದುಕಬೇಕಾಗಿದೆ .
ಅನುಮಾನ , ಭಯ , ಸಂಶಯ ಮುಂತಾದವುಗಳಿಂದ ಮಂಕಾಗಿರುವ , ಧೈರ್ಯಗುಂದಿರುವ ಕಣ್ಣಿನಲ್ಲಿ ನವ ಉತ್ಸಾಹವನ್ನು ಹೊಸ ಆದರ್ಶಗಳನ್ನು , ನೂತನ ಯೋಜನೆಗಳನ್ನು ಬಿತ್ತೋಣ , “ ಹೊಸ ಎಚ್ಚರದೊಳು ಬದುಕೋಣ . ” ಎಂದಿದ್ದಾರೆ .
ಬಿಟ್ಟ ಜಾಗವನ್ನು ಸೂಕ್ತ ಪದದಿಂದ ತುಂಬಿ ,
![ಸಂಕಲ್ಪಗೀತೆ ಪದ್ಯದ ಪ್ರಶ್ನೋತ್ತರಗಳು । Sankalpa Geethe Question Answer 10th Class Free](https://kaipidi.com/wp-content/uploads/2022/09/sddefault.jpg)
ಸಂಕಲ್ಪ ಗೀತೆ ‘ ಪದ್ಯವನ್ನು ….ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ಎದೆ ತುಂಬಿ ಹಾಡಿದೆನು
ಕತ್ತಲೆಯೊಳಗೆ ಪ್ರೀತಿಯ …….ಹಚ್ಚೋಣ
ಹಣತೆಯ
ಜಿ.ಎಸ್ . ಶಿವರುದ್ರಪ್ಪನವರು ……ಯಲ್ಲಿ ಸಮಾವೇಶಗೊಂಡ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು .
ದಾವಣಗೆರೆ
Sankalpa Geethe Question Answer best shorts notes
ಭಾಷಾ ಚಟುವಟಿಕೆ
ನೀಡಿರುವ ಪದಗಳ ಧಾತುಗಳನ್ನು ಗುರುತಿಸಿ ಬರೆಯಿರಿ .
- ನಿಲ್ಲಿಸು -ನಿಲ್ಲು
- ನಡೆಸು – ನಡೆ
- ಹಚ್ಚುವುದು -ಹಚ್ಚು
- ಕಟ್ಟುವುದು -ಕಟ್ಟು
- ಮುಟ್ಟೋಣ-ಮುಟ್ಟು
- ಆಗೋಣ – ಆಗು
ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ .
- ಪ್ರೀತಿಯ – ಷಷ್ಠಿ ವಿಭಕ್ತಿ
- ಬಿರುಗಾಳಿಗೆ – ಗೆ – ಚತುರ್ಥೀ ವಿಭಕ್ತಿ
- ಜಲಕ್ಕೆ – ಕ್ಕೆ – ಚತುರ್ಥೀ ವಿಭಕ್ತಿ
- ಬಿದ್ದುದನ್ನು – ಅನ್ನು – ದ್ವಿತೀಯಾ ವಿಭಕ್ತಿ
- ಭರವಸೆಗಳ – ಅ – ಷಷ್ಠಿ ವಿಭಕ್ತಿ
ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿ
- ಸಂಶಯದೊಳ್ – ಒಳ್ -ಸಪ್ತಮೀ
- ಜಲದಿಂ – ಇಂ-ತೃತೀಯ
- ಮರದತ್ತ್ತಣಿ0 -ಅತ್ತಣಿಂ- ಪಂಚಮೀ
- ರಾಯಂಗೆ-ಗೆ-ಚತುರ್ಥಿ
Sankalpa Geethe Question Answer guide
ಕೊಟ್ಟಿರುವ ಧಾತುಗಳಿಗೆ ವಿಧ್ಯರ್ಥಕ , ನಿಷೇಧಾರ್ಥಕ ಮತ್ತು ಸಂಭಾವನಾರ್ಥಕ ರೂಪಗಳನ್ನು ಬರೆಯಿರಿ .
ಧಾತು
ಹಾಡು
ನೋಡು
ಕಟ್ಟು
ಕೇಳು
ಓಡು
ವಿಧ್ಯರ್ಥಕ ರೂಪ
- ಹಾಡಲು
- ನೋಡಲಿ
- ಮುಟ್ಟೋಣ
- ಕಟ್ಟಲಿ
- ಕೇಳಲಿ
- ಓಡಲಿ
ಸಂಭಾವನಾರ್ಥಕ ರೂಪ
- ಹಾಡಿಯಾನು
- ನೋಡಿಯಾನು
- ಕಟ್ಟಿಯಾನು
- ಕೇಳಿಯಾನು
- ಓಡಿಯಾನು
ನಿಷೇಧಾರ್ಥಕ ರೂಪ
- ಹಾಡನು
- ನೋಡನು
- ಕಟ್ಟನು
- ಕೇಳನು
- ಓಡೆನು
‘ ಸಂಕಲ್ಪಗೀತೆ ‘ ಪದ್ಯದ ಎರಡು ಮತ್ತು ನಾಲ್ಕನೆಯ ಚರಣಗಳನ್ನು ಕಂಠಪಾಠ ಮಾಡಿ
ಕಲುಷಿತವಾದೀ ನದೀಜಲಗಳಿಗೆ
ಓದು ಬರೆ ಮುಂಗಾರಿನ ಮಳೆಯಾಗೋಣ
ಬರಡಾಗಿರುವೀ ಕಾಡುಮೇಡುಗಳ
ವಸಂತವಾಗುತ ಮುಟ್ಟೋಣ
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ – ಸಂಶಯದೊಳು ಕಂದಿದ ಕಣ್ಣೂಳು
ನಾಳಿನ ಕನಸನು ಬಿಡೋಣ
Sankalpa Geethe Question Answer karnataka state board
ಹೆಚ್ಚುವರಿ ಪ್ರಶೋತ್ತರಗಳು
ಬಿಟ್ಟ ಸ್ಥಳ ತುಂಬಿರಿ
ಜಿ.ಎಸ್ . ಶಿವರುದ್ರಪ್ಪ ಅವರು 1992 ರಲ್ಲಿ….. ಯಲ್ಲಿ ಸಮಾವೇಶಗೊಂಡ 61 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು .
ದಾವಣಗೆರೆ
ಜಿ.ಎಸ್ . ಶಿವರುದ್ರಪ್ಪ ಎಂದೇ ಪ್ರಸಿದ್ಧರಾಗಿರುವ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರು….
ಜಿಲ್ಲೆಯ ಶಿಕಾರಿಪುರದವರು .
ಶಿವಮೊಗ್ಗ
ಜಿ.ಎಸ್ . ಶಿವರುದ್ರಪ್ಪ ಅವರು ಮೈಸೂರು ,……. ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ , ಕನ್ನಡ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ .
ಉಸ್ಮಾನಿಯಾ
Sankalpa Geethe Question Answer kseeb solution
ಸಂಕಲ್ಪಗೀತೆ ‘ ಕವಿತೆಯ ಆಕರ ಗ್ರಂಥ…. ಕವನ ಸಂಕಲನ.
ಎದೆತುಂಬಿಹಾಡಿದೆನು
ನಾವು ಜೀವನದಲ್ಲಿ ಯಾವಾಗಲೂ…… ರೂಢಿಸಿಕೊಳ್ಳಬೇಕು .
ಧನಾತ್ಮ
ಮತಗಳೆಲ್ಲವೂ…….. ಎನ್ನುವ ಹೊಸ ಎಚ್ಚರದಲ್ಲಿ ಬದುಕಬೇಕಾಗಿದೆ .
ಪಥಗಳು
Sankalpa Geethe Question Answer quiz
ನಮ್ಮ ಸುತ್ತ ಮುತ್ತಲೂ ಕವಿದಿರುವ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುವುದಕ್ಕಾಗಿ , ಅಂಧಕಾರವನ್ನು ಹೋಗಲಾಡಿಸುವುದಕ್ಕಾಗಿ ಪ್ರೀತಿಯ….. ಯನ್ನು ಹಚ್ಚ್ಬೋಣ .
ಅಧ್ಯಯನ ಕೇಂದ್ರದ ಮತ್ತು ಬೆಂಗಳೂರು
ಹಣತೆ
……ನೀರು ಕಲುಷಿತಗೊಂಡು ಜಲಚರ ಜೀವಿಗಳಿಗೆ ಮಾರಕವಾಗುತ್ತಿದೆ .
ನದಿ
ಭಯ – ಸಂಶಯದೊಳು ಕಂದಿದ ಕಣ್ಣೂಳು ನಾಳಿನ…… ಭಾವನೆಯನ್ನು ಬಿತ್ತೋಣ .
ಕನಸನು
ಮನುಜರ ನಡುವಣ ….. ಕೆಡವುತ ಸೇತುವೆಯಗೊಣ
ಅಡ್ಡಗೋಡೆಗಳ
ಬಿರುಗಾಳಿಗೆ ಹೊಯ್ದಾಡುವ……….ಎಚ್ಚರದಲಿ ಮುನ್ನಡೆಸೋಣ
ಹಡಗನು
ಬರಡಾಗಿರುವೀ ಕಾಡುಮೇಡುಗಳ…ವಾಗುತ ಮುಟ್ಟೋಣ.
ವಸಂತ
FAQ
ಸಂಕಲ್ಪ ಗೀತೆ ಗದ್ಯದ ಕವಿ
ಡಾ || ಜಿ . ಎಸ್ . ಶಿವರುದ್ರಪ್ಪ
ಡಾ || ಜಿ . ಎಸ್ . ಶಿವರುದ್ರಪ್ಪರವರ ಸ್ಥಳ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
Sankalpa Geethe Question Answer
SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು
- ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು
- ಎದೆಗೆ ಬಿದ್ದ ಅಕ್ಷರ ಪಾಠದ ಪ್ರಶ್ನೋತ್ತರಗಳು
- ಭಾಗ್ಯಶಿಲ್ಪಿಗಳು ಪಾಠದ ಪ್ರಶ್ನೋತ್ತರಗಳು
- ಶಬರಿ ಪಾಠದ ಕವಿ ಪರಿಚಯ
- ಶಬರಿ ಪಾಠದ ಪ್ರಶ್ನೆ ಮತ್ತು ಉತ್ತರ
- ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು