Shilube Eriddane Kannada Notes, ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು, 2nd PUC Shilube Eriddane Kannada Notes Question Answer pdf guide Download Second Puc , 2nd Puc Kannada Notes
Shilube Eriddane Kannada Notes 2nd Puc Kannada
ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣಾವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಒಂದು ಅಂಕದ ಪ್ರಶ್ನೆಗಳು
ಕ್ರಿಸ್ಮಸ್ ಪ್ಲಾಸ್ಟಿಕ್ ನಕಲಿನ ಕುಬ್ಧತೆಗೆ ಯಾವ ರೂಪ ಕರುಣ ಸಿದೆ ?
ಕ್ರಿಸ್ಮಸ್ ಪ್ಲಾಸ್ಟಿಕ್ ನಕಲಿನ ಕುಬ್ದತೆಗೆ ಗಿಡದ ರೂಪ ಕರುಣಿಸಿದೆ .
ಕ್ರಿಸ್ಮಸ್ ಸಂದರ್ಭದಲ್ಲಿ ಹತ್ತಿ ಯಾವ ಕೆಲಸ ಮಾಡಿದೆ ?
ಕ್ರಿಸ್ಮಸ್ ಸಂದರ್ಭದಲ್ಲಿ ಹತ್ತಿ ಮಂಜಿನ ಕೆಲಸ ಮಾಡಿದೆ .
ಶಿಲುಬೆಯೇರಿದವರು ಯಾರು
ಶಿಲುಬೆಯೇರಿದವರು ಜೀಸಸ್.
Shilube Eriddane Kannada Notes KSEEB
ಜೀಸಸ್ನ ಮುಖಮುದ್ರೆ ಏನನ್ನು ನುಡಿವಂತಿದೆ ?
ಜೀಸಸ್ನ ಮುಖಮುದ್ರೆ ಯಾತನೆಯಲ್ಲಿಯೂ ಒಳ್ಳೆಯ ಮಾತು ನುಡಿವಂತಿದೆ .
ಜೀಸಸ್ನ ಶಿಲುಬೆಗೇರಿಸಿದವರು ಯಾರ ವಕಾಲತ್ತು ನಡೆಸಿದವರಾಗಿದ್ದಾರೆ ?
ಜೀಸಸ್ನ ಶಿಲುಬೆಗೇರಿಸಿದವರು ಕೊಲೆಗಡುಕ ಬರಬ್ಬನ ಪರ ವಕಾಲತ್ತು ನಡೆಸಿದವರಾಗಿದ್ದಾರೆ .
ಏನು ಬಂದೇ ತಿರುತ್ತದೆ ಎಂಬ ನಂಬಿಕೆಯಲ್ಲಿ ಜೀಸಸ್ ಶಿಲುಬೆಗೇರಿದ್ದಾನೆ ?
ದೈವೀರಾಜ್ಯ ಬಂದೇ ತಿರುತ್ತದೆ ಎಂಬ ನಂಬಿಕೆಯಲ್ಲಿ ಜೀಸಸ್ ಶಿಲುಬೆಗೇರಿದ್ದಾನೆ .
ಕವಿಯ ಪ್ರಕಾರ ತಿಂಗಳಿಗೊಂದು ಸಲವೂ ದೀಪಹಚ್ಚದ ಸ್ಥಳ ಯಾವುದು ?
ಕವಿಯ ಪ್ರಕಾರ ತಿಂಗಳಿಗೊಂದು ಸಲವೂ ದೀಪಹಚ್ಚದ ಸ್ಥಳ ದಲಿತ ವಾಸದ ಸೋಗೆ ಬಿಲಗಳು .
ಯಾರ ಕಂಬನಿಯನ್ನೊರೆಸಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ ?
ಶೋಷಿತರ ಕಂಬನಿಯನ್ನೊರೆಸಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ .
Shilube Eriddane Kannada Notes 2nd PUC Karnataka
![ದ್ವಿತೀಯ ಪಿ.ಯು.ಸಿ ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್ | Shilube Eriddane Kannada Notes In Kannada Best No1 Notes](https://kaipidi.com/wp-content/uploads/2022/10/mqdefault-1.jpg)
ಎರಡು ಅಂಕಗಳ ಪ್ರಶ್ನೆಗಳು :
ಕ್ರಿಸ್ಮಸ್ ಮನೆಗೆ ಏನನ್ನು ಹೊತ್ತು ತಂದಿದೆ ?
ಕ್ರಿಸ್ಮಸ್ ಮನೆಗೆ ಕೇಕು , ಚಳಿ , ನಕ್ಷತ್ರದೀಪ , ಪ್ಲಾಸ್ಟಿಕನ ನಕಲಿ ಗಿಡ , ಅದಕೆ ಮಂಜಿನ ಕೆಲಸ ಮಾಡಿದ ಹತ್ತಿ , ಇವೆಲ್ಲದರ ನಡುವೆ ಬೆಚ್ಚನೆಯ ಪ್ರಾರ್ಥನೆಗಳನ್ನು ತಂದಿದೆ .
ಶಿಲುಬೆಗೇರಿದ ಯೇಸುವಿನ ದೇಹ ಯಾರಿಗೆ , ಏನನ್ನು ಅನ್ನುವಂತಿದೆ ?
ಶಿಲುಬೆಗೇರಿದ ಯೇಸುವಿನ ದೇಹ ತನ್ನನ್ನು ಶಿಲುಬೆಗೇರಿಸಿದವರೆ ಕೊಲೆಗಡುಕ ಬರಬ್ಬನ ‘ ವಕಾಲತ್ತು ನಡಿಸಿದವರೇ , ಎಡಕ್ಕೊಬ್ಬ ಬಲಕ್ಕೊಬ್ಬ ಕಳ್ಳನ ತೂಗಿ ಸನ್ಮಾನಿಸಿದವರೇ , ಮನ್ನಿಸಲಿ ನಿಮ್ಮನ್ನು ಆ ದೇವರೆ ! ಎಂದು ಹೇಳುವಂತಿದೆ .
ಶಿಲುಬೆಗೇರಿಸಿದವರ ಗುಣಗಳು ಇಂದುಯಾವ ವೇಷ ತಾಳಿವೆ ?
ಶಿಲುಬೆಗೇರಿಸಿದವರ ಗುಣಗಳು ಕಾಲ ರಾಯನಗುಜರಿ ಸೇರಿಲ್ಲ , ಬದಲಾಗಿ ವೇಷ ಮರೆಸಿಕೊಂಡಿವೆ . ಆಧಿಕಾರದ ಬಲಿಷ್ಠ ಕೈಗಳು , ಎದೆಯಾಳದ ಮುಖ್ಯಗಳು ರೈಫಲ್ಲು , ಟ್ಯಾಂಕು , ಬಾಂಬು , ಗ್ರನೇಡು ಇವುಗಳು ದ್ವೇಷದ ಹೊಸ ರೂಪಗಳಾಗಿವೆ .
ಯಾವ ಸಂದೇಶವನ್ನು ನೀಡುವರೀತಿಯಲ್ಲಿ ಜೀಸಸ್ ಶಿಲುಬೆಯೇರಿದ್ದಾನೆ ?
ನಿಮ್ಮ ಸಾಮ್ರಾಜ್ಯ ಇರುವ ತನಕ ನಿಮ್ಮ ಕ್ರೋಧ , ತಿಳಿಗೇಡಿತನಕ್ಕೆ ನಾನು ಆಜ್ಯವಾಗುತ್ತೇನೆ . ಬಂದೇ ಬರುತ್ತದೆ ದೈವೀರಾಜ್ಯ ಎನ್ನುವಂತೆ , ಶೋಷಿತರ ಕಂಬನಿಯನೊರೆಸಿ , ಸತ್ಯಕ್ಕೆ ಹೊಸ ಕವಲುಗಳನ್ನು ತೆರೆಸಿ ಜೀಸಸ್ ಶಿಲುಬೆಯೇರಿದ್ದಾನೆ .
Shilube Eriddane Kannada Notes 2nd PUC Notes Questions and Answers
![ದ್ವಿತೀಯ ಪಿ.ಯು.ಸಿ ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್ | Shilube Eriddane Kannada Notes In Kannada Best No1 Notes](https://kaipidi.com/wp-content/uploads/2022/10/Cristo_de_San_Placido_by_Diego_Velazquez-690x1024.jpg)
ನಾಲ್ಕು ಅಂಕಗಳ ಪ್ರಶ್ನೆಗಳು :
ಶಿಲುಬೆಗೇರಿಸಿದ ಜೀಸಸ್ನ ದೇಹ ಏನನ್ನು ಹೇಳುವಂತಿದೆ ? ವಿವರಿಸಿ .
ಶಿಲುಬೆ ಏರಿದ್ದಾನೆ ಎಂಬ ಕವನವು ಜೀಸಸನ ವ್ಯಕ್ತಿತ್ವ , ಆದರ್ಶಗಳನ್ನು ಅಪೂರ್ವವಾಗಿ ಚಿತ್ರಿಸಿದೆ . ಮನುಕುಲಕ್ಕೆ ಒಳ್ಳೆಯದನ್ನು ಬಯಸಿದ ದೇವಮಾನವ ; ಆತನ ಒಳ್ಳೆಯ ಮನಸ್ಸನ್ನು ಅರಿಯಲಾರದ ಜನ , ಆತನ ಮರಣಕ್ಕೆ ಮುನ್ನುಡಿಯನ್ನು ಬರೆಯಲು ಮುಂದಾಗುತ್ತಾರೆ . ಇದನ್ನು ಕಂಡು ಮರುಗುವ ಕವಿ ಮನಸ್ಸು ಕ್ರಿಸ್ಮಸ್ ಇಂದು ನಮಗೆ ಸಂಭ್ರಮವನ್ನು ತರುತ್ತದೆ . ಆದರೆ ಅದರ ಹಿಂದೆ ಪ್ರಾಣವನ್ನುಗೈದ ಏಸುವಿನ ಉದ್ದೇಶ ಇಂದು ಈಡೇರಿಲ್ಲ ಎನ್ನುವ ಬಗ್ಗೆ ಕವಿಗೆ ವಿಷಾದವಿದೆ .
ಗೋಡೆಯ ಮೇಲೆ ಶಿಲುಬೆ ಏರಿದ ಜೀಸಸ್ನ ಪ್ರತಿಬಿಂಬವಿದೆ.ಅವನ ಬಾಗಿದ ಶಿರ , ಕುತ್ತಿಗೆಯಲ್ಲಿ ಉಬ್ಬಿದ ನರ , ಅಂತಹ ನೋವಿನ ಸಂದರ್ಭದಲ್ಲಿಯೂ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಆತನ ಮುಖಮುದ್ರೆ , ತನ್ನನ್ನು ಶಿಲುಬೆಗೇರಿಸಿದರೂ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವ ಯೇಸುವಿನ ಒಳ್ಳೆಯತನ , ವಿಶಾಲವಾದ ಹೃದಯ ಅವರ್ಣನೀಯ ಎನ್ನುವ ಕವಿ ಮುಂದುವರಿಸಿ ಒಬ್ಬ ಮಹಾನ್ ವ್ಯಕ್ತಿಯನ್ನು ನಡೆಸಿಕೊಂಡ ರೀತಿಯನ್ನು ಕಂಡು ಬೇಸರಿಸುತ್ತಾರೆ .
ಕೊಲೆಗಡುಕ ಬರಬ್ಬನ ಪರಿ ವಕಾಲತ್ತು ನಡೆಸಿದವರು . ಎಡಕೊಬ್ಬ ಬಲಕ್ಕೊಬ್ಬ ಕಳ್ಳನನ್ನು ಯೇಸುವಿನ ಅಕ್ಕಪಕ್ಕದಲ್ಲಿ ಶಿಲುಬೆಗೇರಿಸಿ ಅವಮಾನ ಮಾಡಿದಿರಿ . ಅಂತಹ ಸ್ಥಿತಿಯಲ್ಲೂ ಆತ ಉದಾತ್ತಗುಣವನ್ನೇ ಪ್ರದರ್ಶಿಸಿ ‘ ದೇವರೇ ಇವರು ಏನು ಮಾಡುತ್ತಿರುವರೆಂದು ಅವರಿಗೆ ತಿಳಿಯುತ್ತಿಲ್ಲ . ಅವರನ್ನು ಕ್ಷಮಿಸು’ಎನ್ನುವಂತಿದೆ
ಸನ್ಮಾನಿಸಿದವರೇ , ಮನ್ನಿಸಲಿ ನಿಮ್ಮನ್ನು ಆ ದೇವರೆ ! ಎಂದು ಹೇಳುವಂತಿದೆ .
ಯಾವ ಸ್ಥಳಗಳಲ್ಲಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ ? ಚರ್ಚಿಸಿ .
ಅಂದು ಜೀಸಸ್ ಶಿಲುಬೆ ಏರಿದನು ; ಕಾರಣ ಅಂಧಕಾರ ದಲ್ಲಿದಿರುವ ಜನರನ್ನು , ತನ್ನ ಮೇಲೆ ಹರಿಹಾಯ್ದ ಜನರನ್ನು , ಅವರ ಮೌಡ್ಯತನವನ್ನು ಹೋಗಲಾಡಿಸಬೇಕು ಎಂದು . ಆದರೆ ಏಸುವಿನ ಒಳ್ಳೆಯತನ ಅರಿಯಲು ವಿಫಲರಾದ ರೋಮಿನ ಯಾಜಕರು ( ಧರ್ಮಗುರು ) ಆ ದಿನ ಕೊಲೆಗಡುಕ ಬರಬ್ಬನನ್ನು ಕ್ಷಮಿಸಲು ಆಗ್ರಹಿಸುತ್ತಾರೆಯೇ ವಿನಾ ಜೀಸಸ್ನನ್ನು ಕ್ಷಮಿಸಲು ಒಪ್ಪುವುದಿಲ್ಲ . ಇಬ್ಬರು ಕಳ್ಳರ ಮಧ್ಯೆ ಏಸುವನ್ನು ಗಲ್ಲಿಗೇರಿಸಲಾಯಿತು .
ಅಂದು ಕ್ರೋಧ ತಿಳಿಗೇಡಿತನಕ್ಕೆ ಜೀಸಸ್ ಶಿಲುಬೆ ಏರಿದನು . ಆದರೆ ಇಂದಿನ ಕಾಲಕ್ಕೆ ಮತಧರ್ಮಗಳ ಕಿತ್ತಾಟಗಳನ್ನು ನೋಡುತ್ತಾ , ಕೋರ್ಟು , ಕಾರ್ಖಾನೆ , ಠಾಣೆ ಠಾಣೆಗಳಲ್ಲಿ ಕಣ್ಮನ ಬೆಳಕನ್ನು ಕಿತ್ತೆಸೆದು ಕುರುಡುಗೊಳಿಸುವ ಬಂದೀಖಾನೆಗಳಲ್ಲಿ , ಆಸ್ಪತ್ರೆಗಳ ಕೋಣೆ ಕೋಣೆಗಳಲ್ಲಿ ತಿಂಗಳಿಗೆ ಒಮ್ಮೆಯೂ ಹಣತೆ ಹೊತ್ತಿಸದ ದಲಿತವಾಸದ ಸೋಗೆ ಬಿಲಗಳಲ್ಲಿ ಶೋಷಣೆ , ದಬ್ಬಾಳಿಕೆ , ಕ್ರೂರತೆಗಳನ್ನು ನೋಡುತ್ತಾ , ಮರುಗುತ್ತಾ ನಿತ್ಯವೂ ಶಿಲುಬೆ ಏರಿದ್ದಾನೆ . ಶೋಷಿತರ ಕಂಬನಿಗಳನ್ನು ಒರೆಸುವ ಆಶಾಕಿರಣವಾಗಿ ಸತ್ಯಕ್ಕೆ ಹೊಸ ಕವಲುಗಳ ತೆರೆಸುವ ಕಾರಣಕ್ಕಾಗಿ ಜೀಸಸ್ ಶಿಲುಬೆ ಏರಿದ್ದಾನೆ ಎಂಬುದು ಕವಿಯ ವಿವರಣೆಯಾಗಿದೆ .
ಶಿಲುಬೆ ಏರಿದ್ದಾನೆ ಕವನದಲ್ಲಿ ಜೀಸಸ್ ವ್ಯಕ್ತಿತ್ವ ಮತ್ತು ಆತನ ಮಹತ್ವವನ್ನು ಕವಿ ಯಾವ ರೀತಿ ನಿರೂಪಿಸಿದ್ದಾರೆ ? ವಿವರಿಸಿ .
ಶಿಲುಬೆ ಏರಿದ್ದಾನೆ ಕವನ ಜೀಸಸ್ ಬಗ್ಗೆ ಗೋವಿಂದ ಪೈ’ಯವರ ‘ ಗೊಲ್ಗೊಥಾ’ಕವನದ ನಂತರ ಬಂದ ವಿಶಿಷ್ಟ ಕವನ . ಜೀಸಸ್ನ ವ್ಯಕ್ತಿತ್ವ , ಆದರ್ಶಗಳನ್ನು ಅಪೂರ್ವವಾಗಿ ಚಿತ್ರಿಸಿರುವ ಕವಿ ಆ ಕಾಲದ ಕ್ರೌರ್ಯ ಈ ಕಾಲದಲ್ಲೂ ಹೊಸರೂಪದಲ್ಲಿ ಮುಂದುವರೆಯುತ್ತಿರುವ ದುರಂತವನ್ನು ಕಟ್ಟಿಕೊಟ್ಟಿದ್ದಾರೆ . ಜೀಸಸ್ನ ಸಾವನ್ನು ವಿಷಾದದಿಂದ ನೋಡುವ ಕವಿ , ಆತ ಇಂದು ಅಸಂಖ್ಯ ಹೃದಯಗಳಲ್ಲಿ ಮಾನವತೆಯ ಕಿಡಿಯನ್ನು ಹಚ್ಚಿಹೋಗುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ .
ಕವಿತೆಯ ಆರಂಭದಲ್ಲಿ ಕ್ರಿಸ್ಮಸ್ ಮನೆಗೆ ಆಗಮಿಸುತ್ತಿರುವುದರ ವಿವರಣೆಯನ್ನು ಕೊಡುವ ಕವಿ ಕ್ರಿಸ್ಮಸ್ ಮನೆಗೆ ಕೇಕು , ಚಳಿ , ನಕ್ಷತ್ರದೀಪ , ಪ್ಲಾಸ್ಟಿಕ್ನ ನಕಲಿ ಗಿಡ , ಮಂಜಿನ ಹತ್ತಿಯಿಂದ ಕಂಗೊಳಿಸುತ್ತಿದೆ . ಇಲ್ಲೆಲ್ಲ ನಕಲಿತನ ಇದ್ದರೂ ಮೊಣಕಾಲಲ್ಲಿ ಮೋಂಬತ್ತಿ ಹಿಡಿದು ಕುಳಿತಿರುವ ಹುಡುಗಿಯ ಭಕ್ತಿ ಮಾತ್ರ ಅಸಲಿ ಎನ್ನುತ್ತಾರೆ ಕವಿ . ಮನುಕುಲಕ್ಕೆ ಒಳ್ಳೆಯದನ್ನು ಬಯಸಿದ ದೇವಮಾನವ ಜೀಸಸ್ , ಆದರೆ ಜನ ಆತನ ಒಳ್ಳೆಯತನವನ್ನು ಅರಿಯದಾದರು . ಕೊಲೆಗಡುಕ ಬರಬ್ಬನ ಪರ ವಕಾಲತ್ತು ನಡೆಸಿ ಎಡಕ್ಕೊಬ್ಬ ಬಲಕ್ಕೊಬ್ಬ ಕಳ್ಳನನ್ನು ಯೇಸುವಿನ ಅಕ್ಕಪಕ್ಕದಲ್ಲಿ ಶಿಲುಬೆಗೇರಿಸಿ ಅವಮಾನ ಮಾಡಿದರು . ಅಂತಹ ಸ್ಥಿತಿಯಲ್ಲೂ ಆತ ಉದಾತ್ತಗುಣವನ್ನೇ ಪ್ರದರ್ಶಿಸಿ ‘ ದೇವರೇ ಇವರು ಏನು ಮಾಡುತ್ತಿರುವರೆಂದು ಅವರಿಗೆ ತಿಳಿಯುತ್ತಿಲ್ಲ .
Shilube Eriddane Kannada Notes In Kannada
ಅವರನ್ನು ಕ್ಷಮಿಸು ‘ ಎನ್ನುವ ಆತನ ಮಾತುಗಳು ಅವನ ವಿಶಿಷ್ಟ ವ್ಯಕ್ತಿತ್ವವನ್ನು ತಿಳಿಸುತ್ತದೆ . ಅಂದು ಯೇಸುವನ್ನು ಶಿಲುಬೆಗೇರಿಸಿ ಜೀವಂತ ಇರುವಾಗಲೇ ಮೊಳೆಗಳನ್ನು ಆತನ ದೇಹದ ಅಂಗಾಂಗಳಿಗೆ ಬಡಿಯಲಾಯಿತು . ಜೊತೆಗೆ ಅವಮಾನ ಮಾಡುವ ನೆಲೆಯಲ್ಲಿ ಮುಳ್ಳಿನ ಕಿರೀಟವನ್ನೂ ಧರಿಸಲಾಯಿತು . ಹಿಂದೆ ನಡೆದಂತಹ ಈ ಎಲ್ಲಾ ಕ್ರೌರ್ಯಗಳು ಇನ್ನೂ ಕಾಲರಾಯನ ಗುಜರಿ ಸೇರಿಲ್ಲ , ಬದಲಾಗಿ ವೇಷ ಮರೆಸಿಕೊಂಡು ರೈಫಲ್ಲು , ಟ್ಯಾಂಕು , ಬಾಂಬು , ಗ್ರನೇಡು ಎಂಬ ಹೊಸ ರೂಪ ತಾಳಿವೆ .
ನಿಮ್ಮ ಸಾಮ್ರಾಜ್ಯ ಇರುವ ತನಕ ನಿಮ್ಮ ಕ್ರೋಧ , ತಿಳಿಗೇಡಿತನಕ್ಕೆ ನಾನು ಆಜ್ಯವಾಗುತ್ತೇನೆ . ಬಂದೇ ಬರುತ್ತದೆ ದೈವೀರಾಜ್ಯ ಎನ್ನುವಂತೆ , ಕೋರ್ಟು , ಕಾರ್ಖಾನೆ , ಠಾಣೆ ಠಾಣೆಗಳಲ್ಲಿ ಕಣ್ಮನ ಬೆಳಕನ್ನು ಕಿತ್ತೆಸೆದು ಕುರುಡುಗೊಳಿಸುವ ಬಂಧಿಖಾನೆಗಳಲ್ಲಿ , ಆಸ್ಪತ್ರೆಗಳ ಕೋಣೆ ಕೋಣೆಗಳಲ್ಲಿ ತಿಂಗಳಿಗೆ ಒಮ್ಮೆಯೂ ಹಣತೆ ಹೊತ್ತಿಸದ ದಲಿತವಾಸದ ಸೋಗೆ ಬಿಲಗಳಲ್ಲಿ ಶೋಷಣೆ , ದಬ್ಬಾಳಿಕೆ , ಕ್ರೂರತೆಗಳನ್ನು ನೋಡುತ್ತಾ , ಶೋಷಿತರ ಕಂಬನಿಯನೊರೆಸಿ , ಸತ್ಯಕ್ಕೆ ಹೊಸ ಕವಲುಗಳನ್ನು ತೆರೆಸಿ ಜೀಸಸ್ ಶಿಲುಬೆಯೇರಿದ್ದಾನೆ .
Shilube Eriddane Kannada Notes
![ದ್ವಿತೀಯ ಪಿ.ಯು.ಸಿ ಶಿಲುಬೆ ಏರಿದ್ದಾನೆ ಕನ್ನಡ ನೋಟ್ಸ್ | Shilube Eriddane Kannada Notes In Kannada Best No1 Notes](https://kaipidi.com/wp-content/uploads/2022/10/maxresdefault-2-2-1024x576.jpg)
ಸಾಂದರ್ಭಿಕ ವಿವರಣೆ ಬಯಸುವ ವಾಕ್ಯಗಳು
ಯಾತನೆಗೂ ನಲ್ವಾತನೇ ನುಡಿವ ಮುಖಮುದ್ರೆ
ಆಯ್ಕೆ : ಈ ವಾಕ್ಯವನ್ನು ‘ ಕೆ.ಎಸ್.ನಿಸಾರ್ ಅಹಮದ್’ರವರು ರಚಿಸಿದ ‘ ಶಿಲುಬೆ ಏರಿದ್ದಾನೆ ‘ ಎಂಬ ಕವನದಿಂದ ಆರಿಸಲಾಗಿದೆ .
ಸಂದರ್ಭ : ಶಿಲುಬೆ ಏರಿದ ಯೇಸುವಿನ ವಿಶೇಷ ಸಹನಾ ಗುಣವನ್ನು ವಿವರಿಸುವ ವಾಕ್ಯವಿದು .
ವಿವರಣೆ : ಕವಿಯು ಆರಂಭದಲ್ಲಿ ಕ್ರಿಸ್ಮಸ್ ಆಗಮಿಸಿರುವುದರ ಬಗ್ಗೆ ವಿವರಿಸುತ್ತಾ , ಗೋಡೆಯ ಮೇಲೆ ಶಿಲುಬೆ ಏರಿದ ಜೀಸಸ್ನ ಪ್ರತಿಬಿಂಬವಿದೆ . ಆ ಬಿಂಬದಲ್ಲಿ ಅವನ ಶಿರಬಾಗಿದೆ , ಕುತ್ತಿಗೆಯಲ್ಲಿ ಒಂದು ನರ ಉಬ್ಬಿಕೊಂಡಿದೆ . ಅಂತಹ ನೋವಿನ ಸಂದರ್ಭದಲ್ಲಿಯೂ ಎಲ್ಲರಿಗೂ ಒಳ್ಳೆಯದನ್ನು ಬಯಸುವಂತೆ ಕಾಣುತ್ತಿದ್ದ ಆತನ ಮುಖ ಮುದ್ರೆ ಕವಿಯ ಗಮನವನ್ನು ಸೆಳೆದಿದೆ . ತನ್ನನ್ನು ಶಿಲುಬೆಗೇರಿಸಿದರೂ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವ ಯೇಸುವಿನ ಒಳ್ಳೆಯತನವನ್ನು ಕವಿ ವಿವರಿಸುತ್ತಾ ಈ ಮೇಲಿನಂತೆ ಹೇಳುತ್ತಾರೆ .
ಮನ್ನಿಸಲಿ ನಿಮ್ಮನ್ನ ಆ ದೇವರೆ !
ಆಯ್ಕೆ : ಈ ವಾಕ್ಯವನ್ನು ‘ ಕೆ.ಎಸ್.ನಿಸಾರ್ ಅಹಮದ್’ರವರು ರಚಿಸಿದ ‘ ಶಿಲುಬೆ ಏರಿದ್ದಾನೆ ‘ ಎಂಬ ಕವನದಿಂದ ಆರಿಸಲಾಗಿದೆ .
ಸಂದರ್ಭ : ಯೇಸುವಿನ ಕ್ಷಮೆಯ ಗುಣವನ್ನು ವಿವರಿಸುವ ಸಾಲಿದು . ಅರಿಯದ
ವಿವರಣೆ : ಯೇಸುವನ್ನು ಶಿಲುಬೆಗೇರಿಸಿದ ಸಂದರ್ಭವನ್ನು ನೆನಪಿಸುತ್ತಾ ಕವಿ ವಿಷಾದವನ್ನು ವ್ಯಕ್ತಪಡಿಸುತ್ತಾರೆ . ಮನುಕುಲದ ಒಳ್ಳೆಯದನ್ನು ಬಯಸಿದ ದೇವಮಾನವನ ಒಳ ಮನಸ್ಸನ್ನು ಜನರು , ಕೊಲೆಗಡುಕ ಬರಬ್ಬನ ಪರವ ಕಾಲತ್ತು ನಡೆಸಿದರು . ಎಡಕ್ಕೊಬ್ಬ ಬಲಕ್ಕೊಬ್ಬ ಕಳ್ಳನನ್ನು ಯೇಸುವಿನ ಅಕ್ಕಪಕ್ಕದಲ್ಲಿ ಶಿಲುಬೆಗೇರಿಸಿ ಅವಮಾನ ಮಾಡಿದರು . ಅಂತಹ ಸ್ಥಿತಿಯಲ್ಲೂ ಆತ ಉದಾತ್ತ ಗುಣವನ್ನೇ ಪ್ರದರ್ಶಿಸಿ ‘ ದೇವರೇ ಇವರು ಏನು ಮಾಡುತ್ತಿರುವರೆಂದು ಅವರಿಗೆ ತಿಳಿಯುತ್ತಿಲ್ಲ . ಅವರನ್ನು ಕ್ಷಮಿಸು ‘ ಎನ್ನುವ ಆತನ ಗುಣವನ್ನು ಕವಿ ಸ್ಮರಿಸುವಾಗ ಈ ಮೇಲಿನ ಮಾತು ಬಂದಿದೆ .
ವೇಷ ಮರೆಸಿವೆ ಅಷ್ಟೆ – ಈ ಎಲ್ಲ ಕೇಡುಗಳು
ಆಯ್ಕೆ : ಈ ವಾಕ್ಯವನ್ನು ಕೆ.ಎಸ್.ನಿಸಾರ್ಅಹಮದ್ ರವರು ರಚಿಸಿದ ‘ ಶಿಲುಬೆ ಏರಿದ್ದಾನೆ ‘ ಎಂಬ ಕವನದಿಂದ ಆರಿಸಲಾಗಿದೆ .
ಸಂದರ್ಭ : ಕಾಲ ಗತಿಸಿದರೂ ಯೇಸುವಿನ ಕಾಲದಲ್ಲಿದ್ದ ಹಿಂಸೆ ಕೊನೆಗೊಳ್ಳದೆ ಬೇರೆರೂಪ ಪಡೆದ ವಿವರಣೆ ಇಲ್ಲಿದೆ . ವಿವರಣೆ : ಅಂದು ಯೇಸುವನ್ನು ಶಿಲುಬೆಗೇರಿಸಿ ಜೀವಂತ ಇರುವಾಗಲೇ ಮೊಳೆಗಳನ್ನು ಆತನ ದೇಹದ ಅಂಗಾಂಗಳಿಗೆ ಬಡಿಯಲಾಯಿತು . ಜೊತೆಗೆ ಅವಮಾನ ಮಾಡುವ ನೆಲೆಯಲ್ಲಿ ಮುಳ್ಳಿನ ಕಿರೀಟವನ್ನೂ ಧರಿಸಲಾಯಿತು . ಆದರೆ ಹಿಂದೆ ನಡೆದಂತಹ ಈ ಎಲ್ಲಾ ಕ್ರೌರ್ಯಗಳು ಇನ್ನೂ ಕಾಲ ರಾಯನ ಗುಜರಿ ಸೇರಿಲ್ಲ , ಬದಲಾಗಿ ವೇಷ ಮರೆಸಿಕೊಂಡು ರೈಫಲ್ಲು , ಟ್ಯಾಂಕು , ಬಾಂಬು , ಗ್ರನೇಡು ಎಂಬ ಹೊಸ ರೂಪ ತಾಳಿವೆ . ನಮ್ಮದೇ ಬಲಿಷ್ಠ ಕೈಗಳು , ಎದೆಯಾಳದ ಮುಯ್ಯಗಳನ್ನು ಮುಂದಿಟ್ಟುಕೊಂಡು ಸೆಣಸುತ್ತಿದ್ದೇವೆ ಎನ್ನುವಾಗ ಈ ಮಾತು ಬಂದಿದೆ .
Shilube Eriddane Kannada Notes Guide
ಬಂದೇ ತೀರುತ್ತದೆ ದೈವೀರಾಜ್ಯ ,
ಆಯ್ಕೆ : ಈ ವಾಕ್ಯವನ್ನು ಕೆ.ಎಸ್.ನಿಸಾರ್ ಅಹಮದ್’ರವರು ರಚಿಸಿದ ‘ ಶಿಲುಬೆ ಏರಿದ್ದಾನೆ ‘ ಎಂಬ ಕವನದಿಂದ ಆರಿಸಲಾಗಿದೆ .
ಸಂದರ್ಭ : ಆಶಾವಾದವನ್ನು ಹೊರಹೊಮ್ಮಿಸುವ ವಾಕ್ಯ ಇದಾಗಿದೆ .
ವಿವರಣೆ : ಯೇಸುವು ಶಿಲುಬೆಯೇರಿದ್ದರೂ , ಮತ್ತೆ ಆತ ಉದಯಿಸಿ ಬಂದು ದೈವೀರಾಜ್ಯ ತರುವನೆಂಬ ನಂಬಿಕೆ ಕವಿಯದಾಗಿದೆ . ಅದನ್ನು ಕವಿ ಹೀಗೆ ವಿವರಿಸುತ್ತಾರೆ . ನಿಮ್ಮ ಸಾಮ್ರಾಜ್ಯ ಇರುವ ತನಕ ನಿಮ್ಮ ಕ್ರೋಧ , ತಿಳಿಗೇಡಿತನಕ್ಕೆ ನಾನು ಆಜ್ಯವಾಗುತ್ತೇನೆ . ಬಂದೇ ಬರುತ್ತದೆ ದೈವೀರಾಜ್ಯ ಶೋಷಿತರ ಕಂಬನಿಯ ನೊರೆಸಿ , ಸತ್ಯಕ್ಕೆ ಹೊಸ ಕವಲುಗಳನ್ನು ತೆರೆಸಿ ಜೀಸಸ್ ಶಿಲುಬೆಯೇರಿದ್ದಾನೆ .
ದಿನನಿತ್ಯ ಶಿಲುಬೆ ಏರಿದ್ದಾನೆ ಜೀಸಸ್
ಆಯ್ಕೆ : ಈ ವಾಕ್ಯವನ್ನು ಕೆ.ಎಸ್.ನಿಸಾರ್ ಅಹಮದ್’ರವರು ರಚಿಸಿದ ‘ ಶಿಲುಬೆ ಏರಿದ್ದಾನೆ ‘ ಎಂಬ ಕವನದಿಂದ ಆರಿಸಲಾಗಿದೆ .
ಸಂದರ್ಭ : ಶೋಷಿತರ ಕಂಬನಿಯನ್ನೊರೆಸುವ ಆಶಾಕಿರಣ ಯೇಸು ಎಂಬ ಆಶಯವನ್ನು ವ್ಯಕ್ತಪಡಿಸುವ ಸಾಲು ಇದಾಗಿದೆ .
ವಿವರಣೆ : ಅಂದುಕ್ರೋಧ ತಿಳಿಗೇಡಿತನಕ್ಕೆ ಜೀಸಸ್ ಶಿಲುಬೆ ಏರಿದನು . ಆದರೆ ಇಂದಿನ ಕಾಲಕ್ಕೆ ಮತಧರ್ಮಗಳ ಕಿತ್ತಾಟಗಳನ್ನು ನೋಡುತ್ತಾ , ಕೋರ್ಟು , ಕಾರ್ಖಾನೆ , ಠಾಣೆ ಠಾಣೆಗಳಲ್ಲಿ ಕಣ್ಣಿನ ಬೆಳಕನ್ನು ಕಿತ್ತೆಸೆದು ಕುರುಡುಗೊಳಿಸುವ ಬಂದೀಖಾನೆಗಳಲ್ಲಿ , ಆಸ್ಪತ್ರೆಗಳ ಕೋಣೆ ಕೋಣೆಗಳಲ್ಲಿ ತಿಂಗಳಿಗೆ ಒಮ್ಮೆಯೂ ಹಣತೆ ಹೊತ್ತಿಸದ ದಲಿತವಾಸದ ಸೋಗೆ ಬಿಲಗಳಲ್ಲಿ ಶೋಷಣೆ , ದಬ್ಬಾಳಿಕೆ , ಕ್ರೂರತೆಗಳನ್ನು ನೋಡುತ್ತಾ , ಮರುಗುತ್ತಾ ನಿತ್ಯವೂ ಶಿಲುಬೆ ಏರಿದ್ದಾನೆ . ಇಂದಿನ ಸಮಾಜ ಸಾಗುತ್ತಿರುವ ಪರಿಯನ್ನು ವಿವರಿಸುತ್ತಾ , ಶೋಷಿತರ ಕಂಬನಿಗಳನ್ನು ಒರೆಸುವ ಆಶಾಕಿರಣ ಯೇಸುವಾಗುತ್ತಾನೆ ಎಂಬ ಆಶಯ ಇಲ್ಲಿದೆ .
ಇತರೆ ವಿಷಯಗಳನ್ನು ನೋಡಿ
- ಹಬ್ಬಲಿ ಅವರ ರಸಬಳ್ಳಿ
- ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್
- ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು
- ಬಸವಣ್ಣನವರ ವಚನಗಳು ನೋಟ್ಸ್
- ಉರಿಲಿಂಗಪೆದ್ದಿಯ ವಚನಗಳು ಕನ್ನಡ ನೋಟ್ಸ್