Chalamane Merevem Kannada Notes , 10ನೇ ತರಗತಿ ಛಲಮನೆ ಮೆರೆವೆಂ ಕನ್ನಡ ನೋಟ್ಸ್ , ಛಲಮನೆ ಮೆರೆವೆಂ ಸಾರಾಂಶ pdf , chalamane merevem question answer in kannada
Chalamane Merevem Kannada Notes Question Answer in Kannada
ಈ ಲೇಖನದಲ್ಲಿ 10ನೇ ತರಗತಿ ಛಲಮನೆ ಮೆರೆವೆಂ ಪದ್ಯದ ಪ್ರಶ್ನೋತ್ತರಗಳನ್ನು ನೀಡಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದು ವಿದ್ಯಾರ್ಥಿಗಳಿಗಾಗಿ ಇದು ಸಂಪೂರ್ಣವಾಗಿ ಉಚಿತವಾಗಿದೆ.
ಕವಿ ಪರಿಚಯ chalamane merevem kannada notes kavi parichay
![ಛಲಮನೆ ಮೆರೆವೆಂ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | Chalamane Merevem Kannada Notes Free](https://kaipidi.com/wp-content/uploads/2022/09/download-3-3.jpg)
ಕವಿ :ರನ್ನ
- ಕಾಲ ಕ್ರಿ.ಶ. ಸುಮಾರು 949 ( ಹತ್ತನೆಯ ಶತಮಾನ )
- ಸ್ಥಳ: ಬಾಗಲಕೋಟೆ ಜಿಲ್ಲೆಯ ಮುದುವಳಲು ( ಈಗಿನ ಮುಧೋಳ )
- ತಂದೆ ;ಜಿನವಲ್ಲಭ
- ತಾಯಿ ;ಅಬ್ಬಲಬ್ಬೆ
- ಕೃತಿಗಳು;ಸಾಹಸಭೀಮ ವಿಜಯಂ ( ಗದಾಯುದ್ಧ ) ಅಜಿತ ತೀರ್ಥಂಕರ ಪುರಾಣ ತಿಲಕಂ , ಪರಶುರಾಮ ಚರಿತಂ , ಚಕ್ರೇಶ್ವರಚರಿತಂ ‘ ರನ್ನಕಂದ ‘ ಎಂಬ ನಿಘಂಟು
- ಬಿರುದು: ಕವಿ ಚಕ್ರವರ್ತಿ
- ವಿಶೇಷ :ರನ್ನ ಕವಿಯು ರತ್ನತ್ರಯರಲ್ಲಿ ಒಬ್ಬನು , ಇವರು ಚಾಲುಕ್ಯ ದೊರೆಯಾದ ತೈಲಪನ ಆಸ್ಥಾನದಲ್ಲಿದ್ದನು .
- ಆಕರಗ್ರಂಥ : ಸಾಹಸಭೀಮ ವಿಜಯಂ ( ಗದಾಯುದ್ಧ )
ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ .
ನಿಮಗೆ ನಮ್ಯಸರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನ ಯಾರಿಗೆ ಹೇಳುವನು ?
ನಿಮಗೆ ನಮ್ಮಸರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನನು ಭೀಷ್ಮನಿಗೆ ಹೇಳುವನು .
ದಿನಪಸುತ ಎಂದರೆ ಯಾರು ?
ದಿನಪಸುತ ಎಂದರೆ ಕರ್ಣ
ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ
ಅರ್ಜುನ ಹಾಗೂ ಭೀಮರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ .
ಛಲವನ್ನೇ ಮರೆಯುವುದಾಗಿ ನಿರ್ಧರಿಸಿದವನು ಯಾರು ?
‘ ದುರ್ಯೋಧನನು ಛಲವನ್ನೇ ಮರೆಯುವುದಾಗಿ ನಿರ್ಧರಿಸಿದವನು .
ಅಂತರಾತ್ಮಜ ಎಂದರೆ ಯಾರು ?
ಯಮನ ಮಗನಾದ ಯುಧಿಷ್ಟಿರ ‘ ( ಧರ್ಮರಾಯ ) ನೇ ಅಂತರಾತ್ಮಜ
ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ.
![ಛಲಮನೆ ಮೆರೆವೆಂ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | Chalamane Merevem Kannada Notes Free](https://kaipidi.com/wp-content/uploads/2022/09/hqdefault-1.jpg)
ತಾನು ಹೋರಾಡುತ್ತಿರುವುದು ನೆಲಕ್ಕಲ್ಲ ಛಲಕ್ಕೆ ಎಂಬುದನ್ನು ದುರ್ಯೋಧನ ಹೇಗೆ ವಿವರಿಸುತ್ತಾನೆ ?
ಪಾಂಡವರೊಡನೆ ಸಂಧಿ ಮಾಡಿಕೋ ಎಂದು ಭೀಷ್ಮನು ದುರ್ಯೋಧನನಿಗೆ ಹೇಳಿದನು . ಆದರೆ ದುರ್ಯೋಧನನು ಅದನ್ನು ತಿರಸ್ಕರಿಸಿ , ಕೇವಲ ಭೀಷರ ಆಶೀರ್ವಾದ ಪಡೆಯಲು ಬಂದಿರುವುದಾಗಿ ತಿಳಿಸುತ್ತಾನೆ . ಈ ಭೂಮಿ ನನಗೆ ಹಾಳು ಭೂಮಿ , ತಾನು ಭೂಮಿಗಾಗಿ ಹೋರಾಡುವುದಿಲ್ಲ . ಕೇವಲ ಛಲಕ್ಕಾಗಿ ಪಾಂಡವರಡೊನೆ ಹೋರಾಡುವುದಾಗಿ ದುರ್ಯೋಧನನು ತಿಳಿಸುತ್ತಾನೆ .
ಈ ನೆಲದೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನ ಹೇಗೆ ವಿವರಿಸುತ್ತಾನೆ .
ತನ್ನ ಪ್ರೀತಿಯ ಬಂಟ ಕರ್ಣ ಹಾಗೂ ಪ್ರೇಮದ ಸೋದರ ದುಶ್ಯಾಸನರ ಸಾವಿನಿಂದ ದುರ್ಯೋಧನನು ನೊಂದಿರುತ್ತಾನೆ . ಅದಕ್ಕಾಗಿ ಸಂಧಿ ಮಾಡಿಕೊಳ್ಳದಿರಲು
ತೀರ್ಮಾನಿಸುತ್ತಾನೆ . ಕರ್ಣನನ್ನು ಕೊಲ್ಲಿಸಿದ ಭೂಮಿಯೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲ ಎಂದು ದುರ್ಯೋಧನನು ಭೀಷ್ಮರಿಗೆ ಹೇಳಿದನು .
ಪಾರ್ಥ – ಭೀಮರ ಬಗೆಗೆ ದುರ್ಯೋಧನನ ಅಭಿಪ್ರಾಯವೇನು ?
ದುರ್ಯೋಧನನ ಬಂಟನಾದ ಕರ್ಣನನ್ನು ಅರ್ಜುನನು ಕೊಂದಿರುತ್ತಾನೆ . ಅವನ ತಮ್ಮನಾದ ದುಶ್ಯಾಸನನನ್ನು ಭೀಮನು ಕೊಂದಿರುತ್ತಾನೆ . ಆದ ಕಾರಣ ದುರ್ಯೋಧನನು ಸಂಧಿಗೆ ಒಪ್ಪುವುದಿಲ್ಲ . ಅರ್ಜುನ ಹಾಗೂ ಭೀಮರನ್ನು ಕೊಲ್ಲುವವರೆಗೆ ತನ್ನ ದುಃಖ ಕಡಿಮೆಯಾಗುವುದಿಲ್ಲ ಎಂಬುದು ದುರ್ಯೋಧನನ ಅಭಿಪ್ರಾಯವಾಗಿತ್ತು
ಕೊಟ್ಟಿರುವ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .Chalamane Merevem Kannada Notes 10 vakya
ಭೀಷ್ಮ ಮತ್ತು ದುರ್ಯೋಧನರ ನಡುವಿನ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿ .
ಶರಶಯ್ಕೆಯಲ್ಲಿದ್ದ ಭೀಷ್ಮನು ದುರ್ಯೋಧನನಿಗೆ ಈ ರೀತಿ ಬುದ್ಧಿವಾದವನ್ನು ಹೇಳುತ್ತಾನೆ . “ ಇನ್ನು ನಾನು ಹೇಳುವ ಮಾತನ್ನು ಒಪ್ಪಿಕೋ ಒಪ್ಪುವೆಯಾದರೆ ಪಾಂಡವರನ್ನು ಒಡಂಬಡಿಸಿ ಒಪ್ಪಂದ ಮಾಡಿ ಮೊದಲಿನಂತೆ ಕೂಡಿ ನಡೆಯುವ ಹಾಗೆ ಮಾಡುವೆನು . ಈಗಲೂ ಅವರು ನಮ್ಮ ಮಾತನ್ನು ಕೇಳುತ್ತಾರೆ . ಅವರು ನಮ್ಮ ಮಾತನ್ನು ಮೀರುವುದಿಲ್ಲ ನೀನೂ ಕೂಡ ನಮ್ಮ ಮಾತನ್ನು ಮೀರದೆ ನಡೆದುಕೋ ‘ . ಈ ಮಾತನ್ನು ಕೇಳಿ ದುರ್ಯೋಧನನು ಮುಗುಳುಕ್ಕನು .
ಅವರನ್ನು ಕುರಿತು ಹೀಗೆ ಹೇಳಿದನು “ ತಾನು ನಿಮಗೆ ನಮಸ್ಕಾರ ಮಾಡಿ ಹೋಗಬೇಕೆಂದು ಬಂದಿದ್ದೇನೆ . ನಾನು ಶತ್ರುಗಳೊಡನೆ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ . ಯುದ್ಧದಲ್ಲಿ ನಾನು ಯಾವ ಕಾರ್ಯ ಮಾಡಬೇಕಾಗಿದೆ ಎಂಬುದನ್ನು ತಿಳಿಸಿ , ನಾನು ಭೂಮಿಗಾಗಿ ಹೋರಾಡುತ್ತಿಲ್ಲ . ಕೇವಲ ನನ್ನ ಛಲಕ್ಕಾಗಿ ಹೋರಾಡುತ್ತಿರುವೆನು . ನನ್ನ ಮಕ್ಕಳು ಹಾಗೂ ಸೋದರರನ್ನು ಕೊಂದಿರುವ ಪಾಂಡವರನ್ನು ಸೋಲಿಸಲು ಹೋರಾಡುವನು ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಸಂಧಿಗೆ ಒಪ್ಪಲಾರೆನು ” ಕರ್ಣ ಹಾಗೂ ದುಶ್ಯಾಸನನನ್ನು ಕೊಂದಿರುವ ಅರ್ಜುನ ಹಾಗೂ ಭೀಮರನ್ನು ಕೊಲ್ಲುವುದಾಗಿ ಹೇಳುತ್ತಾನೆ .
ದುರ್ಯೋಧನನ ಛಲದ ಗುಣ ಅವನು ಮಾತುಗಳಲ್ಲಿ ವ್ಯಕ್ತವಾಗಿರುವ ಬಗೆಯನ್ನು ವಿವರಿಸಿ .
ಭೀಷ್ಮನು ಶರಶಯ್ಕೆಯಲ್ಲಿದ್ದರೂ ಪಾಂಡವರು ಹಾಗೂ ಕೌರವರ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸುತ್ತಾನೆ . ತನ್ನ ಭೇಟಿಗೆ ಬಂದ ದುರ್ಯೋಧನನಿಗೆ ಪಾಂಡವರೊಡನೆ ಸಂಧಿ ಮಾಡಿಕೊಳ್ಳಲು ಸೂಚಿಸುತ್ತಾನೆ . ಆದರೆ ದುರ್ಯೋಧನನು ಅವರ ಮಾತಿಗೆ ಸಮತವಿಲ್ಲವೆಂದು ತಿಳಿಸುತ್ತಾನೆ . ದುರ್ಯೋಧನನು ತಾನು ಭೂಮಿಗಾಗಿ ಹೋರಾಡುವುದರ ಬದಲು ಛಲಕ್ಕಾಗಿ ಹೋರಾಟ ಮಾಡುವುದಾಗಿ ತಿಳಿಸುತ್ತಾನೆ . ತನ್ನ ಬಂಟ ಕರ್ಣ , ಸೋದರ ದುಶ್ಯಾಸನನ ಹತ್ಯೆ ಮಾಡಿರುವ ಅರ್ಜುನ ಹಾಗೂ ಭೀಮರನ್ನು ಕೊಲ್ಲುವ ಛಲವನ್ನು ಹೊಂದಿರುತ್ತಾನೆ . ತನ್ನ ಮಕ್ಕಳು ಹಾಗೂ ಸಹೋದರರನ್ನು ಕೊಂದ ಪಾಂಡವರೊಡನೆ
ಒಪ್ಪಂದ ಮಾಡಿಕೊಳ್ಳುವ ಭೀಷ್ಮರ ಮಾತನ್ನು ಒಪ್ಪಿಕೊಳ್ಳುವುದಿಲ್ಲ . ಕೇವಲ ಪಾಂಡವರೊಡನೆ ಹೋರಾಡುವ ಛಲವನ್ನೇ ಮರೆಯುವನು ಎಂದು ದುರ್ಯೋಧನನು ಹೇಳುತ್ತಾನೆ .
![ಛಲಮನೆ ಮೆರೆವೆಂ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | Chalamane Merevem Kannada Notes Free](https://kaipidi.com/wp-content/uploads/2022/09/mqdefault.jpg)
ಈ ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ Chalamane Merevem Kannada Notes Sandarbha Sahitha Visvarisi
“ ನಲಕಿಟೆವನೆಂದು ಬಗೆದಿರ ಚಲಕಿಯವಂ ”
ಈ ವಾಕ್ಯವನ್ನು ರನ್ನ ಕವಿಯು ರಚಿಸಿರುವ ಸಾಹಸ ಭೀಮ ವಿಜಯಂ ‘ ಎಂಬ ಕಾವ್ಯದಿಂದ ಆಯ್ದ ‘ ಛಲಮನೆ ಮೆರೆವಂ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ , ಈ ಮಾತನ್ನು ದುರ್ಯೋಧನನು ಭೀಷ್ಮನಿಗೆ ಹೇಳಿದನು . ಶರಸಯ್ಕೆಯಲ್ಲಿ ಮಲಗಿದ್ದು ಭೀಷ್ಮರ ಆಶೀರ್ವಾದ ಪಡೆದು ಹೋಗಲು ಬಂದಿದ್ದಾಗ ಭೀಷ್ಮನು ಪಾಂಡವರೊಡನೆ ಸಂಧಿ ಮಾಡಿಕೋ ಎಂದು ಹೇಳಿದ ಸಂದರ್ಭದಲ್ಲಿ ಈ ಮಾತನ್ನು ದುರ್ಯೋಧನನು ಹೇಳುತ್ತಾನೆ .
ತಾನು ಭೂಮಿಗಾಗಿ ಹೋರಾಡುವುದಿಲ್ಲ ಬದಲಾಗಿ ನನ್ನ ಛಲಕ್ಕಾಗಿ ಪಾಂಡವರೊಡನೆ ಹೋರಾಡುವನು ಎಂದು ಹೇಳುವಲ್ಲಿ ಛಲದಿಂದ ಹಿಂದೆ ಸರಿಯುವುದಿಲ್ಲ ಎಂಬ ಸ್ವಾರಸ್ಯವು ಈ ಮಾತಿನಲ್ಲಿ ಅಡಗಿದೆ .
“ ಸಮರದೊಳೆನಗಜ್ಜ ಪೇಟೆಮಾವುದು ಕಜ್ಜಂ ” ಎಂದು
ಈ ವಾಕ್ಯವನ್ನು ರನ್ನ ಕವಿಯು ರಚಿಸಿರುವ ಸಾಹಸ ಭೀಮ ವಿಜಯಂ ‘ ಎಂಬ ಕಾವ್ಯದಿಂದ ಆಯ್ದ ‘ ಛಲಮನೆ ಮೆರೆವಂ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದುರ್ಯೋಧನನು ಭೀಷ್ಮನಿಗೆ ಹೇಳಿದನು . ಶರಶಯ್ಕೆಯಲ್ಲಿ ಮಲಗಿದ್ದ ಭೀಷ್ಮನು ದುರ್ಯೋಧನನಿಗೆ ಪಾಂಡವರೊಡನೆ ಸಂಧಿ ಮಾಡಿಕೋ ಹೇಳಿದ ಸಂದರ್ಭದಲ್ಲಿ ದುರ್ಯೋಧನನು ಈ ಮಾತನ್ನು ಹೇಳುತ್ತಾನೆ . ಒಪ್ಪಂದವನ್ನು ಮಾಡಿಕೊಳ್ಳುವುದನ್ನು ಬಿಟ್ಟು ನಾನು ಯುದ್ಧದಲ್ಲಿ ಯಾವ ಕಾರ್ಯ ಮಾಡಬೇಕೆಂದು ಕೇಳುವಲ್ಲಿ ಸಂಧಿಯ ಬಗ್ಗೆ ನಿರಾಸತ್ತೆಯನ್ನು ತೋರುವ ಸ್ವಾರಸ್ಯವ ಈ ಮಾತಿನಲ್ಲಿ ಅಡಗಿದೆ .
“ ಪಾಂಡವರೊಳಿದು ಛಲಮನೆ ಮೆರೆವಂ “
ಈ ವಾಕ್ಯವನ್ನು ರನ್ನ ಕವಿಯು ರಚಿಸಿರುವ ಸಾಹಸ ಭೀಮ ವಿಜಯಂ ‘ ಎಂಬ ಕಾವ್ಯದಿಂದ ಆಯ್ದ ‘ ಛಲಮನೆ ಮೆರೆವಂ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದುರ್ಯೋಧನನು ಭೀಷರಿಗೆ ಹೇಳುತ್ತಾನೆ .
ತನ್ನ ನೂರು ಮಕ್ಕಳು ಹಾಗೂ ನೂರು ಸೋದರರು ಶತ್ರುಗಳೊಡನೆ ಹೋರಾಡಿ ಸತ್ತಿರುವರು ಎಂದು ಹೇಳುವ ಸಂದರ್ಭದಲ್ಲಿ ದುರ್ಯೋಧನನು ಈ ಮಾತನ್ನು ಹೇಳುತ್ತಾನೆ . ಪಾಂಡವರೊಡನೆ ಕಾದಾಡಿ ತನ್ನ ಛಲವನ್ನು ಮೆರೆಯುತ್ತೇನೆ ಎಂದು ಹೇಳುವಲ್ಲಿ ಛಲಕ್ಕೆ ದುರ್ಯೋಧನನ್ನು ನೀಡುತ್ತಿದ್ದ ಮಹತ್ವದ ಸ್ವಾರಸ್ಯವನ್ನೇ ಈ ಮಾತಿನಲ್ಲಿ ಕಾಣಬಹುದಾಗಿದೆ .
ಮೇಲಾಯ್ತು ಕೌರವರಿಗವನಿತಳಂ , ”
ಈ ವಾಕ್ಯವನ್ನು ನನ್ನ ಕವಿಯು ರಚಿಸಿರುವ ಸಾಹಸ ಭೀಮ ವಿಜಯಂ ಎಂಬ ಕಾವ್ಯದಿಂದ ಆಯ್ದ ‘ ಛಲಮನೆ ಮೆರೆವಂ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದುರ್ಯೋಧನನು ಭೀಷ್ಮನಿಗೆ ಹೇಳುತ್ತಾನೆ . ಸಂಧಿ ಮಾಡಿಕೋ ಎಂಬ ಭೀಷರ ಮಾತನ್ನು ಒಪ್ಪದೆ ಕಾಳಗದಲ್ಲಿ ಕಾದಾಡುತ್ತೇನೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ . ಯುದ್ಧದ ನಂತರ ಭೂಮಿಯ ಒಡೆತನ ಪಾಂಡವರಿಗೆ ಹೋಗಬೇಕು ಇಲ್ಲವೆ ಕೌರವರಿಗೆ ಉಳಿಯಬೇಕು ಎಂಬಲ್ಲಿ ಯುದ್ಧದ ಫಲಿತಾಂಶ ಏನೇ ಬಂದರು ಸ್ವೀಕರಿಸಲು ಸಿದ್ಧ ಎಂಬ ಸ್ವಾರಸ್ಯವು ಈ ಮಾತಿನಲ್ಲಿ ಅಡಗಿದೆ .
ಭಾಷಾ ಚಟಿವಟಿಕೆ
ಕೊಟ್ಟಿರುವ ಪದ್ಯದ ಸಾಲುಗಳಿಗೆ ಪ್ರಸಾರ ಹಾಕಿ , ಗಣ ವಿಭಾಗ ಮಾಡಿ ಛಂದಸ್ಸಿನ ಹೆಸರನ್ನು ಬರೆಯಿರಿ
![ಛಲಮನೆ ಮೆರೆವೆಂ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ | Chalamane Merevem Kannada Notes Free](https://kaipidi.com/wp-content/uploads/2022/09/photo_2022-09-22_04-24-15-edited.jpg)
ಕೊಟ್ಟಿರುವ ಪದಗಳಿಗೆ ತತ್ಸಮ – ತದ್ಭವಗಳನ್ನು ಬರೆಯಿರಿ
ಕಪ್ಪ – ಕಾರ್ಯ ,
ಅಜ್ಜ – ಆರ್ಯ
ಕೊಟ್ಟಿರುವ ಪದಗಳನ್ನು ವಿಗ್ರಹವಾಕ್ಯ ಮಾಡಿ ಸಮಾಸದ ಹೆಸರನ್ನು ತಿಳಿಸಿ .
ಪಾರ್ಥಭೀಮರು , ಅಂತಕಾತ್ಮಜ , ದಿನಪಸುತ
ಪಾರ್ಥಭೀಮರು = ಪಾರ್ಥನು + ಭೀಮನು = ದ್ವಂದಸಮಾಸ
ಅಂತಕಾತ್ಕಜ ದಿನಪಸುತ = ಯಾರು ಅಂತಕನ ( ಯಮನ ) ಆತ್ಮಜನೋ ( ಮಗನೋ ) ಅವನು ( ಯುಧಿಷ್ಠಿರ ) ಬಹುವೀಹಿ ಸಮಾಸ = ಯಾರು
ದಿನಪನ ( ಸೂರ್ಯನ ) ಸುತನೋ ( ಮಗನೋ ) ಅವನು ( ಕರ್ಣ ) ಬಹುವೀಹಿ ಸಮಾಸ
ಪದಗಳ ಅರ್ಥ .
ಪದಗಳ ಅರ್ಥಗಳು
ವಚನ : ಇಂಬುಕೆಯ್ದೆ – ಒಪ್ಪಿಕೊಳ್ಳಲು , ಸಮ್ಮತಿ ಸೂಚಿಸಲು , ಒಡಂಬಡಿಸಿ ಒಪ್ಪಿಸಿ , ಸಂಧಿ – ಒಪ್ಪಂದ ; ಪೂರ್ವಕ್ರಮದೊಳ್ – ಹಿಂದಿನಂತೆಯೇ ಮೊದಲಿನಂತೆಯೇ ; ನಡೆವಂತೆ – ನಡೆದುಕೊಳ್ಳುವ ಹಾಗೆ ; ಮಾಲ್ಪೆಂ- ಮಾಡುವೆನು ; ಎಮ್ಮೆಂದುದ – ನಾನು ಹೇಳಿದ್ದನ್ನು ನೆಗೆಲ್ವೇಟೈಂ – ನಡೆದುಕೊಳ್ಳಬೇಕು ; ಸುಯೋಧನ – ದುದ್ಯೋಧನ .
- ಪೊಡೆಮಟ್ಟು – ನಮಸ್ಕರಿಸಿ ; ಅಹಿತರೊಳ್ – ಶತ್ರುಗಳಲ್ಲಿ , ಪಾಂಡವರಲ್ಲಿ ; ಒಪ್ಪಂದವನ್ನು ಏರ್ಪಡಿಸು ; ಸಮರದೊಳ್ ಭೂಮಿಯಲ್ಲಿ ; ಪೇಟೆ ಹೇಳಿ ; ಕಜ್ಜಂ ಸಮಗೊಳಿಸು ಯುದ್ಧ ಕಾರ್ಯ , ಕೆಲಸ . ಹೋರಾಡುವ ; ಪಾಂಡುಸುತರೋಳ್
- ಇಟವೆ ಪಾಲ – – ಪಾಂಡುವಿನ ಮಕ್ಕಳಲ್ಲಿ ; – ಪಾಳು ಬಿದ್ದಿರುವ ನೆಲ ; ದಿನಪಸಂತ – ಕರ್ಣ ; ಪುದುವಾಳಪೆನೆ ? – ಬಾಳುವುದುಂಟೆ ?
- ಅಣುಗಾಳ್ – ಪ್ರಿಯ ಗೆಳೆಯ , ( ಕರ್ಣ ) ಅಣುಗದಮ್ಮ – ಪ್ರಿಯತಮ್ಮ , ( ದುಶ್ಯಾಸನ ) ; ಪಾರ್ಥ ಅರ್ಜುನ ; ಅಸು ಪ್ರಾಣ : ಇರ್ಬರು ಕೊಂದು ; ಬಜೆಕ್ಕೆ – ಆಮೇಲೆ ; ಅಂತಕಾತ್ಮಜ – ಅಂತಕ – ಆತ್ಮಜ – ಯಮನ ಇಬ್ಬರು ; ಇಕ್ಕಿ – ಮಗ ( ಯುಧಿಷ್ಠಿರ ) ; ಅಲ್ ದುಃಖ ,
- ಪುಟ್ಟದ – ಹುಟ್ಟಿದ ; ಓಡವುಟ್ಟದ – ಜೊತೆಯಲ್ಲಿ ಹುಟ್ಟಿದ ; ನೂರ್ವರು ನೂರು ಜನರು ; ಇದಿರ್ಚಿ – ಹೋರಾಡಿ : ಸತರ್ ಪಟ್ಟರೆ – ಸತ್ತರೆ ಮತ್ತೆ ಹುಟ್ಟುವುದಿಲ್ಲವೆ ? ಛಲಮನೆ ಮೆರೆವೆಂ – ಚಲವನ್ನೇ ಮರೆಯುವೆ , ಸಾಧಿಸುವ
- ಕಾದು – ಹೋರಾಡು : ಸಮರ – ಯುದ್ಧ ; ಕೌರವಂಗ – ದುರ್ಯೋಧನನಿಗೆ : ಅವನಿ – ಭೂಮಿ
Chalamane Merevem Kannada Notes kannada 10th
FAQ
ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ?
ಅರ್ಜುನ ಹಾಗೂ ಭೀಮರನ್ನು
ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನ ಯಾರಿಗೆ ಹೇಳಿದನು ?
ನಿಮಗೆ ನಮ್ಮಸರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನನು ಭೀಷ್ಮನಿಗೆ ಹೇಳುವನು .
SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು
- ಹಸುರು ಪದ್ಯ ನೋಟ್ಸ್ ಪ್ರಶ್ನೆ ಉತ್ತರ
- ಹಲಗಲಿ ಬೇಡರು ಪಾಠದ ಪ್ರಶ್ನೋತ್ತರಗಳು
- ಹಕ್ಕಿ ಹಾರುತಿದೆ ನೋಡಿದಿರಾ
- ಸಂಕಲ್ಪ ಗೀತೆ ನೋಟ್ಸ್
- ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು
- ಎದೆಗೆ ಬಿದ್ದ ಅಕ್ಷರ ಪಾಠದ ಪ್ರಶ್ನೋತ್ತರಗಳು
- ಭಾಗ್ಯಶಿಲ್ಪಿಗಳು ಪಾಠದ ಪ್ರಶ್ನೋತ್ತರಗಳು
- ಶಬರಿ ಪಾಠದ ಕವಿ ಪರಿಚಯ
- ಶಬರಿ ಪಾಠದ ಪ್ರಶ್ನೆ ಮತ್ತು ಉತ್ತರ
- ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು