Veeralava Kannada Poem Notes , ವೀರಲವ ಪದ್ಯದ notes , ವೀರಲವ ಪದ್ಯದ ಭಾವಾರ್ಥ , veeralava kannada poem notes pdf , veeralava lesson notes
Veeralava Kannada Poem Notes Questions and Answers, Summary, Notes Pdf, Siri Kannada
ಈ ಲೇಖನದಲ್ಲಿ 10ನೇ ತರಗತಿ ವೀರಲವ ಪದ್ಯದ ಪ್ರಶ್ನೋತ್ತರಗಳನ್ನು ನೀಡಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದು ವಿದ್ಯಾರ್ಥಿಗಳಿಗಾಗಿ ಇದು ಸಂಪೂರ್ಣವಾಗಿ ಉಚಿತವಾಗಿದೆ.
ಕವಿ ಪರಿಚಯ Veeralava Kannada Poem Notes
ಕವಿ:- ಲಕ್ಷ್ಮೀಶ ( ಲಕ್ಷ್ಮೀರಮಣ , ಲಕ್ಷ್ಮೀಪತಿ )
- ಕಾಲ : ಕ್ರಿ.ಶ. 1550
- ಸ್ಥಳ : ಚಿಕ್ಕಮಗಳೂರು ಜಿಲ್ಲೆ , ಕಡೂರು ತಾಲೂಕು , ದೇವನೂರು .
- ಕೃತಿ;: ಜೈಮಿನಿ ಭಾರತ
- ಬಿರುದು:ಉಪಮಾಲೋಲ , ಕರ್ಣಾಟಕ ಕವಿಚೂತವನ ಚೈತ್ರ
- ಆಕರಗ್ರಂಥ: ಜೈಮಿನಿ ಭಾರತ ( ಇಪ್ಪತ್ತನೆಯ ಸಂಧಿ )
- ಸಂಪಾದನೆ : ದೇವುಡು ನರಸಿಂಹಶಾಸ್ತ್ರೀ ಮತ್ತು ಬಿ . ಶಿವಮೂರ್ತಿಶಾಸೀ
ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ Veeralava Kannada Poem Notes ondu vakya
‘ ಜೈಮಿನಿ ಭಾರತ ‘ ಕಾವ್ಯವನ್ನು ಬರೆದ ಕವಿ ಯಾರು ?
ಜೈಮಿನಿ ಭಾರತ ‘ ಕಾವ್ಯವನ್ನು ಬರೆದವರು ಲಕ್ಷ್ಮೀಶ ಕವಿ .
ಯಜ್ಞಾಶ್ವವನ್ನು ಕಟ್ಟಿದವರು ಯಾರು ?
ಲವನು ಯಜ್ಞಾಶ್ವವನ್ನು ಕಟ್ಟಿದನು .
ಕುದುರೆಯನ್ನು ಅವನು ಯಾವುದರಿಂದ ಕಟ್ಟಿದನು ?
ಲವನು ತಾನು ಹೊಡೆದಿದ್ದ ಉತ್ತರೀಯ ಬಟ್ಟೆಯನ್ನು ತೆಗೆದು ಕುದುರೆಯ ಕೊರಳಿಗೆ ಹಾಕಿ ಒಂದು ಬಾಳೆಯ ಗಿಡಕ್ಕೆ ಕಟ್ಟಿದನು .
ಮುನಿಸುತರು ಹೆದರಲು ಕಾರಣವೇನು ?
ರಾಮನ ಕುದುರೆಯನ್ನು ಬಲವಂತದಿಂದ ಹಿಡಿದು ಕಟ್ಟುತ್ತಿರುವ ಅವನನ್ನು ಅಶ್ವರಕ್ಷಕನು ಹಿಡಿದುಕೊಂಡು ಹೋಗಬಹುದೆಂದು ಮುನಿಸುತರು ಹೆದರಿದರು .
Veeralava Kannada Question Answer
ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ . Veeralava Kannada Poem Notes 3-4 vakya
ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ವಿವರಿಸಿ .
ಕುದುರೆಯು ಶುಭಕರವಾದ ವಾಲ್ಮೀಕಿಗಳ ಆಶ್ರಮವನ್ನು ಹೊಕ್ಕಿತು . ( ಆಗ ವರುಣನು ವಾಲ್ಮೀಕಿಯನ್ನು ಯಜ್ಞಾರ್ಥವಾಗಿ ಕರೆದುದ್ದರಿಂದ ವಾಲ್ಮೀಕಿಗಳು ವರುಣಲೋಕಕ್ಕೆ ಹೋಗಿದ್ದರು . ಅವರು ಆಶ್ರಮದಲ್ಲಿ ಇರಲಿಲ್ಲ ) ಆ ಸಂದರ್ಭದಲ್ಲಿ ಕುದುರೆಯು ಆಶ್ರಮವನ್ನು ಪ್ರವೇಶಿಸಿತು . ಅಲ್ಲಿ ಬೆಳೆದಿದ್ದ ಗರಿಕೆಯ ಹುಲ್ಲನ್ನು ಮೇಯುತ್ತಿತ್ತು .
ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು ?
“ ಈಗ ಕೌಸಲೆಯು ಏಕ ವೀರ ಮಾತೆಯಾಗಿರುವಳು . ಆಕೆಯ ಮಗನು ರಘದ್ವಹನನಾದ ಶ್ರೀರಾಮನು . ಅವನು ಈ ಕುದುರೆ ( ಯಜ್ಞಾಶ್ವ ) ಯನ್ನು ಬಿಟ್ಟಿರುವನು . ಬಲಿಷ್ಠನು ಇದನ್ನು ಹಿಡಿದು ಕಟ್ಟಲಿ ” ಎಂದು ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಬರೆಯಲಾಗಿತ್ತು .
ಕುದುರೆಯನ್ನು ಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ .
ಲವನು ಕುದುರೆಯನ್ನು ಹಿಡಿದನು . ತಾನು ಹೊಡೆದಿದ್ದ ಬಟ್ಟೆಯನ್ನು ತೆಗೆದು ಕುದುರೆಯ ಕೊರಳಿಗೆ ಹಾಕಿ ಒಂದು ಬಾಳೆಯ ಗಿಡಕ್ಕೆ ಕಟ್ಟಿದನು . ಮುನಿಕುಮಾರರು ಇದನ್ನು ನೋಡಿ ಹೆದರಿ ಬೇಡವೆಂದು ತಡೆಯಲು ಪ್ರಯತ್ನಿಸಿದರು . ‘ ಎಲೈ ಲವನೇ ! ಈ ರಾಮನ ಕುದುರೆಯನ್ನು ವೃಥಾ ( ಬಲಾತ್ಕಾರದಿಂದ ) ಬಲವಂತದಿಂದ ಹಿಡಿದು ಕಟ್ಟುತ್ತಿರುವೆ . ಅಶ್ವರಕ್ಷಕನು ನಿನ್ನನ್ನು ಹಿಡಿದುಕೊಂಡು ಹೋಗುವರು . ಬೇಡ ಇದನ್ನು ಬಿಟ್ಟುಬಿಡು ‘ ಎಂದು ಹೇಳಿದರು . ಲವನು ಅವರ ಮಾತುಗಳನ್ನು ನಿರಾಕರಿಸಿ ಕೋಪದಿಂದ ನೀವು ಮುನಿಸೀಯರ ಹೊಟ್ಟೆಯಲ್ಲಿ ಹುಟ್ಟಿದವರು . ಆದರೆ ನಾನು ಸೀತೆಯ ಹೊಟ್ಟೆಯಲ್ಲಿ ಹುಟ್ಟಿದವನು ಎಂದನು .
ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ . Veeralava Kannada Poem Notes 8-10 vakya
ಲವನು ಯಜ್ಞಾಶ್ವವನ್ನು ಕಟ್ಟಲು ಕಾರಣವೇನು ?
ಲವನು ಧನುಷ್ಟಾಣಿಯಾಗಿ ಗರಿಕೆ ಹುಲ್ಲನ್ನು ಮೇಯುತ್ತಿದ್ದ ಕುದುರೆಯನ್ನು ಕಂಡು ಮುನಿಪುತ್ರರನ್ನು ವನದ ರಕ್ಷಣೆಯನ್ನು ಮಾಡುತ್ತಿದ್ದನು . ತನ್ನೆದುರಿಗೆ ಕರೆದುಕೊಂಡು ಅವರೊಡನೆ ಕುದುರೆಯ ಬಳಿಗೆ ಬಂದನು . ಕುದುರೆಯ ಹಣೆಯಲ್ಲಿದ್ದ ಪತ್ರವನ್ನು ಓದಿಕೊಂಡನು . “ ಈಗ ಕೌಸಲ್ಯಯು ಏಕ ವೀರ ಮಾತೆಯಾಗಿರುವಳು .
ಆಕೆಯ ಮಗನು ರದ್ದಹನನಾದ ಶ್ರೀರಾಮನು . ಅವನು ಈ ಕುದುರೆ ( ಯಜ್ಞಾಶ್ರ ) ಯನ್ನು ಬಿಟ್ಟಿರುವನು . ಬಲಿಷ್ಠನು ಇದನ್ನು ಹಿಡಿದು ಕಟ್ಟಲಿ ” ಎಂದು ಬರೆದಿತ್ತು . ಆ ಪತ್ರದ ಅಭಿಪ್ರಾಯವನ್ನು ಅವನು ಬೇಗನೆ ಗ್ರಹಿಸಿದನು . ಏನು ನಮ್ಮ ತಾಯಿ ಬಂಜೆಯೇ ? ಅಲ್ಲ ಅವಳು ವೀರ ಮಾತೆಯಲ್ಲವೆ ? ಎಂದು ಹೇಳಿ ಆ ಕುದುರೆಯನ್ನು ಅವನು ಹಿಡಿದನು . ತಾನು ಹೊಡೆದಿದ್ದ ಬಟ್ಟೆಯನ್ನು ತೆಗೆದು ಕುದುರೆಯ ಕೊರಳಿಗೆ ಹಾಕಿ ಒಂದು ಬಾಳೆಯ ಗಿಡಕ್ಕೆ ಕಟ್ಟಿದನು .
ಲವನ ನಡವಳಿಕೆ ಮೆಚ್ಚುಗೆಯಾಯಿತೇ ? ಏಕೆ ?
ಹೌದು ಲವನ ನಡವಳಿಕೆ ಮೆಚ್ಚುಗೆಯಾಯಿತು . ವಾಲ್ಮೀಕಿ ಆಶ್ರಮದಲ್ಲಿ ಬೆಳೆದ ಸೀತೆಯ ಮಕ್ಕಳಾದ ಲವಕುಶರು ಎಲ್ಲ ವಿದ್ಯೆಗಳನ್ನು ಕಲಿತರು . ಕ್ಷತ್ರಿಯ ಕುಮಾರನಾದ ಲವ ಹುಟ್ಟಿದ್ದು ಋಷ್ಯಾಶ್ರಮದಲ್ಲಿ ಬೆಳೆದದ್ದು ಋಷಿಕುಮಾರರ ಜೊತೆಗೆ , ಆದರೂ ಅವನ ದೇಹದಲ್ಲಿ ಹರಿಯುತ್ತಿರುವುದು ಕ್ಷತ್ರಿಯ ಗುಣವುಳ್ಳ ರಕ್ತ , ಕುದುರೆಯ ಹಣೆಯಲ್ಲಿ ಪತ್ರವನ್ನು ಓದಿಕೊಂಡನು . “ ಈಗ ಕೌಸಲ್ಯಯು ಏಕ ವೀರ ಮಾತೆಯಾಗಿರುವಳು , ಆಕೆಯ ಮಗನು ರದಹನನಾದ ಶ್ರೀರಾಮನು .
ಅವನು ಈ ಕುದುರೆ ( ಯಜ್ಞಾಶ್ವ ) ಯನ್ನು ಬಿಟ್ಟಿರುವನು . ಬಲಿಷ್ಠನು ಇದನ್ನು ಹಿಡಿದು ಕಟ್ಟಲಿ ” ಎಂದು ಬರೆದಿತ್ತು . ಆ ಪತ್ರದ ಅಭಿಪ್ರಾಯವನ್ನು ಅವನು ಬೇಗನೆ ಗ್ರಹಿಸಿದನು . ಏನು ನಮ್ಮ ತಾಯಿ ಬಂಜೆಯೇ ? ಅಥವಾ ಅವಳು ವೀರ ಮಾತೆಯಲ್ಲವೆ ? ಎಂದು ಹೇಳಿ ಆ ಕುದುರೆಯನ್ನು ಅವನು ಹಿಡಿದನು . ತಾನು ಹೊಡೆದಿದ್ದ ಬಟ್ಟೆಯನ್ನು ತೆಗೆದು ಕುದುರೆಯ ಕೊರಳಿಗೆ ಕಟ್ಟಿ ಒಂದು ಬಾಳೆಯ ಗಿಡಕ್ಕೆ ಕಟ್ಟಿದನು . ನಿಜಕ್ಕೂ ಅವನು ವೀರ ಲವನೇ ಆಗಿದ್ದಾನೆ .
ಸಂದರ್ಭಸಹಿತ ಸ್ವಾರಸ್ಯವನ್ನು ಬರೆಯಿರಿ . Veeralava Kannada Poem Notes sandarbha
” ರಘದಹನ ಸೊಲ್ಲೇಳಿ ನಮಿಸಲ್ ”
ಈ ವಾಕ್ಯವನ್ನು ಲಕ್ಷ್ಮೀಶಕವಿಯು ರಚಿಸಿರುವ ವೀರ ಲವ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಆಕರಗ್ರಂಥ : ಲಕ್ಷ್ಮೀಶ ವಿರಚಿತ ಜೈಮಿನಿಭಾರತ ಕಾವ್ಯವನ್ನು ದೇವುಡು ನರಸಿಂಹಶಾಸ್ತ್ರೀ ಮತ್ತು ಬಿ . ಶಿವಮೂರ್ತಿ ಶಾಸ್ತ್ರೀ ಇವರು ಸಂಪಾದಿಸಿದ್ದು ಅದರ ಇಪ್ಪತ್ತನೆಯ ಸಂಧಿಯಿಂದ ಈ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ .
ಈ ಮಾತನ್ನು ಲಕ್ಷ್ಮೀಶ ಕವಿ ಹೇಳಿದ್ದಾರೆ . ಕುದುರೆಯು ಶತ್ರುಘ್ನನೊಡನೆ ಹೊರಟು ಸ್ವಲ್ಪ – ಕಾಲದಲ್ಲಿಯೇ ನಾನಾ ದೇಶಗಳನ್ನೂ ಪಟ್ಟಣಗಳನ್ನೂ ಉಪವನಗಳನ್ನೂ ದಾಟಿ ವಿನೋದದಿಂದ ಸಂಚರಿಸುತ್ತಿದ್ದಿತು . ರಘದ್ವಹನನಾದ ಶ್ರೀರಾಮನ ಹೆಸರನ್ನು ಕೇಳಿ ಆ ಕುದುರೆಯನ್ನು ಕಂಡ ದೊರೆಗಳೆಲ್ಲರೂ ಅದನ್ನು ಕಟ್ಟಿಹಾಕದೆ , ಯುದ್ಧದಿಂದ ವಿಮುಖರಾಗಿ ನಮಸ್ಕರಿಸಿದರು . ಕೆಲವು ಶೂರರೂ ಬಲಿಷ್ಠರೂ ಆಗಿದ್ದವರು ಅದನ್ನು ಹಿಡಿಯುತ್ತಿದ್ದರು . ಶೂರನಾದ ಶತ್ರುಘ್ನನು ಅವರನ್ನು ಜಯಿಸಿ ಕುದುರೆಯನ್ನು ಬಿಡಿಸುತ್ತಾ ಬರುತ್ತಿದ್ದನು .
“ ತನ್ನ ಮಾತೆಯಂ ಸರ್ವಜನಮುಂ ಬಂಜೆಯೆನ್ನದಿರ್ದಪುದೆ “
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ವೀರಲವ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಆಕರಗ್ರಂಥ : ಲಕ್ಷ್ಮೀಶ ವಿರಚಿತ ಜೈಮಿನಿಭಾರತ ಕಾವ್ಯವನ್ನು ದೇವುಡು ನರಸಿಂಹಶಾಸ್ತ್ರೀ ಮತ್ತು ಬಿ . ಶಿವಮೂರ್ತಿ ಶಾಸ್ತ್ರೀ ಇವರು ಸಂಪಾದಿಸಿದ್ದು ಅದರ ಇಪ್ಪತ್ತನೆಯ ಸಂಧಿಯಿಂದ ಈ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ . ಈ ಮಾತನ್ನು ಲವನು ಹೇಳಿದ್ದಾನೆ . ಕುದುರೆಯ ಹಣೆಯಲ್ಲಿ ಪತ್ರವನ್ನು ಓದಿಕೊಂಡು “ ಈಗ ಕೌಸಲ್ಯಯು ಏಕ ವೀರ ಮಾತೆಯಾಗಿರುವಳು .
ಆಕೆಯ ಮಗನು ರದ್ವಹನನಾದ ಶ್ರೀರಾಮನು , ಅವನು ಈ ಕುದುರೆ ( ಯಜ್ಞಾಶ್ವ ) ಯನ್ನು ಬಿಟ್ಟಿರುವನು . ಬಲಿಷ್ಠನು ಇದನ್ನು ಹಿಡಿದು ಕಟ್ಟಲಿ ” ಎಂದು ಬರೆದಿತ್ತು . ಆ ಪತ್ರದ ಅಭಿಪ್ರಾಯವನ್ನು ಅವನು ಬೇಗನೆ ಗ್ರಹಿಸಿದನು . ಏನು ನಮ್ಮ ತಾಯಿ ಬಂಜೆಯೇ ? ಅಲ್ಲ ಅವಳು ವೀರ ಮಾತೆಯಲ್ಲವೆ ? ಎಂದು ಹೇಳಿ ಆ ಕುದುರೆಯನ್ನು ಅವನು ಹಿಡಿದನು . ತಾನು ಹೊಡೆದಿದ್ದ ಬಟ್ಟೆಯನ್ನು ತೆಗೆದು ಕುದುರೆಯ ಕೊರಳಿಗೆ ಸುತ್ತಿ ಒಂದು ಬಾಳೆಯ ಗಿಡಕ್ಕೆ ಕಟ್ಟಿದನು .
“ ಅರಸುಗಳ ವಾಜಿಯಂ ಬಿಡು “
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ವೀರ ಲವ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಆಕರಗ್ರಂಥ : ಲಕ್ಷ್ಮೀಶ ವಿರಚಿತ ಜೈಮಿನಿಭಾರತ ಕಾವ್ಯವನ್ನು ದೇವುಡು ನರಸಿಂಹಶಾಸ್ತ್ರೀ ಮತ್ತು ಬಿ . ಶಿವಮೂರ್ತಿ ಶಾಸ್ತ್ರೀ ಇವರು ಸಂಪಾದಿಸಿದ್ದು ಅದರ ಇಪ್ಪತ್ತನೆಯ ಸಂಧಿಯಿಂದ ಈ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ .
ಈ ಮಾತನ್ನು ಮುನಿಕುಮಾರರು ಲವನಿಗೆ ಹೇಳಿದರು . ಕುದುರೆಯನ್ನು ಅವನು ಹಿಡಿದನು . ಆಗ ಮುನಿಕುಮಾರರು ಇದನ್ನು ನೋಡಿ ಹೆದರಿ ಬೇಡವೆಂದು ತಡೆಯಲು ಪ್ರಯತ್ನಿಸಿದರು . ‘ ಎಲೈ ಲವನೇ ! ಈ ರಾಮನ ಕುದುರೆಯನ್ನು ವೃಥಾ ( ಬಲಾತ್ಕಾರದಿಂದ ) ಬಲವಂತದಿಂದ ಹಿಡಿದು ಕಟ್ಟುತ್ತಿರುವೆ . ಅಶ್ವರಕ್ಷಕನು ನಿನ್ನನ್ನು ಹಿಡಿದುಕೊಂಡು ಹೋಗುವನು . ಬೇಡ ಇದನ್ನು ಬಿಟ್ಟುಬಿಡು ಎಂದು ಹೇಳಿದರು.
“ ಜಾನಕಿಯ ಮಗನಿದಕೆ ಬೆದರುವನೆ ”
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ವೀರ ಲವ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಆಕರಗ್ರಂಥ : ಲಕ್ಷ್ಮೀಶ ವಿರಚಿತ ಜೈಮಿನಿಭಾರತ ಕಾವ್ಯವನ್ನು ದೇವುಡು ನರಸಿಂಹಶಾಸ್ತ್ರೀ ಮತ್ತು ಬಿ.ಶಿವಮೂರ್ತಿ ಶಾಸ್ತ್ರೀ ಇವರು ಸಂಪಾದಿಸಿದ್ದು ಅದರ ಇಪ್ಪತ್ತನೆಯ ಸಂಧಿಯಿಂದ ಈ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ .
ಈ ಮಾತನ್ನು ಅವನು ಹೇಳಿದನು .
ಮುನಿಕುಮಾರರು ಲವನನ್ನು ತಡೆಯಲು ಪ್ರಯತ್ನಿಸಿದರು . ‘ ಎಲೈ ಲವನೇ ! ಈ ರಾಮನ ಕುದುರೆಯನ್ನು ಬಲವಂತದಿಂದ ಹಿಡಿದು ಕಟ್ಟುತ್ತಿರುವೆ . ಅಶ್ವರಕ್ಷಕರು ನಿನ್ನನ್ನು ಹಿಡಿದುಕೊಂಡು ಹೋಗುವರು , ಬೇಡ ಇದನ್ನು ಬಿಟ್ಟುಬಿಡು ‘ ಎಂದು ಹೇಳಿದರು . ಆಗ ಲವನು ಅವರ ಮಾತುಗಳನ್ನು ನಿರಾಕರಿಸಿ ಕೋಪದಿಂದ ನೀವು ಮುನಿಸ್ತ್ರೀಯರ ಹೊಟ್ಟೆಯಲ್ಲಿ ಹುಟ್ಟಿದವರು . ಆದರೆ ನಾನು ಸೀತೆಯ ಹೊಟ್ಟೆಯಲ್ಲಿ ಹುಟ್ಟಿದವನು . ಈ ಕುದುರೆಯನ್ನು ಕಟ್ಟಿ ಈಗ ಹೆದರಿಕೆಯಿಂದ ಅದನ್ನು ಬಿಟ್ಟುಬಿಡುವುದಕ್ಕೆ ನಾನೇನು ಸೀತೆಯ ಹೊಟ್ಟೆಯಲ್ಲಿ ಹುಟ್ಟಿದ ಕ್ರಿಮಿಯೇ ? ಎಂದು ಪ್ರಶ್ನಿಸಿದನು . ಕೂಡಲೆ ಬಿಲ್ಲನ್ನು ಹೆದೆಗೇರಿಸಿ ನಿಂತನು .
ಹೊಂದಿಸಿ ಬರೆಯಿರಿ . Veeralava Kannada Poem Notes hondisi bareyiri
- ದೇವನೂರು – ರಾಮ
- ಕೌಸಲ್ಯ – ಲಕ್ಷ್ಮೀಶ
- ವರುಣ- ಅಶ್ವ
- ವಾಲ್ಮೀಕಿ – ಅಬ್ದಿಪ
- ತುರಂಗ – ಮುನಿ ….ಮಳೆ … ಶತ್ರುಜ್ಞ
ಉತ್ತರಗಳು
೧-ಲಕ್ಷ್ಮೀಶ
೨- ರಾಮ
೩- ಅಭ್ಧಿಪ
೪- ಮುನಿ
೫- ಅಶ್ವ
ಭಾಷಾ ಚಟುವಟಿಕೆ
ವಿಗ್ರಹಿಸಿ ಸಮಾಸ ಹೆಸರಿಸಿ
ಸೋಲ್ಗೆಳಿ -ಸೊಲ್ಲನ್ನು+ಕೇಳಿ=ಕ್ರಿಯಾಸಮಸ
ನಲ್ಲುದುರೆ -ನಲ್+ಕುದುರೆ= ಕರ್ಮಧರೆಯಾ ಸಮಾಸ
ಬಿಲ್ಗೊಂಡು -ಬಿಲ್+ಕೊಂಡು=ಕ್ರಿಯಾಸಮಸ
ಬಿಟ್ಟಿರುವನೇರಿಸಿ – ಬಿಲ್ಡಿರುವನ್ + ಏರಿಸಿ -ಕ್ರಿಯಾಸಮಸ
ಪೂವದೋಟ ಪೂವಿನ -ತೋಟ + ತತ್ಪುರುಷ ( ಹೂವಿನ )
ತತ್ಸಮ – ತದ್ಭವ ಬರೆಯಿರಿ .
ರಾಮ ಅಭಿಪ ಮುನಿ
ಅಶ್ವ – ನಿಜ + ಕುದುರೆ
ಯಜ್ಞ – ಜನ್ಮ ಬಂಜೆ – ವಂದ್ಯಾ
ವಿಂಗಡಿಸಿ ಸಂದಿಯ ಹೆಸರು ಬರೆಯಿರಿ.
ಚರಿಸುತದ್ವಾರ- ಚರಿಸುತ+ಅದ್ವಾರದ – ಲೋಪಸಂಧಿ
ನಿಜಾಶ್ರಮ-ನಿಜ + ಆಶ್ರಮ – ಸವರ್ಣದೀರ್ಘ ಸಂಧಿ
ಲೇಖನವನೋದಿ – ಲೇಖನವನ್ನು + ಓದಿ -ಲೋಪಸಂಧಿ
ತೆಗೆದು + ಉತ್ತರೀ ಯಮಂ – ಲೋಪಸಂಧಿ
ಬೇಡಬೇಡರಸುಗಳ -ಬೇಡಬೇಡ + ಅರಸುಗಳ ಲೋಪಸಂಧಿ
ನಿಂತಿರ್ದನು -ನಿಂತು + ಇರ್ದನು -ಲೋಪಸಂಧಿ
ಪ್ರಸ್ತಾರ ಹಾಕಿ ಗಣ ವಿಭಾಗ ಮಾಡಿ ಛಂದಸ್ಸನ್ನು ಹೆಸರಿಸಿ ಲಕ್ಷಣ ಬರೆಯಿರಿ .
ಹೆಚ್ಚುವರಿ ಪ್ರಶೋತ್ತರಗಳು
ಬಿಟ್ಟ ಸ್ಥಳ ತುಂಬಿರಿ
ವರುಣನು ವಾಲ್ಮೀಕಿಯನ್ನು ವರುಣಲೋಕಕ್ಕೆ ಹೋಗಿದ್ದರು……. ವಾಗಿ ಕರೆದುದ್ದರಿಂದ ವಾಲ್ಮೀಕಿಗಳು
ಯಜ್ಞಾರ್ಥ
“ ಈಗ ಕೌಸಲೆಯು ಏಕ ವೀರ ಮಾತೆಯಾಗಿರುವಳು . ಆಕೆಯ ಮಗನು……. ನಾದ ಶ್ರೀರಾಮನು ಅವನು ಈ ಕುದುರೆ ( ಯಜ್ಞಾಶ ) ಯನ್ನು ಬಿಟ್ಟಿರುವನು . ಬಲಿಷ್ಠನು ಇದನ್ನು ಹಿಡಿದು ಕಟ್ಟಲಿ ” ,
ರಘದ್ವಹನ
‘ ಎಲೈ ಲವನೇ ! ಈ ಬಲವಂತದಿಂದ ಹಿಡಿದು ಕಟ್ಟುತ್ತಿರುವೆ …… ಹೋಗುವರು . ರಾಮನ ಕುದುರೆಯನ್ನು ವೃಥಾ ( ಬಲಾತ್ಕಾರದಿಂದ ) ನಿನ್ನನ್ನು ಹಿಡಿದುಕೊಂಡು
ಅಶ್ವರಕ್ಷಕನು
ಲವನು ಮುನಿಕುಮಾರರ ಮಾತುಗಳನ್ನು ನಿರಾಕರಿಸಿ ಕೋಪದಿಂದ ನೀವು …….ಹೊಟ್ಟೆಯಲ್ಲಿ ಹುಟ್ಟಿದವರು . ಆದರೆ ನಾನು ಸೀತೆಯ ಹೊಟ್ಟೆಯಲ್ಲಿ ಹುಟ್ಟಿದವನು ಎಂದನು .
ಮುನಿಸ್ತೀಯರ
ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ….. ಬಂಜೆಯೆನ್ನದಿರ್ದಪುದೆ ತನ ಗುರ್ವತೋ – ಛಳಿವೇತಕೆಂದು ಸಲೆ ವಾಸಿಯ ತೊಟ್ಟು ಲವನುರಿ – ದೆದ್ದನು .
ಸರ್ವಜನಮುಂ
ತೆಗೆದುತ್ತರೀಯಮಂ ಮುರಿದು ಗಳಕೆ ಬಿಗಿದು ಕದಳೀದ್ರುಮಕ ಕಟ್ಟಿದನು .
ಕುದುರೆಯ
ಉರ್ಮಿಯೊಳ್ ಪಡೆದ ಕುವರಂ ರಾಮನೊರ್ವನೇ ವೀರನಾತನ ಯಜ್ಜತುರಗಮಿದು
ಕೌಸಲ್ಯ
ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ ಮಗನಿದಕೆ ಬೆದರುವನೆ ಹೋಗಿ ನೀವೆಂದು ಲವ ನಗಡುತನದಿಂದೆ ಬಿಟ್ಟಿರುವನೇರಿಸಿ ತೀಡಿ ನಿಂತಿರ್ದನು . ಸಂಧಿಯಿಂದ
ಇಪ್ಪತ್ತನೆಯ
ಲಕ್ಷ್ಮೀಶ ವಿರಚಿತ ಜೈಮಿನಿಭಾರತ ಕಾವ್ಯವನ್ನು ದೇವುಡುನರಸಿಂಹ ಶಾಸ್ತ್ರೀ ಮತ್ತು ಬಿ.ಶಿವಮೂರ್ತಿ ಶಾಸ್ತ್ರೀ ಇವರು ಸಂಪಾದಿಸಿದ್ದು ಅದರ….. ಈ ಭಾಗವನ್ನು
ಚೇಗೈದು
ಲಕ್ಷ್ಮೀಶಕವಿ [ ಕ್ರಿ.ಶ .1550 ] ಚಿಕ್ಕಮಗಳೂರು ಜಿಲ್ಲೆಯ…. ತಾಲೂಕಿನ ದೇವನೂರಿನವನು .
ಕಡೂರು
ಪದಗಳ ಅರ್ಥಗಳು
ನೃಪ – ದೊರೆ
ಚರಿಸು ಸಂಚರಿಸು
ಪಸುರು – ಹಸುರು ,
ಅಭಿಪ – ವರುಣ
ಹಯ ಕುದುರೆ ಲಿ
ಖಿತ ಬರಹ
ಆರ್ಪರ್ ಸಮರ್ಥರು ( ತ ) – ಸಂತಾನವಿಲ್ಲದವಳು ವಾಜಿ ಕದಳಿ – ಬಾಳೆ
ಅಗಡು ಕುದುರೆ
ಶೌರ್ಯ .
ಅಂಜಿ – ಹೆದರಿ
ಉಪವನ – ಉದ್ಯಾನವನ ,
ತುರಂಗ – ಕುದುರೆ
ಮುಳಿ – ಕೋಪ
ನೆತ್ತಿ – ಹಣೆ
ಉರ್ವಿ ಭೂಮಿ ಬಂಜೆ ( ದ ) – ವಂಧ್ಯಾ
ವಾಸಿ – ಪ್ರತಿಜ್ಞೆ
ಗಳ – ಕೊರಳು
ಬಡಿ – ಹೊಡೆ , ಚಚ್ಚು
FAQ
ಯಜ್ಞಾಶ್ವವನ್ನು ಕಟ್ಟಿದವರು ಯಾರು?
ಲವನು ಯಜ್ಞಾಶ್ವವನ್ನು ಕಟ್ಟಿದನು .
ವೀರಲವ ಪದ್ಯದ ಲೇಖಕರು ಯಾರು?
ಲಕ್ಷ್ಮೀಶ
SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು
- ಹಸುರು ಪದ್ಯ ನೋಟ್ಸ್ ಪ್ರಶ್ನೆ ಉತ್ತರ
- ಹಲಗಲಿ ಬೇಡರು ಪಾಠದ ಪ್ರಶ್ನೋತ್ತರಗಳು
- ಹಕ್ಕಿ ಹಾರುತಿದೆ ನೋಡಿದಿರಾ
- ಸಂಕಲ್ಪ ಗೀತೆ ನೋಟ್ಸ್
- ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು
- ಎದೆಗೆ ಬಿದ್ದ ಅಕ್ಷರ ಪಾಠದ ಪ್ರಶ್ನೋತ್ತರಗಳು
- ಭಾಗ್ಯಶಿಲ್ಪಿಗಳು ಪಾಠದ ಪ್ರಶ್ನೋತ್ತರಗಳು
- ಶಬರಿ ಪಾಠದ ಕವಿ ಪರಿಚಯ
- ಶಬರಿ ಪಾಠದ ಪ್ರಶ್ನೆ ಮತ್ತು ಉತ್ತರ
- ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು