Kemmane Misevottane , 10th Standard Kemmane Meesevothene Notes question answer, text book pdf download 10ನೇ ತರಗತಿ ಕೆಮ್ಮನೆ ಮೀಸೆವೊತ್ತೆನೇ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ , kemmane meesevottene summary in kannada
Kemmane Misevottane Questions and Answers
ಈ ಲೇಖನದಲ್ಲಿ 10ನೇ ತರಗತಿ ಕೆಮ್ಮನೆ ಮೀಸೆವೊತ್ತೆನೇ ಪ್ರಶ್ನೋತ್ತರಗಳನ್ನು ನೀಡಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದು ವಿದ್ಯಾರ್ಥಿಗಳಿಗಾಗಿ ಇದು ಸಂಪೂರ್ಣವಾಗಿ ಉಚಿತವಾಗಿದೆ.
ಲೇಖಕರ ಪರಿಚಯ Kemmane Misevottane Kavi Parichaya
10ನೆಯ ತರಗತಿ ಪದ್ಯ-8 ಕೆಮ್ಮನೆ ಮೀಸೆವೊತ್ತೆನೆ
ಕವಿ : ಪಂಪ
- ಕಾಲ : ಕ್ರಿ.ಶ. 941
- ಸ್ಥಳ : ವೆಂಗಿ ಮಂಡಲದ ವೆಂಗಿಪಳು ಅಗ್ರಹಾರ
- ಕೃತಿಗಳು : ಆದಿಪುರಾಣ , ವಿಕ್ರಮಾರ್ಜುನ ವಿಜಯಂ
- ಬಿರುದು : ಸರಸ್ವತೀ ಮಣಿಹಾರ , ಸಂಸಾರ ಸಾರೋದಯ , ಕವಿತಾಗುಣಾರ್ಣವ
- ವಿಶೇಷ : ಚಾಲುಕ್ಯರ ಅರಿಕೇಸರಿಯ ಆಸ್ಥಾನಕವಿ
- ಆಕರಗ್ರಂಥ : ವಿಕ್ರಮಾರ್ಜುನ ವಿ
- ಜಯ ( ಪಂಪಭಾರತ )
ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ Kemmane Misevottane Notes
ದ್ರೋಣನು ಪರಶುರಾಮರಲ್ಲಿಗೆ ಏಕೆ ಬಂದನು ?
ದ್ರೋಣನಿಗೆ ಬಡತನವುಂಟಾಗಿದ್ದರಿಂದ ಪರಶುರಾಮರಲ್ಲಿಗೆ ಬಂದನು .
ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು ?
ದ್ರೋಣನು ಅಶ್ವತ್ಥಾಮನೊಡನೆ ಪರಶುರಾಮನ ಬಳಿಗೆ ಬಂದನು .
ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು
ಪರಶುರಾಮನು ದ್ರೋಣನಿಗೆ ವರುಣ , ವಾಯು , ಅಗ್ನಿ , ಇಂದ್ರಾದಿ ಅಸ್ತ್ರಗಳನ್ನು ಕೊಟ್ಟನು .
Kemmane Misevottane kseeb solutions for class 10 kannada poem 8
ದ್ರುಪದನು ಪಡಿಯನಿಗೆ ಏನೆಂದು ಹೇಳಿ ಕಳುಹಿಸಿದನು ?
ದ್ರೋಣನೆಂಬ ಬ್ರಾಹ್ಮಣನು ತನಗೆ ಪರಿಚಯವಿಲ್ಲ . ಅವನನ್ನು ಹೊರಗೆ ತಳ್ಳು ಎಂದು ದ್ರುಪದನು ಪಡಿಯರನಿಗೆ ಅಂದರೆ ದ್ವಾರಪಾಲಕನಿಗೆ ಹೇಳಿ ಕಳುಹಿಸಿದನು .
ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. Kemmane Misevottane 3-4 Vakya
ಪರಶುರಾಮನು ಮಣ್ಣಿನ ಪಾತ್ರೆಯಲ್ಲಿ ಅರ್ಭ್ಯವನ್ನು ಕೊಡಲು ಕಾರಣವೇನು ?
ಪರಶುರಾಮನು ತನ್ನ ಪದಾರ್ಥಗಳನ್ನು ಬೇಡಿದವರಿಗೆ ಕೊಟ್ಟಿದ್ದನು . ಭೂಮಂಡಲವನ್ನು ಗುರುಗಳಿಗೆ ಕೊಟ್ಟಿದ್ದನು . ಆತನ ಬಳಿ ಒಂದಡಕೆಯೂ ಇರಲಿಲ್ಲ ಚಿನ್ನದ ಪಾತ್ರೆಗಳು ಇಲ್ಲದ್ದುದರಿಂದ ಮಣ್ಣಿನ ಪಾತ್ರೆಯಲ್ಲಿಯೇ ಅರ್ಭ್ಯವನ್ನು ಕೊಟ್ಟನು .
ದ್ರುಪದನು ದ್ರೋಣರಿಗೆ ಹೇಳಿದ ಮಾತುಗಳು ಯಾವುವು ?
ದುಪ್ರದನು ದ್ರೋಣರಿಗೆ “ ನಿನ್ನನ್ನು ನಾನು ತಿಳಿದಿಲ್ಲ , ನೀನು ನನಗೆ ಅಪರಿಚಿತನು . ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೋ ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೆ ? ಎಂದು ಹೇಳಿದನು .
ದ್ರುಪದನ ಮಾತಿಗೆ ದ್ರೋಣನ ಪ್ರತ್ಯುತ್ತರವೇನು ?
ದುಪ್ರದನ ಮಾತಿಗೆ ದ್ರೋಣನು ಪ್ರತ್ಯುತ್ತರವಾಗಿ “ ಎಲೋ ಖಳನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು ‘ ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ . ಈ ಸಭಾ ಮಂಡಲದಲ್ಲಿ ನನ್ನನ್ನು ಹೀಯಾಳಿಸಿದ ನಿನ್ನನ್ನು ನಿರಾಯಾಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿಪಡುವಂತೆ ಕಟ್ಟಿಸುತ್ತೇನೆ ಎಂದನು .
ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ . Kemmane Misevottane 8-10 vkyagalu
ದ್ರುಪದನಿಗೂ ದ್ರೋಣನಿಗೂ ನಡೆದ ಸಂಭಾಷಣೆಯನ್ನು ಸಂಕ್ಷಿಪ್ತವಾಗಿ ಬರೆಯಿರಿ ?
ದ್ರೋಣನು ಬಡವನಾದುದರಿಂದ ಸಹಾಯ ಪಡೆಯಲು ತನ್ನ ಒಡನಾಡಿಯೂ ಸ್ನೇಹಿತನೂ ಆದ ದ್ರುಪದನು ರಾಜ್ಯಭಾರ ಮಾಡುತ್ತಿದ್ದ ಛತ್ರಾವತಿಗೆ ಬರುತ್ತಾನೆ , ದ್ರೋಣನು ದ್ರುಪದನ ಅರಮನೆಯ ಬಾಗಿಲಲ್ಲಿ ನಿಂತು ಬಾಗಿಲು ಕಾಯುವವನನ್ನು ಕರೆದು ಹೀಗೆಂದನು “ ನಿಮ್ಮ ಜೊತೆಯಲ್ಲಾಡಿದ ಸ್ನೇಹಿತರಾದ ದ್ರೋಣನೆಂಬ ಬ್ರಾಹ್ಮಣನು ಬಂದಿದ್ದಾನೆಂದು ನಿಮ್ಮ ರಾಜನಿಗೆ ತಿಳಿಸು ” ಎಂದನು . ದ್ವಾರಪಾಲಕರು ಮಹಾರಾಜ ದ್ರುಪದನಿಗೆ ಆ ಸುದ್ದಿಯನ್ನು ಮುಟ್ಟಿಸಿದನು .
ಆಗ ದುಪ್ರದನು ಆಶ್ಚರ್ಯವನ್ನು ವ್ಯಕ್ತಪಡಿಸಿ ಅವನನ್ನು ಹೊರಗೆ ತಳ್ಳು ಎಂದು ಆಜ್ಞಾಪಿಸಿದನು . ದ್ವಾರಪಾಲಕನ ಮೂಲಕ ಈ ಸುದ್ದಿ ಕೇಳಿ ಬಲವಂತದಿಂದ ಅರಮನೆಯ ಒಳಕ್ಕೆ ಪ್ರವೇಶಿಸಿ ದ್ರುಪದನನಿಗೆ ಪ್ರಶ್ನಿಸಿದನು ತಾವಿಬ್ಬರೂ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದನ್ನು ನೆನಪಿಸಿದನು . ಆದರೆ ದ್ರುಪದನನು ತನಗೆ ಅದಾವುದೂ ನೆನಪಿಲ್ಲ ನೀನು ನಾಚಿಕೆಗೆಟ್ಟವನು ಎಂದು ಹೀಯಾಳಿಸಿದನು ಆಗ ದ್ರೋಣನು ಕೋಪಗೊಂಡು ನನ್ನ ಜೊತೆಯಲ್ಲಿ ನೀನು ವಿದ್ಯಾಭ್ಯಾಸ ಮಾಡಿರುವೆ ಎಂದು ನಿನ್ನನ್ನು ಕೊಲತ್ತಾರೆ . ಆದರೆ ನನ್ನ ಶಿಷ್ಯರಿಂದ ನೀನು ಗಾಬರಿಯಾಗುವಂತೆ ಕಟ್ಟಿಸುತ್ತೇನೆ . ಇಲ್ಲದಿದ್ದರೆ ನಾನು ಮೀಸೆ ಹೊತ್ತಿರುವುದೇ ವ್ಯರ್ಥ ಎಂದನು .
ದ್ರೋಣನೂ ದ್ರುಪದನ ವಿರುದ್ಧ ಶಪಥ ಮಾಡಲು ಕಾರಣವಾದ ಅಂಶಗಳನ್ನು ವಿವರಿಸಿ .
ದ್ರೋಣ ಹಾಗೂ ದ್ರುಪದ ಇಬ್ಬರೂ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರೂ ಕೆಲವು ವರ್ಷಗಳ ನಂತರ ದ್ರೋಣನು ಬಡತನ ಅನುಭವಿಸಬೇಕಾಯಿತು ತನ್ನ ಮಿತ್ರನಾದ ದ್ರುಪದನ ಬಳಿ ಸಹಾಯ ಪಡೆಯಲು ಛತ್ರಾವತಿಗೆ ಬಂದನು . ದ್ರುಪದನು ಈ ವಿಷಯ ಕೇಳಿ ಅಹಂಕಾರವನ್ನು ಪ್ರದರ್ಶಿಸುತ್ತಾನೆ . ದ್ರೋಣನನ್ನು ಹೊರಗೆ ತಳ್ಳುವಂತೆ ಆಜ್ಞಾಪಿಸುತ್ತಾನೆ .
ಅಧಿಕಾರದ ಮದದಿಂದ ಹೀಗೆ ಮಾಡುತ್ತಿರುವುದೆಂದು ದ್ರೋಣನಿಗೆ ತಿಳಿಯುತ್ತದೆ . ತನ್ನನ್ನು ಸಭಾ ಮಧ್ಯದಲ್ಲಿ ಕೆಟ್ಟ ರೀತಿಯಲ್ಲಿ ಅವಮಾನಿಸಿದ್ದರಿಂದ ಕೋಪಗೊಂಡು ದುಪದನ ವಿರುದ್ಧ ಶಪಥಮಾಡುತ್ತಾನೆ . ತನ್ನ ಶಿಷ್ಯರಿಂದಲೇ ಸೋಲುಂಟಾಗುವಂತೆ ಮಾಡುತ್ತೇನೆಂದು ಹೇಳುತ್ತಾನೆ .
ಸಂದರ್ಭಾನುಸಾರ ಸ್ವಾರಸ್ಯವನ್ನು ಬರೆಯಿರಿ . Kemmane Misevottane Sandarbanusara svarasyavannu bareyiri
“ ಈಗಳೊಂದಡಕೆಯುಮಿಲ್ಲ ಕೈಯೊಳ್ ”
ಈ ವಾಕ್ಯವನ್ನು ಪಂಪ ಮಹಾಕವಿಯು ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆಯ್ದ ‘ ಕೆಮ್ಮನೆ ಮೀಸೆವೊತ್ತೆನೇ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ಪರಶುರಾಮನು ದ್ರೋಣನಿಗೆ ಹೇಳಿದನು ಬಡತನದಿಂದ ಕೂಡಿದ್ದ ದ್ರೋಣನು ಪರಶುರಾಮನ ಬಳಿ ದ್ರವ್ಯವನ್ನು ಬೇಡುವುದಕ್ಕಾಗಿ ಬಂದ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ .
ಪರಶುರಾಮನು ತನ್ನೆಲ್ಲಾ ಆಸ್ತಿಯನ್ನು ಬೇರೆಯವರಿಗೆ ಕೊಟ್ಟನಂತರ ತನ್ನ ಬಳಿ ಏನು ಇಲ್ಲ ಎನ್ನುವಾಗ ಒಂದಡರೆಯೂ ಇಲ್ಲ ಎನ್ನುತ್ತಾನೆ . ದ್ರೋಣನಿಗೆ ಏನೂ ಕೊಡಲಾಗುತ್ತಿಲ್ಲವಲ್ಲ ಎಂಬ ಕಳಕಳಿಯ ಸ್ವಾರಸ್ಯ ಈ ಮಾತಿನಲ್ಲಿ ಕಾಣಬಹುದು.
“ ವಿದ್ಯಾಧನಮೆ ಧನಮಪ್ಪುದು ”
ವಿಕ್ರಮಾರ್ಜುನ ವಿಜಯಂ ‘ ಎಂಬ ಕೃತಿಯಿಂದ ಆಯ್ದ ‘ ಕೆಮ್ಮನೆ ಮೀಸೆವೊತ್ತೆನೇ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದ್ರೋಣನು ಪರಶುರಾಮನಿಗೆ ಹೇಳುತ್ತಾನೆ . ಪರಶುರಾಮನು ತನ್ನ ಬಳಿ ಬೇಡಲು ಬಂದ ದ್ರೋಣನಿಗೆ ಬಿಲ್ಲು ಹಾಗೂ ದಿವ್ಯಾಸ್ತ್ರಗಳಲ್ಲಿ ಯಾವುದನ್ನು ಆರಿಸಿಕೊಳ್ಳುವೆ ಎಂದು ಕೇಳಿದ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ . ವಿದ್ಯೆಯೇ ನಿಜವಾದ ಆಸ್ತಿ ಎಂಬ ಸ್ವಾರಸ್ಯಕರವಾದ ಮಾತುಗಳನ್ನು ಇಲ್ಲಿ ಕಾಣಬಹುದಾಗಿದೆ .
“ ಎಂತು ನಾಣಿಲಿಗರಪ್ಪರೆ ಮಾನಸರ್ ”
ಈ ವಾಕ್ಯವನ್ನು ಪಂಪ ಮಹಾಕವಿಯು ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆಯ್ದ ‘ ಕೆಮ್ಮನೆ ಮೀಸೆವೊತ್ತೆನೇ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದ್ರುಪದನು ದ್ರೋಣನಿಗೆ ಹೇಳುತ್ತಾನೆ . ದ್ರೋಣನು ದ್ರುಪದನ ಬಳಿ ಬಂದು ನನ್ನ ಪರಿಚಯ ನಿನ್ನಗಿಲ್ಲವೆ ಎಂದಾಗ ಈ ಮಾತು ಹೇಳಲಾಗಿದೆ . ಎಷ್ಟೇ ಕಷ್ಟ ಬಂದರು ಮತ್ತೊಬ್ಬರ ಬಳಿ ಅಂಗಲಾಚಿ ಬೇಡಬಾರದು ಎಂಬ ಸ್ವಾರಸ್ಯವನ್ನು ಇಲ್ಲಿ ಕಾಣಬಹುದು .
Kemmane Misevottane SSLC Notes
“ ಜಲಕ್ಕನೀಗಳರಟಿದೆಂ ಸಿರಿ ಕಡಟ್ಟಿತೆಂಬುದಂ “
ಈ ವಾಕ್ಯವನ್ನು ಪಂಪ ಮಹಾಕವಿಯು ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆಯ್ದ ‘ ಕೆಮ್ಮನೆ ಮೀಸೆವೊತ್ತೆನೇ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದೋಣನು ದ್ರುಪದನಿಗೆ ಹೇಳಿದನು ದ್ರುಪದನು ಅಹಂಕಾರದಿಂದ ಮಾತನಾಡಿದ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ . ಅಲ್ಪನಿಗೆ ಐಶ್ವರ್ಯಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದಂತೆ ಎಂಬ ಸ್ವಾರಸ್ಯವನ್ನಿಲ್ಲಿ ಕಾಣಬಹುದು .
“ ನೊಳವಿಂಗೆ ತಪ್ಪೆ ವರಂ ?
ಈ ವಾಕ್ಯವನ್ನು ಪಂಪ ಮಹಾಕವಿಯು ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆಯ್ದ ‘ ಕೆಮ್ಮನೆ ಮೀಸೆವೊತ್ತೆನೇ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಈ ಮಾತನ್ನು ದ್ರೋಣನು ದ್ರುಪದನಿಗೆ ಹೇಳಿದನು . ದ್ರುಪದನ ಯೋಗ್ಯತೆಯ ಬಗ್ಗೆ ಹೇಳುವಾಗ ಈ ಮಾತುಗಳನ್ನು ಹೇಳಲಾಗಿದೆ . ‘ ನೊಣಕ್ಕೆ ಕಸವೇ ಶ್ರೇಷ್ಠವಾದುದು ” ಎಂಬ ಗಾದೆಯನ್ನು ದ್ರುಪದನಿಗೆ ಹೋಲಿಸಿ ಅವನ ಕೀಳು ಸ್ವಾಭಾವವನ್ನು ತಿಳಿಸುವ ಸ್ವಾರಸ್ಯವನ್ನು ಇಲ್ಲಿ ಕಾಣಬಹುದಾಗಿದೆ .
ಭಾಷಾ ಚಟುವಟಿಕೆ Kemmane Misevottane bhasha chatuvatike
ಕೊಟ್ಟಿರುವ ಪದಗಳನ್ನು ಬಿಡಿಸಿ , ಸಂಧಿ ಹೆಸರಿಸಿ
ದ್ರವ್ಯಾರ್ಥಿ “=ದ್ರವ್ಯ+ಅರ್ಥಿ=ಸವರ್ಣರ್ಘರ್ಗಸಂಧಿ
ವಲ್ಕಲಾವೃತ=ವಲ್ಕಲ+ಆವೃತ್ತ”=ಸವರ್ಣಧೀರ್ಘಸಂಧಿ
ನಿಮ್ಮರಸ = ನಿಮ್ಮ+ಅರಸ=ಗುಣಸಂಧಿ
ಮದೋನ್ಮತ್ತ = ಮದ + ಉನ್ನತ್ತ = ಗುಣಸಂಧಿ
ಕಳ್ಳುಡಿ + ಕುಡಿ = ಆದೇಶಸಂಧಿ
ಕೊಟ್ಟಿರುವ ಪದಗಳನ್ನು ವಿಗ್ರಹವಾಕ್ಯ ಮಾಡಿ , ಸಮಾಸ ಹೆಸರಿಸಿ .
ನಾಣಲಿ= ನಾಣು + ಇಲಿ ( ನಾಚಿಕೆ ಇಲ್ಲದವನು )
ನಾಣಲಿ ದಿವ್ಯಶರಾಳಿ ದಿವ್ಯವಾದ + ಶರಾಳಿ
ಮಹೀಪತಿ = ಮಹೀಯ + ಪತಿ = ಕಳುಡಿದ
ಕಳನ್ನು + ಕುಡಿದ ತತ್ಪುರುಷ ಸಮಾಸ ಕ್ರಿಯಾಸಮಾಸ
ಕೊಟ್ಟಿರುವ ವಾಕ್ಯದಲ್ಲಿರುವ ಅಲಂಕಾರವನ್ನು ಗುರುತಿಸಿ , ಲಕ್ಷಣದೊಂದಿಗೆ ಸಮನ್ವಯಗೊಳಿಸಿ .
ಉ . ನೊಳವಿಂಗೆ ಕುಪ್ಪೆ ವರವೆಂಬವೊಲಾಂಬರವುಂಟೆ ನಿನ್ನದೊಂದಳವು ?
ಉಪಮೇಯ : ” ನಿನ್ನದೊಂದಳವು ( ದ್ರುಪದನ ಯೋಗ್ಯತೆ )
ಉಪಮಾನ : ನೋವಿಂಗೆ ಕುಪ್ಪೆ ವರ
ಉಪಮಾವಾಚಕ : ಎಂಬವೊಲ್
ಸಮಾನಧರ್ಮ : ಸ್ಪಷ್ಟವಾಗಿಲ್ಲ
ಸಮನ್ವಯ : ನಿನ್ನದೊಂದೊಳವು ( ದ್ರುಪದನ ಯೋಗ್ಯತೆ ) ಎಂಬ ಉಪಮೇಯವನ್ನು ನೊಳವಿಂಗೆ ಕುಪ್ಪೆವರ ( ನೊಣಕ್ಕೆ ಕಸವೇ ಶ್ರೇಷ್ಠ ) ಎ೦ಬ ಉಪಮಾನಕ್ಕೆ ಹೋಲಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ .
kemmane meesevottene summary in kannada
ಕೊಟ್ಟಿರುವ ಪದ್ಯಭಾಗಕ್ಕೆ ಪ್ರಸ್ತಾರಹಾಕಿ , ಗಣ ವಿಭಾಗ ಮಾಡಿ ಛಂದಸ್ಸಿನ ಹೆಸರಿಸಿ ಬರೆಯಿರಿ .
![](https://kaipidi.com/wp-content/uploads/2022/10/photo_2022-10-16_17-43-15-1024x437.jpg)
![](https://kaipidi.com/wp-content/uploads/2022/10/photo_2022-10-16_17-43-14-1024x467.jpg)
ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿ .
- ಅಂತೆಂಬನಾರ್ಗೆ ಪಿರಿದುಂ ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ ಳಂತೆನಗೆ ಕೆಳೆಯನೇ ನೂಂ ಕಂತಪ್ಪನನರಿಯೆನೆಂದು ಸಭೆಯೊಳ್ ನುಡಿದಂ
- ಒಡವೆಯನರ್ಥಿಗಿತ್ತೆನವನೀತಳಮಂ ಗುರುಗಿತ್ತೆಗಳೊಂ ದಡಕೆಯುಮಿಲ್ಲ ಕೈಯೊಳೆರೆದಂ ಶ್ರುತ ಪಾರಗನೆಂತು ಸಂತಸಂ ಬಡಿಸುವೆ ನಿನ್ನಿದೊಂದು ಧರ್ನುವಿರ್ದುದು ದಿವ್ಯಶರಾಳಿಯಿರ್ದುದಿ ಬ್ಲೊಡಮೆ ಸಮಂತು ಪೇಳ್ವರೊಳಾವುದನೀವುದೊ ಕುಂಭಸಂಭವ
ಪದಗಳ ಅರ್ಥ
ಅಡಸು – ಉಂಟಾಗು
ಅನಾಕುಳಂ-ನಿರಾಯಾಸವಾಗಿ
ಅರ್ಥ್ಯ – ಪೂಜ್ಯರಿಗೆ ಕೈ ತೊಳೆಯಲು ನೀಡುವ ನೀರು
ಅರ್ಥಿ- ಬೇಡುವವನು
ಅಳವು -ಪರಾಕ್ರಮ
ಎರೆದಂ – ಬೇಡುವವನು
ಏಳಿಸಿದ -ತಿರಸ್ಕರಿಸಿದ
ಒಡವೆ -ಐಶ್ವರ್ಯ,ಆಸ್ತಿ
ಕಡುಸಿಗ್ಗು -ತೀವ್ರ ನಾಚಿಕೆ
ಕಳುಡಿದವರಂದಮ್-ಮದ್ಯಕುಡಿದವರರೀತಿ
ಕುಪ್ಪೆ -ಕಸಡತಿಪ್ಪೆ
ತಡವಪ್ಪುದು -ತೋಲುವುದು
ಪಡಿಯ-ದ್ವಾರಪಾಲಕ, ಸೇವಕ
ಪೊಲ್-ಪಟ್ಟಣ
ಬೆಳಗಿಂಗೆ -ಉತ್ಸಾಹಕ್ಕೆ
ಮದಿರಾ -ಸುರಾಪಾನ
ತೊದಲುವುದು-ರೀತಿಯಲ್ಲಿ
ಅಲೆದಾಡಿ -ಸುತ್ತಾಡಿ
ದ್ವಿಜವಂಶಜಂ- ಬ್ರಾಹ್ಮಣ
ನೊಂಕು -ನೂಕು
ಮಾಟೆಯೊಳ್ -ರೀತಿಯಲ್ಲಿ
ಮೇಗಿಲ್ಲದೆ -ಉತ್ತಮತನವಿಲ್ಲದೆ
ಮುಕಂ -ವಕ್ರಚೇಷ್ಟೆಯಂ
ಶ್ರುತಪಾರಗ -ಶಾಸ್ತ್ರಪಾರಂಗತ
ಸಮಂತು -ಚೆನ್ನಾಗ
ದಿವ್ಯಶರಾಳಿ – ಶ್ರೇಷ್ಠ
ಬಾಣಗಳ -ಸಮೂಹ
ನಾಣಿಲಿ -ನಾಚಿಕೆಯಿಲ್ಲದವನು
ನೊಳವಿಂಗ-ನೊಣಕ್ಕೆ
ಸೇವಕ ( ಪ್ರತೀಹಾರಿ ( ತೃ ) > ಪಡಿಯ ( ತೃ )
ಪೌರಂದರ – ಇಂದ್ರ
ಮೇಗಿಲ್ಲದೆ ಉತ್ತಮತನವಿಲ್ಲದೆ
ಶ್ರುತಪಾರಗಶಾಸ್ತ್ರಪಾರಂಗತ
ಸಮಂತು -ಚೆನ್ನಾಗಿ
ಸಾರ್ವುದು- ಬರುವುದು
ಅವನೀತಳ – ಭೂಮಂಡಲ
ಆಂಬರಂ – ನನ್ನವರೆಗೂ
ಮದ್ಯ-ಕುಡಿದವರರೀತಿಕೊಲ
ಒಡಗೊಂಡು- ಜೊತೆಗೂಡಿ
ಕನಕಪಾತ್ರೆ – ಚಿನ್ನದ ಪಾತ್ರೆ
ಭಾರ್ಗವ -ಮಹೀಪತಿ
ಹೊರಕ್ಕೆ ತಳ್ಳಿರಿ – ಕೊಲ್ಲುವುದಕ್ಕೆ
ಶಿಷ್ಯರಿಂದ ವಿಶದವಾಗಿ ರಾಜ
ಮೃತ್ಪಾತ್ರ – ಮಣ್ಣಿನ ಪಾತ್ರೆ
ಮೊಲೆಯಂ – ಭಂಧವ್ಯವನ್ನು
ವರಂ – ಶ್ರೇಷ್ಟ
ಸಂದೆಯ ( ತೃ ) < ಸಂದೇಹ ( ತ್ಸ)
ಸಾರ್ತರ ಒದಗಿ -ಬರಲು
FAQ
ದ್ರೋಣನು ಪರಶುರಾಮರಲ್ಲಿಗೆ ಏಕೆ ಬಂದನು ?
ದ್ರೋಣನಿಗೆ ಬಡತನವುಂಟಾಗಿದ್ದರಿಂದ ಪರಶುರಾಮರಲ್ಲಿಗೆ ಬಂದನು
ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು
ಪರಶುರಾಮನು ದ್ರೋಣನಿಗೆ ವರುಣ , ವಾಯು , ಅಗ್ನಿ , ಇಂದ್ರಾದಿ ಅಸ್ತ್ರಗಳನ್ನು ಕೊಟ್ಟನು
SSLC ಕನ್ನಡಕ್ಕೆ ಸಂಬಂಧಿಸಿದ ಇತರೆ ವಿಷಯಗಳು
- ಹಸುರು ಪದ್ಯ ನೋಟ್ಸ್ ಪ್ರಶ್ನೆ ಉತ್ತರ
- ಹಲಗಲಿ ಬೇಡರು ಪಾಠದ ಪ್ರಶ್ನೋತ್ತರಗಳು
- ಹಕ್ಕಿ ಹಾರುತಿದೆ ನೋಡಿದಿರಾ
- ಸಂಕಲ್ಪ ಗೀತೆ ನೋಟ್ಸ್
- ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು
- ಎದೆಗೆ ಬಿದ್ದ ಅಕ್ಷರ ಪಾಠದ ಪ್ರಶ್ನೋತ್ತರಗಳು
- ಭಾಗ್ಯಶಿಲ್ಪಿಗಳು ಪಾಠದ ಪ್ರಶ್ನೋತ್ತರಗಳು
- ಶಬರಿ ಪಾಠದ ಕವಿ ಪರಿಚಯ
- ಶಬರಿ ಪಾಠದ ಪ್ರಶ್ನೆ ಮತ್ತು ಉತ್ತರ
- ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು