ಮುಂಬೈ ಜಾತಕ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು | Mumbai Jataka Kannada Notes

ಮುಂಬೈ ಜಾತಕ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು | Mumbai Jataka Kannada Notes

Mumbai Jataka Kannada Notes , mumbai jataka kannada question answer , mumbai jataka kannada notes pdf, mumbai jataka kannada notes class 12, mumbai jataka kannada , mumbai jataka kannada poem , ಮುಂಬೈ ಜಾತಕ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು

Mumbai Jataka Kannada Notes

ಮುಂಬೈ ಜಾತಕ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.

ಮುಂಬೈ ಜಾತಕ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು | Mumbai Jataka Kannada Notes
ಮುಂಬೈ ಜಾತಕ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು | Mumbai Jataka Kannada Notes

ಒಂದು ಅಂಕದ ಪ್ರಶ್ನೆಗಳು

ಪ್ರಶ್ನೆ 1. ಮಗು ಹುಟ್ಟಿದ್ದು ಎಲ್ಲಿ?

ಉತ್ತರ: ಮಗು ಹುಟ್ಟಿದ್ದು ಆಸ್ಪತ್ರೆಯಲ್ಲಿ.


ಪ್ರಶ್ನೆ 2. ಮುಂಬೈಯಲ್ಲಿ ಬೆಳಗಿನಿಂದ ಸಂಜೆಯತನಕ ಕಾಣುವುದೇನು?
ಉತ್ತರ: ಮುಂಬೈಯಲ್ಲಿ ಕಾಣುವುದು ಬೆಳಗಿನಿಂದ ಸಂಜೆಯ ತನಕ ರಸ್ತೆಯಲ್ಲಿ ಸಂಚರಿಸುವ ಲಕ್ಷ ಚಕ್ರಗಳು.


ಪ್ರಶ್ನೆ 3. ಹೊರಲೋಕವನ್ನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು ಯಾರು?

ಉತ್ತರ: ಹೊರಲೋಕವನ್ನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು ತಾಯಿ.


ಪ್ರಶ್ನೆ 4. ಕುಳಿತು ಕೆಮ್ಮುವ ಪ್ರಾಣಿ ಯಾರು?
ಉತ್ತರ:ತಂದೆ ಕುಳಿತು ಕೆಮ್ಮುವ ಪ್ರಾಣಿ.


ಪ್ರಶ್ನೆ 5.ಮಗು ತಾನಾಗಿ ಕಲಿತದ್ದು ಏನನ್ನು?
ಉತ್ತರ:ಮಗು ತಾನಾಗಿ ಕಲಿತದ್ದು ಕಣ್ಣಾಡಿಸುವುದನ್ನು ಮಾ ಬಸ್‌ಸ್ಟಾಂಡಿನಲ್ಲಿ ನಿಂತ ಬಣ್ಣಗಳ ಕಡೆಗೆ

ಪ್ರಶ್ನೆ 6.ಲಕ್ಷದಾರಿಗಳ ಚದುರಂಗದಾಟ ಯಾವುದು?
ಉತ್ತರ: ಮುಂಬೈ ನಗರದ ಜೀವನ ಲಕ್ಷದಾರಿಗಳ ಚದುರಂಗದಾಟವೆನಿಸಿದೆ.


ಪ್ರಶ್ನೆ 7. ಕನಸು ಬಂಡಿಯ ಕೆಳಗೆ ನಿದ್ರಿಸುವುದು ಹೇಗೆ?

ಉತ್ತರ:ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತಾ ಮಲಗುವುದು.

ಹೆಚ್ಚುವರಿ ಪ್ರಶ್ನೆಗಳು: (ಪ್ರಶ್ನೆ ಕೋಶದಿಂದ)


ಪ್ರಶ್ನೆ 8. ರಸ್ತೆಯಂಚಿನಲ್ಲೇ ಕೈ ಹಿಡಿದು ನಡೆಸಿದವಳು ಯಾರು?

ಉತ್ತರ: ರಸ್ತೆಯಂಚಿನಲ್ಲೇ ಕೈ ಹಿಡಿದು ನಡೆಸಿದವಳು ತಾಯಿ.

ಮುಂಬೈ ಜಾತಕ ಪದ್ಯ ಸಾರಾಂಶ ಓದಿರಿ


ಪ್ರಶ್ನೆ 9. ಕಾದೂ ಕಾದೂ ತೂಕಡಿಸುವುದು ಯಾರು?
ಉತ್ತರ:ಕಾದೂ ಕಾದೂ ತೂಕಡಿಸುವುದು ಮಡದಿ.

Mumbai Jataka Kannada Notes in kannada

ಮುಂಬೈ ಜಾತಕ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು | Mumbai Jataka Kannada Notes
ಮುಂಬೈ ಜಾತಕ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು | Mumbai Jataka Kannada Notes

ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):

1 ) ಮಗು ಏನನ್ನು ಕುಡಿದು ಬೆಳೆಯುವುದು ?

ಮಗು , ಬಾಟ್ಲಿ ಹಾಲು , ಗ್ರೆಪ್ ಸಿರಪ್ , ಹಾರ್ಲಿಕ್ಸ್ ಇತ್ಯಾದಿ ಕುಡಿದು ಬೆಳೆಯುವುದು

2 ) ಮಗು ಏನನ್ನು ಕಲಿಯಿತು ?

ಮಗು ಕಲಿತದ್ದು , ಕ್ಯೂ ನಿಲ್ಲುವುದು , ಫುಟ್‌ಪಾತ್‌ನಲ್ಲಿ ಸಂಚರಿಸುವುದು , ರಸ್ತೆ ದಾಟುವಾಗ ಎಚ್ಚರಿಕೆಯಿಂದ ಓಡಾಡುವುದು ಎಲ್ಲಿಯೂ ನಿಲ್ಲದೆ , ಹೇಗೋ ಅವರಿವರನ್ನು ತಳ್ಳಿ ಮುನ್ನುಗ್ಗುವುದು , ಎಲ್ಲಾದರೂ ಸೇರಿ ಬೇರೂರುವುದು .

3 ) ಮಗು ಹುಟ್ಟಿ ಬೆಳೆದುದು ಎಲ್ಲಿ ?

ಮಗು ಹುಟ್ಟಿದ್ದು ಆಸ್ಪತ್ರೆಯಲ್ಲಿ , ಬೆಳೆದದ್ದು ಬಸ್ಸು , ಟ್ರಾಂ , ಕಾರು , ಟ್ಯಾಕ್ಸಿ , ಎಲೆಕ್ನಿಕ್ ಟ್ರೇನ್‌ಗಳಲ್ಲಿ .

4 ) ಮಗುವಿನ ಪಾಲಿಗೆ ತಾಯಿ ಹೇಳಿದ್ದಾಳೆ ?

ಮಗುವಿನ ಪಾಲಿಗೆ ತಾಯಿ ಎಂದರೆ ಹೆಚ್ಚು ವಾಹನ ಸಂಚಾರವಿರುವ ರಸ್ತೆಯಂಚಿನಲ್ಲಿ ಕೈ ಹಿಡಿದು ನಡೆಸಿದವಳು . ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನ್ನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು .

5 ) ಮುಂಬೈನ ಅವಸರದ ಜೀವನ ಚಿತ್ರಕ್ಕೆ ಎರಡು ಉದಾಹರಣೆ ಕೊಡಿ .

ಮುಂಬೈನ ಜೀವನವೇ ಅವಸರದ ಜೀವನವಾಗಿದೆ . ಏಳುವುದು , ಬಟ್ಟೆಯಲ್ಲಿ ಮೈ ತುರುಕಿಕೊಂಡು ಓಡಿ ಬಸ್ಸೇ , ರೈಲೋ ಹಿಡಿಯುವುದು , ರಾತ್ರಿ ಸೋತು ಸುಸ್ತಾಗಿ ಹನ್ನೊಂದು ಘಂಟೆಗೆ ಬಂದು ಆಯಾಸದಿಂದ ಮಲಗಿದ ಹೆಂಡತಿಯನ್ನು ಎಬ್ಬಿಸಿ , ತಣ್ಣಗೆ ಕೊರೆಯುವ ಊಟವನ್ನೆ ಉಂಡು ಬಂಡಿಯ ಕೆಳಗಿನ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು .

6 ) ತಂದೆ ಮಗುವಿಗೆ ಕಾಣಿಸಿಕೊಳ್ಳುವ ಬಗೆ ಹೇಗೆ ?

ತಂದೆ ಮಗುವಿಗೆ ಕಾಣಿಸಿಕೊಳ್ಳುವ ಬಗೆಯೆಂದರೆ – “ ಬೆಳಗಿನಿಂದ ಸಂಜೆಯವರೆಗೆ ಕಣ್ಮರೆಯಾಗಿ , ಒಮ್ಮೊಮ್ಮೆ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ ,

7 ) ಮಗು ಕಲಿತ ವಿದ್ಯೆಗಳಾವುವು ?

ಮಗು ಕಲಿತ ವಿದ್ಯೆಗಳೆಂದರೆ “ಶಾಲೆ ಕಾಲೇಜು ಕಲಿಸಿದ್ದು ದಾರಿಬದಿಯ ನೂರಾರು ಜಾಹಿರಾತುಗಳು ತಲೆಗೆ ತುರುಕಿದ್ದು , ರೇಡಿಯೋ ವಿಭಾಗ ಸಿಲೋನ್ ವ್ಯಾಪಾರಿ ಶಿಫಾರಸ್ಸು ಮಾಡಿದ್ದು , ತಾನಾಗಿ ಕಲಿತದ್ದು ಬಲು ಕಡಿಮೆ , ಬಸ್‌ಸ್ಟಾಪಿನಲ್ಲಿ ನಿಂತ ಹೆಣ್ಣುಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತುಪಡಿಸಿ

ಐದಾರು ವಾಕ್ಯಗಳಲ್ಲಿ ಉತ್ತರಿಸಿ Mumbai Jataka Kannada Notes

  1. ನಗರ ಜೀವನದ ಯಾಂತ್ರಿಕ ವಿವರಗಳು ಕವಿತೆಯಲ್ಲಿ ಹೇಗೆ ಚಿತ್ರಿತಗೊಂಡಿದೆ ? ವಿವರಿಸಿ .

ನಗರ ಜೀವನದ ಯಾಂತ್ರಿಕತೆ ಹುಟ್ಟಿದಂದಿನಿಂದಲೂ ಆವರಿಸಿಕೊಳ್ಳುತ್ತದೆ . ಕವಿತೆಯಲ್ಲಿ ಚಿತ್ರಣಗೊಂಡಿರುವ ಬಾಲ್ಯ ಜೀವನ , ವಿದ್ಯಾರ್ಥಿ ಜೀವನ , ಸಾಂಸಾರಿಕ ಜೀವನ , ಯಾವ ವಿವರಗಳಲ್ಲಿಯೂ ಜೀವಂತಿಕೆಯೇ ಇಲ್ಲ . ಜೀವನೋತ್ಸಾಹವೂ ಇಲ್ಲ . ಬಾಲ್ಯದಲ್ಲಿಯೇ ಹೇಗಾದರೂ ಅವರಿವರ ತಳ್ಳಿ ಮುನ್ನುಗ್ಗುವ , ಬೇರೂರಿ ನಿಲ್ಲುವ ಚಾಣಾಕ್ಷತನ ಕಲಿಯಬೇಕು . ಬಾಲ್ಯದ ಸಮೃದ್ಧ ಭಾವಕೋಶದ ಬೆಳವಣಿಗೆಯ ಅವಕಾಶದಿಂದ ಮಕ್ಕಳು ವಂಚಿತರು . ಯೌವನದಲ್ಲೂ ಈ ಕೃತಕತೆ ಮುಂದುವರೆಯು ತ್ತದೆ . ಹೀಗೆ ಬೆಳೆದು , ಮದುವೆಯಾಗಿ , ಸಂಸಾರಿಯಾದ ಮೇಲೂ ಇತರರ ಕೈಗೊಂಬೆ ಯಾಗಿಯೇ ಕೊನೆಯವರೆಗೂ ಬಾಳಬೇಕಾದ ಸ್ಥಿತಿ ನಿರ್ಮಾಣವಾಗುತ್ತವೆ . ಮನುಷ್ಯ ಸಹಜ ಸಂಬಂಧಗಳಿಗೆ ಅವಕಾಶವೇ ಇಲ್ಲದ , ಬರೀ ಕೃತಕ ಜೀವನದ ಜಾಡನ್ನು ತುಳಿದು ಮುನ್ನಡೆಯುವ ಯಂತ್ರಗಳಾಗಿ ಇಲ್ಲಿನ ವ್ಯಕ್ತಿಯ ಬದುಕು ಚಿತ್ರಣಗೊಂಡಿರು ವುದು ನಗರ ಜೀವನದ ಯಾಂತ್ರಿಕತೆಯ ವಿವರಗಳಿಗೆ ಕನ್ನಡಿ ಹಿಡಿದಂತಿವೆ .

  1. ತಂದೆ – ತಾಯಿಗಳು ಮಗುವಿಗೆ ಗೋಚರಿಸುವ ಬಗೆಯನ್ನು ವಿವರಿಸಿ ,

‘ಮುಂಬೈ ಜಾತಕ ‘ ಕವಿತೆಯಲ್ಲಿ ಚಿತ್ರಣಗೊಂಡಿರುವ ಮಗುವಿನ ತಂದೆ ತಾಯಿಗಳು ತಮ್ಮ ಕೃತಕ ಜವಾಬ್ದಾರಿಯನ್ನು ನಿರ್ವಹಿಸುವ ಯಂತ್ರಗಳಂತಿದ್ದಾರೆ . ಮಕ್ಕಳೊಂದಿಗೆ ವಾತ್ಸಲ್ಯಭರಿತ ಒಡನಾಟದ ಚಿತ್ರಣವೇ ಇಲ್ಲಿಲ್ಲ . ತಾಯಿ ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನ್ನು ಪರಿಚಯಿಸುವ , ಎಚ್ಚರಿಸುವ ಸಾವಿರ ಗಾಲಿಗಳು ಹೊರಳುವ ರಸ್ತೆಯಂಚಿನಲ್ಲಿ ಕೈಹಿಡಿದು ನಡೆಸುವ ಕೆಲಸಕ್ಕಷ್ಟೇ ಸೀಮಿತ ಳಾಗಿರುವ ಅಸಹಾಯಕಳಾಗಿ ಕಾಣುತ್ತಾಳೆ . ಇನ್ನು ತಂದೆಯೊಂದಿಗಿನ ಒಡನಾಟವೂ ಮಗುವಿಗಿಲ್ಲ . ಬೆಳಗ್ಗಿನಿಂದ ಸಂಜೆಯವರೆಗೂ ಕೆಲಸದ ನೆಪದಲ್ಲಿ ಕಣ್ಮರೆಯಾಗುವ ಆತ ಮಗುವಿಗೆ ಕಾಣಿಸಿಕೊಳ್ಳುವುದು ‘ ರಜಾ ದಿನಗಳಲ್ಲಿ ಕುಳಿತು ಕಮ್ಯುವ ಪ್ರಾಣಿಯಾಗಿ ಮಾತ್ರ , ನಗರ ಜೀವನದ ಯಾಂತ್ರಿಕತೆಯಲ್ಲಿ ತಂದೆ – ತಾಯಿಗಳೂ ಮಗುವಿನೊಂದಿಗೆ ಯಾಂತ್ರಿಕವಾಗಿ ಕರ್ತವ್ಯ ನಿರ್ವಹಿಸುವ ದುರಂತವನ್ನು ಇಲ್ಲಿ ಕಾಣಬಹುದಾಗಿದೆ .

  1. ಮಗು ಕಲಿತದ್ದನ್ನು ಮತ್ತು ವಿದ್ಯಾಭ್ಯಾಸ ಮಾಡಿದ ವಿವರಗಳನ್ನು ವಿಶ್ಲೇಷಿಸಿ .

ಮುಂಬೈನಗರದಲ್ಲಿ ಬೆಳೆಯುವ ಮಗು ಕಲಿಯುವುದು ಸುಸಂಸ್ಕೃತ ಆಚಾರ ವಿಚಾರ , ಆಟ – ಪಾಠ , ಕಥೆ , ಮೌಲ್ಯಗಳನ್ನಲ್ಲ . ಅದನ್ನೆಲ್ಲ ಮಗುವಿಗೆ ಹೇಳಿಕೊಡಲು ತಂದೆ – ತಾಯಿಗಳಿಗಾಗಲಿ , ಇತರರಿಗಾಗಲಿ ಬಿಡುವಿದ್ದರಲ್ಲವೇ ? ಬೃಹತ್ ನಗರದಲ್ಲಿ ಬಾಳಿಬದುಕಲು ಬೇಕಾಗಿರುವುದು ಚಾಣಾಕ್ಷತನ ಮಾತ್ರ . ಹಾಗಾಗಿ ಮಗು ಕೂ ನಿಲ್ಲುವುದನ್ನು , ಫುಟ್‌ಪಾತಿನಲ್ಲಿ ಸಂಚರಿಸಿ , ಗುರಿ ತಲುಪುವುದನ್ನು , ರಸ್ತೆಯನ್ನು ಎಚ್ಚರದಿಂದ ದಾಟುವುದನ್ನು , ಎಲ್ಲಿಯೂ ನಿಲ್ಲದೆ ಅವರಿವರ ತಳ್ಳಿ ಮುನ್ನುಗ್ಗಿ ಬೇರೂರುವು ದನ್ನು ಮಾತ್ರ ಕಲಿಯುತ್ತವೆ . ಇನ್ನು ವಿದ್ಯೆಯೂ ಅಷ್ಟೇ , ಶಾಲಾ – ಕಾಲೇಜುಗಳಲ್ಲಿ ಕಲಿಯುವುದರ ಜೊತೆಗೆ ಜಾಹೀರಾತುಗಳಲ್ಲಿ , ರೇಡಿಯೋದಲ್ಲಿ ಮಾಡಿದ ಶಿಫಾರಸ್ಸು ಗಳಲ್ಲಿರುವುದನ್ನು ತಲೆಗೆ ತುಂಬಿಕೊಂಡು ಬೆಳೆಯಬೇಕು . ಸ್ವಂತವಾಗಿ ಏನನ್ನೂ ಕಲಿಯುವ ಅವಕಾಶವೇ ಇಲ್ಲಿಲ್ಲ . ಕೊನೆಯವರೆಗೂ ಇತರರ ಕೈಗೊಂಬೆಯಾಗಿ ಬಾಳುವುದನ್ನಷ್ಟೇ ಇಲ್ಲಿ ಕಲಿಯಬೇಕಾಗಿರುವುದನ್ನು ಕವಿ ಚಿತ್ರಿಸಿದ್ದಾರೆ .

  1. ಮುಂಬೈ ಜಾತಕದಲ್ಲಿ ಮಕ್ಕಳ ಬಾಲ್ಯದ ಚಿತ್ರಣ ಹೇಗೆ ನಿರೂಪಿತವಾಗಿದೆ ?

ಜಿ.ಎಸ್ . ಶಿವರುದ್ರಪ್ಪನವರ ‘ ಮುಂಬೈ ಜಾತಕ ‘ ಕವಿತೆಯ ಆರಂಭಿಕ ಭಾಗದಲ್ಲಿ ನಗರದಲ್ಲಿ ಹುಟ್ಟಿ ಬೆಳೆಯುವ ಮಕ್ಕಳ ಬಾಲ್ಯದ ಚಿತ್ರಣವಿದೆ . ಇಲ್ಲಿ ಹುಟ್ಟುವ ಮಗುವಿಗೆ ಹೇಳಿಕೊಳ್ಳಲು ಒಂದು ಊರು , ಸ್ಥಳದ ಗುರುತಿಲ್ಲ . ಆಸ್ಪತ್ರೆಯಲ್ಲಿ ಎಂಬ ಕೃತಕವಾದ ಉತ್ತರವಿದೆ . ಮಕ್ಕಳು ಕುಡಿಯುವುದು ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿಯ ಹಾಲು , ಎಮ್ಮೆಯನ್ನಾಗಲಿ , ಕರೆಯುವ ಕೈಗಳನ್ನಾಗಲಿ ಕಾಣುವ ಸಂದರ್ಭವಿರದ ಅಪರಿಚಿತತೆ ಎದ್ದು ಕಾಣುತ್ತದೆ . ಉಳಿದಂತೆ ಅವು ಕುಡಿಯುವುದು ಹೊಟ್ಟೆನೋವು – ಅಜೀರ್ಣ ಕಾಡಿದಾಗ ಡ್ರೈಫ್‌ಸಿರಫ್ ಮತ್ತು ಶಕ್ತಿಗಾಗಿ ಹಾರ್ಲಿಕ್ಸ್ ಕಾಣುವುದು ರಸ್ತೆಯ ಮೇಲೆ ಚಲಿಸುವ ಲಕ್ಷಚಕ್ರದ ಉರುಳು , ಜನನಿಬಿಡತೆಯ ಅವಸರದಲ್ಲಿ ಸರಿಯುವ ಸಾವಿರ ಕೊರಳನ್ನು ಬಾಲ್ಯದಲ್ಲಿ ಆಡಿ ಬೆಳೆಯಲು , ಸ್ನೇಹಿತ ರೊಂದಿಗೆ ನಲಿಯಲು ನಗರದಲ್ಲಿ ಸ್ಥಳವೇ ಇಲ್ಲ . ಪ್ರಕೃತಿಯೊಂದಿಗಿನ ಒಡನಾಟವೇ ಇಲ್ಲದೆ , ಕೃತಕ ಪರಿಸರದಲ್ಲಿ ಬದುಕನ್ನು ಸಾಗಿಸಲು ಅಶಕ್ತವಾದ ವಾತಾವರಣದಲ್ಲಿ ಮಕ್ಕಳು ಬಾಲ್ಯವನ್ನು ಕಳೆಯುವ ಚಿತ್ರಣವನ್ನು ಕವಿ ಇಲ್ಲಿ ನೀಡಿದ್ದಾರೆ .

  1. ನಗರದ ಅಬ್ಬೇಪಾರಿ ಜೀವನದ ವಿವರಗಳು ಕವಿತೆಯಲ್ಲಿ ಹೇಗೆ ಮೂಡಿಬಂದಿದೆ ?

‘ಮುಂಬೈ ಜಾತಕ ‘ ಕವಿತೆಯ ಅಂತ್ಯದಲ್ಲಿರುವ ‘ ಜೀವನ ‘ ಎಂಬ ಭಾಗದಲ್ಲಿ ಕವಿಯು ನಗರ ಜೀವನದಲ್ಲಿ ನಡೆಯುವ ಯಾಂತ್ರಿಕ ಬದುಕಿನ ಚಿತ್ರಣವನ್ನು ನೀಡಿ ದ್ದಾರೆ . ಅಲ್ಲಿನ ಜೀವನವೆಂದರೆ ಲಕ್ಷದಾರಿಗಳ ಚದುರಂಗದಾಟವಿದ್ದಂತೆ . ಯಾರದೋ ಕೈಗೊಂಬೆಯಾಗಿ ಬದುಕನ್ನು ಸಾಗಿಸಬೇಕು . ಬೆಳಗ್ಗೆ ಎದ್ದೊಡನೆ ಬಟ್ಟೆಯಲ್ಲಿ ಮೈತುರುಕಿ , ರೈಲು ಅಥವಾ ಬಸ್ಸನ್ನು ಹಿಡಿದು ಕೆಲಸ ಮಾಡುವ ಸ್ಥಳ ಸೇರಬೇಕು . ಸಂಜೆವರೆಗೂ ಬಿಡುವಿಲ್ಲದೆ ದುಡಿದು ಸಾಯಂಕಾಲ ಆಯಾಸದಲ್ಲಿ ಮನೆಗೆ ಹೊರಟರೆ , ಬಂದು ಮನೆ ಸೇರುವಷ್ಟರಲ್ಲಿ ರಾತ್ರಿ ಹನ್ನೊಂದು ಗಂಟೆ . ಮಕ್ಕಳೊಂದಿಗೆ , ಹೆಂಡತಿಯೊಂದಿಗೆ ಹರಟಿ ಆನಂದಿಸಲು , ಕಷ್ಟ – ಸುಖ ಹಂಚಿಕೊಳ್ಳಲು ಬಿಡುವಿಲ್ಲ . ಹೆಂಡತಿ ಗಂಡನಿಗಾಗಿ ಅಡುಗೆ ಸಿದ್ಧಪಡಿಸಿ ಕಾದೂಕಾದೂ ನಿದ್ರೆಗೆ ಜಾರಿರುತ್ತಾಳೆ . ಅವಳೆನ್ನೆಬ್ಬಿಸಿ , ತಂಗಳನ್ನು ಉಂಡು ಮಲಗಿದರೆ ಅಂದಿನ ದಿನಚರಿ ಮುಗಿದಂತೆ . ಮರುದಿನವೂ ಇದೇ ದಿನಚರಿಯ ಪುನರಾವರ್ತನೆ . ಅಕ್ಕಪಕ್ಕದವರೊಂದಿಗೆ ಸಾಮರಸ್ಯ ಬೆಳೆಸುವ ಅವಕಾಶವೂ ಇಲ್ಲದ ಅಬ್ಬೇಪಾರಿ ಜೀವನ . ಇದು ನಗರ ಜೀವನದ ಯಾಂತ್ರಿಕತೆಯ ವರ .

ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ : Mumbai Jataka Kannada Notes

  1. “ ನೂರಾರು ಜಾಹೀರಾತುಗಳು ತಲೆಗೆ ತುರುಕಿದ್ದು . ”

ಜಿ.ಎಸ್ . ಶಿವರುದ್ರಪ್ಪನವರ ‘ ಮುಂಬೈ ಜಾತಕ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ‘ ಕಲಿತದ್ದು ‘ ಏನೇನನ್ನು ಎಂಬ ಪ್ರಶ್ನೆಗೆ ಉತ್ತರವಾಗಿ ಈ ಮೇಲಿನ ವಾಕ್ಯವಿದೆ . ಜಾಹೀರಾತುಗಳು ಬೆಳೆದ ಮಕ್ಕಳ ಪಾಲಿಗೆ ವೇದವಾಕ್ಯವಾಗಿರುತ್ತದೆ . ಜಾಹೀರಾತುಗಳು ತಿಳಿಸುವ ಉತ್ಪನ್ನಗಳೇ ಮಕ್ಕಳಿಗೆ ಬೇಕು . ಆದ್ದರಿಂದ ಜಾಹೀರಾತೇ ತಲೆಯ ತುಂಬಾ ಇದ್ದು , ಅದನ್ನೇ ಜೀವನ ವಿಧಾನವಾಗಿಸಿಕೊಳ್ಳುವ ನಗರಜೀವನದ ಮಕ್ಕಳ ಮನೋಭಾವ ವನ್ನು ಕವಿ ಇಲ್ಲಿ ಈ ಮೇಲಿನ ವಾಕ್ಯದ ಮೂಲಕ ವಿವರಿಸಿ ಹೇಳಿದ್ದಾರೆ .

  1. “ ರಸ್ತೆಯಂಚಿನಲ್ಲೇ ಕೈ ಹಿಡಿದು ನಡೆಸಿದವಳು .

”ರಾಷ್ಟ್ರಕವಿ ಜಿ.ಎಸ್ . ಶಿವರುದ್ರಪ್ಪನವರ ‘ ಮುಂಬೈ ಜಾತಕ ‘ ಎಂಬ ಕವಿತೆಯಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು . ಮುಂಬೈ ನಗರದಲ್ಲಿ ಹುಟ್ಟಿ ಬೆಳೆಯುವ ಮಗುವಿನ ತಾಯಿಯ ವಿಚಾರವನ್ನು ವಿವರಿಸುವಾಗ ಕವಿಯು ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ . ತಾಯಿ ಯಾಂತ್ರಿಕವಾಗಿ ತನ್ನ ತಾಯ್ತನವನ್ನು ನಿರ್ವಹಿಸಿದ್ದಾಳೆ . ಇರುವ ಒಂದಿಂಚು ಕೋಣೆಯಲ್ಲಿ ಹೊರಲೋಕ ವನ್ನು ಮಗುವಿಗೆ ಪರಿಚಯಿಸಿಕೊಟ್ಟಿದ್ದಾಳೆ . ಮಾತ್ರವಲ್ಲ , ಸಾವಿರ ಗಾಲಿ ಉರುಳಿ ಹೊರಳುವ ರಸ್ತೆಯಲ್ಲಿ ಮಗುವಿನ ಕೈಹಿಡಿದು ಅಂಚಿನಲ್ಲಿ ನಡೆಯುವುದನ್ನು ಕಲಿಸಿದ್ದಾಳೆ . ಹೊರಲೋಕದ ಬಗ್ಗೆ ಎಚ್ಚರಿಕೆ ನೀಡಿದ್ದಾಳೆ . ಇಷ್ಟು ಮಾತ್ರವೇ ಆ ಅಸಹಾಯಕ ತಾಯಿಯಿಂದ ಮಾಡಲು ಸಾಧ್ಯವಾಗಿರುವುದು . ಇಷ್ಟನ್ನು ಬಿಟ್ಟರೆ ತಾಯಿಯ ಇನ್ನಾವ ಸಂಗತಿಗಳೂ ನೆನಪಿಗೆ ಬರುತ್ತಿಲ್ಲ .

  1. “ ಅವಸರದ ಹೆಜ್ಜೆಯ ಮೇಲೆ ಸರಿವ ಸಾವಿರ ಕೊರಳು . ”

ಜಿ.ಎಸ್ . ಶಿವರುದ್ರಪ್ಪನವರು ರಚಿಸಿರುವ ‘ ಮುಂಬೈ ಜಾತಕ ‘ ಎಂಬ ಕವಿತೆ ಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಕವಿತೆಯ ಆರಂಭದಲ್ಲಿ ‘ ಕಂಡದ್ದು ‘ ಎಂಬುದನ್ನು ವಿವರಿಸುವಾಗ ಕವಿ ಈ ಮೇಲಿನ ವಾಕ್ಯವನ್ನು ರಚಿಸಿರುವರು . ಮುಂಬೈ ನಗರದಲ್ಲಿನ ವಾಹನದಟ್ಟಣೆ ಮತ್ತು ಜನದಟ್ಟಣೆಯನ್ನು ಈ ಮಾತು ವಿವರಿಸುತ್ತದೆ . ಬೆಳಿಗ್ಗೆಯಿಂದ ಸಂಜೆಯವರೆಗೂ ಅವಸರವಸರವಾಗಿ ತಮ್ಮತಮ್ಮ ಕೆಲಸಗಳಿಗೆ ನಡೆಯುತ್ತಿರುವುದನ್ನು ಕವಿ “ ಅವಸರದ ಹೆಜ್ಜೆಯ ಮೇಲೆ ಸರಿವ ಸಾವಿರ ಕೊರಳು ‘ ಎಂದಿದ್ದಾರೆ . ಸ್ವಲ್ಪವೂ ಸಮಯವಿಲ್ಲದ , ಅವಸರದ ಯಾಂತ್ರಿಕ ಬದುಕನ್ನು , ಜನನಿಬಿಡತೆಯನ್ನು ಕವಿ ಇಲ್ಲಿ ಸಂಕೇತಿಸಿದ್ದಾರೆ .

4 “ ಬಟ್ಟೆಯಲ್ಲಿ ಮೈ ತುರುಕಿ ಓಡುವುದು . ”

ಜಿ.ಎಸ್ . ಶಿವರುದ್ರಪ್ಪನವರ ‘ ಮುಂಬೈ ಜಾತಕ ‘ ಕವಿತೆಯ ‘ ಜೀವನ ‘ ಎಂಬ ಭಾಗದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸುತ್ತೇವೆ . ನಗರ ಜೀವನದ ಅವಸರದ ಓಟವನ್ನು ಈ ಮೇಲಿನ ಮಾತು ಪರಿಣಾಮಕಾರಿಯಾಗಿ ವಿವರಿಸಿದೆ . ನಗರ ಜೀವನದಲ್ಲಿ ಬೆಳಿಗ್ಗೆ ಶುರುವಾಗುವುದೇ ಅವಸರದಲ್ಲಿ ಎದ್ದೊಡನೆ ರೈಲೋ , ಬಸ್ಸನ್ನೋ ಹಿಡಿದು ಕೆಲಸಕ್ಕೆ ಓಡಬೇಕು . ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ವಾಹನದಟ್ಟಣೆಯ ಸಂಚಾರದಲ್ಲಿ ಸಮಯಕ್ಕೆ ಸರಿಯಾಗಿ ತಲುಪುವುದೇ ಕಷ್ಟದ ಕೆಲಸ . ನಿಧಾನವಾಗಿ ಬಟ್ಟೆ ಹಾಕಿಕೊಳ್ಳುವ ವ್ಯವಧಾನವಿಲ್ಲ . ಅಲ್ಲದೆ ಮೈಗೆ ಬಟ್ಟೆ ಹಾಕುವ ಬದಲು , ಮೈಯನ್ನೇ ಬಟ್ಟೆಯಲ್ಲಿ ತುರುಕಿ ಓಡುವುದು ಎಂದಿದ್ದಾರೆ ಕವಿ ಜಿಎಸ್ಸೆಸ್ , ಇದು ಅತ್ಯಂತ ವ್ಯಂಗ್ಯದ ನುಡಿಯಾಗಿವೆ . ಸ್ವಂತಕ್ಕೆ ಯೋಚಿಸಲು ಸಮಯವಿಲ್ಲದ ನಗರದ ಅವಸರದ ಜೀವನ ಬೇಕೆ ? ಇದೂ ಒಂದು ಬದುಕೆ ? ಎಂಬೆಲ್ಲಾ ಪ್ರಶ್ನೆಗಳನ್ನು ಈ ವಾಕ್ಯ ತನ್ನಲ್ಲಿ ಹುದುಗಿಸಿಕೊಂಡಿದೆ .

  1. ” ಕುಳಿತು ಕೆಮ್ಮುವ ಪ್ರಾಣಿ .

” ಜಿ.ಎಸ್ . ಶಿವರುದ್ರಪ್ಪನವರ ‘ ಮುಂಬೈ ಜಾತಕ ‘ ಕವಿತೆಯಲ್ಲಿ ಈ ಮೇಲಿನ ವಾಕವಿದೆ , ತಂದೆಯ ವಿಚಾರವನ್ನು ತಿಳಿಸುವಾಗ ಕವಿ ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ . ಮಗು ತಂದೆಯನ್ನು ನೋಡುವ ಸಂದರ್ಭಗಳೇ ಅಪರೂಪ , ಏಕೆಂದರೆ ಆತ ಮಗು ಏಳುವ ಮೊದಲೇ ಮನೆಬಿಟ್ಟು ಕೆಲಸಕ್ಕೆ ತೆರಳಿದವನು , ಹಿಂದಿರುಗುವುದು ೮.೪ದಿನಗಳಲ್ಲಿ ತಡರಾತ್ರಿ ಮಗುಮಲಗಿದ ಮೇಲೆ , ಆತ ಕಾಣಿಸಿಕೊಳ್ಳುವುದು ರಜಾ ಮಾತ್ರ . ಅದೂ ಕುಳಿತು ಕೆಯ್ಯುವ ಪಾಣಿ’ಯಾಗಿ , ತಂದೆ ಮಗುವಿನ ನಡುವೆ ಇರುವ ಅಪರಿಚಿತತೆ ಹಾಗೂ ಪ್ರಾಣಿ’ಯೆಂದು ಭಾವಿಸುವ ಬಾಂಧವ್ರರಾಹಿತ್ಯ ಮನೋಭಾವವನ್ನು ಕವಿ ಈ ಮೇಲಿನ ವಾಕ್ಯದ ಮೂಲಕ ಚಿತ್ರಿಸಿದ್ದಾರೆ .

  1. “ ರಸ್ತೆ ದಾಟುವಾಗೆಚ್ಚರಿಕೆ . ”

ಜಿ.ಎಸ್ . ಶಿವರುದಪ್ಪನವರು ರಚಿಸಿರುವ ‘ ಮುಂಬೈ ಜಾತಕ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಮುಂಬೈಯಂತಹ ಮಹಾನಗರದಲ್ಲಿ ಹುಟ್ಟುವ ಮಕ್ಕಳು ಕಲಿತದ್ದು – ಕಲಿಯ ಬೇಕಾದ್ದು ನಗರದಲ್ಲಿ ಸಂಚರಿಸಿ , ನೆಲೆಗಾಣುವ ವಿಚಾರ ಮಾತ್ರ . ಕ್ಯೂ ನಿಲ್ಲುವುದನ್ನು ಕಲಿಯಬೇಕು . ಪಾದಚಾರಿಗಳಿಗಾಗಿ ಇರುವ ಪಥದಲ್ಲೇ ಸಂಚರಿಸಬೇಕು , ರಸ್ತೆಯಲ್ಲಿ ಸದಾ ಲಕ್ಷ ಚಕ್ರಗಳು ಉರುಳುತ್ತಿರುತ್ತವೆಯಾದ್ದರಿಂದ ‘ ರಸ್ತೆ ದಾಟುವಾಗ ‘ ಎಚ್ಚರ ದಿಂದಿರುವುದನ್ನು ಕಲಿಯಬೇಕು . ಇಲ್ಲದಿದ್ದರೆ ಜೀವಕ್ಕೆ ಸಂಚಕಾರ ಒದಗುತ್ತದೆಂಬುದನ್ನು ವಿವರಿಸುವಾಗ ಕವಿ ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ .

Mumbai Jataka Kannada Notes 2nd puc

ಮುಂಬೈ ಜಾತಕ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು | Mumbai Jataka Kannada Notes

ಕವಿ ಪರಿಚಯ: Mumbai Jataka Kannada Notes

ಕನ್ನಡದ ಹೆಸರಾಂತ ಕವಿಗಳಲ್ಲಿ ಜಿ.ಎಸ್. ಶಿವರುದ್ರಪ್ಪ (1926-2013)ನವರೂ ಒಬ್ಬರಾಗಿದ್ದಾರೆ. ಶ್ರೀಯುತರು ವಿಮರ್ಶೆ, ಕಾವ್ಯಮೀಮಾಂಸೆ, ಪ್ರವಾಸ ಕಥನ, ಸಂಶೋಧನೆ ಮೊದಲಾದ ಸಾಹಿತ್ಯ ಪ್ರಕಾರಗಳಿಗೆ ತಮ್ಮ ಕಾಣಿಕೆಯನ್ನು ನೀಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರವನ್ನು ಕಟ್ಟಿ ಬೆಳೆಸಿದ ಯಶಸ್ಸು ಇವರದು. ಈ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಇವರು ಮಾಡಿದ ಹಲವು ಉತ್ತಮ ಕಾವ್ಯಗಳನ್ನು ಮರೆಯುವಂತಿಲ್ಲ. ಇವರ ಬರಹ ಹಾಗೂ ಭಾಷಣ ಎರಡೂ ಪ್ರಭಾವಶಾಲಿಯಾದುದು. ಾರ್ಥಿಗಳ ಪಾಲಿಗಂತೂ ಇವರ ಪಾಠಗಳು ಒಂದು ಮರೆಯಲಾಗದ ರಸಾನುಭವದ ನಿಮಿಷಗಳಾಗಿರುತ್ತಿದ್ದವು.


ಇವರು ಬರೆದ ‘ಸೌಂದರ್ಯ ಸಮೀಕ್ಷೆ’ ಎಂಬ ಪ್ರೌಢಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿತು. ಈ ಲೇಖಕರ `ವಿಮರ್ಶೆಯ ಪೂರ್ವ ಪಶ್ಚಿಮ’, ‘ಪರಿಶೀಲನ’, ‘ಸೌಂದರ್ಯ ಸಮೀಕ್ಷೆ’, ‘ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ’, ‘ಗಂಗೆಯ ಶಿಖರಗಳಲ್ಲಿ’ ಮೊದಲಾದ ಗದ್ಯ ಕೃತಿಗಳು ಓದುಗರ ಮೆಚ್ಚುಗೆಯನ್ನು ಸಂಪಾದಿಸಿಕೊಂಡಿವೆ. ಕವಿಯಾಗಿ ‘ಸಾಮಗಾನ’, ‘ಚೆಲುವು ಒಲವು’, ‘ಗೋಡೆ’, ‘ಸಂಜೆದಾರಿ’, ‘ದೇವಶಿಲ್ಪ’, ‘ಪ್ರೀತಿ ಇಲ್ಲದ ಮೇಲೆ’ ಇತ್ಯಾದಿ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರು ನವೋದಯ ಹಾಗೂ ಸಮನ್ವಯ ಮಾರ್ಗಗಳಲ್ಲಿ ಕವಿತೆಗಳನ್ನು ರಚಿಸಿದ್ದಾರೆ.

ಜಿ.ಎಸ್. ಶಿವರುದ್ರಪ್ಪನವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. 1992ರಲ್ಲಿ ದಾವಣಗೆರೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. ಕರ್ನಾಟಕ ಸರ್ಕಾರ ಇವರನ್ನು ‘ರಾಷ್ಟ್ರಕವಿ’ ಎಂದು ಕರೆದು ಗೌರವಿಸಿದೆ.

ಸಂಬಂದಿಸಿದ ವಿಷಯಗಳನ್ನು ಓದಿರಿ

ಇತರೆ ವಿಷಯಗಳು

ವಿಭಕ್ತಿ ಪ್ರತ್ಯಯಗಳು ಕನ್ನಡ

ಕನ್ನಡ ಕಾಗುಣಿತ

ಕನ್ನಡ ಸಮಾಸಗಳು

ಕನ್ನಡ ಪತ್ರ ಲೇಖನಗಳು

ಇತರೆ ಪ್ರಬಂಧ ವಿಷಯಗಳು

Leave a Reply

Your email address will not be published. Required fields are marked *